Wednesday, September 19, 2012

ಶುಂಠಿ ಬೆಲ್ಲ ಎಂಬ ಮಜಕೂರ್ ಬ್ಲಾಗ್

ಸತ್ತ ಮೇಲೆ ಸಿಕ್ಕುವ ಸ್ವರ್ಗಕ್ಕಾಗಿ ಇಂದಿನ ಬಾಳನ್ನು ನರಕಸದೃಶವಾಗಿ ಮಾಡಿಕೊಳ್ಳುವುದು ಬೇಡ. ಇಂದಿನ ಇರುವಿಕೆಯನ್ನು ತಿಳಿವಳಿಕೆಯಿಂದ ತಿದ್ದಿಕೊಂಡರೆ ಇದೇ ಸ್ವರ್ಗ .


ಪ್ರತಿಯೊಬ್ಬನಿಗೂ ಒಂದು ಬಾಳಿನ ತತ್ವ ಬೇಕು. ಮಾನವ ಜೀವನವನ್ನು ಇಂದಿನಕಿಂತಲೂ ಹೆಚ್ಚು ಸುಗಮವನ್ನಾಗಿ, ಆದರ್ಶಪ್ರಾಯವನ್ನಾಗಿ ಮಾಡುವಂತಹ ತತ್ವ ಬೇಕು.

ದೇವನಿಗೂ ಒಂದು ಆತ್ಮಗೌರವ ಎಂಬುದಿದೆ. ಬೇರಾವ ಪ್ರಾಣಿಗೂ ಕೊಡಲಾರದಂತಹ ಬುದ್ಧಿಶಕ್ತಿ ಒಂದನ್ನು ದೇವನು ಮಾನವನಿಗೆ ಮಾತ್ರ ಇತ್ತಿದ್ದಾನೆ. ಇದರ ಸದುಪಯೋಗ ಮಾಡದಿರುವುದೇ ದೈವದ್ರೋಹ.
ದೇವನು ಸರ್ವಾಂತರ್ಯಾಮಿ ಮತ್ತು ಪ್ರತಿಯೊಬ್ಬರಲ್ಲಿಯೂ ಇದ್ದಾನೆ ಎಂಬ ವೇದವಾಕ್ಯವನ್ನು ಎಲ್ಲ ಸೊಸೆಯರೂ ಒಪ್ಪುತ್ತಾರೆ. ಆದರೆ ಎಲ್ಲದರಲ್ಲಿಯೂ ಇರುವ ಅದೇ ದೇವರು ಅದೇಕೆ ತನ್ನ ಅತ್ತೆಯಲ್ಲಿ ಇರುವುದಿಲ್ಲ? ಅತ್ತೆಯೊಡನೆ ಹಣಾಹಣಿ ಜಗಳವಾಡುತ್ತಾಳೆ. ದುಷ್ಟ ಶಬ್ದಗಳಿಂದ ಬೈಯುತ್ತಾಳೆ.
" ಕಾಲ ಎಷ್ಟು ಕೆಟ್ಟಿದೆ ನೋಡಿ, ನಮ್ಮ ಹಿಂದೂ ಸಂಸ್ಕೃತಿಯೇ ಹಾಳಾಗಿಹೋಗಿದೆ, ಅಲ್ಲಿರುವ ಆ ಇಬ್ಬರಲ್ಲಿ ಗಂಡು ಯಾರು ಹೆಣ್ಣು ಯಾರು ನೀವೇ ಹೇಳಿ ಸಾರ್" ಎಂದಂದೆ.
ಒಂದರೆ ನಿಮಿಷ ಆ `ಸಾರ್' ನನ್ನನ್ನು ದುರುಗುಟ್ಟಿ ನೋಡಿತು.
" ಏನ್ರೀ ನೀವು ಮಾತನಾಡೋದು? ಏನು ಮರ್ಯಾದೆ ಎಂಬುದೇ ಇಲ್ಲವೇ? ನನಗೆ ಸಾರ್ ಅಂತೀರಾ ನೀವು? ನಾನು ಆ ಎರಡೂ ಮಕ್ಕಳ ತಾಯಿ, ತಿಳೀತೆ?"

ಇವತ್ತಿಗೆ ಇಷ್ಟು. ಇನ್ನುಶುಕ್ರವಾರ. ಈಗ ನನ್ನದೊಂದು ಮುಕ್ತಕ.
ತಲೆಮಾರಿನ ಅಂತರ

"ಕುಂಟುವುದೇಕಜ್ಜ?" ಕೇಳಿದೆ ತಾತನ

"ಹೆಬ್ಬುಲಿ ಕಚ್ಚಿತು" ಎಂದ.

ಮೊಮ್ಮಗ ತಿಂಗಳು ಹಾಸಿಗೆ ಹಿಡಿದನು

ಚಪ್ಪಲಿ ಕಚ್ಚಿದ್ದರಿಂದ!     ಇನ್ನಷ್ಟು ಮಜ ಬೇಕಾ..? ಹಾಗಾದರೆ ತಕ್ಷಣ ಈ ಕೊಂಡಿ ಕ್ಲಿಕ್ಕಿಸಿ: http://shuntibella.blogspot.in/  

ಆಗ ಪಳಕ್ಕನೆ ಮಿಂಚಿತು........ಈ ಆನಂದ ಬಾಷ್ಪ .


ಹಾಗೆಲ್ಲಾ ಯೋಚಿಸಿದಾಗಲೆಲ್ಲಾ ನನಗೆ ಆನಂದ ಬಾಷ್ಪ ಒಸರುತ್ತದೆ. ಈ ಆನಂದ ಬಾಷ್ಪ ಇದೆಯಲ್ಲ ಅದೊಂದು ಅಪರೂಪದ ಕ್ಷಣ. ನೀವು ಆಸ್ವಾದಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ನಾನಂತೂ ಹಲವು ಸಲ ಅನುಭವಿಸಿದ್ದೇನೆ. ನೋಡುಗರ ಕಣ್ಣಿಗೆ ದು:ಖವೆಂತಲೂ ನಮ್ಮ ಅಂತರಾಳಕ್ಕೆ ಸಂತೋಷವಾಗಿಯೂ ಇರುವ ಹಾಗೂ ಒಂದೇ ಘಟನೆಗೆ ಎರಡು ಅರ್ಥ ಕೊಡುವ ಅನುಭವ ಇದು. ಅದು ಯಾವ್ಯಾವಾಗ ಒಸರುತ್ತದೆ ಅಂತ ನಿಖಿರವಾಗಿ ಹೇಳಲಿಕ್ಕೆ ಆಗದಿದ್ದರೂ ಸರಿ ಸುಮಾರಾಗಿ ಹೀಗೆ ವಿಷದಪಡಿಸಬಹುದು.

ಮೊಟ್ಟ ಮೊದಲನೆಯದಾಗಿ ಆನಂದ ಭಾಷ್ಪ ಎನ್ನುವುದು ನಮ್ಮಗಳ ಮನಸ್ಥಿತಿಯ ಮೇಲೆ ಒಸರುತ್ತದೆ. ನೀವು ಯಾರಿಗೋ ಬುದ್ಧಿಪೂರ್ವಕವಾಗಿ ನಿಮ್ಮದನ್ನು ತೊರೆದು ಉಪಕಾರ ಮಾಡಿ ಮರೆತಿರುತ್ತೀರಿ. ಕಾಲ ಉರುಳಿದ ಒಂದು ದಿವಸ ತಣ್ಣನೆಯ ಸಮಯದಲ್ಲಿ ಮೆಲ್ಲಗೆ ಅವರು ನಿಮ್ಮ ಬಳಿ "ಅಂದು ನೀನಂದ ಮಾತು ನನ್ನ ಜೀವನದ ಅಭ್ಯುದಯಕ್ಕೆ ನಾಂದಿಯಾಯಿತು" ಅಂದು ಬಿಟ್ಟರು ಅಂದುಕೊಳ್ಳಿ. ಆಗ ಪಳಕ್ಕನೆ ಕಣ್ಣಂಚಿನಲ್ಲಿ ಮಿಂಚುತ್ತದೆ ಈ ಆನಂದ ಬಾಷ್ಪ. ನೀವು ಅದ್ಯಾವುದೋ ಕೆಲಸ ಯಾ ಯೋಜನೆಯನ್ನು ಆಸ್ಥೆಯಿಂದ ಕೈಗೊಂಡು ಶ್ರಮಪಟ್ಟು ಪೂರೈಸಿರುತ್ತೀರಿ, ಯಾರೂ ಏನೂ ಅಂದಿರುವುದಿಲ್ಲ ಆದರೆ ನೀವೆಣಿಸz ಸಣ್ಣ ವಯಸ್ಸಿನ ಮಗುವೊಂದು "ವಾವ್ ಸೂಪರ್" ಅಂತ ಹೆಬ್ಬೆರಳು ತೋರ್ಬೆರಳು ಸೇರಿಸಿ ಹೇಳಿತು ಅಂದುಕೊಳ್ಳಿ ಆಗಲೂ ಪಳಕ್ಕನೆ....... . ಅದು ಬಿಡಿ ಎಲ್ಲವೂ ನೀವೆಣಿಸಿದಂತೆ ನಡೆಯುತ್ತಿಲ್ಲ, ಅಲ್ಲೆಲ್ಲೋ ವ್ಯತ್ಯಯವಾಗುತ್ತಿರುತ್ತಿದೆ ಜೀವನಬಂಡಿ. ಆಗ ಅದ್ಯಾರೋ ನಿಮ್ಮ ಮನಸ್ಸಿನ ಭಾವನೆಗೆ ಸಮರ್ಪಕವಾಗಿ ಮ್ಯಾಚ್ ಆಗುವಂತಹ ಮಾತು ಆಡಿಬಿಡುತ್ತಾರೆ ಆಗಲೂ ಪಳಕ್ಕನೆ...... . ಇದು ಪಾಸಿಟೀವ್ ಕತೆಯಾಯಿತು ಆನಂದ ಬಾಷ್ಪಕ್ಕೆ ನೆಗಟೀವ್ ಕತೆಯೂ ಇದೆ. ಯಾರ್ಯಾರದೋ ಅಹಂಕಾರ ಮುರಿಯುವ ಕಾರಣ ಒಡ್ಡಿ ಪ್ರಕರಣ ಸೃಷ್ಟಿಸಿರುತ್ತಾರೆ, ಆ ಪ್ರಕರಣ ಕೊಂಚ ಯಶಸ್ಸು ಕಂಡಿತು ಅಂದಾದಾಗ ಪಳಕ್ಕನೆ ಬರುತ್ತದೆ ಬಟ್ ಅದನ್ನು ವಿಕೄತಾನಂದ ಭಾಷ್ಪ ಅಂತ ಕರೆದು ಮರೆತುಬಿಡೋಣ ಬಿಡಿ. ಹೋ ಮರೆತೆ ನನಗೇಕೆ ಇಂದು ಚಿಮ್ಮಿತು ಅಂತ ಹೇಳೋದನ್ನ

ನನ್ನ ಈಸ ರೈಸ್ ಬ್ಲಾಗ್ ಬರಹಕ್ಕೆ ನವ್ಯಾ ಕಾಮೆಂಟಿಸಿದ್ದಳು, ಈಗ ಆಕೆ ಇಂಜನಿಯರಿಂಗ್ ಪಧವೀಧರೆ, ಹೀಗೆ ನಾನು ಬಾಲ್ಯವನ್ನು ನೋಡಿದ ಮಕ್ಕಳು ಬೆಳೆದು ದೊಡ್ದವರಾಗಿದ್ದಾರೆ. ದೇಶವಿದೇಶದಲ್ಲಿ ನೆಲಸಿದ್ದಾರೆ ಗಟ್ಟಿಯಾಗಿ. ಅದೊಂದು ದೊಡ್ಡ ಗುಂಪೇ ಇದೆ. ನನಗೆ ಮಾತ್ರಾ ಅವರ ಹುಡುಗುತನವೇ ಕಾಣಿಸುತ್ತದೆ. ಸಂಸಾರ ಜಂಜಡದಲ್ಲಿ ನನಗೆ ಅವರನ್ನೆಲ್ಲಾ ಆಸ್ವಾದಿಸಲಾಗುತ್ತಿಲ್ಲ. ಹೀಗೆ ಅವರೆಲ್ಲಾ ಪಕ್ಕನೆ ನೆನಪಾದರು ಆಗ ಪಳಕ್ಕನೆ ಮಿಂಚಿತು........ಈ ಆನಂದ ಬಾಷ್ಪ .