Monday, January 31, 2011

ಅವರು ಹೀಗೆ ಮೈಲ್ ಮಾಡಿದ್ದಾರೆ

ಚೈತ್ರರಶ್ಮಿಯ ಸಂಪಾದಕರು ಹೀಗೆ ಮೈಲ್ ಮಾಡಿದ್ದಾರೆ. ಧನ್ಯವಾದಗಳು ಅವರಿಗು ನಿಮಗೂ....

ನಮಸ್ತೆ, ಕುಶಲವೆಂದು ಭಾವಿಸುವೆ. ನಮ್ಮ ಚೈತ್ರರಶ್ಮಿ ಪ್ರಕಾಶನದ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಭಾಗವಹಿಸಿದ ನಿಮಗೆ ನಮ್ಮ ವಂದನೆಗಳು. ನಿಮ್ಮ ಕಥೆ ನಮ್ಮ ಸ್ಪರ್ಧೆಯ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದು ,ಸ್ಪರ್ಧೆಯ ತೃತೀಯ ಬಹುಮಾನಕ್ಕೆ ಪಾತ್ರವಾಗಿ ನಾವು ಹೊರತರುತ್ತಿರುವ "ಕನ್ನಡಿ ಬಿಂಬದ ನೆರಳು" ಎಂಬ ಕಥಾಸಂಕಲನದಲ್ಲಿ ಪ್ರಕಟವಾಗುತ್ತಿದೆ. ಈ ಕಥಾಸಂಕಲನದ ಬಿಡುಗಡೆ ಕಾರ್ಯಕ್ರಮ ಫೆಬ್ರವರಿ 13 , ಭಾನುವಾರ , ನಮ್ಮ ಚೈತ್ರರಶ್ಮಿ ಪತ್ರಿಕೆಯ 6 ನೇ ವಾರ್ಷಿಕ ಸಂಭ್ರಮದ ಕಾರ್ಯಕ್ರಮದಲ್ಲಿ, ಬೆಂಗಳೂರಿನ ಜೆ .ಸಿ.ರಸ್ತೆಯ ಕನ್ನಡ ಭವನದ ನಯನ ಸಭಾಂಗಣ ದಲ್ಲಿ ಸಂಜೆ 4 ಕ್ಕೆ ನಡೆಯಲಿದೆ. ಈ ಸಮಯ ನೀವು ನಮ್ಮೊಂದಿಗೆ ಉಪಸ್ಥಿತರಿದ್ದು ಕಥಾಸಂಕಲನದ ಬಿಡುಗಡೆಯ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗುತ್ತೀರಿ ಎಂದು ನಂಬುತ್ತೇನೆ.

ನಮ್ಮ ಸೃಜನಶೀಲತೆಯ ಹುಡುಕಾಟದ ತಿಂಗಳ ಪತ್ರಿಕೆ ’ಚೈತ್ರರಶ್ಮಿ’ಯ ಭಾವಯಾನಕ್ಕೆಆರರ ಸಂಭ್ರಮ. ಬದುಕಿನ ವಾಸ್ತವದಲ್ಲಿ ಕಳೆದುಹೋದ ಮನಸ್ಸಿನಲ್ಲಿ ಹೊಸ ಹುರುಪು ತುಂಬಿ ಚೈತನ್ಯದಾಯಕ ಬೆಳಕಿನೆಡೆಗೆ ಕರೆದೊಯ್ಯಬಲ್ಲ ಒಂದು 'A Ray of HOPE' 'ನಮ್ಮದಾಗಬೇಕು ಎಂಬುದು ಚೈತ್ರರಶ್ಮಿಯ ಆಶಯ. ಹಳ್ಳಿಮನೆಗಳಲ್ಲಿ ಪ್ರತಿಭೆಯಿದ್ದೂ ಅವಕಾಶಗಳಿಲ್ಲದೆ ಕಳೆದುಹೋದ, ಬರೆಯಲು ಹಿಂಜರಿದು ಬರೆಯೋದು ಮರೆತ, ಬದುಕಿನ ಜಂಜಡದಲ್ಲಿ ಸಾಹಿತ್ಯದ ಸೆಲೆಯಿಂದ ದೂರಾದ ಎಲ್ಲ ಎಲೆಮರೆಯಕಾಯಂತಹ ಕವಿಮನಸ್ಸುಗಳನ್ನು ಸೃಜನಶೀಲತೆಯ ಹುಡುಕಾಟದ ಭಾವಯಾನದಲ್ಲಿ ಕರೆದೊಯ್ಯಬೇಕೆಂಬುದು ಚೈತ್ರರಶ್ಮಿಯ ಕನಸು.ಜೊತೆಗೆ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರನ್ನು, ನಮ್ಮ ನಡುವಿನ ಆದರ್ಶಗಳನ್ನು, ಸಾಹಿತ್ಯ, ಸಂಸ್ಕೃತಿ ಪರಂಪರೆಗಳ ಉತ್ಕೃಷ್ಟ ವಿಚಾರಗಳನ್ನು, ದೇಶ, ಸಮಾಜದೆಡೆಗಿನ ಕಾಳಜಿಯನ್ನು ಎಲ್ಲರಿಗೂ ತಲುಪಿಸುವ ಪುಟ್ಟ ಪ್ರಯತ್ನವನ್ನೂ ಚೈತ್ರರಶ್ಮಿ ಮಾಡುತ್ತಿದೆ. ಚೈತ್ರರಶ್ಮಿಗೆ ಆರು ತುಂಬಿದ ಈ ಸಂಭ್ರಮದಲ್ಲಿ ಕಥಾಸಂಕಲನ ಬಿಡುಗಡೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕಥಾಸ್ಪರ್ಧೆಯ ಫಲಿತಾಂಶ, ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳಿಗೆ ಅಟ್ಯಾಚ್ಮೆಂಟ್ ನೋಡಿ.
ನಮ್ಮ ಈ ಎಲ್ಲ ಸಂಭ್ರಮದ ಕ್ಷಣಗಳಲ್ಲಿ ನಮ್ಮೊಂದಿಗೆ ನೀವಿರುತ್ತೀರಿ ಎಂದು ನಂಬುತ್ತಾ, ನಿಮ್ಮ ನಿರೀಕ್ಷೆಯಲ್ಲಿ...
-
ರಾಮಚಂದ್ರ ಹೆಗಡೆ ಸಿ.ಎಸ್,
ಸಂಪಾದಕ ,
ಚೈತ್ರರಶ್ಮಿ, ಕನ್ನಡ ಮಾಸಿಕ
ದೂ: ೯೯೮೬೩೭೨೫೦೩

7 comments:

Thank you