
ಗೋಕರ್ಣದ ಸರ್ತೆ ಭಟ್ಟರ ಘಟ್ಟದ ಮೇಲಿನ ಯಾತ್ರೆ ಗೊತಿದ್ದವರಿಗೆ ರಾಂ ಭಟ್ರು ಚಿರಪರಿಚಿತ. ವರ್ಷಕ್ಕೊಮ್ಮೆ ಮಹಾಬಲೆಶ್ವರನ ಪ್ರಸಾದ ಹೊತ್ತು ಜತೆಗೆ ಒಂದಿಷ್ಟು ಕಾಯಿಕೊಬ್ಬರಿ ತೆಗೆದುಕೊಂಡು ಘಟ್ಟದಮೇಲೆ ಬಂದು ಅವರವರ ಸರ್ತೆ ಮನೆಗಳಿಗೆ ಪ್ರಸಾದ ತಲುಪಿಸಿ ಅವರು ಕೊಡುವ ಅಡಿಕೆ ಯನ್ನು ತೆಗೆದುಕೊಂಡು ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳುವ ಗೋಕರ್ಣದ ಪುರೋಹಿತರಿಗೆ ಸರ್ತೆ ಭಟ್ರು ಎನ್ನುತ್ತಾರೆ. ಅಂತಹ ಪುರೋಹಿತರುಗಳ ಸಂಖ್ಯೆ ಈಗ ಮಾಯವಾಗಿದೆ. ಕೊನೆಯ ಕೊಂಡಿಯಂತಿದ್ದ ರಾಮ್ ಭಟ್ರು ಮೊನ್ನೆ ವಿಧಿವಶರಾದ ಮೇಲೆ ಇನ್ಯಾರೂ ಬಹುಶಃ ಬರಲಿಕ್ಕಿಲ್ಲ.
ಸಾತ್ವಿಕ ಅಂತ ಉದಾಹರಣೆ ನೀಡುವುದಾದ್ರೆ ಅದು ಈ ರಾಂ ಭಟ್ರಿಗೆ ಸಲ್ಲಬೇಕಿತ್ತು. ಈ ನನ್ನ ಬ್ಲಾಗ್ ಓದುವ ಬಹಳ ಜನಕ್ಕೆ ರಾಮ ಭಟ್ರು ಚಿರಪರಿಚಿತ. ತನ್ಮೂಲಕ ಅವರಿಗೆ ಇದೂ ಓಮ್ದು ಶ್ರದ್ಧಾಂಜಲಿ. ರಾಂ ಭಟ್ರು ಇನ್ನಿಲ್ಲ ಎನ್ನುವುದು ನಮಗೆ ಗೋಕರ್ಣದಲ್ಲಿ ಮಹಬಲೇಶ್ವರ ನೇ ಇಲ್ಲ ಎನ್ನುವಷ್ಟರ ಮಟ್ಟಿಗಿನ ವಿಷಯ. ಮನುಷ್ಯನ ಜೀವನ ಉತ್ತಮ ವಾಗಿತ್ತೋ ಇಲ್ಲವೋ ಎನ್ನುವುದು ಸಾವಿನಲ್ಲಿ ತಿಳಿಯುತ್ತದೆಯಂತೆ. ಸಾತ್ವಿಕರಿಗೆ ಅಂಥಹ ಸಾವೆ ಬಂತು. ಆತ್ಮಕ್ಕೆ ಚಿರ ಶಾಂತಿ ಸಿಗಲಿ.
No comments:
Post a Comment
Thank you