ಹೂವು ಅರಳುತ್ತದೆ ಪರಾಗ ರೇಣು ಸ್ಪರ್ಶಕ್ಕಾಗಿ ಕಾಯುತ್ತಿರುತ್ತದೆ. ಅದು ವಂಶಾಭಿವೃದ್ಧಿಗಾಗಿ, ಜೇನು ದುಂಬಿಗಳು ಝೇಂಕಾರದೊಂದಿಗೆ ಹೂವಿನ ಬಳಿ ತಮ್ಮ ಆಹಾರಕ್ಕಾಗಿ ಕುಳಿತು ಪರಾಗಸ್ಪರ್ಶ ಮಾಡುತ್ತವೆ. ಆಗ ಅಲ್ಲೊಂದು ಸಂಭ್ರಮ ಸಂತಸ ಏರ್ಪಡುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಸೃಷ್ಟಿ ಕ್ರಿಯೆಯಂತೂ ನಡದೇ ಬಿಡುತ್ತದೆ. ಹೂವು ಕಾಯಾಗುವ ಎಲ್ಲ ಕಾರ್ಯಗಳಿಗೂ ಅಲ್ಲಿಂದಲೇ ಪ್ರಾರಂಭ. ಇಷ್ಟಾದರೂ ಅದು ಕಾಮ ಪ್ರೇಮ ಅಂತ ನಮಗೆ ಅನ್ನಿಸುವುದಿಲ್ಲ. ಡಾಣಾ ಡಂಗುರವಾಗಿ ನಡೆಯುವ ಈ ಕ್ರಿಯೆ ಅತ್ಯಂತ ಸಹಜ. ಅದರ ಮೇಲೆ ಕವನ ಕಟ್ಟಬಹುದು ಕಾವ್ಯ ಹುಟ್ಟ ಬಹುದು.
ಜೇನಿನ ರಾಣಿ ಗಂಡು ನೊಣದೊಂದಿಗೆ ಮಿಲನಕ್ಕಾಗಿ ಮೇಲಕ್ಕೇರುತ್ತದೆ. ಸಂಭ್ರಮಿಸುತ್ತದೆ ಗಂಡು ನೊಣ ಮಿಲನದ ನಂತರ ಸಾಯುತ್ತದೆ. ರಾಣಿ ಗೂಡಿಗೆ ಬಂದು ಕೆಲದಿನಗಳ ನಂತರ ಮೊಟ್ಟೆಯಿಡಲು ಆರಂಭಿಸುತ್ತದೆ. ಆದರೆ ಆರಂಭದ ದಿನಗಳ ಮೇಲೆ ಸಾಕಷ್ಟು ಕಾವ್ಯ ಹುಟ್ಟುತ್ತದೆ. ಅದು ಅಸಹ್ಯವಲ್ಲ. ಅಶ್ಲೀಲವಲ್ಲ, ಕಾಮದ ವಾಸನೆಯ ಲವಲೇಶವೂ ಅಲ್ಲಿಲ್ಲ . ಅದು ಅತೀವ ಸಹಜ.
ಆರಾಮವಾಗಿ ಹಾಲುಕೊಡುತಿದ್ದ ಆಕಳು ಕೊಟ್ಟಿಗೆಯಲ್ಲಿ ಕೂಗತೊಡಗುತ್ತದೆ. "ದನ ಹೀಟಿಗೆ ಬೈಂದು ಕಾಣ್ತು" ಮನೆಯಾತ ಸ್ವಲ್ಪ ಲಘು ದನಿಯಲ್ಲಿ ಹೇಳುತ್ತಾನೆ. ಹೀಟು ಎಂದರೆ ಆಕಳು ಹೋರಿಯನ್ನು ಬಯಸುತ್ತಿದೆ ಎಂಬ ಅರ್ಥವಾದ್ದರಿಂದ ಸಣ್ಣ ಮಕ್ಕಳಿರುವ ಮನೆಯಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ಕೊಡಲಾಗುವುದಿಲ್ಲ ಎಂಬರ್ಥದಲ್ಲಿ ಅಲ್ಲೇ ಸಣ್ಣಮಟ್ಟದ ತಗ್ಗಿದ ದನಿ. ಆನಂತರ ಒಂಥರಾ ಮುಗುಳುನಗೆಯ ಕಾರ್ಯದಲ್ಲಿ ಆಕಳಿಗೆ ಹೋರಿಯ ಬಳಿ ಸೇರಿಸುವ ಕೆಲಸ ನಡೆಯುತ್ತದೆ.
ದಾರಿ ಬದಿಯಲ್ಲಿ ಶ್ವಾನ ತಿಂಗಳಲ್ಲಿ ನಾಯಿಗಳು ಮಿಲನಕ್ಕೆ ತೊಡಗಿಕೊಂಡಾಗಲೂ ದಾರಿ ಹೋಕರು ಸ್ವಲ್ಪ ಅದೇಕೋ ನಾಚಿಕೊಳ್ಳುತ್ತಾರೆ. ಆದರೂ ಅದು ಒಂಥರಾ ಪ್ರಕೃತಿ ಸಹಜ ಎಂಬ ಭಾವ ತಳೆದು ದಾಟಿಹೋಗುತ್ತಾರೆ. ಆದರೂ ಇಲ್ಲೂ ಕೂಡ ಕೇವಲ ಕಾಮದ್ದೇ ವಾಸನೆ ಇಲ್ಲ ಗುಸು ಗುಸು ಸುದ್ಧಿಯಿಲ್ಲ. ಸಾರ್ವಜನಿಕವಾಗಿ ಹೀಗೆ ಹೀಗೆ ಅಂತ ಹೇಳಬಹುದು. ಅದೇನು ತೀರಾ ಅಶ್ಲೀಲವಲ್ಲ ಬಿಡಿ.
ಗಿಡ ಮರಗಳ ಕ್ರಿಮಿ ಕೀಟಗಳ ಮಟ್ಟ ಮನುಷ್ಯನಿಗೆ ಕಾವ್ಯವಾದರೆ, ಪ್ರಾಣಿಗಳ ಹಂತದ ಸೃಷ್ಟಿಕ್ರಿಯೆ ಸ್ವಲ್ಪ ಕಸಿವಿಸಿ. ಇನ್ನು ಮನುಷ್ಯನದ್ದೇ ಆದರೆ ಮುಗಿದೇ ಹೋಯಿತು. ಅದು ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾದ ಕ್ರಿಯೆ. ಹಾಗೆ ಹೀಗೆ ಅದಕ್ಕೊಂದು ಚೌಕಟ್ಟು ಅದನ್ನ ಮೀರಿದರೆ ಗಾಸಿಪ್ಪು , ಗಲಾಟೆ ಮಾನ,ಮರ್ಯಾದೆ ಅಯ್ಯಯ್ಯೋ... ಹೀಗೆ ಸಾವಿರಾರು. ಇರಲಿ "ಆಲ್ ಇಸ್ ವೆಲ್"., ಮುಂದೆ ನೋಡೋಣ.
ಪ್ರಕೃತಿ ವಂಶಾಭಿವೃದ್ಧಿಗೆ ಪ್ರಥಮ ಆದ್ಯತೆಯನ್ನು ನೀಡುತ್ತದೆ. ಸಹಜ ಮನುಷ್ಯರೆಲ್ಲರೂ ಪ್ರಕೃತಿಯಲ್ಲಿ ತೊಡಗಿಕೊಂಡಿದ್ದಾರೆ. ನಾನು ಎಲ್ಲರಂತೆ ಅಲ್ಲ ಎಂದು ತೊರಿಸಿಕೊಳ್ಳಬೇಕು ಎಂದು ಹೊರಟ ಪ್ರತೀ ಮನುಷ್ಯನ ಮೊದಲ ಆದ್ಯತೆ ಈ ಪ್ರಕೃತಿ ಸಹಜವಾಗಿದ್ದಕ್ಕೆ ವಿರೋಧವಾಗಿ ಹೊರಡುವುದು. ಎಲ್ಲ ಮನುಷ್ಯರಂತೆ ನಾನಲ್ಲ ಎಂದು ತೊರಿಸಿಕೊಳ್ಳಲು ಹೊರನೋಟಕ್ಕೆ ಸುಲಭದಾರಿ ಈ ಕಾಮ. ಕಾಮಮುಕ್ತ ಎಂದು ತೊರಿಸಿಕೊಳ್ಳಲೊಂದು ಕಾವಿ. ದಿನವಿಡಿ ಕಾಮದ ಯೋಚನೆಯಿಂದ ದೂರವಿರಲು ಅನುಸರಿಸುವ ಮಾರ್ಗ ನೂರಾರು. ಬಹುಪಾಲು ದಿನದ ಸಮಯ ಇದಕ್ಕೇ ವ್ಯರ್ಥ. ನಿಯಮಿತ ಆಹಾರ ತುಳಸೀ ಮಣಿ ಉಪ್ಪುಕಾರ ಊಹ್ಞೂ ... ಅಪ್ಪಾ ಪಾಪ ಅನ್ನದೇ ವಿಧಿಯಿಲ್ಲ. ಪ್ರಕೃತಿಯೋ ನಿಮಿಷ ನಿಮಿಷಕ್ಕೂ ತನ್ನ ನಿಯಮದಿಂದ ವಿರುದ್ಧ ಹೊರಟ ಮನುಷ್ಯನನ್ನು ಮಟ್ಟ ಹಾಕಲು ಹೊಸ ಹೊಸ ವಿಧಾನ ಹುಡುಕುತ್ತಿರುತ್ತದೆ. ನಿಜದಲ್ಲಿ ಆಗದ್ದನ್ನು ಸ್ವಪ್ನದಲ್ಲಾದರೂ ಆಗಿಸಿಬಿಡುತ್ತದೆ. ಹೀಗೆ ನಿಜ ಸ್ವಪ್ನ ನಿಜ ಸ್ವಪ್ನ ಎಂದು ಹೊಳ್ಯಾಡಿ ಹೊರಳಾಡಿ ಯಾವುದೋ ದುರ್ಬಲ ಸಂದರ್ಭದಲ್ಲಿ ಕೇಳಿಗೆ ಎಳೆದೇ ಬಿಡುತ್ತದೆ. ಆವಾಗ ಇದಕ್ಕೇ ಕಾಯುತ್ತಿರುವ ಮಿಕ್ಕ ಮನುಷ್ಯರದ್ದು ಹೊಯ್ಲಾಲೆಯೋ ಹೊಯ್ಲಾಲೆ.
ಹಿಂದೆಯೂ ನೂರಾರು ಸನ್ಯಾಸಿಗಳು ಹತ್ತಾರು ವರ್ಷ ಹಠ ಹೊತ್ತು ಕಾಮದಿಂದ ದೂರವಿರಲಾರದೇ ಎನೇನೊ ಮಾಡಿದ್ದಿದೆ. ಆದರೆ ಆವಾಗ ಅವರ ಅದೃಷ್ಟ "ಹಿಡನ್ ಕ್ಯಾಮೆರಾ" ಇರದ್ದರಿಂದ ಹತ್ತಿರದ ಒಂದೆರಡು ಜನರಿಗಷ್ಟೇ ತಿಳಿದು ಮುಚ್ಚಿ ಮಾರನೇ ದಿನದಿಂದ ಮತ್ತೇ ಆಶೀರ್ವಚನದಲ್ಲಿ ಜೀವನ ಪಾವನವಾಗಿದೆ. ಆದರೆ ಕಾಲ ಈಗಿನದು ಹಾಗಲ್ಲ ಏನೇನೋ ಮಾಡಿಬಿಡುತ್ತಾರೆ ತಂತ್ರಜ್ಞಾನ ಬಳಸಿ. ದುರಂತ ಎಂದರೆ ಬಹಳಷ್ಟು ತಂತ್ರಜ್ಞಾನ ಬಳಕೆಯಾಗುವುದು ಇಂತಹ ಬೇಡದ ಕೆಲಸಗಳಿಗೆ. ಇರಲಿ ಅವೆಲ್ಲಾ ಆಗುವುದೇ ಹೀಗೆ ಆದರೆ ನಾವು ಗಮನಿಸಬೇಕಾದ್ದು ಬೇರೆಯೇ ಇದೆ.
ಕಾಮವನ್ನು ಗೆಲ್ಲಲು ಹೊರಟ ಸನ್ಯಾಸಿ ಎಲ್ಲೋ ಒಂಚೂರು ಯಡವಿದ್ದಿರಬಹುದು,ಆದರೆ ತಾನು ಎಲ್ಲರಿಗಿಂತ ಭಿನ್ನ ಎಂದು ತೊರಿಸಿಕೊಡಲು ಹಠಕ್ಕೆ ಇಳಿದು ಜಪ ತಪ ಅಂತ ಮುಳುಗಿ ಧ್ಯಾನ,ಪೀಠ ಎಂದು ಸೃಷ್ಟಿಸಿಕೊಂಡು ನೀತಿ ನಿಯಮ ಅಂತ ಪಾಲಿಸಿಕೊಂಡು ನೂರಾರು ಶ್ರೀಮಂತರಿಗೆ ಸಮಾಧಾನ ಕೊಟ್ಟು ಅವರಿಂದ ಹಣ ಪಡೆದು ಒಂದಿಷ್ಟು ವಿದ್ಯಾದಾನ ಮತ್ತೊಂದಿಷ್ಟು ಆರೋಗ್ಯ ಸೇವೆ ಮಗದೊಂದು ಗೋಪಾಲನೆ ಹೀಗೆ ಎನೇನೋ ಒಬ್ಬ ಸಹಜ ಮನುಷ್ಯ ಮಾಡಲಾಗದ್ದನ್ನು ಸಾಧಿಸಿರುತ್ತಾನಲ್ಲ ಅದರತ್ತ ನಮ್ಮ ನೋಟ ಹರಿಯಬೇಕು. ಅಲ್ಲಿ ಸಾರ್ಥಕತೆ ಕಾಣಬೇಕು. ನಾವು ನೀವೂ ಕೇವಲ ಟೀಕೆ ಮಾಡುತ್ತಾ "ಅಯ್ಯೋ ಈ ಸನ್ಯಾಸಿಗಳ ಕತೆ ಇಷ್ಟೆಯಾ" ಅಂತ ಹೇಳುತ್ತಾ ಕಳೆದುಹೋಗಬಹುದು ಆದರೆ ಈ ಸಮಯದಲ್ಲೂ ಮತೋರ್ವ ವ್ಯಕ್ತಿ ಕಾಮವನ್ನು ಜಯಿಸಲು ಒಳ್ಳೆಯ ಕೆಲಸದ ದಾರಿ ಹಿಡಿದಿರುತ್ತಾನೆ ಎಂಬುದು ಸತ್ಯ.
ಏನಾದರೂ ಒಂದಿಷ್ಟು ಒಳ್ಳೆಯ ಸಾರ್ವಜನಿಕ ಕೆಲಸಗಳು ಇಲ್ಲಿಯವರೆಗೆ ಆಗಿದ್ದಿದ್ದರೆ ತನ್ನಷ್ಟಕೆ ತನ್ನ ಹೆಂಡತಿ ಮಕ್ಕಳೊಡನೆ ಬದುಕಿ ಕೊಂಡ ಬ್ಯಾಂಕ್ ಬ್ಯಾಲೆನ್ಸ ಏರಿಸಿಕೊಂಡ ಮನುಷ್ಯನಿಂದಲ್ಲ. ಏನಾದರೂ ಮಾಡಬೇಕೆಂದು ದಾರಿ ಹಿಡಿದ ಜನರಿಂದಲೇ ಸ್ವಲ್ಪ ಮಟ್ಟಿಗೆ ಆಗಿರುವುದು. ಹಾಗೆಲ್ಲ ಸಾವಿರಾರು ಜನರ ನಾಯಕತ್ವ ವಹಿಸಿಕೊಂಡಾಗ ಎಲ್ಲೋ ಸ್ವಲ್ಪ ಯಡವಟ್ಟು ಆಗುತ್ತದೆ ಎಂದು ಪಾಮರರು ಮಾತನಾಡಿಕೊಳ್ಳುತ್ತಾರೆ. ಅದು ಕಾಮಕ್ಕೆ ಸಂಬಂದಿಸಿದ್ದಾರೆ ಸಿಕ್ಕಾಪಟ್ಟೆ ವಿಷಯ. ಆದರೆ ವಾಸ್ತವ ವೆಂದರೆ ಕಾಮದ್ದು ಪ್ರಕೃತಿ ಸಹಜ ವಿಷಯ ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯ ಇಲ್ಲ. ಅತ್ಯಾಚಾರ ಕೊಲೆ ಮುಂತಾದವು ಮಾನವೀಯತೆ ಅಲ್ಲ. ಸೃಷ್ಟಿ ಕ್ರಿಯೆ ಸೃಷ್ಟಿಯಾಗಲೀ ಬಿಡಲಿ ಸಂಭ್ರಮದ್ದು. ಅದರ ನಂತರ ಮನುಷ್ಯ ನಿರುಂಬಳನಾಗುತ್ತಾನೆ. ತಲೆಯೊಳಗೆ ಕೊರೆಯುತ್ತಿದ ಹುಳ ಆಚೆ ಬಂದಿರುತ್ತದೆ. ಹೊಸ ಹೊಸ ಕೆಲಸ ಗಳು ಹೊಸ ಹೊಸ ಯೋಚನೆಗಳು ತೆರೆದುಕೊಳ್ಳುತ್ತವೆ. ಹಾಗಾಗಿ ಅಲ್ಲಿ ತೊಡಗಿ ಆಚೆ ಬಂದವ ಯಾವ ಕೆಲಸದಲ್ಲಿ ತೊಡಗುತ್ತಾನೆ ಮತ್ತೆಷ್ಟು ಮೇಲಕ್ಕೇರುತ್ತಾನೆ ಎಂಬುದು ಬಹಳ ಮುಖ್ಯ. ಹಾಗೆ ವಿವಾದಕ್ಕೆ ಸಿಕ್ಕಿಕೊಂಡವರು ತಮ್ಮನ್ನು ಸಮರ್ಥಿಸಿಕೊಳ್ಳಲು ಹೆಣಗಾಡತೊಡಗುವಂತಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟರೆ ಆ ಮನುಷ್ಯನಿಂದ ಹೊರಡಬಹುದಾಗಿದ್ದ ಅದ್ಬುತ ವಿಷಯ ವಿಚಾರಗಳು ಕಾಮದ ಗುಂಡಿಯೊಳಗೆ ಹೂತು ಹೋಗಿಬಿಡುತ್ತವೆ. ಪಾಮರ ಕಳೆದುಕೊಳ್ಳುವುದು ಹೀಗೆ ಪಂಡಿತ ಉಳಿಸಿಕೊಳ್ಳಲಾಗದೆ ಹೋಗುವುದೂ ಹಿಗೆಯೇ. ಇದೇ ಪ್ರಕೃ ತಿಯನ್ನು ಗೆಲ್ಲುತ್ತೇನೆ ಎಂದು ಹೊರಟ ಹುಲುಮಾನವನ್ನು ಪ್ರಕೃತಿಯೇ ಬಡಿದು ಹೈರಾಣ ಮಾಡುವ ಪರಿ.
Tuesday, March 9, 2010
Tuesday, March 2, 2010
ಬಿಟ್ಟು ಬಿಡಿ ಅವರುಗಳನ್ನ ಅವರ ಪಾಡಿಗೆ
ಶಿವಮೊಗ್ಗದಲ್ಲಿ ಗಲಾಟೆ, ಹಾಸನದಲ್ಲಿ ದೊಂಬಿ, ಬೆಂಗಳೂರಿನಲ್ಲೂ ಒಂಚೂರು ಗಲಭೆ, ಇದು ಮೊನ್ನೆ ನಡೆದದ್ದು. ಕಾರಣ ಕನ್ನಡಪ್ರಭದ ಲೇಖನ. ಬಲಿಯಾದವರು ಯಾರೋ...?. ಇರಲಿ ಕಾರಣರು ಕಾರಣೀಕರ್ತರು ಹೊಣೆಗಾರರೂ ಎಲ್ಲವೂ ಒತ್ತಟ್ಟಿಗಿರಲಿ. ಪ್ರಪಂಚದ ಬಹಳ ಕಡೆ ಬೇರೆ ಬೇರೆ ರೂಪಾಂತರವಾಗಿ ಹೀಗೆ ನಡೆಯುತ್ತಲಿದೆ, ನಡೆಯುತ್ತದೆ. ಅವನ್ನೆಲ್ಲಾ ತಲೆಗೇರಿಸಿಕೊಂಡು ಕುಳಿತರೆ ನಮ್ಮ ಬದುಕು ಬೆಳಕಾಗುವುದಿಲ್ಲ.
ಮಾತೆತ್ತಿದರೆ ನಾವು ಇಪ್ಪತ್ತೊಂದನೇ ಶತಮಾನದ ವಿಷಯ ಎತ್ತಿ ಆಡಲು ಶೂರರು. ಇಂತಹ ವಿಷಯ ಬಂದಾಗ ಸಹಸ್ರಮಾನ ಹಿಂದೆ ಹೋಗಿಬಿಡುತ್ತೇವೆ. ಒಂದೆಡೆ ಆರಾಧಿಸುವ ಜನ ಮತ್ತೊಂದೆಡೆ ವಿರೋಧಿಸುವ ಜನ. ಎರಡೂ ಪ್ರಯೋಜನ ಇಲ್ಲ ಕೇವಲ ನಂಬಿಕೆ ಅಂತ ಮೂರನೆಯವರಾಗಿ ನಿಂತು ನೋಡಿದಾಗ ಅರ್ಥವಾಗುತ್ತದೆ. ಆದರೂ ಇವೆಲ್ಲಾ ನಡೆಯುತ್ತಲೇ ಇರುತ್ತದೆ. ಧರ್ಮಾಂಧತೆ ಎಷ್ಟರ ಮಟ್ಟಿಗೆ ಯಡವಟ್ಟೋ ಬುದ್ಧಿಜೀವಿಗಳೆಂದು ಹಣೆ ಪಟ್ಟಿ ಅಂಟಿಸಿಕೊಂಡ ವಿರೋಧಿಗಳೂ ಅಷ್ಟೇ ಯಡವಟ್ಟು.
ನಮ್ಮ ರಕ್ತಗಳಲ್ಲಿ ಒಂದಿಷ್ಟು ನಂಬಿಕೆಗಳನ್ನು ಅಂಟಿಸಿಕೊಂಡೇ ಜೀವನ ನಮ್ಮದು. ಒಬ್ಬರು ಹಿಂದೂ, ಮತ್ತೊಬ್ಬರು ಮುಸಲ್ಮಾನ ಮಗದೊಬ್ಬರು ಕ್ರಿಶ್ಚಿಯನ್ ಆನಂತರ ಜೈನ್ ಪಾರ್ಸಿ ಹೀಗೆ ಸಾಲು ಸಾಲುಗಳು. ಮತ್ತೊಂದೆಡೆ ಜಾತಿಯಿಲ್ಲ ಜನಿವಾರ ವಿಲ್ಲ ಅವೆಲ್ಲಾ ಕಪೋಲಕಲ್ಪಿತ. ಮನುಷ್ಯ ಎಂಬುದೊಂದೆ ಸತ್ಯ ಎಂದು ಸಾರುವ ಯತ್ನದ ಆ ತುದಿಯಲ್ಲಿರುವ ಜನರು. ಇವರುಗಳು ಧರ್ಮಾಂಧರಿಗಿಂತ ಅಪಾಯ. ನಾನು ಕಂಡಂತೆ ಜಾತಿಯಿಲ್ಲ ಜನಿವಾರ ವಿಲ್ಲ ಎಂದು ಮಧ್ಯ ವಯಸ್ಸಿನ ತನಕ ಹಾರಾಡಿ ನಂತರ ತಮ್ಮ ಮಕ್ಕಳ ಮದುವೆ ಸಮಯ ಬಂದಾಗ ಬ್ಯಾಟರಿ ತೆಗೆದುಕೊಂಡು ಹುಡುಕಿ ತಮ್ಮದೇ ಜಾತಿ ಒಳಪಂಗಡಕ್ಕೆ ಮದುವೆ ಮಾಡಿದ್ದು ಕಂಡಿದ್ದೇನೆ. ಇವರುಗಳು ಸುಮ್ಮನಾದರೆ ಕೆಣಕದಿದ್ದರೆ ತಾಕತ್ತಿಲ್ಲದ ಬಹಳಷ್ಟು ವಿಷಯ ತನ್ನಷ್ಟಕ್ಕೆ ಸತ್ತು ಹೋಗುತ್ತದೆ. ಆದರೆ ಅಸ್ತಿತ್ವದ ವಿಷಯದಲ್ಲಿ ತಗಾದೆ ತೆಗೆಯುವ ಇವರುಗಳು ಕಿತಬಿ ಎಬ್ಬಿಸಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಾರೆ.
ದೇವರಿಲ್ಲ ಅಂತ ನಂಬಿದವರಿಗೂ ದೇವರಿದ್ದಾನೆ ಅಂತ ನಂಬಿದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎರಡೂ ನಂಬಿಕೆಗಳಷ್ಟೆ. ಅದರಾಚೆ ಮತ್ತೊಂದು ಇರಬಹುದು. ತರ್ಕದ ತಾಕತ್ತಿನಮೇಲೆ ಜೀವನ ಅಷ್ಟೆ.
ಮಂಗಳೂರಿನಲ್ಲಿ ಶ್ರೀರಾಮ ಸೇನೆಯವರು ಪಬ್ ಗೆ ನುಗ್ಗಿ ಗಲಾಟೆ ಎಬ್ಬಿಸಿದಾಗ ನಮ್ಮೂರಲ್ಲಿ ಎರಡು ಜನರು ವಾಗ್ವಾದಕ್ಕಿಳಿದಿದರು.
ಒಬ್ಬ: ಮುತಾಲಿಕ್ ಮಾಡಿದ್ದು ಸರಿ , ಬಡ್ಡಿ ಮಕ್ಕಳು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಾರೆ.
ಮತೊಬ್ಬ:ಅದು ಹ್ಯಾಗೆ ಸರಿ, ಡ್ಯಾನ್ಸ್ ಮಾಡುವುದು ಪಬ್ ಗೆ ಹೋಗುವುದು ಅವರವರ ವೈಯಕ್ತಿಕ ವಿಷಯ, ಇದಕ್ಕೆ ಅಡ್ಡಿಪಡಿಸಲು ಮುತಾಲಿಕ್ ಯಾರು?
ಒಬ್ಬ: ನಿನ್ನ ತಂಗಿಗೋ ಅಕ್ಕನಿಗೋ ಹೀಗೆ ಎಳೆದುಕೊಂಡು ಹೋಗಿ ಹಾಳು ಮಾಡಿದ್ದರೆ ನಿನಗೆ ಅರ್ಥವಾಗುತ್ತಿತ್ತು , ಮುತಾಲಿಕ್ ಯಾರು ಅಂತ.
ಮತ್ತೊಬ್ಬ: ನೋಡು ನಾವು ಬದುಕುತ್ತಿರುವುದು ತಾಲಿಬಾನ್ ನಲ್ಲೋ ಭಾರತದಲ್ಲೋ? ನನ್ನ ತಂಗಿ ಮಾನಸಿಕವಾಗಿ ಪಬ್ ಗೆ ಹೋಗುವುದನ್ನು ಬಯಸಿದರೆ ಅಡ್ಡ ಗಾಲು ಹಾಕಲು ನಾನ್ಯಾರು?
ಒಬ್ಬ: ಇವೆಲ್ಲಾ ಭಾಷಣ ಬಿಗಿಯಲು ಚಂದ, ನಿಮ್ಮಂತಹ ಹೇತ್ಲಾಂಡಿಗಳು ಇರೋದ್ರಿಂದ ಅವರು ಹೆಚ್ಕೊಂಡಿರೋದು, ನಿಮ್ಗೆ ಮೊದಲು ಬಾರಿಸಬೇಕು
ಮೂರನೆಯವ- ಅಯ್ಯಾ ನೀವು ಅಲ್ಲಿಗೆ ಹೋಗೋರಲ್ಲ ಇಲ್ಲಿ ಕಿತ್ತಾಡ್ತೀರಿ. ಅಲ್ಲಿಗೆ ಹೋಗೋರು ಅರಾಮಾಗಿ ಮಜಾ ಮಾಡ್ತಾ ಇದಾರೆ. ಅವರವರದ್ದು ಅವರವರಿಗೆ ಬಿಡಿ, ನಿಮ್ಮ ವಾದದಿಂದ ಯಾವ ನಾಲ್ಕಾಣೆ ಬದಲಾವಣೆಯೂ ಆಗೋದಿಲ್ಲ.
ಹೀಗಾಗಿದೆ ನಮ್ಮ ಪರಿಸ್ಥಿತಿ. ದೇವರ ಧರ್ಮದ ಗಂಟು ಹೊತ್ತವನಿಗೆ ಯಾರು ವಿರೋಧಿಸುತ್ತಾರೆ ಎಂದು ನೋಡುವ ಚಟ. ಅವರನ್ನು ಬೆನ್ನೆತ್ತಿ ಬಡಿಯುವ ಆಸೆ. ದೇವರ ಅಸ್ತಿತ್ವದಲ್ಲಿ ಧರ್ಮದ ಸಮುದ್ರದಲ್ಲಿ ಕಿಂಚಿತ್ತೂ ನಂಬಿಕೆ ಯಿಲ್ಲದವನಿಗೆ ಅವರುಗಳನ್ನು ಕೆಣಕುವ ಚಟ, ನಾನೇ ಸೂಪರ್ ಎಂದು ಬಿಂಬಿಸುವ ಮಹದಾಸೆ. ಪರಸ್ಪರ ಎರಚುವ ಕೆಸರು ಅಮಾಯಯಕರ ಮೈಮೇಲೆ.
ಒಮ್ಮೆ ಇವೆಲ್ಲವನ್ನೂ ಬದಿಗಿರಿಸಿ ಭೂಮಿಯಿಂದ ಒಂದತ್ತು ಕಿಲೋಮೀಟರ್ ಮೇಲೆ ಮನಸ್ಸನ್ನು ಒಯ್ದು ನಿಲ್ಲಿಸಿಕೊಂಡರೆ ಅವಾಗ ಪರಮ ಸತ್ಯ ಗೋಚರಿಸುತ್ತದೆ. ಅಯ್ಯೋ ಇಷ್ಟು ದಿವಸ ನಾನು ಸುಮ್ಮನೆ ಗುದ್ದಾಡಿದೆನಲ್ಲ. ಇಷ್ಟು ಸೂಪರ್ ಸ್ವರ್ಗ ಮತ್ತೆಲ್ಲಿದೆ. ನಮ್ಮ ಪಾಡಿಗೆ ನಾವಿರುವ ವಿಚಾರದಲ್ಲಿ. ಹಾಗಾಗಿ ಬುದ್ದಿಜೀವಿಗಳೆಂದು ಕರೆಯಿಸಿಕೊಂಡು ಮುತಾಲಿಕ್ ಚರ್ಚೆಗೋ, ಬುರ್ಕಾ ವಿವಾದಕ್ಕೋ, ಬುಡನ್ ಗಿರಿ ವಿವಾದಕ್ಕೋ ಹೋಗಿ ವೇದಿಕೆಯೇರಿ ಕುಳಿತುಕೊಂಡು ಗಡ್ಡ ನೀವುವ ನಿಮ್ಮ ಚಟ ಕೈಬಿಡಿ. ನೀವೇ ಹೇಳುವಂತೆ ಧರ್ಮದ ಅಮಲಿನಲ್ಲಿ ತೇಲುತ್ತಿರುವವರಿಗೆ ಮಾನವೀಯತೆ ಕಾಣುವುದಿಲ್ಲ ಅಂದಾದ ಮೇಲೆ ಎಲ್ಲ ಅರ್ಥವಾದಂತಿರುವ ನಿಮಗೆ ಪ್ರಪಂಚ ತಿದ್ದುವ ಚಟ ಯಾಕೆ? ನೂರಾರು ವರ್ಷದಿಂದ ಹೀಗೆ ಎನೆಲ್ಲಾ ನಡೆದಿದೆ. ಸತ್ಯದ ತಾಕತ್ತು ಯಾವುದಕ್ಕೆ ಇಲ್ಲವೋ ಅದು ಅಳಿಸಿ ಹೋಗುತ್ತದೆ. ಅದಕ್ಕೆ ಯಾರ ಪ್ರಯತ್ನದ ಅಗತ್ಯವೂ ಇರುವುದಿಲ್ಲ.
ಅರಿವು ಎಂಬುದು ನಿಜವಾದ ವೈಯಕ್ತಿಕ ವಿಷಯ. ಅದಾದಾಗ ಎಲ್ಲವೂ ಶಾಂತ. ಆದರೆ ಪ್ರಕೃತಿ ಎಲ್ಲಾ ಮನುಷ್ಯರಿಗೂ ಅರಿವು ಮೂಡಿಸುವುದಿಲ್ಲ ಎಂಬುದು ಅಷ್ಟೇ ಸತ್ಯದ ವಿಷಯ.
ಮಾತೆತ್ತಿದರೆ ನಾವು ಇಪ್ಪತ್ತೊಂದನೇ ಶತಮಾನದ ವಿಷಯ ಎತ್ತಿ ಆಡಲು ಶೂರರು. ಇಂತಹ ವಿಷಯ ಬಂದಾಗ ಸಹಸ್ರಮಾನ ಹಿಂದೆ ಹೋಗಿಬಿಡುತ್ತೇವೆ. ಒಂದೆಡೆ ಆರಾಧಿಸುವ ಜನ ಮತ್ತೊಂದೆಡೆ ವಿರೋಧಿಸುವ ಜನ. ಎರಡೂ ಪ್ರಯೋಜನ ಇಲ್ಲ ಕೇವಲ ನಂಬಿಕೆ ಅಂತ ಮೂರನೆಯವರಾಗಿ ನಿಂತು ನೋಡಿದಾಗ ಅರ್ಥವಾಗುತ್ತದೆ. ಆದರೂ ಇವೆಲ್ಲಾ ನಡೆಯುತ್ತಲೇ ಇರುತ್ತದೆ. ಧರ್ಮಾಂಧತೆ ಎಷ್ಟರ ಮಟ್ಟಿಗೆ ಯಡವಟ್ಟೋ ಬುದ್ಧಿಜೀವಿಗಳೆಂದು ಹಣೆ ಪಟ್ಟಿ ಅಂಟಿಸಿಕೊಂಡ ವಿರೋಧಿಗಳೂ ಅಷ್ಟೇ ಯಡವಟ್ಟು.
ನಮ್ಮ ರಕ್ತಗಳಲ್ಲಿ ಒಂದಿಷ್ಟು ನಂಬಿಕೆಗಳನ್ನು ಅಂಟಿಸಿಕೊಂಡೇ ಜೀವನ ನಮ್ಮದು. ಒಬ್ಬರು ಹಿಂದೂ, ಮತ್ತೊಬ್ಬರು ಮುಸಲ್ಮಾನ ಮಗದೊಬ್ಬರು ಕ್ರಿಶ್ಚಿಯನ್ ಆನಂತರ ಜೈನ್ ಪಾರ್ಸಿ ಹೀಗೆ ಸಾಲು ಸಾಲುಗಳು. ಮತ್ತೊಂದೆಡೆ ಜಾತಿಯಿಲ್ಲ ಜನಿವಾರ ವಿಲ್ಲ ಅವೆಲ್ಲಾ ಕಪೋಲಕಲ್ಪಿತ. ಮನುಷ್ಯ ಎಂಬುದೊಂದೆ ಸತ್ಯ ಎಂದು ಸಾರುವ ಯತ್ನದ ಆ ತುದಿಯಲ್ಲಿರುವ ಜನರು. ಇವರುಗಳು ಧರ್ಮಾಂಧರಿಗಿಂತ ಅಪಾಯ. ನಾನು ಕಂಡಂತೆ ಜಾತಿಯಿಲ್ಲ ಜನಿವಾರ ವಿಲ್ಲ ಎಂದು ಮಧ್ಯ ವಯಸ್ಸಿನ ತನಕ ಹಾರಾಡಿ ನಂತರ ತಮ್ಮ ಮಕ್ಕಳ ಮದುವೆ ಸಮಯ ಬಂದಾಗ ಬ್ಯಾಟರಿ ತೆಗೆದುಕೊಂಡು ಹುಡುಕಿ ತಮ್ಮದೇ ಜಾತಿ ಒಳಪಂಗಡಕ್ಕೆ ಮದುವೆ ಮಾಡಿದ್ದು ಕಂಡಿದ್ದೇನೆ. ಇವರುಗಳು ಸುಮ್ಮನಾದರೆ ಕೆಣಕದಿದ್ದರೆ ತಾಕತ್ತಿಲ್ಲದ ಬಹಳಷ್ಟು ವಿಷಯ ತನ್ನಷ್ಟಕ್ಕೆ ಸತ್ತು ಹೋಗುತ್ತದೆ. ಆದರೆ ಅಸ್ತಿತ್ವದ ವಿಷಯದಲ್ಲಿ ತಗಾದೆ ತೆಗೆಯುವ ಇವರುಗಳು ಕಿತಬಿ ಎಬ್ಬಿಸಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಾರೆ.
ದೇವರಿಲ್ಲ ಅಂತ ನಂಬಿದವರಿಗೂ ದೇವರಿದ್ದಾನೆ ಅಂತ ನಂಬಿದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎರಡೂ ನಂಬಿಕೆಗಳಷ್ಟೆ. ಅದರಾಚೆ ಮತ್ತೊಂದು ಇರಬಹುದು. ತರ್ಕದ ತಾಕತ್ತಿನಮೇಲೆ ಜೀವನ ಅಷ್ಟೆ.
ಮಂಗಳೂರಿನಲ್ಲಿ ಶ್ರೀರಾಮ ಸೇನೆಯವರು ಪಬ್ ಗೆ ನುಗ್ಗಿ ಗಲಾಟೆ ಎಬ್ಬಿಸಿದಾಗ ನಮ್ಮೂರಲ್ಲಿ ಎರಡು ಜನರು ವಾಗ್ವಾದಕ್ಕಿಳಿದಿದರು.
ಒಬ್ಬ: ಮುತಾಲಿಕ್ ಮಾಡಿದ್ದು ಸರಿ , ಬಡ್ಡಿ ಮಕ್ಕಳು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಾರೆ.
ಮತೊಬ್ಬ:ಅದು ಹ್ಯಾಗೆ ಸರಿ, ಡ್ಯಾನ್ಸ್ ಮಾಡುವುದು ಪಬ್ ಗೆ ಹೋಗುವುದು ಅವರವರ ವೈಯಕ್ತಿಕ ವಿಷಯ, ಇದಕ್ಕೆ ಅಡ್ಡಿಪಡಿಸಲು ಮುತಾಲಿಕ್ ಯಾರು?
ಒಬ್ಬ: ನಿನ್ನ ತಂಗಿಗೋ ಅಕ್ಕನಿಗೋ ಹೀಗೆ ಎಳೆದುಕೊಂಡು ಹೋಗಿ ಹಾಳು ಮಾಡಿದ್ದರೆ ನಿನಗೆ ಅರ್ಥವಾಗುತ್ತಿತ್ತು , ಮುತಾಲಿಕ್ ಯಾರು ಅಂತ.
ಮತ್ತೊಬ್ಬ: ನೋಡು ನಾವು ಬದುಕುತ್ತಿರುವುದು ತಾಲಿಬಾನ್ ನಲ್ಲೋ ಭಾರತದಲ್ಲೋ? ನನ್ನ ತಂಗಿ ಮಾನಸಿಕವಾಗಿ ಪಬ್ ಗೆ ಹೋಗುವುದನ್ನು ಬಯಸಿದರೆ ಅಡ್ಡ ಗಾಲು ಹಾಕಲು ನಾನ್ಯಾರು?
ಒಬ್ಬ: ಇವೆಲ್ಲಾ ಭಾಷಣ ಬಿಗಿಯಲು ಚಂದ, ನಿಮ್ಮಂತಹ ಹೇತ್ಲಾಂಡಿಗಳು ಇರೋದ್ರಿಂದ ಅವರು ಹೆಚ್ಕೊಂಡಿರೋದು, ನಿಮ್ಗೆ ಮೊದಲು ಬಾರಿಸಬೇಕು
ಮೂರನೆಯವ- ಅಯ್ಯಾ ನೀವು ಅಲ್ಲಿಗೆ ಹೋಗೋರಲ್ಲ ಇಲ್ಲಿ ಕಿತ್ತಾಡ್ತೀರಿ. ಅಲ್ಲಿಗೆ ಹೋಗೋರು ಅರಾಮಾಗಿ ಮಜಾ ಮಾಡ್ತಾ ಇದಾರೆ. ಅವರವರದ್ದು ಅವರವರಿಗೆ ಬಿಡಿ, ನಿಮ್ಮ ವಾದದಿಂದ ಯಾವ ನಾಲ್ಕಾಣೆ ಬದಲಾವಣೆಯೂ ಆಗೋದಿಲ್ಲ.
ಹೀಗಾಗಿದೆ ನಮ್ಮ ಪರಿಸ್ಥಿತಿ. ದೇವರ ಧರ್ಮದ ಗಂಟು ಹೊತ್ತವನಿಗೆ ಯಾರು ವಿರೋಧಿಸುತ್ತಾರೆ ಎಂದು ನೋಡುವ ಚಟ. ಅವರನ್ನು ಬೆನ್ನೆತ್ತಿ ಬಡಿಯುವ ಆಸೆ. ದೇವರ ಅಸ್ತಿತ್ವದಲ್ಲಿ ಧರ್ಮದ ಸಮುದ್ರದಲ್ಲಿ ಕಿಂಚಿತ್ತೂ ನಂಬಿಕೆ ಯಿಲ್ಲದವನಿಗೆ ಅವರುಗಳನ್ನು ಕೆಣಕುವ ಚಟ, ನಾನೇ ಸೂಪರ್ ಎಂದು ಬಿಂಬಿಸುವ ಮಹದಾಸೆ. ಪರಸ್ಪರ ಎರಚುವ ಕೆಸರು ಅಮಾಯಯಕರ ಮೈಮೇಲೆ.
ಒಮ್ಮೆ ಇವೆಲ್ಲವನ್ನೂ ಬದಿಗಿರಿಸಿ ಭೂಮಿಯಿಂದ ಒಂದತ್ತು ಕಿಲೋಮೀಟರ್ ಮೇಲೆ ಮನಸ್ಸನ್ನು ಒಯ್ದು ನಿಲ್ಲಿಸಿಕೊಂಡರೆ ಅವಾಗ ಪರಮ ಸತ್ಯ ಗೋಚರಿಸುತ್ತದೆ. ಅಯ್ಯೋ ಇಷ್ಟು ದಿವಸ ನಾನು ಸುಮ್ಮನೆ ಗುದ್ದಾಡಿದೆನಲ್ಲ. ಇಷ್ಟು ಸೂಪರ್ ಸ್ವರ್ಗ ಮತ್ತೆಲ್ಲಿದೆ. ನಮ್ಮ ಪಾಡಿಗೆ ನಾವಿರುವ ವಿಚಾರದಲ್ಲಿ. ಹಾಗಾಗಿ ಬುದ್ದಿಜೀವಿಗಳೆಂದು ಕರೆಯಿಸಿಕೊಂಡು ಮುತಾಲಿಕ್ ಚರ್ಚೆಗೋ, ಬುರ್ಕಾ ವಿವಾದಕ್ಕೋ, ಬುಡನ್ ಗಿರಿ ವಿವಾದಕ್ಕೋ ಹೋಗಿ ವೇದಿಕೆಯೇರಿ ಕುಳಿತುಕೊಂಡು ಗಡ್ಡ ನೀವುವ ನಿಮ್ಮ ಚಟ ಕೈಬಿಡಿ. ನೀವೇ ಹೇಳುವಂತೆ ಧರ್ಮದ ಅಮಲಿನಲ್ಲಿ ತೇಲುತ್ತಿರುವವರಿಗೆ ಮಾನವೀಯತೆ ಕಾಣುವುದಿಲ್ಲ ಅಂದಾದ ಮೇಲೆ ಎಲ್ಲ ಅರ್ಥವಾದಂತಿರುವ ನಿಮಗೆ ಪ್ರಪಂಚ ತಿದ್ದುವ ಚಟ ಯಾಕೆ? ನೂರಾರು ವರ್ಷದಿಂದ ಹೀಗೆ ಎನೆಲ್ಲಾ ನಡೆದಿದೆ. ಸತ್ಯದ ತಾಕತ್ತು ಯಾವುದಕ್ಕೆ ಇಲ್ಲವೋ ಅದು ಅಳಿಸಿ ಹೋಗುತ್ತದೆ. ಅದಕ್ಕೆ ಯಾರ ಪ್ರಯತ್ನದ ಅಗತ್ಯವೂ ಇರುವುದಿಲ್ಲ.
ಅರಿವು ಎಂಬುದು ನಿಜವಾದ ವೈಯಕ್ತಿಕ ವಿಷಯ. ಅದಾದಾಗ ಎಲ್ಲವೂ ಶಾಂತ. ಆದರೆ ಪ್ರಕೃತಿ ಎಲ್ಲಾ ಮನುಷ್ಯರಿಗೂ ಅರಿವು ಮೂಡಿಸುವುದಿಲ್ಲ ಎಂಬುದು ಅಷ್ಟೇ ಸತ್ಯದ ವಿಷಯ.
ನೀವು ಕೇಳಿದಿರಿ...........?
ಯಾರಾದರೂ ತಾಕತ್ತಿರುವವರು ಸುಧಾದಲ್ಲಿ ಮೂಡಿ ಬರುವ ನೀವು ಕೇಳಿದಿರಿ? ತರಹದ ಒಂದು ಬ್ಲಾಗ್ ಮಾಡಬಹುದಿತ್ತು ಅಂತ ನನಗೆ ಅನ್ನಿಸುತ್ತದೆ. ಪ್ರಶ್ನೆಗೆ ಚುಟುಕಾದ ಉತ್ತರ . ಒಂಥರಾ ಮಜ ಇರುತ್ತದೆ. ಆದರೆ ಉತ್ತರಿಸುವವರಿಗೆ ಅಂದರೆ ಉತ್ತರ ದ ಬ್ಲಾಗ್ ಮೈಂಟೇನ್ ಮಾಡುವವರಿಗೆ ಬಹಳ ತಾಳ್ಮೆ ಇರಬೇಕು. ವಾರಕ್ಕೊಮ್ಮೆ ಶ್ರದ್ಧೆಯಿಂದ ಪ್ರಶ್ನೆಗೆ ಉತ್ತರ ನಿರಂತರವಾಗಿ ಕೊಡುವಂತಿರಬೇಕು. ಪ್ರಶ್ನೆ ಯಾರೂ ಕೇಳದಿದ್ದರೆ ಅದನ್ನೂ ಬೇರೆಯವರ ಹೆಸರಿನಲ್ಲಿ ಸೃಷ್ಟಿಸಿಕೊಂಡು ಉತ್ತರಿಸಬೇಕು. ಒಳ್ಳೆ ಹಿಟ್ಸ್ ಸಿಗಬಹುದು ಅಂತ ಅಂದಾಜು ನನ್ನದು. ಯಾರಾದರೂ ಹ್ಯಾಗಾದರೂ ಐಡಿಯಾ ಮಾಡಿ ಪ್ರಯತ್ನಿಸಿರಲ್ಲ ಹೀಗೆ.
ರಾಮಚಂದ್ರ ಕಡೂರು
ಪ್ರಶ್ನೆ: ದೇವರು ಇದ್ದಾನಾ.?
ಉತ್ತರ: "ಅನು ಮಾನ" ಇಲ್ಲದಿದ್ದರೆ.
ಪ್ರಸಾದ ಮಾವಿನಸರ
ಪ್ರಶ್ನೆ: ಪ್ರಳಯ ಆಗೋದು ಯಾವಾಗ?
ಉತ್ತರ: ಪ್ರಾಯ ಸಂದಾಗ-ಕಲ್ಲು ಬೆಂದಾಗ
ಮೃತ್ಯು ಹೊಸಮನೆ
ಪ್ರಶ್ನೆ: ನಿಮಗೆ "ವಿವೇಕ" ಬರೋದು ಯಾವಾಗ?
ಉತ್ತರ: ಅಕಸ್ಮಾತ್ತಾಗಿ ಹಿಂದಿನ "ಅ"ಳಿಸಿ ಹೋದಾಗ.
ಕಾಮೇಶ್ವರ ಬಚ್ಚಗಾರು
ಪ್ರಶ್ನೆ: ನಿಮಗೆ ಮೂರನೇ ಮದುವೆ ಯಾವಾಗ?
ಉತ್ತರ: ಒಂದು, ಎರಡು ಒಟ್ಟಿಗೆ ಆದಾಗ.
ಜಿತೇಂದ್ರ ಹಿಂಡುಮನೆ
ಪ್ರಶ್ನೆ: ಹಳ್ಳಿಗಳನ್ನು ಹೆಣ್ಣು ಮಕ್ಕಳು ಏಕೆ ಇಷ್ಟಪಡುವುದಿಲ್ಲ.
ಉತ್ತರ: ನಿಮ್ಮಂಥಹವರೆಲ್ಲ ನಿತ್ಯ ಪಟ್ಟಣ ಸೇರುವುದರಿಂದ
ವಿನಾಯಕ ಸಾಗರ
ಪ್ರಶ್ನೆ: ವಿರೋಧ ಪಕ್ಷದ ನಾಯಕರಾಗಿದ್ದಾಗಿನ ಹುರುಪು ಸಿ.ಎಂ ಆದಾಗ ಏಕಿರುವುದಿಲ್ಲ?
ಉತ್ತರ; ನಾಯಕ ದಲ್ಲಿ ನಾಕ ಇದೆ ಹಾಗಾಗಿ.
ಅಯ್ಯೋ ಸುಸ್ತಾದೆ ಕಣ್ರೀ ಇನ್ನೂ ಸೂಪರ್ ಪ್ರಶ್ನೆ ಉತ್ತರ ನಿಮ್ಮ ಬಳಿ ಇದೆ. ಅದನ್ನೆಲ್ಲಾ ಶುರು ಮಾಡ್ರಲಾ. ಮಜಾ ನೋಡೂಣು.
ರಾಮಚಂದ್ರ ಕಡೂರು
ಪ್ರಶ್ನೆ: ದೇವರು ಇದ್ದಾನಾ.?
ಉತ್ತರ: "ಅನು ಮಾನ" ಇಲ್ಲದಿದ್ದರೆ.
ಪ್ರಸಾದ ಮಾವಿನಸರ
ಪ್ರಶ್ನೆ: ಪ್ರಳಯ ಆಗೋದು ಯಾವಾಗ?
ಉತ್ತರ: ಪ್ರಾಯ ಸಂದಾಗ-ಕಲ್ಲು ಬೆಂದಾಗ
ಮೃತ್ಯು ಹೊಸಮನೆ
ಪ್ರಶ್ನೆ: ನಿಮಗೆ "ವಿವೇಕ" ಬರೋದು ಯಾವಾಗ?
ಉತ್ತರ: ಅಕಸ್ಮಾತ್ತಾಗಿ ಹಿಂದಿನ "ಅ"ಳಿಸಿ ಹೋದಾಗ.
ಕಾಮೇಶ್ವರ ಬಚ್ಚಗಾರು
ಪ್ರಶ್ನೆ: ನಿಮಗೆ ಮೂರನೇ ಮದುವೆ ಯಾವಾಗ?
ಉತ್ತರ: ಒಂದು, ಎರಡು ಒಟ್ಟಿಗೆ ಆದಾಗ.
ಜಿತೇಂದ್ರ ಹಿಂಡುಮನೆ
ಪ್ರಶ್ನೆ: ಹಳ್ಳಿಗಳನ್ನು ಹೆಣ್ಣು ಮಕ್ಕಳು ಏಕೆ ಇಷ್ಟಪಡುವುದಿಲ್ಲ.
ಉತ್ತರ: ನಿಮ್ಮಂಥಹವರೆಲ್ಲ ನಿತ್ಯ ಪಟ್ಟಣ ಸೇರುವುದರಿಂದ
ವಿನಾಯಕ ಸಾಗರ
ಪ್ರಶ್ನೆ: ವಿರೋಧ ಪಕ್ಷದ ನಾಯಕರಾಗಿದ್ದಾಗಿನ ಹುರುಪು ಸಿ.ಎಂ ಆದಾಗ ಏಕಿರುವುದಿಲ್ಲ?
ಉತ್ತರ; ನಾಯಕ ದಲ್ಲಿ ನಾಕ ಇದೆ ಹಾಗಾಗಿ.
ಅಯ್ಯೋ ಸುಸ್ತಾದೆ ಕಣ್ರೀ ಇನ್ನೂ ಸೂಪರ್ ಪ್ರಶ್ನೆ ಉತ್ತರ ನಿಮ್ಮ ಬಳಿ ಇದೆ. ಅದನ್ನೆಲ್ಲಾ ಶುರು ಮಾಡ್ರಲಾ. ಮಜಾ ನೋಡೂಣು.
Monday, March 1, 2010
ನಭೋ ಮಂಡಲ ಗಡ ಗಡ
ಪ್ರಳಯ ಖಂಡಿತಾ ಆಗುತ್ತೆ. ಆದರೆಅದರ ಮುನ್ಸೂಚನೆ ಅಂತ ನಮಗೆ ಹಲವಾರು ತರಹದ ವಿದ್ಯಮಾನಗಳು ಕಾಣಿಸತೊಡಗುತ್ತವೆ ಅವೆಲ್ಲಾ ಹೀಗೆ.
ಸಾಕಷ್ಟು ಆಸ್ತಿ ಹೊಂದಿರುವ ಅಣ್ಣ ತಮ್ಮಂದಿರು ಹಿಸ್ಸೆ ಮಾಡಿಕೊಳ್ಳಲು ಆರಂಭಿಸುತ್ತಾರೆ. ಸಕಲ ಚರ ಸ್ಥಿರ ಆಸ್ತಿಗಳೂ ಒಂದಿನಿತೂ ವಿವಾದವಿಲ್ಲದೆ ಹಂಚಿಕೆಯಾಗುತ್ತದೆ. ಅಪ್ಪ ಅಮ್ಮ "ಭಗವಂತನನ್ನು ನಂಬಿದವರು ತಾವು ಏನನ್ನೂ ಇಟ್ಟುಕೊಳ್ಳುವುದಿಲ್ಲ" ಎಂದುಬಿಡುತ್ತಾರೆ. ಇನ್ನೆಲ್ಲಾ ಸಾಂಗೋಪಸಾಂಗವಾಗಿ ಮುಗಿಯಿತು ಅನ್ನುವಷ್ಟರಲ್ಲಿ ತಮ್ಮನ ಕಿವಿಯಲ್ಲಿ ಆತನ ಹೆಂಡತಿ ಏನೋ ಪಿಸುಗುಟ್ಟುತ್ತಾಳೆ ತಕ್ಷಣ ಆತ ತರಲೆ ತೆಗೆಯುತ್ತಾನೆ. " ಎಲ್ಲಾ ಸರಿ ಅಪ್ಪ ಅಮ್ಮ ದೇವರು, ನನ್ನ ಹೆತ್ತು ಹೊತ್ತು ಬೆಳೆಸಿದವರು ಅವರು ನನ್ನೊಟ್ಟಿಗೆ "ಇರಬೇಕು. ತಕ್ಷಣ ಅಣ್ಣನ ಹೆಂಡತಿ ಗುಸುಗುಟ್ಟುತ್ತಾಳೆ ಅಣ್ಣ " ಅದು ಆಗದ ಮಾತು ನನ್ನನ್ನೂ ಅವರೇ ಬೆಳಸಿದ್ದು ಅವರು ನನ್ನೊಟ್ಟಿಗೆ ಇರಬೇಕು" ಎಂದು ಗದ್ದಲವನ್ನೆಬಿಸುತ್ತಾನೆ". ಮಾತಿಗೆ ಮಾತು ಬೆಳೆದು ಅಮ್ಮ ಅಪ್ಪ ನನಗೆ ನನಗೆ ಎಂದು ಹಂಚು ಹಾರಿಹೋಗುವ ಮಟ್ಟಿಗೆ ಗಲಾಟೆ. ತಮ್ಮ "ಬಂಗಾರ ಎಲ್ಲ ನೀನೆ ಇಟ್ಟುಕೋ ಅಮ್ಮ ಅಪ್ಪ ನನಗಿರಲಿ" ಎನ್ನುತ್ತಾನೆ. ಅಣ್ಣ ನನ್ನ ಆಸ್ತಿ ನೀನಿಟ್ಟುಕೋ ಅಪ್ಪ ಅಮ್ಮ ನನಗಿರಲಿ ಎಂದು ಕೂಗುತ್ತಾನೆ,
ಹೀಗೆ ಹಾರಾಟ ಚೀರಾಟ ಜೋರಾಗುವಷ್ಟರಲ್ಲಿ ನಭೋ ಮಂಡಲ ಗಡಗಡ ಸದ್ದಿನೊಂದಿಗೆ..........
ಪ್ರಖ್ಯಾತ ಜ್ಯೋತಿಷಿಯೊಬ್ಬರು ಇದ್ದಕ್ಕಿಂದ್ದಂತೆ ತಮ್ಮ ಆಸ್ತಿಯನ್ನೆಲ್ಲಾ ದಾನ ಮಾಡಲು ಆರಂಭಿಸುತ್ತಾರೆ. ಇಟ್ಟದ್ದು ಪರರಿಗೆ ಕೊಟ್ಟದ್ದು ತನಗೆ ಎಂಬ ತತ್ವ ಎಂದು ಎಲ್ಲವನ್ನೂ ದಾನ ದಾನ ದಾನ ಶುರುಮಾಡುತ್ತಾರೆ. ಯಾರೇ ಭವಿಷ್ಯ ಕೇಳಲು ಬಂದರೂ "ನೀರೇ ನೀರೂ" ಎನೂ ಕಾಣಿಸುತ್ತಿಲ್ಲ ಅನ್ನುತ್ತಾರೆ.
ತಕ್ಷಣ ನಭೋ ಮಂಡಲ ಗಡ ಗಡ.
ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತಿರುತ್ತದೆ. ಅಧ್ಯಕ್ಷರೂ ಗೀತಾ ನಾಗಭೂಷಣರಂತಯೇ ಮತ್ತೊಬ್ಬರು. ಅವರು ಭಾಷಣ ಶುರು ಮಾಡುತ್ತಾರೆ. " ನಾವು ಬರಹಗಾರರು ಬರೀ ಬೊಗಳೆ ಬಿಟ್ಟಿದಷ್ಟೇ, ಬರೆದ ಬರಹಕ್ಕೆ ಕಾಸು ತೆಗೆದುಕೊಂಡಿದ್ದೇವೆ. ಬಡತನದ ಕತೆ ಶ್ರೀಮಂತರಿಗೆ ಹೇಳಿದ್ದೇವೆ. ರೈತರಿಗೆ ಕರುಣೆ ತೋರಿದ ಬರಹ ಬರೆದು ನಾವು ಕಾಸು ಮಾಡಿಕೊಂಡಿದ್ದೇವೆ. ಕನ್ನಡ ಕನ್ನಡ ಎಂದು ಜಪ ಮಾಡುತ್ತಾ ನಮ್ಮ ಮಕ್ಕಳನ್ನು ಕಾನ್ವೆಂಟ್ ಗೆ ಕಳುಹಿಸಿ ಅವರು ಅಮೆರಿಕಾದಲ್ಲಿ ಸೆಟ್ಲ್ ಆಗುವಂತೆ ನೋಡಿಕೊಂಡಿದ್ದೇವೆ. ರಾಜಕಾರಣಿಗಳೇ ಎಷ್ಟೋ ಮೇಲು. ಅವರು ಹಲವು ಕೆಲಸಗಳನ್ನು ಮಾಡಿಸಿದ್ದಾರೆ. ನಾವುಗಳು ಬುರುಡೇ ದಾಸರು. ಹಾಗಾಗಿ ಈಗ ನನಗೆ ಕೊಟ್ಟ ಹದಿನೈದು ಲಕ್ಷ ರೂಪಾಯಿಗಳನ್ನು ಇಲ್ಲೇ ಇರುವ ರೈತರಿಗೆ ನೀಡುತ್ತಿದ್ದೇನೆ. "
ತಕ್ಷಣ
ಗಡ ಗಡ ಗಡ ನೀರೋ ನೀರು.
ಇಂತಹ ಘಟನೆ ನಿಮಗೂ ಸಾವಿರ ಹೊಳೆಯುತ್ತೆ. ಅದಾದ ದಿವಸವೇ ಪ್ರಳಯ. ಅಲ್ಲಿವರಗೆ ಜುಂ ಜಂ ಜಮಾಯ್ಸಿ.
ಸಾಕಷ್ಟು ಆಸ್ತಿ ಹೊಂದಿರುವ ಅಣ್ಣ ತಮ್ಮಂದಿರು ಹಿಸ್ಸೆ ಮಾಡಿಕೊಳ್ಳಲು ಆರಂಭಿಸುತ್ತಾರೆ. ಸಕಲ ಚರ ಸ್ಥಿರ ಆಸ್ತಿಗಳೂ ಒಂದಿನಿತೂ ವಿವಾದವಿಲ್ಲದೆ ಹಂಚಿಕೆಯಾಗುತ್ತದೆ. ಅಪ್ಪ ಅಮ್ಮ "ಭಗವಂತನನ್ನು ನಂಬಿದವರು ತಾವು ಏನನ್ನೂ ಇಟ್ಟುಕೊಳ್ಳುವುದಿಲ್ಲ" ಎಂದುಬಿಡುತ್ತಾರೆ. ಇನ್ನೆಲ್ಲಾ ಸಾಂಗೋಪಸಾಂಗವಾಗಿ ಮುಗಿಯಿತು ಅನ್ನುವಷ್ಟರಲ್ಲಿ ತಮ್ಮನ ಕಿವಿಯಲ್ಲಿ ಆತನ ಹೆಂಡತಿ ಏನೋ ಪಿಸುಗುಟ್ಟುತ್ತಾಳೆ ತಕ್ಷಣ ಆತ ತರಲೆ ತೆಗೆಯುತ್ತಾನೆ. " ಎಲ್ಲಾ ಸರಿ ಅಪ್ಪ ಅಮ್ಮ ದೇವರು, ನನ್ನ ಹೆತ್ತು ಹೊತ್ತು ಬೆಳೆಸಿದವರು ಅವರು ನನ್ನೊಟ್ಟಿಗೆ "ಇರಬೇಕು. ತಕ್ಷಣ ಅಣ್ಣನ ಹೆಂಡತಿ ಗುಸುಗುಟ್ಟುತ್ತಾಳೆ ಅಣ್ಣ " ಅದು ಆಗದ ಮಾತು ನನ್ನನ್ನೂ ಅವರೇ ಬೆಳಸಿದ್ದು ಅವರು ನನ್ನೊಟ್ಟಿಗೆ ಇರಬೇಕು" ಎಂದು ಗದ್ದಲವನ್ನೆಬಿಸುತ್ತಾನೆ". ಮಾತಿಗೆ ಮಾತು ಬೆಳೆದು ಅಮ್ಮ ಅಪ್ಪ ನನಗೆ ನನಗೆ ಎಂದು ಹಂಚು ಹಾರಿಹೋಗುವ ಮಟ್ಟಿಗೆ ಗಲಾಟೆ. ತಮ್ಮ "ಬಂಗಾರ ಎಲ್ಲ ನೀನೆ ಇಟ್ಟುಕೋ ಅಮ್ಮ ಅಪ್ಪ ನನಗಿರಲಿ" ಎನ್ನುತ್ತಾನೆ. ಅಣ್ಣ ನನ್ನ ಆಸ್ತಿ ನೀನಿಟ್ಟುಕೋ ಅಪ್ಪ ಅಮ್ಮ ನನಗಿರಲಿ ಎಂದು ಕೂಗುತ್ತಾನೆ,
ಹೀಗೆ ಹಾರಾಟ ಚೀರಾಟ ಜೋರಾಗುವಷ್ಟರಲ್ಲಿ ನಭೋ ಮಂಡಲ ಗಡಗಡ ಸದ್ದಿನೊಂದಿಗೆ..........
ಪ್ರಖ್ಯಾತ ಜ್ಯೋತಿಷಿಯೊಬ್ಬರು ಇದ್ದಕ್ಕಿಂದ್ದಂತೆ ತಮ್ಮ ಆಸ್ತಿಯನ್ನೆಲ್ಲಾ ದಾನ ಮಾಡಲು ಆರಂಭಿಸುತ್ತಾರೆ. ಇಟ್ಟದ್ದು ಪರರಿಗೆ ಕೊಟ್ಟದ್ದು ತನಗೆ ಎಂಬ ತತ್ವ ಎಂದು ಎಲ್ಲವನ್ನೂ ದಾನ ದಾನ ದಾನ ಶುರುಮಾಡುತ್ತಾರೆ. ಯಾರೇ ಭವಿಷ್ಯ ಕೇಳಲು ಬಂದರೂ "ನೀರೇ ನೀರೂ" ಎನೂ ಕಾಣಿಸುತ್ತಿಲ್ಲ ಅನ್ನುತ್ತಾರೆ.
ತಕ್ಷಣ ನಭೋ ಮಂಡಲ ಗಡ ಗಡ.
ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತಿರುತ್ತದೆ. ಅಧ್ಯಕ್ಷರೂ ಗೀತಾ ನಾಗಭೂಷಣರಂತಯೇ ಮತ್ತೊಬ್ಬರು. ಅವರು ಭಾಷಣ ಶುರು ಮಾಡುತ್ತಾರೆ. " ನಾವು ಬರಹಗಾರರು ಬರೀ ಬೊಗಳೆ ಬಿಟ್ಟಿದಷ್ಟೇ, ಬರೆದ ಬರಹಕ್ಕೆ ಕಾಸು ತೆಗೆದುಕೊಂಡಿದ್ದೇವೆ. ಬಡತನದ ಕತೆ ಶ್ರೀಮಂತರಿಗೆ ಹೇಳಿದ್ದೇವೆ. ರೈತರಿಗೆ ಕರುಣೆ ತೋರಿದ ಬರಹ ಬರೆದು ನಾವು ಕಾಸು ಮಾಡಿಕೊಂಡಿದ್ದೇವೆ. ಕನ್ನಡ ಕನ್ನಡ ಎಂದು ಜಪ ಮಾಡುತ್ತಾ ನಮ್ಮ ಮಕ್ಕಳನ್ನು ಕಾನ್ವೆಂಟ್ ಗೆ ಕಳುಹಿಸಿ ಅವರು ಅಮೆರಿಕಾದಲ್ಲಿ ಸೆಟ್ಲ್ ಆಗುವಂತೆ ನೋಡಿಕೊಂಡಿದ್ದೇವೆ. ರಾಜಕಾರಣಿಗಳೇ ಎಷ್ಟೋ ಮೇಲು. ಅವರು ಹಲವು ಕೆಲಸಗಳನ್ನು ಮಾಡಿಸಿದ್ದಾರೆ. ನಾವುಗಳು ಬುರುಡೇ ದಾಸರು. ಹಾಗಾಗಿ ಈಗ ನನಗೆ ಕೊಟ್ಟ ಹದಿನೈದು ಲಕ್ಷ ರೂಪಾಯಿಗಳನ್ನು ಇಲ್ಲೇ ಇರುವ ರೈತರಿಗೆ ನೀಡುತ್ತಿದ್ದೇನೆ. "
ತಕ್ಷಣ
ಗಡ ಗಡ ಗಡ ನೀರೋ ನೀರು.
ಇಂತಹ ಘಟನೆ ನಿಮಗೂ ಸಾವಿರ ಹೊಳೆಯುತ್ತೆ. ಅದಾದ ದಿವಸವೇ ಪ್ರಳಯ. ಅಲ್ಲಿವರಗೆ ಜುಂ ಜಂ ಜಮಾಯ್ಸಿ.
Sunday, February 28, 2010
Wednesday, February 17, 2010
ಹಣ್ಣು ಸಿಕ್ಕಾಗ ಒಮ್ಮೆ ರುಚಿ ನೋಡಿ.
ಚುಮು ಚುಮು ಚಳಿಗಾಲ ಮುಗಿಯುತ್ತಾ ಬಂತು. ನಮ್ಮ ಮಲೆನಾಡಿನಲ್ಲಿ ಅಷ್ಟೇನು ಭೀಕರವಲ್ಲದ ಬೇಸಿಗೆ ಆರಂಭ. ಈ ಬೇಸಿಗೆ ಆರಂಭವಾಯಿತೆಂದರೆ ನಮ್ಮಲ್ಲಿನ ಹುಡುಗರಿಗೆ ಶಾಲೆ ಮುಗಿಯುವ ದಿವಸ. ಅಷ್ಟಾದಮೇಲೆ ರಜದಲ್ಲಿ ಗುಡ್ಡ ಸುತ್ತುವುದೇ ಕೆಲಸ. ನಗರ ಪಟ್ಟಣದ ಮಕ್ಕಳು ಸಿನೆಮಾ ಹಾಲ್ ಗೆ ಮುತ್ತಿದ ಹಾಗೆ ನಮ್ಮಲ್ಲಿನ ಹುಡುಗರು ಗುಡ್ಡ ಮುತ್ತುತ್ತಾರೆ. ಅಲ್ಲಿದೆ ಅವಕ್ಕೆ ಮಜ. ಆ ಮಜಕ್ಕೆ ಮುಖ್ಯ ಕಾರಣ ಕಾಡು ಹಣ್ಣುಗಳು. ಪರಿಗೆ-ಮುಳ್ಳು ಹಣ್ಣು-ಕೌಳಿ ಹಣ್ಣು-ಜಾವಣಿಗೆ ಹಣ್ಣು- ಹೀಗೆ ನಾನಾ ತರಹದ ಹಣ್ಣು ಗಳ ಖಜಾನೆ ಅಲ್ಲಿ ಮಕ್ಕಳಿಗಾಗಿ ತೆರೆದಿರುತ್ತದೆ. ಸಿಕ್ಕಿದ್ದು ಇವರಿಗೆ ಸಿಗದ್ದು ಹಕ್ಕಿಗಳಿಗೆ. ಆ ಕಾಡು ಹಣ್ಣುಗಳಿಗೋ ಒಂದು ವಿಶಿಷ್ಠ ರುಚಿ. ಅತ್ತ ಸಿಹಿಯೂ ಅಲ್ಲದ ಇತ್ತ ಹುಳಿಯೂ ಅಲ್ಲದ ಹಣ್ಣುಗಳ ಸಂಖ್ಯೆ ಸ್ವಲ್ಪ ಜಾಸ್ತಿ. ಅಂತಹ ಒಂದು ಅದ್ಭುತ ಹಣ್ಣುಗಳ ಪಟ್ಟಿಗೆ ಸೇರುವುದು ಈಗ ನೀವು ಚಿತ್ರದಲ್ಲಿ ನೋಡಿದ ಹಲಗೆ ಹಣ್ಣು.
ಈ ಹಲಗೆ ಹಣ್ಣು (ಬೇರೆಡೆ ಬೇರೆ ಹೆಸರು ಕರೆಯಬಹುದು) ಒಮ್ಮೆ ತಿಂದರೆ ನಿಮಗೆ ಮುಂದೆ ಆ ಹಣ್ಣು ನೋಡಿದಾಗ, ನೋಡಿದಾಗ ಏನು ಹಲಗೆ ಹಣ್ಣು ಎಂಬ ಹೆಸರು ಕೇಳಿದಾಗ ಬಾಯಲ್ಲಿ ಛಳ್ ಅಂಥ ನೀರು ಉಕ್ಕುತ್ತದೆ. ತೆಳ್ಳನೆಯ ಬೂದಿ ಬಣ್ಣದ ಹರಪಲು ಮುಚ್ಚಿಕೊಂಡಿರುವ ಇದನ್ನು ನಮ್ಮ ಅಂಗಿಗೆ ನಿಧಾನ ಉಜ್ಜಿಕೊಳ್ಳಬೇಕು ಆಗ ಕಡು ಕೆಂಪು ಬಣ್ಣದ ಒಳಮೈ ಹೊರಚಾಚುತ್ತದೆ. ಆಗ ತಿನ್ನುವುದಕ್ಕಿಂತ ನೋಡುವುದೇ ಅಂದ. ನಂತರ ನಾಲಿಗೆ ಮೇಲಿಟ್ಟು ಚೀಪಿದರೆ "ವಾವ್" ಅದರ ಮಜವೇ ಮಜ.
ಹಲಗೆ ಗಿಡ ಎನ್ನುವದಕ್ಕಿಂತ ಬಳ್ಳಿ ಎನ್ನಬಹುದು. ಹಲಗೆ ಬಳ್ಳಿ ಏಕಾಂಗಿಯಾಗಿ ಬೆಳೆಯಲಾರದು. ಪೊದೆಗಳಲ್ಲಿ ಹುಟ್ಟಿ ಸುತ್ತೆಲ್ಲಾ ಆವರಿಸಿಕೊಳ್ಳುತ್ತದೆ. ಪೆಬ್ರವರಿ ಆರಂಭದಲ್ಲಿ ಹಸಿರು ಬಣ್ಣದ ಕಾಯಾಗಿ ಅಂತ್ಯದಲ್ಲಿ ಹಣ್ಣಾಗುತ್ತದೆ. ಹಕ್ಕಿಗಳ ಪರಮ ಪ್ರೀತಿಯ ಹಣ್ಣು ಇದು. ಕಾಡು ಕೋಳಿಯೂ ಇದನ್ನು ತಿನ್ನುತ್ತದೆ.
ರುಚಿ ಯನ್ನು ಮೆಚ್ಚಿ ನೂರಾರು ಹತ್ತಿಪ್ಪತ್ತು ತಿಂದಿರೋ ಹೊಟ್ಟೆ ನೋವು ಶುರುವಾಗಿಬಿಡುತ್ತದೆ ಜೋಕೆ. ವಿನಾಶದ ಅಂಚಿನಲ್ಲಿರುವ ಈ ಬಳ್ಳಿಯನ್ನು ನಮ್ಮ ವನದಲ್ಲಿ ರಕ್ಷಿಸಿಡಲು ಹರ ಸಾಹಸಪಟ್ಟಿದ್ದು ಈ ವರ್ಷ ಶ್ರಮ ಸಾರ್ಥಕ್ಯ ಕಂಡಿದೆ. ಹಣ್ಣುಗಳು ಹತ್ತಾರು ಬಿಟ್ಟಿತ್ತು. ನಾನು ನಾಲ್ಕೈದು ತಿಂದೆ ಮಕ್ಕಳಿಗೆ ಒಂದಿಷ್ಟು ಕೊಟ್ಟೆ ಹಕ್ಕಿಗಳಿಗೆ ಉಳಿದದ್ದು ಬಿಟ್ಟೆ. ಹಣ್ಣು ಸಿಕ್ಕಾಗ ಒಮ್ಮೆ ರುಚಿ ನೋಡಿ. ನಾನು ಈಗ ಕೊರೆದದ್ದು ಸತ್ಯ ಎಂಬ ಅರಿವಾಗುತ್ತದೆ.
Tuesday, February 16, 2010
ಆ ತುದಿ ಈ ತುದಿ ಮತ್ತು ನಾನು
ಸೂರ್ಯ ಹುಟ್ಟುತ್ತಾನೆ ಮುಳುಗುತ್ತಾನೆ ಎಂಬ ಕಣ್ಣಿಗೆ ಕಾಣುವ ಪ್ರಕ್ರಿಯೆಯ ಜತೆಗೆ ಕಾಣದ , ಆದರೆ ಲೆಕ್ಕಕ್ಕೆ ಮಾತ್ರಾ ಸಿಗುವ ಕಾಲ ಎಂಬುದು ತನ್ನಷ್ಟಕ್ಕೆ ಓಡುತ್ತಿರುತ್ತದೆ. ನಾವು ಹೇಗಿದ್ದರೂ ಕಾಲನಿಗೆ ನಿಶ್ಚಿಂತೆ. ಓದುವವರು ಓದುತ್ತಾರೆ, ನಿದ್ರೆ ಮಾಡುವವರು ನಿದ್ರೆ, ದುಡಿಯುವವರು ದುಡಿಮೆ, ಹೀಗೆ ಏನೆಲ್ಲಾ ಮಾಡುತ್ತಿರಲಿ ಕಾಲನಿಗೆ ಅವೆಲ್ಲಾ ನಗಣ್ಯ. ಸಾವಿರ ಸಾವಿರ ನೆನಪುಗಳ ಮೂಟೆಯೊಂದಿಗೆ ಒಂದು ದಿನ ನಾವೂ ಕಾಲವಾಗುತ್ತೇವೆ. ಹೀಗೆಲ್ಲಾ ಬ್ಲಾಗ್ ಬರೆಯದೇ ನನ್ನ ನಿಮ್ಮ ಅಜ್ಜ ಅಜ್ಜಿಗಳೆಂಬ ಸಹಸ್ರಾರು ಕಾಲದ ಯಂತ್ರಗಳನ್ನು ಅವರುಗಳ ನೆನಪುಗಳನ್ನು ಕಾಲನೆಂಬ ಕಾಲ ನುಂಗಿ ಹಾಕಿ ಮುನ್ನುಗ್ಗುತ್ತಿದ್ದಾನೆ. ಅಂತ್ಯವೆಲ್ಲೋ..? ಆರಂಭವಂತೂ ಆಗಿದೆ.
ನನ್ನ ಬಾಲ್ಯ ಪಕ್ಕಾ ಆಸ್ತಿಕ ಮನೆಯಲ್ಲಿ. ನನ್ನಪ್ಪ ಮೂಢನಂಬಿಕೆಗಳಿಂದ ದೂರ ಹಾಗಂತ ಸಹ್ಯವಾಗುವ ಆಚರಣೆಗೆ ಅಂಟಿಕೊಂಡವ. ನನಗೆ ಓದನ್ನು ಬೆನ್ನು ಹತ್ತಲಾಗಲಿಲ್ಲ. ಆಬ್ಸೆಂಟ್ ಮೈಂಡ್ ಈಸ್ ಡೆವಿಲ್ ವರ್ಕ್ ಶಾಪ್ ಎನ್ನುವಂತೆ ದೇವರು ಜೀವನದ ಬಹುಪಾಲು ಸಮಯನ್ನು ಕಿತ್ತುಕೊಂಡ ವಿಷಯವಾಯಿತು. ಇದ್ದಾನೋ ಇಲ್ಲವೋ ಇದ್ದರೆ ಎಲ್ಲಿ ಹೇಗೆ? ಯಾಕಾಗಿ? ಹೀಗೆ ಪ್ರಶ್ನೆಗಳು ವರಲೆಯ ಹುತ್ತದಂತೆ ಏರುತ್ತಾ ಸಾಗುತಿದ್ದವು. ಪುಸ್ತಕ ಓದುವುದು ಓದಿಗಿಂತ ಮೊದಲು ಅದೇನೋ ಒಂದು ಅದ್ಭುತ ಉತ್ತರ ಸಿಗುವ ಆಸೆ ಓದಿದ ನಂತರ ಓಹ್ ಇದು ಇಷ್ಟೇನಾ..? ಎಂಬ ನಿರಾಸೆ. ದೇವರ ಅಸ್ತಿತ್ವವನ್ನು ನಂಬುವ ಜನರ ಬೆನ್ನು ಹತ್ತಿ ಆನಂತರ ಅವರ ತೀರಾ ಸಾಮಿಪ್ಯ ಸಾದ್ಯವಾದಾಗ ಅವರೂ ಗೊಂದಲದಲ್ಲಿದ್ದಾರೆ ಎಂಬುದು ಅರಿವಾಗಿ ಅವರೂ ದೇವರ ನಂಬಿದ್ದು ಹಣ ಗಳಿಸಲೋ ಅಥವಾ ಭಯಕ್ಕೋ ಎನ್ನುವ ವಿಷಯ ತಿಳಿದು ಹಿಂದಿರುಗಿ ನಂತರ ದೇವರ ಅಸ್ತಿತ್ವವನ್ನು ನಂಬದವರಿಗೆ ಹತ್ತಿರವಾಗಿ ಅವರ ಸಾಮಿಪ್ಯ ಸನಿಹವಾದಾಗ ಅವರೂ ಕೇವಲ ಗೊತ್ತಿಲ್ಲದೆ ಹಾಗೆಲ್ಲಾ ಮಾಡುತ್ತಿರುವ ವಿಷಯ ತಿಳಿದು ಅವರೂ ಆಸ್ತಿಕತನ ವಿರೋಧಿಸುವ ಮಟ್ಟಿಗಷ್ಟೇ ನಾಸ್ತಿಕರು ಎಂಬುದು ತಿಳಿದು ವಾಪಾಸಾಗಿದ್ದಿದೆ. ಇರಲಿ ಹಾಗೆಲ್ಲಾ ಆಗುವುದೂ ಒಂದು ಅದೃಷ್ಟವೇ ಅಂದುಕೊಂಡು ಬಿಡೋಣ.
ನಂಬಿ ಕೆಟ್ಟವರಿಲ್ಲವೋ ಎಂಬುದೇ ಒಳ್ಳೆಯ ವೇದಾಂತ . ನಂಬದಿದ್ದರೂ ಕೆಡುವುದಿಲ್ಲವೋ ಎಂಬುದೂ ಕೂಡ ಒಳ್ಳೆಯ ಸಿದ್ಧಾಂತ.
ಬಹುಪಾಲು ಮನುಷ್ಯರ ಮೆದುಳು ಬೆಳೆಯುವುದು ಅವರ ವ್ಯಕ್ತಿತ್ವ ರೂಪುಗೊಳ್ಳುವುದು ಅವರಿದ್ದ ಪರಿಸರದ ಮೇಲೆಯೇ ಅವಲಂಬಿತವಾಗಿರುತ್ತದೆ. ದಿನ ನಿತ್ಯ ಕಾಣುವ ಕೇಳುವ ವಿಷಯಗಳನ್ನು ಕ್ರೂಢಿಕರೀಸಿ ಒಂದು ಅಭಿಪ್ರಾಯಕ್ಕೆ ಬಂದು ತಾನು ಬೆಳೆಯುತ್ತಾನೆ ಮನುಷ್ಯ. ಅವನಿಗೆ ಅವನಿದ್ದ ಅವಸ್ಥೆಯೆ ಒಳ್ಳೆಯದು ಅಂತ ಅನ್ನಿಸತೊಡಗುತ್ತದೆ. ಅದಕ್ಕೆ ಸಮರ್ಥನೆಗೆ ಇಳಿಯುತ್ತಾನೆ. ಯಾವುದೋ ಹಂತದಲ್ಲಿ ಅದು ಬೇಸರವಾದ ಅಪರೂಪದ ವ್ಯಕ್ತಿಗಳು ಹೊಸದನ್ನು ಹುಡುಕತೊಡಗುತ್ತಾರೆ. ಸಿಕ್ಕ ಹೊಸದೆಲ್ಲವೂ ಆರಂಭದಲ್ಲಿ ಅದ್ಭುತ ಅಂತ ಅನ್ನಿಸಿ ನಿಧಾನ ಕೇವಲವಾಗತೊಡಗುತ್ತವೆ. ಪಟ್ಟಣದಲ್ಲಿದ್ದ ವರಿಗೆ ಹರಿಯುವ ನದಿಯ ಜುಳು ಜುಳು ನಿನಾದ ಹಳ್ಳಿಯಲ್ಲಿದ್ದವರಿಗೆ ಆಕಾಶದೆತ್ತರದ ಕಟ್ಟಡಗಳು ಅದ್ಭುತವನ್ನು ತೆರೆದಿಡುತ್ತವೆ. ಆದರೆ ಯಾರು ಇದ್ದ ಅವಸ್ಥೆಯನ್ನು ನಿರಂತರ ಅನುಭವಿಸಿ ಏಕತಾನತೆಯನ್ನು ರೂಢಿಸಿಕೊಳ್ಳುತ್ತಾರೋ ಅವರು ಶಾಂತ ಬದುಕು ಸಾಗಿಸುತ್ತಾರೆ. ಇಲ್ಲದಿದ್ದಲ್ಲಿ ಯಾವುದೇ ಅವಸ್ಥೆ ಇದ್ದರೂ ಅದು ನರಕವೇ....
ನಿತ್ಯ ಹುಟ್ಟುವ ಸೂರ್ಯ ಹಳೆಯದಾದರೂ ಅದರಿಂದ ಹೊರಡುವ ಇಂದಿನ ಬಣ್ಣ ಹೊಸತು, ಹರಿಯುವ ನದಿಯ ಪಾತ್ರ ಹಳೆಯದಾದರೂ ನೀರಿನ ಜುಳು ಜುಳು ಶಬ್ಧ ಹೊಸತು, ಕಟ್ಟಡ ಹಳೆಯದಾದರೂ ಅದರ ಮುಂದೆ ಏಳುವ ಹೊಗರು ಹೊಸತು , ಅಂತೆಲ್ಲಾ ಅನ್ನಿಸ ತೊಡಗಿದರೆ ವಾವ್ ಅನ್ನುವುದು ಪ್ರತಿಕ್ಷಣದ ಶಬ್ಧ. (ಪುರುಸೊತ್ತು ಇದ್ದಾಗ ಮುಂದುವರೆಯುತ್ತದೆ)
ಕೊನೆಯದಾಗಿ: ಅಪ್ಪನೆಂಬ ಅಪ್ಪ ಅಮ್ಮನ ಅಣತಿಯಂತೆ ಅಜ್ಜನಿಗೆ ನಪ್ಪಿಹೋದ ಬಟ್ಟಲಲ್ಲಿ ಜಗುಲಿಯ ಮೂಲೆಯಲ್ಲಿ ಅನ್ನ ಇಟ್ಟದ್ದನ್ನು ಮೊಮ್ಮಗ ಕಂಡ. ಅಜ್ಜನ ಕಣ್ಣಲ್ಲಿ ಧಾರಾಕಾರ ನೀರಿಳಿಯತೊಡಗಿತು. ಮೊಮ್ಮಗ ಅಜ್ಜನ ಬಳಿ ಹೋಗಿ ಕಣ್ಣೀರು ವರೆಸಿ " ಅಜ್ಜಾ ಅಪ್ಪ ಹೀಗೆ ಮಾಡಿದಕ್ಕೆ ಬೇಸರವಾಯಿತಾ?" ಎಂದು ಕೇಳಿದ. ಅದಕ್ಕೆ ಅಜ್ಜ ಹೇಳಿದ " ಇಲ್ಲ ಮಗೂ ನಿನ್ನ ಅಜ್ಜಿಯ ಮಾತು ಕೇಳಿ ನಾನೂ ನನ್ನ ಅಪ್ಪನಿಗೆ ಹೀಗೆ ಮಾಡಿದ್ದು ನೆನಪಾಯಿತು" ಅಂದ.
ನನ್ನ ಬಾಲ್ಯ ಪಕ್ಕಾ ಆಸ್ತಿಕ ಮನೆಯಲ್ಲಿ. ನನ್ನಪ್ಪ ಮೂಢನಂಬಿಕೆಗಳಿಂದ ದೂರ ಹಾಗಂತ ಸಹ್ಯವಾಗುವ ಆಚರಣೆಗೆ ಅಂಟಿಕೊಂಡವ. ನನಗೆ ಓದನ್ನು ಬೆನ್ನು ಹತ್ತಲಾಗಲಿಲ್ಲ. ಆಬ್ಸೆಂಟ್ ಮೈಂಡ್ ಈಸ್ ಡೆವಿಲ್ ವರ್ಕ್ ಶಾಪ್ ಎನ್ನುವಂತೆ ದೇವರು ಜೀವನದ ಬಹುಪಾಲು ಸಮಯನ್ನು ಕಿತ್ತುಕೊಂಡ ವಿಷಯವಾಯಿತು. ಇದ್ದಾನೋ ಇಲ್ಲವೋ ಇದ್ದರೆ ಎಲ್ಲಿ ಹೇಗೆ? ಯಾಕಾಗಿ? ಹೀಗೆ ಪ್ರಶ್ನೆಗಳು ವರಲೆಯ ಹುತ್ತದಂತೆ ಏರುತ್ತಾ ಸಾಗುತಿದ್ದವು. ಪುಸ್ತಕ ಓದುವುದು ಓದಿಗಿಂತ ಮೊದಲು ಅದೇನೋ ಒಂದು ಅದ್ಭುತ ಉತ್ತರ ಸಿಗುವ ಆಸೆ ಓದಿದ ನಂತರ ಓಹ್ ಇದು ಇಷ್ಟೇನಾ..? ಎಂಬ ನಿರಾಸೆ. ದೇವರ ಅಸ್ತಿತ್ವವನ್ನು ನಂಬುವ ಜನರ ಬೆನ್ನು ಹತ್ತಿ ಆನಂತರ ಅವರ ತೀರಾ ಸಾಮಿಪ್ಯ ಸಾದ್ಯವಾದಾಗ ಅವರೂ ಗೊಂದಲದಲ್ಲಿದ್ದಾರೆ ಎಂಬುದು ಅರಿವಾಗಿ ಅವರೂ ದೇವರ ನಂಬಿದ್ದು ಹಣ ಗಳಿಸಲೋ ಅಥವಾ ಭಯಕ್ಕೋ ಎನ್ನುವ ವಿಷಯ ತಿಳಿದು ಹಿಂದಿರುಗಿ ನಂತರ ದೇವರ ಅಸ್ತಿತ್ವವನ್ನು ನಂಬದವರಿಗೆ ಹತ್ತಿರವಾಗಿ ಅವರ ಸಾಮಿಪ್ಯ ಸನಿಹವಾದಾಗ ಅವರೂ ಕೇವಲ ಗೊತ್ತಿಲ್ಲದೆ ಹಾಗೆಲ್ಲಾ ಮಾಡುತ್ತಿರುವ ವಿಷಯ ತಿಳಿದು ಅವರೂ ಆಸ್ತಿಕತನ ವಿರೋಧಿಸುವ ಮಟ್ಟಿಗಷ್ಟೇ ನಾಸ್ತಿಕರು ಎಂಬುದು ತಿಳಿದು ವಾಪಾಸಾಗಿದ್ದಿದೆ. ಇರಲಿ ಹಾಗೆಲ್ಲಾ ಆಗುವುದೂ ಒಂದು ಅದೃಷ್ಟವೇ ಅಂದುಕೊಂಡು ಬಿಡೋಣ.
ನಂಬಿ ಕೆಟ್ಟವರಿಲ್ಲವೋ ಎಂಬುದೇ ಒಳ್ಳೆಯ ವೇದಾಂತ . ನಂಬದಿದ್ದರೂ ಕೆಡುವುದಿಲ್ಲವೋ ಎಂಬುದೂ ಕೂಡ ಒಳ್ಳೆಯ ಸಿದ್ಧಾಂತ.
ಬಹುಪಾಲು ಮನುಷ್ಯರ ಮೆದುಳು ಬೆಳೆಯುವುದು ಅವರ ವ್ಯಕ್ತಿತ್ವ ರೂಪುಗೊಳ್ಳುವುದು ಅವರಿದ್ದ ಪರಿಸರದ ಮೇಲೆಯೇ ಅವಲಂಬಿತವಾಗಿರುತ್ತದೆ. ದಿನ ನಿತ್ಯ ಕಾಣುವ ಕೇಳುವ ವಿಷಯಗಳನ್ನು ಕ್ರೂಢಿಕರೀಸಿ ಒಂದು ಅಭಿಪ್ರಾಯಕ್ಕೆ ಬಂದು ತಾನು ಬೆಳೆಯುತ್ತಾನೆ ಮನುಷ್ಯ. ಅವನಿಗೆ ಅವನಿದ್ದ ಅವಸ್ಥೆಯೆ ಒಳ್ಳೆಯದು ಅಂತ ಅನ್ನಿಸತೊಡಗುತ್ತದೆ. ಅದಕ್ಕೆ ಸಮರ್ಥನೆಗೆ ಇಳಿಯುತ್ತಾನೆ. ಯಾವುದೋ ಹಂತದಲ್ಲಿ ಅದು ಬೇಸರವಾದ ಅಪರೂಪದ ವ್ಯಕ್ತಿಗಳು ಹೊಸದನ್ನು ಹುಡುಕತೊಡಗುತ್ತಾರೆ. ಸಿಕ್ಕ ಹೊಸದೆಲ್ಲವೂ ಆರಂಭದಲ್ಲಿ ಅದ್ಭುತ ಅಂತ ಅನ್ನಿಸಿ ನಿಧಾನ ಕೇವಲವಾಗತೊಡಗುತ್ತವೆ. ಪಟ್ಟಣದಲ್ಲಿದ್ದ ವರಿಗೆ ಹರಿಯುವ ನದಿಯ ಜುಳು ಜುಳು ನಿನಾದ ಹಳ್ಳಿಯಲ್ಲಿದ್ದವರಿಗೆ ಆಕಾಶದೆತ್ತರದ ಕಟ್ಟಡಗಳು ಅದ್ಭುತವನ್ನು ತೆರೆದಿಡುತ್ತವೆ. ಆದರೆ ಯಾರು ಇದ್ದ ಅವಸ್ಥೆಯನ್ನು ನಿರಂತರ ಅನುಭವಿಸಿ ಏಕತಾನತೆಯನ್ನು ರೂಢಿಸಿಕೊಳ್ಳುತ್ತಾರೋ ಅವರು ಶಾಂತ ಬದುಕು ಸಾಗಿಸುತ್ತಾರೆ. ಇಲ್ಲದಿದ್ದಲ್ಲಿ ಯಾವುದೇ ಅವಸ್ಥೆ ಇದ್ದರೂ ಅದು ನರಕವೇ....
ನಿತ್ಯ ಹುಟ್ಟುವ ಸೂರ್ಯ ಹಳೆಯದಾದರೂ ಅದರಿಂದ ಹೊರಡುವ ಇಂದಿನ ಬಣ್ಣ ಹೊಸತು, ಹರಿಯುವ ನದಿಯ ಪಾತ್ರ ಹಳೆಯದಾದರೂ ನೀರಿನ ಜುಳು ಜುಳು ಶಬ್ಧ ಹೊಸತು, ಕಟ್ಟಡ ಹಳೆಯದಾದರೂ ಅದರ ಮುಂದೆ ಏಳುವ ಹೊಗರು ಹೊಸತು , ಅಂತೆಲ್ಲಾ ಅನ್ನಿಸ ತೊಡಗಿದರೆ ವಾವ್ ಅನ್ನುವುದು ಪ್ರತಿಕ್ಷಣದ ಶಬ್ಧ. (ಪುರುಸೊತ್ತು ಇದ್ದಾಗ ಮುಂದುವರೆಯುತ್ತದೆ)
ಕೊನೆಯದಾಗಿ: ಅಪ್ಪನೆಂಬ ಅಪ್ಪ ಅಮ್ಮನ ಅಣತಿಯಂತೆ ಅಜ್ಜನಿಗೆ ನಪ್ಪಿಹೋದ ಬಟ್ಟಲಲ್ಲಿ ಜಗುಲಿಯ ಮೂಲೆಯಲ್ಲಿ ಅನ್ನ ಇಟ್ಟದ್ದನ್ನು ಮೊಮ್ಮಗ ಕಂಡ. ಅಜ್ಜನ ಕಣ್ಣಲ್ಲಿ ಧಾರಾಕಾರ ನೀರಿಳಿಯತೊಡಗಿತು. ಮೊಮ್ಮಗ ಅಜ್ಜನ ಬಳಿ ಹೋಗಿ ಕಣ್ಣೀರು ವರೆಸಿ " ಅಜ್ಜಾ ಅಪ್ಪ ಹೀಗೆ ಮಾಡಿದಕ್ಕೆ ಬೇಸರವಾಯಿತಾ?" ಎಂದು ಕೇಳಿದ. ಅದಕ್ಕೆ ಅಜ್ಜ ಹೇಳಿದ " ಇಲ್ಲ ಮಗೂ ನಿನ್ನ ಅಜ್ಜಿಯ ಮಾತು ಕೇಳಿ ನಾನೂ ನನ್ನ ಅಪ್ಪನಿಗೆ ಹೀಗೆ ಮಾಡಿದ್ದು ನೆನಪಾಯಿತು" ಅಂದ.
Subscribe to:
Posts (Atom)