ನಮಸ್ಕಾರ, ನೀವು ಯಾರು ಅಂತ ಗೊತ್ತಾಗಲಿಲ್ಲ?
"ನಾನು ....... ಪತ್ರಿಕೆಯ ರಿಪೋರ್ಟರ್, ಇವರು .......ಪತ್ರಿಕೆಯ ವರದಿಗಾರರು.
ಸರಿ ನಮ್ಮ ತೋಟಕ್ಕೆ ಬಂದು ಫೋಟೋ ಯಾಕೆ ತೆಗೆದುಕೊಂಡಿರಿ,
ಇಲ್ಲ ಹಾಗೆ ಸುಮ್ಮನೆ
ಹೇಳಿ ಪರವಾಗಿಲ್ಲ
ನೀವು ಲೈಸೆನ್ಸ್ ಇಲ್ಲದೆ ಮನೆ ಕಟ್ಟಿಸ್ತಾ ಇದೀರಂತೆ,ಜತೆಗೆ ಕೆರೆ ಒತ್ತುವರಿ ಮಾಡಿದೀರಂತೆ
ಈ ಅಂತೆಕಂತೆಗಳನ್ನ ಯಾರು ಹೇಳಿದ್ರು?
ಯಾರು ಹೇಳಿದ್ದು ಮುಖ್ಯವಲ್ಲ, ಅದು ನಿಜ ಅಂತ ನಮಗೆ ಅನ್ನಿಸಿದೆ
ಸರಿ, ಹಾಗಾದ್ರೆ ಮುಂದೆ
ಅದನ್ನ ನ್ಯೂಸ್ ಮಾಡ್ತೀವಿ
ಸರಿ ಮುಂದೆ
ಅದರ ಪರಿಣಾಮ ನೀವು ಎದುರಿಸಬೇಕಾಗುತ್ತೆ
ಸರಿ ಮುಂದೆ?
ನೀವು ಹೀಗೆಲ್ಲಾ ಉಪೇಕ್ಷೆ ಮಾಡಿದ್ರೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತೆ, ನಾನು ಬಿಡಿ ಇವರು ಸಿಕ್ಕಾಪಟ್ಟೆ ಜೋರಾಗಿ ಬರೀತಾರೆ.
ಹಾಗಾದ್ರೆ ಒಂದು ಸುಸೈಡ್ ನೋಟ್ ಬರೆದಿಟ್ಟು ಹಗ್ಗ ಹುಡುಕೊದೊಂದೇ ದಾರಿ ಅಂತೀರಾ?
ಛೆ ಛೆ ಛೆ ಹಾಗೇನಿಲ್ಲ ನೀವು .....ಜತೆ ರಾಜಿಯಾಗಿಬಿಡಿ, ಅವರು ಬೇಲಿ ಕಟ್ಕೋಂಡ್ರೆ ನಿಮಗೇನು?
ಸ್ವಾಮಿ ಅವರು ಸರ್ಕಾರಿ ಜಾಗದಲ್ಲಿ ಬೇಲಿ ಕಟ್ಟಿದ್ದು, ನಾನು ಸ್ವಂತ ಜಾಗದಲ್ಲಿ ಮನೆ ಕಟ್ತಾ ಇದ್ದದ್ದು
ಆಗ್ಲೀರಿ ನೀವು ಅವರ ತಂಟೆಗೆ ಹೋಗ್ಬೇಡಿ, ರಾಜಿ ಯಾಗ್ಬಿಡಿ
ಅಯ್ಯಾ ಸರ್ಕಾರಿ ಜಾಗಕ್ಕೆ ಬೇಲಿ ಹಾಕಿದರೆ ಸರ್ಕಾರ ನೋಡಿಕೊಳ್ಳುತ್ತೆ
ನೊಡಿ ಕೊನೇದಾಗಿ ಹೇಳ್ತಾ ಇದೀನಿ,ನಾವು ಬರ್ಯೋದು ಅನಿವಾರ್ಯ
ಆಯ್ತು ಬರೀರಿ
ಹತ್ತಿರ ಬಂದು "ನೋಡಿ ಸತ್ಯ ಹೇಳ್ತೀನಿ ಅವ್ರು ಬರೀರಿ ಅಂತ ಸಾವಿರ ಕೊಟ್ಟಿದಾರೆ, ನೀವು ಫಂಡ್ ಆರೇಂಜ್ ಮಾಡಿದ್ರೆ...
ಮನೆಕಟ್ಟೋ ಮೇಸ್ತ್ರಿಗೆ ಕೊಡೋಕೆ ದುಡ್ಡಿಲ್ಲ, ಏನಾದ್ರು ಬರ್ಕೊಳ್ಳಿ"
ಮಾಡ್ತೀವಿ ನೋಡ್ತಾ ಇರಿ....
ಈ ಮೇಲಿನ ಸಂಭಾಷಣೆ ಅನುಭವದ್ದು. ಛೆ ಇಂಥಹಾ ಪತ್ರಕರ್ತರನ್ನು ಇಟ್ಟುಕೊಂಡು ಪತ್ರಿಕಾ ರಂಗ ಎತ್ತ ಸಾಗೀತು ಅಂತ ಅನ್ನಿಸಿತು. ಛೇ ಛೇ ಛೇ
ಪತ್ರಕರ್ತ ಭಯೋತ್ಪಾದಕರ?
ReplyDeletenijakku idu ahitakara belavanige
ReplyDelete