ದೇವರು ಎಂಬ ಶಕ್ತಿಗೆ ಹಲವು ರೂಪ ಹಲವು ವೇಷ. ನಮ್ಮ ಸಮಯಕ್ಕೆ ನಮ್ಮ ಸಮಸ್ಯೆಗೆ ನಮ್ಮ ಸಂಕಟಕ್ಕೆ ಒದಗುವ ಜನರನ್ನೂ ನಾವು ದೇವರು ಅಂತ ಅಂದುಬಿಡುತ್ತೇವೆ. ಆದರೂ ಅಲ್ಲಿಯೂ ಕೂಡ "ದೇವರು ಬಂದ ಹಾಗೆ ಬಂದೆ ಮಾರಾಯಾ" ಎಂದು ಆ ಕಾಣದ ಎಂದೂ ಬಾರದ ದೇವರಿಗೆ ಗುಲುಗುಂಜಿ ಮಹತ್ವ ನೀಡಿ ಹೇಳುವ ಮಾತದು.ಇರಲಿ ದೇವರೆಂಬ ಶಕ್ತಿ ಉತ್ತರ ಸಿಗದ ಅಥವಾ ನಿಲುಕದ ಪ್ರಶ್ನೆ, ನಾನು ಈಗ ಹೇಳಹೊರಟಿದ್ದು ಅಂತಹ ಒಬ್ಬ ವ್ಯಕ್ತಿಯ ಬಗ್ಗೆ.
ಒಂದು ಸಣ್ಣ ಜ್ವರ ಬಂದರೆ ಜೀವನವೇ ಮುಗಿದು ಹೋಯಿತು ಎಂದು ಹಲುಬುವವರ ಸಂಖ್ಯೆ ಅದೇಕೋ ಬಹಳ ಹೆಚ್ಚು. ಷುಗರ್ ಬಿಪಿ ಇದ್ದರಂತೂ ಮುಗಿದೇ ಹೋಯಿತು ಹೆಜ್ಜೆ ಹೆಜ್ಜೆಗೂ ಅದರದ್ದೇ ಸುದ್ದಿ ಅದರದ್ದೇ ಜಪ. ಆದರೆ ಈಗ ನಾನು ಹೇಳಹೊರಟವನ ಕತೆ ಕೇಳಿ ಇನ್ನು ನಾವೆಲ್ಲ ಗೊಣಗುವುದರಲ್ಲಿ ಅರ್ಥವಿದೆಯಾ ಎಂಬ ಪ್ರಶ್ನೆ ಬೇಕಾದರೆ ಕೇಳಿಕೊಳ್ಳಬಹುದು.
ನನಗೆ ಜೆಸಿಬಿ ಕೆಲಸದ ಅವಶ್ಯಕತೆ ಇದ್ದಾಗ ಕಾನ್ಲೆಯ ವೆಂಕಟಾಚಲ ಎಂಬ ಜನವನ್ನು ಸಂಪರ್ಕಿಸಿದೆ.ಆತನೋ ಪಾದರಸದಂತಹ ವ್ಯಕ್ತಿತ್ವ ಉಳ್ಳವ. ಆತನ ವೇಗಕ್ಕೆ ಸ್ಪಂದಿಸುವುದು ಅಷ್ಟು ಸುಲಭದ ಮಾತಲ್ಲ. ಅರ್ಥ್ ಮೂವಿಂಗ್ ವಿಷಯದಲ್ಲಿ ಸೂಪರ್ ಪರಿಣಿತ. ನಾನು ಹೇಳಿದ ಕೆಲಸವನ್ನು ಮೂರು ನಾಲ್ಕು ದಿವಸಗಳ ಒಳಗೆ ಚಕಚಕ ಅಂತ ಮುಗಿಸಿಕೊಟ್ಟು ಹೊರಟುನಿಂತ. ಬೆಳಿಗ್ಗೆ ಆರುಗಂಟೆಯಿಂದ ಸರಪರ ಸರಪರ ಅಂತ ಸೈಟಿನಲ್ಲಿ ಓಡಾಡಿ ಹುರುಪು ತಂದಿಟ್ಟವರ ಪೈಕಿಯಲ್ಲಿ ವೆಂಕಟಾಚಲ ಮೊದಲಿಗೆ.
ಅಂತಹ ವೆಂಕಟಾಚಲ ನನಗೆ ಹಳೇ ಪರಿಚಯದ ಜನ, ಆತನ ಆರೋಗ್ಯ ಕೆಲ ವರ್ಷದ ಹಿಂದೆ ತುಸು ಏರುಪೇರಾಗಿತ್ತು ಅಂತ ಯಾರೋ ಹೇಳಿದ್ದು ನೆನಪಾಗಿ ಕೇಳಿದೆ" ಆವಾಗ ನಿನ್ನ ಆರೋಗ್ಯ ಸರಿ ಇರಲಿಲ್ಲವಲ್ಲ, ಏನಾಗಿತ್ತು?. ಆತ "ಹೌದು ಸಣ್ಣದೊಂದು ಸಮಸ್ಯೆಯಾಗಿತ್ತು" ಎಂದು ಹೇಳಿ ಸುಮ್ಮನುಳಿದ. ಏನಾಗಿತ್ತು ಅಂತ ಮತೆ ಕುತೂಹಲದಿಂದ ಪ್ರಶ್ನಿಸಿದೆ. ನಿರುಂಬಳವಾಗಿ ಆತ್ ನೀಡಿದ ಉತ್ತರ ಕೇಳಿ ದಂಗಾಗಿ ಹೋದೆ.
"ಅದೇಕೋ ಸಣ್ಣ ಹೊಟ್ಟೆ ನೋವು ಬರುತ್ತಿತ್ತು, ಸಿಕ್ಕಾಪಟ್ಟೆ ಸುಸ್ತು, ಅಂತ ಮಣಿಪಾಲಕ್ಕೆ ಹೋದೆ, ಅವರು ಪರೀಕ್ಷೆ ಮಾಡಿ, ನಿಮಗೆ ಒಂದು ಕಿಡ್ನಿ ಹುಟ್ಟುವಾಗಲೇ ಇಲ್ಲ ಇನ್ನೊಂದು ಸ್ವಲ್ಪ ತೊಂದರೆಯಲ್ಲಿದೆ ಎಂದರು. ನಂಬಿಕೆಯಾಗಲಿಲ್ಲ, ಸೀದಾ ಅಲ್ಲಿಂದ ಹೊರಟು ಬೇರೆಡೆ ಹೋಗುವ ತೀರ್ಮಾನ ಕೈಗೊಂಡೆ. ಅಲ್ಲಿನ ವೈದ್ಯರು "ಇಲ್ಲ ಈಗಲೇ ಆಪರೇಷನ್ ಮಾಡಿದರೆ ಮಾತ್ರಾ ಬದುಕುಳಿಯುತ್ತೀರಿ, ಇಲ್ಲದಿದ್ದಲ್ಲಿ ಇನ್ನೈದು ದಿವಸದೊಳಗೆ ನಿಮ್ಮ ಆರೋಗ್ಯ ಮಿತಿಮೀರಿ ಹಾಳಾಗುತ್ತದೆ ಎಂದರು. ನನಗೆ ಅದು ಸತ್ಯ ಅಂತ ಅನ್ನಿಸಲಿಲ್ಲ, ಆದರೂ ಎದೆಗುಂದದೆ ಮನೆಗೆ ಬಂದು ಬರಬೇಕಾದ ಬಾಕಿ ಹಣಕ್ಕೆ ಎಲ್ಲರಿಗೂ ಪೋನಾಯಿಸಿದೆ. ಅರ್ದದಷ್ಟು ಹಣ ಮನೆಬಾಗಿಲಿಗೆ ಬಂತು, ನಾನು ಕೊಡಬೇಕಾದವರಿಗೆಲ್ಲ ಚುಕ್ತಾ ಮಾಡಿದೆ. ಮಾರನೇ ದಿವಸ ಬೆಂಗಳೂರು ಸೇರಿದೆ. ಪರಿಚಯದ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದಾಗ ಮಣಿಪಾಲದ ವರದಿ ನಿಜ ಅಂತ ತಿಳಿಯಿತು. ಒಮ್ಮೆ ಹತಾಶ ಭಾವೆ ಮೂಡಿತಾದರೂ ಹೆಂಡತಿ ಹಾಗೂ ಮಗಳ ಮುಖ ನೆನಪಾಗಿ ಧೈರ್ಯ ತಂದುಕೊಂಡೆ.ವಾರದೊಳಗೆ ಆಪರೇಷನ್ ಮಾಡಿ ಇರುವ ಒಂದು ಕಿಡ್ನಿಯಲ್ಲಿನ ಸಮಸ್ಯೆಯನ್ನು ಬಗೆಹರಿಸಿದರು. ಮತ್ತು "ನೀವು ಜತನದಿಂದ ಕಾಪಾಡಿಕೊಂಡಲ್ಲಿ ಕಟ್ಟುನಿಟ್ಟು ಕಾಯ್ದುಕೊಂಡಲ್ಲಿ ಇನ್ನು ಹತ್ತು ವರ್ಷ ಬದುಕಬಹುದು" ಎಂದು ಹೇಳಿದರು.
ಅಲ್ಲಿಂದ ಜೀವನೋತ್ಸಾಹ ಪುಟಿಯುತ್ತಿದೆ.ಹೀಗೆ ಮೂರು ವರ್ಷ ಕಳೆದಿದ್ದೇನೆ. ಇನ್ನು ಭಗವಂತನೇ ಬಲ್ಲ, ಇರುವಷ್ಟು ದಿವಸ ಒಂದಿಷ್ಟು ಜನರಿಗೆ ಉಪಕಾರ ಮಾಡಿ ಹೋಗುವ ತೀರ್ಮಾನ ನನ್ನದು" ಅಂತ ಹೇಳಿದ ವೆಂಕಟಾಚಲ.
ಅಷ್ಟಕ್ಕೂ ಎಂಟನೇ ತರಗತಿಯಲ್ಲಿ ಓದುತ್ತಿರುವ ಮಗಳು ಹಾಗೂ ಮೂವತ್ತೊಂಬತ್ತು ವರ್ಷದ ಪತ್ನಿಯಿರುವ ಮತ್ತು ನನ್ನ ಕಟ್ಟಡದ ಪಾಯದೊಳಗೆ ಮಣ್ಣುತುಂಬುವ ಬೃಹತ್ ಸಮಸ್ಯೆಯನ್ನು ಕ್ಷಣಮಾತ್ರದಲ್ಲಿ ಪರಿಹರಿಸಿದ ವೆಂಕಟಾಚಲನಿಗೆ ಈಗಿನ್ನೂ ಕೇವಲ ನಲವತ್ತೊಂಬತ್ತು ವರ್ಷ. ಪುಟಿದೇಳುವ ಉತ್ಸಾಹದ ವೆಂಕಟಾಚಲನನ್ನು ನೋಡಿ ನಾನು ದೇವರನ್ನು ನೆನೆಯಿಸಿಕೊಂಡೆ. ದೇವರೂ ಹೀಗೆ ಇರಬಹುದಾ ತನ್ನೊಡಲೊಳಗೆ ಸಾವಿರ ಸಮಸ್ಯೆಯಿದ್ದರೂ ಬೇರೆಯವರಿಗೆ ಅಭಯ ಹಸ್ತ ನೀಡುವಂತೆ....!
ನನಗೆ ಗೊತ್ತಿಲ್ಲ...ನಿಮಗೆ?
My god very inspiring...
ReplyDeleteGreat one.
ReplyDeleteGod, bless him..
Oh.....Nijavaaglu avarondu chimmuva spoorthi.....intha ondu spoorthidaayaka anubhava hanchi kondadakke tumba dhanyavaadagalu....:-)
ReplyDeleteಅವರು ಆದಷ್ಟೂ ಹೆಚ್ಚು ದಿನ ಬದುಕಲಿ ಎಂದು ಹಾರೈಸುವೆ
ReplyDeleteಅದ್ಭುತ ವ್ಯಕ್ತಿ ಚಿತ್ರಣ.ಅಭಿನಂದನೆಗಳು.
ReplyDeletegood one . he can b a inspiration to many
ReplyDelete