ವರದಹಳ್ಳಿಯಲ್ಲಿ ಹೊಸತಾಗಿ ಗೋಶಾಲೆಯನ್ನು ನಿರ್ಮಿಸಲಾಗಿದೆ. ಕಟ್ಟಡ ಅದ್ಬುತವಾಗಿ ಮೂಡಿಬಂದಿದೆ. ಮೊನ್ನೆ ಹೀಗೆ ಹೋಗಿಯಾಗಿತ್ತು, ಊಟ ಮಾಡಿ ನಿಮಗಾಗಿ ಅಂತ ಒಂದು ಸ್ನ್ಯಾಪ್ ಹಾಕಿಕೊಂಡು ಬಂದೆ. ಕೆಂಪುಕಲ್ಲಿನ ಕಟ್ಟಡ ಅಪರೂಪವಾಗಿ ಕಟ್ಟಿದ್ದಾರೆ.ಪುರ್ಸೊತ್ತಾದಾಗ ಹೋಗಿ ಬನ್ನಿ,
Sunday, September 18, 2011
ಪುರ್ಸೊತ್ತಾದಾಗ ಹೋಗಿ ಬನ್ನಿ,
ವರದಹಳ್ಳಿಯಲ್ಲಿ ಹೊಸತಾಗಿ ಗೋಶಾಲೆಯನ್ನು ನಿರ್ಮಿಸಲಾಗಿದೆ. ಕಟ್ಟಡ ಅದ್ಬುತವಾಗಿ ಮೂಡಿಬಂದಿದೆ. ಮೊನ್ನೆ ಹೀಗೆ ಹೋಗಿಯಾಗಿತ್ತು, ಊಟ ಮಾಡಿ ನಿಮಗಾಗಿ ಅಂತ ಒಂದು ಸ್ನ್ಯಾಪ್ ಹಾಕಿಕೊಂಡು ಬಂದೆ. ಕೆಂಪುಕಲ್ಲಿನ ಕಟ್ಟಡ ಅಪರೂಪವಾಗಿ ಕಟ್ಟಿದ್ದಾರೆ.ಪುರ್ಸೊತ್ತಾದಾಗ ಹೋಗಿ ಬನ್ನಿ,
Wednesday, August 24, 2011
ಯಾವಾಗ ಬರುತ್ತೋ ಗೊತ್ತಿಲ್ಲ.
ಅದು "ಚಕ್ರತೀರ್ಥ" ಅನ್ನೋ ಹೆಸರಿನ ಧಾರಾವಾಹಿಯಂತೆ. ನಿರ್ದೇಶನ ಪಿ ಶೇಷಾದ್ರಿ. ನಮ್ಮ ಮನೆಯ ಹತ್ತಿರ ಶೂಟಿಂಗ್ ಮಾಡಿಕೊಂಡು ಹೋಗಿದ್ದಾರೆ. ಯಾವಾಗ ಪ್ರಸಾರವಾಗುತ್ತೋ ಗೊತ್ತಿಲ್ಲ. ನನ್ನ ಹತ್ತಿರವೂ ಒಂದು ಪಾತ್ರ ಮಾಡಿ ಅಂತ ಕೇಳಿದರು. ಮಾಡೋದನ್ನೇ ನೆಟ್ಟಗೆ ಮಾಡಲಾಗಲಿಲ್ಲ ಇನ್ನು ಇದೊಂದು ಅಂತ ಆಗುವುದಿಲ್ಲ ಅಂತ ಅಂದೆ. ಒಂದು ವಾರ ಕಾಲ ಇಲ್ಲಿ ಸುತ್ತ ಮುತ್ತ ಶೂಟಿಂಗ್ ಮಾಡಿಕೊಂಡು ಹೋಗಿದ್ದಾರೆ ಯಾವಾಗ ಬರುತ್ತೋ ಗೊತ್ತಿಲ್ಲ.
Tuesday, August 23, 2011
"ಮಹಾನಂದಿ ಸಂಸ್ಮರಣೆ"
ಸಭ್ಯರು, ಸಜ್ಜನರು,ಸುಸಂಸ್ಕೃತರ ಜೀವನಕ್ಕೆ ನಾವು ಗೋಮಾತೆಗೆ ಉದಾಹರಿಸುತ್ತೇವೆ, ಅದೇ ರೀತಿ ನಮ್ಮ ಬದುಕಿನಲ್ಲಿಯೂ ಗೋವಿನ ಉತ್ಪನ್ನಗಳ ಬಳಸುತ್ತೇವೆ, ಹಾಲಷ್ಟೇ ಅಲ್ಲದೇ ಗೋಜನ್ಯಗಳಿಂದ ಅನೇಕ ಔಷಧಿಯನ್ನೂ ಪಡೆಯುತ್ತೇವೆ, ಇಷ್ಟೆಲ್ಲಾ ಅನುಕೂಲಗಳನ್ನು ಪಡೆದ ಗೋವಿಗೆ ನಾವು ಸ್ಮರಣೆಯ ಮುಖಾಂತರವಾದರೂ ನಮನ ಹೇಳಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಲಲಿತಾ ನಾರಾಯಣ್ ಮಾತನಾಡಿ, ಕೃಷಿಕರ ಸಂಸ್ಕೃತಿಯಲ್ಲಿ ಹುದುಗಿಹೋಗಿದ್ದ ಗೋ ಸಾಕಣೆ ಪದ್ದತಿ ಪರಿಸ್ಥಿತಿಯ ದೆಸೆಯಿಂದ ನಿಧಾನ ಕಣ್ಮರೆಯಾಗುತ್ತಿದೆ, ಅದು ಜನಮನದಿಂದ ದೂರವಾಗುವ ಮೊದಲು ನಾವು ಪೋಷಿಸ ಬೇಕಿದೆ, ದೇಹ ತ್ಯಜಿಸಿದ "ಮಹಾನಂದಿ" ಜನರ ಮನಸ್ಸಿನಲ್ಲಿ ನೆಲೆಸಿರುವಂತೆ ಜಾನುವಾರು ಸಾಕಾಣಿಕೆಯ ಪ್ರಕ್ರಿಯೆಗೆ ಮತ್ತೆ ಎಲ್ಲೆಡೆ ಮಾನ್ಯತೆ ಸಿಗಲಿ ಎಂದರು.
ಶ್ರೀಮತಿ ಶಾಂಭವಿ ಪರಮೇಶ್ವರ್, "ಮಾ ಗೋ ಪ್ರಾಡಕ್ಟ್" ನ ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಜನರು ಗೋ ಉತ್ಪನ್ನಗಳ ಖರೀದಿ ಮಾಡಿ ಬಳಸಿ ತನ್ಮೂಲಕ ಗೋ ಸೇವೆಯನ್ನು ಮಾಡಬೇಕೆಂದು ವಿನಂತಿಸಿದರು.
ಕಲ್ಪನಾ ಸತೀಶ್ ಸಭೆಗೆ ಗೋ ಪ್ರತಿಜ್ನೆಯನ್ನು ಬೋಧಿಸಿದರು, ಸಿದ್ಧಾಪುರ ವಲಯದ ಉಪಾಧ್ಯಕ್ಷ ಶಾಂತಾರಾಂ ಹಿರೇಮನೆಯವರು ಗೋವಿನ ಕುರಿತು ಲಾವಣಿ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಕಳೆನೀಡಿದರು.
ಶ್ರೀಕೃಷ್ಣ ಜನ್ಮಾಷ್ಠಮಿಯ ದಿನದಂದು ಸಂಪನ್ನಗೊಂಡ ಕಾರ್ಯಕ್ರಮಕ್ಕೆ, ಪ್ರಮೇಶ್ವರ್ ಸ್ವಾಗತಿಸಿ ಮಂಜುನಾಥ್ ಕೌಲುಮನೆ ವಂದಿಸಿದರು. ವೇದಿಕೆಯಲ್ಲಿ, ಶ್ರೀ ಸಿದ್ಧಾರೂಢ ಸ್ವಾಮೀಜಿ, ಸುಬ್ರಾಯರು ಮೂಗಿಮನೆ, ಅಂಕದ ಚನ್ನಬಸಪ್ಪ ಶೆಟ್ಟರು, ತಾಳಗುಪ್ಪ ಗ್ರಾ ಪಂ ಅಧ್ಯಕ್ಷ ಮೋಹನ್ ಶೇಟ್, ತಲವಾಟ ಗ್ರಾಪಂ ಅಧ್ಯಕ್ಷೆ ಶಾಂಭವಿ ಪಿ, ತಾಪಂ ಸದಸ್ಯೆ ಸುಮಿತ್ರ, ಜಿಪಂ ಸದಸ್ಯೆ ಲಲಿತಾ ನಾರಾಯಣ್, ಕನ್ನಪ್ಪ, ರಾಬರ್ಟ್ ಮುಂತಾದವರು ಉಪಸ್ಥಿತರಿದ್ದರು.
Tuesday, August 2, 2011
ಕಟ್ಟೋ ಕೆಲಸದ ಕುರಿತು ಕುಟ್ಟೋಕೆ ಮನಸ್ಸಿಲ್ಲ.
Wednesday, July 27, 2011
"ಹೆಲ್ತ್ ಎಂದರೆ ಆರೋಗ್ಯ".
"ನಂಜಿಗೆ ಕುಡಿಯುವುದು" ಅಂತ ನಮ್ಮ ಮನೆಗಳಲ್ಲಿ ವರ್ಷಕ್ಕೊಮ್ಮೆಯಾದರೂ ಅಮ್ಮನ ಹಳೇ ಪದ್ದತಿ. ಕಾಳಜೀರಿಗೆ ಎಂಬ ಜೀರಿಗೆ ತರಹದ ಘೋರಾ ಕಹಿಯ ದ್ರವ ಗಂಟಲಿಗೆ ಸುರುವಿಕೊಳ್ಳುತ್ತಿದಂತೆ ಒಮ್ಮೆ ಇಡೀ ಮೈಯೆಲ್ಲಾ ಜುಂಕರಿಸಿ ಕಹಿ ಆವರಿಸಿಕೊಳ್ಳುವ ತಾಕತ್ತಿನ ಔಷಧಿ ಅದು. ಬೆಳಗಾ ಮುಂಚೆ "ಏಳ್ರಾ..’ ಎಂದು ವರಾತ ಹಚ್ಚಿ ಎಬ್ಬಿಸಿ ಒಂದು ಲೋಟ ಹಠಕ್ಕೆ ಬಿದ್ದು ಕುಡಿಸಿದರೆ ವರ್ಷಪೂರ್ತಿ ಕಜ್ಜಿ ತುರಿಕೆ ಮುಂತಾದ ರಗಳೆಯಿಂದ ಮುಕ್ತಿ ಎಂಬುದು ಅದರ ಫಲ.
ಆನಂತರ ಕಾಲ ಸಂದಂತೆಲ್ಲಾ ಅಮ್ಮನೆಂಬ ಅಮ್ಮನೇ ಆಲೋಪತಿಗೆ ಮೊರೆಹೋದಮೇಲೆ ಕಾಳಜೀರಿಗೆ ಡಬ್ಬಿಯಲ್ಲಿಯೇ ಉಳಿಯತೊಡಗಿತು ಎನ್ನುವುದು ಬೇರೆಯದೇ ಕತೆಯಾಗುತ್ತದೆ ಬಿಡಿ. ಈಗ ಅದರ ಪ್ರಸ್ತಾಪ ಪ್ರಲಾಪ ಶುರುವಿಟ್ಟುಕೊಂಡು ನಾವು ನೀವು ಗೊಣಗಾಡುವುದು ಬೇಡ. ಸತ್ಯಕ್ಕೆ ತಲೆಮೇಲೆ ಹೊಡೆಯುವ ಮಾತೆಂದರೆ "ಹೆಲ್ತ್ ಎಂದರೆ ಆರೋಗ್ಯ". ಆರೋಗ್ಯ ಮತ್ತು ಸಂಪತ್ತು ಯಾರ ಬಳಿ ಇದೆಯೋ ಅದರ ಮಹತ್ವ ಇದ್ದವರಿಗೆ ಅರಿವಾಗುವುದಿಲ್ಲ. ಅವುಗಳ ಮಹತ್ವ ಮಹಿಮೆ ಅವು ಇಲ್ಲವಾದಾಗಲೇ ಎಂಬುದು ಎಲ್ಲರಿಗೂ ತಿಳಿದಿದ್ದರೂ ತಿಳಿಯದ ವಿಷಯ. ಈ ಆರೋಗ್ಯ ಎಂಬುದು ಚನ್ನಾಗಿರಬೇಕು ಎಂತಾದರೆ ಔಷಧಿಯಲ್ಲಲ್ಲ ಆಹಾರದಲ್ಲಿ ಎಂಬ ಸರ್ವೇ ಸಾಮಾನ್ಯವಾದ ವಿಷಯವನ್ನು ಬಹಳ ಜನ ಮರೆತು ಹೋದಂತಿದೆ ಎಂಬುದು ನನ್ನ ಅನುಭವವೇದ್ಯ ಮಾತು. ವಾತ ಪಿತ್ಥ ಕಫ ಎಂಬ ತತ್ವಾಧಾರಿತ ಆಯುರ್ವೇದ ಔಷಧಿ ಪದ್ದತಿ ಮೂಲವಾಗಿ ಆಹಾರವನ್ನ ಅವಲಂಬಿಸಿದೆ. ಇಂತಿಂತ ಖಾಯಿಲೆ ಬಂದಮೇಲೆ ಅಂತಂತದ್ದನ್ನು ತಿನ್ನದೇ ಪಥ್ಯ ಮಾಡಿ ಎನ್ನುತ್ತಾ ಹಾಗೆಯೇ ಎಂತೆಂತದ್ದನ್ನೋ ತಿನ್ನದೇ, ಸ್ವಲ್ಪವಾದರೂ ಅಡ್ಡಿಯಿಲ್ಲ ಸತ್ವಭರಿತವಾದದ್ದನ್ನು ತಿನ್ನಿ, ತನ್ಮೂಲಕ ಆರೋಗ್ಯದಿಂದ ನಳನಳಿಸಿ ಎನ್ನುತ್ತದೆ ಆಯುರ್ವೇದ. ಈ ಪದ್ದತಿಯಿದೆಯಲ್ಲಾ ಅದು ಪಕ್ಕಾ ನಮ್ಮ ನಾಲಿಗೆಯನ್ನೇ ಅವಲಂಬಿಸಿದೆ. ನಿಮಗೆ ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ನನ್ನ ಅನುಭವಕ್ಕೆ ಹಲವಾರು ಬಾರಿ ಬಂದಿದೆ. ಯಾವಾಗಲೂ ವಟವಟ ಎನ್ನುವ ನಾಲಿಗೆ ದೇಹಕ್ಕೆ ಬೇಕಾಗುವ ಸತ್ವಗಳನ್ನೂ ಬಯಸುವ ಕೆಲಸ ಮಾಡುತ್ತದೆ. ಅದು ಇದ್ದಕ್ಕಿದ್ದಂತೆ ಹುಳಿ ಬೇಡುತ್ತದೆ, ಸಿಹಿ ಕೇಳುತ್ತದೆ, ಆಶ್ಚರ್ಯವೆಂದರೆ ಕಹಿಯನ್ನೂ ಕೂಡ (ಮೆಂತೆ ಉಕ್ಕರಿಕೆ) ಬಯಸುತ್ತದೆ. ಆದರೆ ನಾವುಗಳೆಂಬ ನಾವುಗಳು ಅದು ಬಯಸಿದ ಸಮಯದಲ್ಲಿ ತಿನ್ನುವುದಿಲ್ಲ, ಅಥವಾ ಬಯಸಿದಷ್ಟು ತಿನ್ನದೇ ಯಡ್ದಾದಿಡ್ಡಿ ಭಾರಿಸಿಬಿಡುತ್ತೇವೆ. ಆವಾಗ ಏರುಪೇರು, ಬಯಸಿದ ಸತ್ವ ನಿರಾಕರಿಸಿ ಯಡವಟ್ಟು ಮಾಡಿಕೊಳ್ಳುವ ಬಗೆ ಒಂದೆಡೆಯಾದರೆ ದೇಹದಿಂದ ಹೊರಹೋಗ ಬಯಸುವ ತ್ಯಾಜ್ಯಗಳನ್ನು ಸರಿಯಾದ ಸಮಯದಲ್ಲಿ ಹೋಗಲು ಬಿಡದೆ ಅನಾರೋಗ್ಯ ತಂದುಕೊಂಡು ಬಿಡುತ್ತೇವೆ. ಅಂತೂ ಹೀಗೆಲ್ಲಾ ಇದೆ ನೋಡಿ ಸಮಾಚಾರ.
ನಂಗೆ ಇವೆಲ್ಲಾ ಯಾಕೆ ನೆನಪಾಯಿತೆಂದರೆ ಬೆಳಗ್ಗೆ ಗುಟುಕರಿಸಿದ ಕಾಳಜೀರಿಗೆಯ ರಸದ ಗಂಟಲ ಕಹಿ ಇನ್ನೂ ಆರಿಲ್ಲ.
ಆನಂತರ ಕಾಲ ಸಂದಂತೆಲ್ಲಾ ಅಮ್ಮನೆಂಬ ಅಮ್ಮನೇ ಆಲೋಪತಿಗೆ ಮೊರೆಹೋದಮೇಲೆ ಕಾಳಜೀರಿಗೆ ಡಬ್ಬಿಯಲ್ಲಿಯೇ ಉಳಿಯತೊಡಗಿತು ಎನ್ನುವುದು ಬೇರೆಯದೇ ಕತೆಯಾಗುತ್ತದೆ ಬಿಡಿ. ಈಗ ಅದರ ಪ್ರಸ್ತಾಪ ಪ್ರಲಾಪ ಶುರುವಿಟ್ಟುಕೊಂಡು ನಾವು ನೀವು ಗೊಣಗಾಡುವುದು ಬೇಡ. ಸತ್ಯಕ್ಕೆ ತಲೆಮೇಲೆ ಹೊಡೆಯುವ ಮಾತೆಂದರೆ "ಹೆಲ್ತ್ ಎಂದರೆ ಆರೋಗ್ಯ". ಆರೋಗ್ಯ ಮತ್ತು ಸಂಪತ್ತು ಯಾರ ಬಳಿ ಇದೆಯೋ ಅದರ ಮಹತ್ವ ಇದ್ದವರಿಗೆ ಅರಿವಾಗುವುದಿಲ್ಲ. ಅವುಗಳ ಮಹತ್ವ ಮಹಿಮೆ ಅವು ಇಲ್ಲವಾದಾಗಲೇ ಎಂಬುದು ಎಲ್ಲರಿಗೂ ತಿಳಿದಿದ್ದರೂ ತಿಳಿಯದ ವಿಷಯ. ಈ ಆರೋಗ್ಯ ಎಂಬುದು ಚನ್ನಾಗಿರಬೇಕು ಎಂತಾದರೆ ಔಷಧಿಯಲ್ಲಲ್ಲ ಆಹಾರದಲ್ಲಿ ಎಂಬ ಸರ್ವೇ ಸಾಮಾನ್ಯವಾದ ವಿಷಯವನ್ನು ಬಹಳ ಜನ ಮರೆತು ಹೋದಂತಿದೆ ಎಂಬುದು ನನ್ನ ಅನುಭವವೇದ್ಯ ಮಾತು. ವಾತ ಪಿತ್ಥ ಕಫ ಎಂಬ ತತ್ವಾಧಾರಿತ ಆಯುರ್ವೇದ ಔಷಧಿ ಪದ್ದತಿ ಮೂಲವಾಗಿ ಆಹಾರವನ್ನ ಅವಲಂಬಿಸಿದೆ. ಇಂತಿಂತ ಖಾಯಿಲೆ ಬಂದಮೇಲೆ ಅಂತಂತದ್ದನ್ನು ತಿನ್ನದೇ ಪಥ್ಯ ಮಾಡಿ ಎನ್ನುತ್ತಾ ಹಾಗೆಯೇ ಎಂತೆಂತದ್ದನ್ನೋ ತಿನ್ನದೇ, ಸ್ವಲ್ಪವಾದರೂ ಅಡ್ಡಿಯಿಲ್ಲ ಸತ್ವಭರಿತವಾದದ್ದನ್ನು ತಿನ್ನಿ, ತನ್ಮೂಲಕ ಆರೋಗ್ಯದಿಂದ ನಳನಳಿಸಿ ಎನ್ನುತ್ತದೆ ಆಯುರ್ವೇದ. ಈ ಪದ್ದತಿಯಿದೆಯಲ್ಲಾ ಅದು ಪಕ್ಕಾ ನಮ್ಮ ನಾಲಿಗೆಯನ್ನೇ ಅವಲಂಬಿಸಿದೆ. ನಿಮಗೆ ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ನನ್ನ ಅನುಭವಕ್ಕೆ ಹಲವಾರು ಬಾರಿ ಬಂದಿದೆ. ಯಾವಾಗಲೂ ವಟವಟ ಎನ್ನುವ ನಾಲಿಗೆ ದೇಹಕ್ಕೆ ಬೇಕಾಗುವ ಸತ್ವಗಳನ್ನೂ ಬಯಸುವ ಕೆಲಸ ಮಾಡುತ್ತದೆ. ಅದು ಇದ್ದಕ್ಕಿದ್ದಂತೆ ಹುಳಿ ಬೇಡುತ್ತದೆ, ಸಿಹಿ ಕೇಳುತ್ತದೆ, ಆಶ್ಚರ್ಯವೆಂದರೆ ಕಹಿಯನ್ನೂ ಕೂಡ (ಮೆಂತೆ ಉಕ್ಕರಿಕೆ) ಬಯಸುತ್ತದೆ. ಆದರೆ ನಾವುಗಳೆಂಬ ನಾವುಗಳು ಅದು ಬಯಸಿದ ಸಮಯದಲ್ಲಿ ತಿನ್ನುವುದಿಲ್ಲ, ಅಥವಾ ಬಯಸಿದಷ್ಟು ತಿನ್ನದೇ ಯಡ್ದಾದಿಡ್ಡಿ ಭಾರಿಸಿಬಿಡುತ್ತೇವೆ. ಆವಾಗ ಏರುಪೇರು, ಬಯಸಿದ ಸತ್ವ ನಿರಾಕರಿಸಿ ಯಡವಟ್ಟು ಮಾಡಿಕೊಳ್ಳುವ ಬಗೆ ಒಂದೆಡೆಯಾದರೆ ದೇಹದಿಂದ ಹೊರಹೋಗ ಬಯಸುವ ತ್ಯಾಜ್ಯಗಳನ್ನು ಸರಿಯಾದ ಸಮಯದಲ್ಲಿ ಹೋಗಲು ಬಿಡದೆ ಅನಾರೋಗ್ಯ ತಂದುಕೊಂಡು ಬಿಡುತ್ತೇವೆ. ಅಂತೂ ಹೀಗೆಲ್ಲಾ ಇದೆ ನೋಡಿ ಸಮಾಚಾರ.
ನಂಗೆ ಇವೆಲ್ಲಾ ಯಾಕೆ ನೆನಪಾಯಿತೆಂದರೆ ಬೆಳಗ್ಗೆ ಗುಟುಕರಿಸಿದ ಕಾಳಜೀರಿಗೆಯ ರಸದ ಗಂಟಲ ಕಹಿ ಇನ್ನೂ ಆರಿಲ್ಲ.
Monday, July 25, 2011
ಪಂಚಾಂಗ ಬೇಕಿಲ್ಲ ಪಂಚೆ ಎತ್ತಿಕಟ್ಟಬೇಕಿಲ್ಲ
ನಾನು ತೀರಾ ಈ ಮುಹೂರ್ತ ಶಾಸ್ತ್ರ ಜಾತಕಫಲ ಮುಂತಾದ್ದನ್ನೆಲ್ಲಾ ಬೆನ್ನತ್ತಿ ಹೋಗುವುದು ಕಡಿಮೆ. ಆದರೂ ತೀರಾ ಬುಡಕ್ಕೆಬಂದಾಗ ಸಂಕಟಬಂದಾಗ ವೆಂಕಟ ರಮಣ ಎಂದು ಹೋಗುವುದು ಇದೆಯಾದರೂ ಅದು ಜ್ಯೋತಿಷಿಗಳ ಬುಡಕ್ಕಂತೂ ಸದ್ಯಕ್ಕೆ ಅಲ್ಲಬಿಡಿ.
ಅವೆಲ್ಲಾ ಆಯಿತು ಆದರೆ ಮುಹೂರ್ತ ಎಂದರೆ ಅರ್ಥ ಇಷ್ಟೆ. ನಾವು ಮಾಡಬೇಕಾಗಿರುವ ಕೆಲಸ ನಿರ್ವಿಘ್ನವಾಗಿ ನಡೆಯಲು ಒಂದು ದಿನ ನಿಕ್ಕಿಮಾಡುವುದು, ಅಂದು ತೊಂದರೆ ತಾಪತ್ರಯ ಇರಬಾರದು ಅಷ್ಟೆ. ಮೊನ್ನೆ ಶುಕ್ರವಾರ ನಮ್ಮ ಬಿಲ್ಡಿಂಗ್ ನ ಸೆಂಟ್ರಿಂಗ್ ಮೇಸ್ತ್ರಿ ನೀಲಕಂಠ "ಸಾರ್ ಸೋಮವಾರ ಅಂದ್ರೆ ೨೫ ನೇ ತಾರೀಖು ಮೌಲ್ಡ್ ಹಾಕೋಣ ಸಾರ್" ಎಂದು ಬುಡಕ್ಕೊಂದು ತಲೆಗೊಂದು ಸಾರ್ ಸೇರಿಸಿ ಹೇಳಿದ. ಅವನು ಆ ಮುಹೂರ್ತ ಫಿಕ್ಸ್ ಮಾಡುತ್ತಿದ್ದ ಸಮಯದಲ್ಲಿ ಜಡಿಮಳೆ ಭಾರಿಸುತ್ತಿತ್ತು ಜೊರ್ರಂತ. ನನಗೆ ಅನಾಮತ್ತು ೨ ಲಕ್ಷರೂಪಾಯಿಯ ವ್ಯವಹಾರ. ಗೌರೀಶನಿಗೆ ಫೋನ್ ಹಚ್ಚಿದೆ. ಅವರೂ ಯೆಸ್ ಅಂದಾಯಿತು. ಆದರೆ ಒಳಗೊಳಗೆ ಪುಕ್ಕು. ಶನಿವಾರ ಮಳೆ ಇನ್ನೂ ಒಂದು ತೂಕ ಹೆಚ್ಚು, ಭಾನುವಾರ ಯಡ್ದಾದಿಡ್ಡಿ. ಒಟ್ಟಿನಲ್ಲಿ ಇದೊಂದು ಯಡವಟ್ಟು ಕೆಲಸವಾಯಿತು. ತಿಂಗಳಿನಿಂದ ಬಾರದ ಬಿಸಿಲು ಜಡಿಯುತ್ತಿರುವ ಮಳೆ ದಿಡೀರಂತ ನಾವು ಮೌಲ್ಡ್ ಹಾಕುತ್ತೇವೆ ಅಂತ ನಿಲ್ಲುತ್ತದಾ..? ಎಂಬ ಪ್ರಶ್ನೆ ಒಳಗೊಳಗೆ. ಕಟ್ಟಡದ ಮೈನ್ ಮೇಸ್ತ್ರಿ ತಿಲಕ್ ರಾಯ್ಕರ್ ವೆಂಕಟರಮಣ ದೇವಸ್ಥಾನದ ಶಾಸ್ತ್ರಿಗಳ ಬಳಿ ಕವಡೆ ಹಾಕಿಸಿ ಶಾಸ್ತ್ರ ಕೇಳಿ ಬಂದೂ ಆಯಿತು. ಆದರೆ ಭಾನುವಾರ ರಾತ್ರಿ ಜಡಿಯುತ್ತಿದ್ದ ಮಳೆಗೆ ಇದ್ಯಾವುದರ ಪರಿಯೂ ಇಲ್ಲ. ಅಂತೂ ಸೋಮವಾರ ಬೆಳಗಾಯಿತು. ಒಂಬತ್ತು ಗಂಟೆಗೆವರೆಗೆ ಹನಿ ಮಳೆಯೂ ಇಲ್ಲ. ನೀಲಕಂಠ ನ ಬಳಿ "ನೀ ಬಾಳ ಅಸಾಮಿ ಬಿಡಪೋ ಅಂದೆ. ಹತ್ತು ಗಂಟೆಗೆ ಬಿಸಿಲು. ನನಗೆ ಅಚ್ಚರಿಯೋ ಅಚ್ಚರಿ. ಮಧ್ಯಾಹ್ನ ಕೆಲಸಗಾರರು ಊಟಕ್ಕೆ ಬಿಟ್ಟಾಗ ಅರ್ದ ಗಂಟೆ ಸಿಕ್ಕಾಪಟ್ಟೆ ಮಳೆ. ನಂತರ ಮಾಯವಾದ ಮಳೆರಾಯ ಈ ಕ್ಷಣ ಅಂದರೆ ರಾತ್ರಿ ಹನ್ನೊಂದು ಗಂಟೆಯವರೆಗೂ ಹಾರಾಹನಿಯನ್ನೂ ಉದರಿಸುತಿಲ್ಲ. ಅಬ್ಬಾ ನೀಲಕಂಠನ ಮುಹೂರ್ಥವೇ ಅಂತ ನನಗೆ ಅನ್ನಿಸಿತು.
ನಿಜ ನಿಜ ನಿಜ, ಒಳ್ಳೆಯ ಮುಹೂರ್ಥ ಫಿಕ್ಸ್ ಮಾಡಲು ಪಂಚಾಂಗ ಬೇಕಿಲ್ಲ ಪಂಚೆ ಎತ್ತಿಕಟ್ಟಬೇಕಿಲ್ಲ ಶುದ್ಧ ಮನಸ್ಸಿರಬೇಕು ಅಂತ ಒಂಥರಾ ಅರ್ಥವಾಗುತ್ತಿದೆ. ಜುಲೈ ತಿಂಗಳ ಮಲೆನಾಡಿನ ಜಡಿಮಳೆಯ ತಿಂಗಳಿನಲ್ಲಿ ಹೀಗೊಂದು ಮಳೆಬಾರದ ದಿನವನ್ನು ಹುಡುಕಿದನಲ್ಲ ನೀಲಕಂಠ "ಅಬ್ಬಾ ನೀಲಕಂಠ ಮಿದುಳೇ" ಅಂತ ಅವನ ಕುರಿತು ಅನ್ನಿಸಿದ್ದು ಸುಳ್ಳಲ್ಲ.
ಕೆಲವೆಲ್ಲಾ ಅರ್ಥವಾಗದು, ಕೆಲವೆಲ್ಲಾ ಅರ್ಥವಾದಂತೆ ನಟಿಸಬೇಕು, ಇನ್ನು ಕೆಲವು ಅರ್ಥವಾದಂತೆ ಅನಿಸುತ್ತದೆ.
Wednesday, July 20, 2011
ಅಷ್ಟರಲ್ಲಿ ಆತ್ ಡಣ್ ಡಣ್ ಎನ್ನುತ್ತಾನೆ.

"ಅಪ್ಪಾ ಉದ್ದ ಮುಳ್ಳು ಎಷ್ಟಕ್ಕೆ ಇದ್ದು, ಗಿಡ್ಡ ಮುಳ್ಳು ಎಷ್ಟಕ್ಕೆ ಇದ್ದು" ಅಂತ ವೆಂಕಟರಮಣನ ಪುಟಾಣಿ ಮಗಳು ಕೇಳಿದಾಗ ಒಮ್ಮೆಲೆ ನಾನು ಬಾಲ್ಯಕ್ಕೆ ಜಾರಿದೆ. ಅಬ್ಬಾ ಇದೆಂತ ಮಜ ನೋಡಿ, ನಾನು ಹೀಗೆ ಸಣ್ಣಕ್ಕಿದ್ದಾಗ ಕೇಳಿದ್ದೆ, ನನ್ನ ಮಗನೂ ಕೇಳಿದ್ದ, ಈಗ ಈ ಪುಟಾಣಿಯೂ ಕೇಳುತ್ತಿದ್ದಾಳೆ. ಹಲವು ಸಂಗತಿಗಳು ಹೀಗೆಯೇ ಅಲ್ವಾ..? ಇರಲಿ, ಅಸಲಿಗೆ ಹಾಗೆ ಕೇಳಿದ್ದು ಏತಕ್ಕೆ ಏನಕ್ಕೆ ಅಂತ ನಿಮಗೆ ಪಟಕ್ಕನೆ ಅರ್ಥವಾಗದಿದ್ದರೆ ಸ್ವಲ್ಪ ಕೇಳಿ ಅಲ್ಲಲ್ಲ ಓದಿ ನನ್ನ ವರಾತ.
ಟಿಕ್ ಟಿಕ್ ಗೆಳೆಯನಾದ ’ಪೆಂಡುಲಮ್ ಗಡಿಯಾರ’ ನಮ್ಮ ಬಾಲ್ಯದ ಅಚ್ಚರಿಗಳಲ್ಲೊಂದು, ಗಂಟೆ ಹೊಡೆಯುವ ಮುಂಚೆ ಕಿಶ್......... ಎಂದು ಸದ್ದು ಮಾಡಿ ನಂತರ ಡಣ್ ಡಣ್ ಎಂದು ಸದ್ದು ಮಾಡುವ ಎರಡಡಿ ಉದ್ದ ಹಾಗೂ ಒಂದಡಿ ಅಗಲದ ಗಡಿಯಾರ ಈಗಲೂ ಹಲವು ಮನೆಗಳಲ್ಲಿ ಕಾಣಬಹುದು. ವಾರಕ್ಕೊಮ್ಮೆ ಖುರ್ಚಿ ಹಾಕಿಕೊಂಡು ಅದರಮೇಲೆ ಹತ್ತಿ ನಿಂತು ಗಡಿಯಾರಕ್ಕೆ ಕೀಲಿ ಕೊಡುವುದು ಮನೆಯ ಯಜಮಾನನ ಗತ್ತಿನ ಕೆಲಸದಲ್ಲೊಂದು. ಹಾಗೆ ಕೀಲಿಕೊಟ್ಟ ನಂತರ ಆ ಕೆಲಸಕ್ಕಾಗಿಯೇ ತಾತ್ಕಾಲಿಕ ನಿಲ್ಲಿಸಿಕೊಂಡ ಪಳಪಳ ಹೊಳೆಯುವ ಕೋಟೆಡ್ ಪೆಂಡುಲಂ ನ ಮತ್ತೆ ಅಲುಗಾಡಿಸಿ ಕೆಳಗಿಳಿದರೆ ಯಜಮಾನನ ಗಂಟು ಮುಖಕ್ಕೆ ಇನ್ನೊಂದು ಮೆರುಗು. ನಮಗೆ ಆ ಪೆಂಡುಲಂ ಟಿಕ್ ಟಿಕ್ ಎಂದು ಸದ್ದು ಮಾಡುತ್ತಾ ಆಕಡೆ ಈಕಡೆ ಓಲಾಡುವುದನ್ನ ನೋಡುವುದೇ ಒಂದು ಮಜ. ಇನ್ನೇನು ಗಂಟೆ ಹೊಡೆಯುತ್ತದೆ ಎಂಬ ಕೆಲಕ್ಷಣಗಳ ಮುಂಚಿನ ಕಿಶ್.. ಸದ್ದು ಗಂಟೆ ಹೊಡೆಯುವ ಮಧುರ ಸದ್ದಿನ ಪೂರ್ವ ಸೂಚನೆ. ನಂತರ ಶುರು ನಿನಾದ, ಹನ್ನೆರಡು ಗಂಟೆಯೆಂದರೆ ಬಲು ಮೋಜು ಮಜ. ಹನ್ನೆರಡರ ನಂತರ ಹೊಡೆಯುವ ಗಂಟೆಗಳ ಮೇಲೆ ಸಣ್ಣದಾದ ಒಂದು ಬುದ್ದು ಕತೆಯೂ ಇತ್ತು.
ಒಬ್ಬಾತ ಗಡಿಯಾರ ಮನೆಗೆ ತಂದನಂತೆ. ಗೋಡೆಯ ಮೇಲೆ ಇಟ್ಟನಂತರ ಹೆಂಡತಿಗೆ ತೋರಿಸಿ ಅದು ಗಂಟೆಯನ್ನು ಹೊಡೆಯುವ ಬಗ್ಗೆ ಕೊಚ್ಚಿಕೊಂಡನಂತೆ. ಹನ್ನೆರಡೂ ವರೆಗೆ ಒಂದುಸಾರಿ ಕೇಳಿದ ಡಣ್ ಎಂಬ ಸದ್ದು ಕೇಳಿಸಿ ಬೀಗಿದನಂತೆ, ನಂತರ ಮತ್ತೆ ಡಣ್ ಎಂದು ಭಾರಿಸುತ್ತದೆ ನೋಡು ಎಂದು ಹೇಳಿದನಂತೆ, ಅರ್ದ ಗಂಟೆಯ ನಂತರ ಮತ್ತೆ ಒಂದೇ ಸಾರಿ ಡಣ್ ಸದ್ದು ಬಂತಂತೆ. ಮತ್ತೆ ಅರ್ದ ಗಂಟೆ ನಂತರವೂ ಕೇವಲ ಒಂದೇ ಸಾರಿ ಡಣ್ ಎಂಬ ಸದ್ದು ಬಂತಂತೆ, ಆಗ ಹೆಂಡತಿ "ಅಯ್ಯಾ ಈ ನಿಮ್ಮ ಗಡಿಯಾರ ಯಾವಾಗಲೂ ಒಂದೇ ಸಾರಿ ಡಣ್ ಅನ್ನುತ್ತದೆ" ಎಂದು ಮೂದಲಿಸಿದಳಂತೆ. ಹತಾಶನಾದ ಗಂಡ ಗಡಿಯಾರದ ಮೇಲೆ ಕೋಪಗೊಂಡು ಬಿಸಾಡಿದನಂತೆ. ಎಂಬ ತಮಾಷೆಯೆಂಬ ಕತೆ ಹೇಳುವವರ ತಾಕತ್ತಿಗನುಗುಣವಾಗಿ ಜನರನ್ನು ರಂಜಿಸುತ್ತಿತ್ತು.
ದಿನಕ್ಕೆ ಮೂರು ಸಾರಿ ಒಂದೊಂದೇ ಸಾರಿ ಡಣ್ ಎಂದು ಗಂಟೆ ಹೊಡೆಯುತ್ತದೆ, ಅದು ಯಾವಾಗ? ಎಂಬ ಒಗಟೂ ಕೂಡ ಚಾಲ್ತಿಯಲ್ಲಿತ್ತು. ಹನ್ನೇರಡೂವರೆ, ಒಂದು, ಒಂದೂವರೆ ಗಂಟೆಗೆ ಎಂಬ ಉತ್ತರ ಪಟಕ್ಕನೆ ಹೇಳಿದರೆ ಒಂದು ಹಂತದ ಗತ್ತನ್ನು ಪ್ರದರ್ಶಿಸಬಹುದಿತ್ತು.
ಟಿಕ್ ಟಿಕ್ ಗೆಳೆಯನಾದ ’ಪೆಂಡುಲಮ್ ಗಡಿಯಾರ’ ನಮ್ಮ ಬಾಲ್ಯದ ಅಚ್ಚರಿಗಳಲ್ಲೊಂದು, ಗಂಟೆ ಹೊಡೆಯುವ ಮುಂಚೆ ಕಿಶ್......... ಎಂದು ಸದ್ದು ಮಾಡಿ ನಂತರ ಡಣ್ ಡಣ್ ಎಂದು ಸದ್ದು ಮಾಡುವ ಎರಡಡಿ ಉದ್ದ ಹಾಗೂ ಒಂದಡಿ ಅಗಲದ ಗಡಿಯಾರ ಈಗಲೂ ಹಲವು ಮನೆಗಳಲ್ಲಿ ಕಾಣಬಹುದು. ವಾರಕ್ಕೊಮ್ಮೆ ಖುರ್ಚಿ ಹಾಕಿಕೊಂಡು ಅದರಮೇಲೆ ಹತ್ತಿ ನಿಂತು ಗಡಿಯಾರಕ್ಕೆ ಕೀಲಿ ಕೊಡುವುದು ಮನೆಯ ಯಜಮಾನನ ಗತ್ತಿನ ಕೆಲಸದಲ್ಲೊಂದು. ಹಾಗೆ ಕೀಲಿಕೊಟ್ಟ ನಂತರ ಆ ಕೆಲಸಕ್ಕಾಗಿಯೇ ತಾತ್ಕಾಲಿಕ ನಿಲ್ಲಿಸಿಕೊಂಡ ಪಳಪಳ ಹೊಳೆಯುವ ಕೋಟೆಡ್ ಪೆಂಡುಲಂ ನ ಮತ್ತೆ ಅಲುಗಾಡಿಸಿ ಕೆಳಗಿಳಿದರೆ ಯಜಮಾನನ ಗಂಟು ಮುಖಕ್ಕೆ ಇನ್ನೊಂದು ಮೆರುಗು. ನಮಗೆ ಆ ಪೆಂಡುಲಂ ಟಿಕ್ ಟಿಕ್ ಎಂದು ಸದ್ದು ಮಾಡುತ್ತಾ ಆಕಡೆ ಈಕಡೆ ಓಲಾಡುವುದನ್ನ ನೋಡುವುದೇ ಒಂದು ಮಜ. ಇನ್ನೇನು ಗಂಟೆ ಹೊಡೆಯುತ್ತದೆ ಎಂಬ ಕೆಲಕ್ಷಣಗಳ ಮುಂಚಿನ ಕಿಶ್.. ಸದ್ದು ಗಂಟೆ ಹೊಡೆಯುವ ಮಧುರ ಸದ್ದಿನ ಪೂರ್ವ ಸೂಚನೆ. ನಂತರ ಶುರು ನಿನಾದ, ಹನ್ನೆರಡು ಗಂಟೆಯೆಂದರೆ ಬಲು ಮೋಜು ಮಜ. ಹನ್ನೆರಡರ ನಂತರ ಹೊಡೆಯುವ ಗಂಟೆಗಳ ಮೇಲೆ ಸಣ್ಣದಾದ ಒಂದು ಬುದ್ದು ಕತೆಯೂ ಇತ್ತು.
ಒಬ್ಬಾತ ಗಡಿಯಾರ ಮನೆಗೆ ತಂದನಂತೆ. ಗೋಡೆಯ ಮೇಲೆ ಇಟ್ಟನಂತರ ಹೆಂಡತಿಗೆ ತೋರಿಸಿ ಅದು ಗಂಟೆಯನ್ನು ಹೊಡೆಯುವ ಬಗ್ಗೆ ಕೊಚ್ಚಿಕೊಂಡನಂತೆ. ಹನ್ನೆರಡೂ ವರೆಗೆ ಒಂದುಸಾರಿ ಕೇಳಿದ ಡಣ್ ಎಂಬ ಸದ್ದು ಕೇಳಿಸಿ ಬೀಗಿದನಂತೆ, ನಂತರ ಮತ್ತೆ ಡಣ್ ಎಂದು ಭಾರಿಸುತ್ತದೆ ನೋಡು ಎಂದು ಹೇಳಿದನಂತೆ, ಅರ್ದ ಗಂಟೆಯ ನಂತರ ಮತ್ತೆ ಒಂದೇ ಸಾರಿ ಡಣ್ ಸದ್ದು ಬಂತಂತೆ. ಮತ್ತೆ ಅರ್ದ ಗಂಟೆ ನಂತರವೂ ಕೇವಲ ಒಂದೇ ಸಾರಿ ಡಣ್ ಎಂಬ ಸದ್ದು ಬಂತಂತೆ, ಆಗ ಹೆಂಡತಿ "ಅಯ್ಯಾ ಈ ನಿಮ್ಮ ಗಡಿಯಾರ ಯಾವಾಗಲೂ ಒಂದೇ ಸಾರಿ ಡಣ್ ಅನ್ನುತ್ತದೆ" ಎಂದು ಮೂದಲಿಸಿದಳಂತೆ. ಹತಾಶನಾದ ಗಂಡ ಗಡಿಯಾರದ ಮೇಲೆ ಕೋಪಗೊಂಡು ಬಿಸಾಡಿದನಂತೆ. ಎಂಬ ತಮಾಷೆಯೆಂಬ ಕತೆ ಹೇಳುವವರ ತಾಕತ್ತಿಗನುಗುಣವಾಗಿ ಜನರನ್ನು ರಂಜಿಸುತ್ತಿತ್ತು.
ದಿನಕ್ಕೆ ಮೂರು ಸಾರಿ ಒಂದೊಂದೇ ಸಾರಿ ಡಣ್ ಎಂದು ಗಂಟೆ ಹೊಡೆಯುತ್ತದೆ, ಅದು ಯಾವಾಗ? ಎಂಬ ಒಗಟೂ ಕೂಡ ಚಾಲ್ತಿಯಲ್ಲಿತ್ತು. ಹನ್ನೇರಡೂವರೆ, ಒಂದು, ಒಂದೂವರೆ ಗಂಟೆಗೆ ಎಂಬ ಉತ್ತರ ಪಟಕ್ಕನೆ ಹೇಳಿದರೆ ಒಂದು ಹಂತದ ಗತ್ತನ್ನು ಪ್ರದರ್ಶಿಸಬಹುದಿತ್ತು.
ಹೀಗೆ ಅವರವರ ಕ್ಷೇತ್ರದಲ್ಲಿ ತನ್ನ ಪ್ರಭಾವ ಬೀರಿದ್ದ ಪೆಂಡುಲಂ ಗಡಿಯಾರ ಕಾಲಚಕ್ರದ ಹೊಡೆತಕ್ಕೆ ಸಿಲುಕಿ ನಿಧಾನಗತಿಯಲ್ಲಿ ಕಡಿಮೆಯಾಗುತ್ತಾ ಬಂದರೂ ಈಗಲೂ ಅಲ್ಲೊಂದು ಇಲ್ಲೊಂದು ಮನೆಯಲ್ಲಿ ಇದೆ. ಹಾಗೂ ತನ್ನನ್ನು ನೋಡಿ ಹೀಗೆ ಉದ್ದಮುಳ್ಳು ಗಿಡ್ಡಮುಳ್ಳು ಎಂಬ ಗಂಟೆ ನೋಡುವ ಕಲಿಕಾ ವಿಧಾನವನ್ನು ಪರಿಚಯಿಸುತ್ತಾ ಸಾಗಿದೆ.
ಅಂದು ಗಂಟೆ ನೋಡುವುದು ಒಂದು ಬ್ರಹ್ಮಾಂಡ ವಿದ್ಯೆಯಾಗಿತ್ತು. "ಅಯ್ಯೋ ಅಪಿ ನಿಂಗೆ ಗಂಟೆ ನೋಡಲೆ ಬತಲ್ಯಾ ಇನ್ನೂ" ಎಂದು ಯಾರಾದರೂ ಹೇಳಿದರೆ ಅದು ಮರ್ಯಾದೆ ಹರಾಜಿನಂತೆ ಭಾಸ. ಆ ಗಂಟೆ ನೋಡುವ ಕಲಿಕಾ ವಿಧಾನ ಸಾಮಾನ್ಯವಾಗಿ ಮೊದಲಗುರುವಿನಿಂದ ಪ್ರಾರಂಭ. "ಮಗಾ ಒಂಚೂರು ಗಂಟೆ ನೋಡಿ ಬಂದು ಹೇಳು" ಎಂದು ಮಕ್ಕಳ ಬಳಿ ಹೇಳಿದಾಗ, ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಜಗುಲಿಗೆ ಬಂದು ಒಮ್ಮೆ ಗಡಿಯಾರದತ್ತ ಮಿಕಮಿಕ ನೋಡಿದ ಕೂಡಲೇ, ಅಪ್ಪ "ಉದ್ದ ಮುಳ್ಳು ಮೂರಕ್ಕೆ ಗಿಡ್ಡ ಮುಳ್ಳು ಒಂಬತ್ತಕ್ಕೆ" ಎಂದರೆ ಮಗು ಅದನ್ನೇ ಪದೆ ಪದೇ ಹೇಳುತ್ತಾ ಅಡುಗೆ ಮನೆಗೆ ದೌಡು. ಅಮ್ಮನ ಬಳಿ ಅದನ್ನ ಪುನರಾವರ್ತನೆ, ಅಲ್ಲಿಗೆ ಅಮ್ಮನಿಂದ "ಹಂಗಂದ್ರೆ ಒಂಬತ್ತೂ ಕಾಲು" ಎಂಬ ಪ್ರಾರಂಬಿಕ ಹಂತದ ಕಲಿಕೆ. ನಂತರ ಮಗು ಅಂಕೆ ಕಲಿತಾದಮೇಲೆ ಅಪ್ಪನ ಸಹಾಯ ಇಲ್ಲ. ಆದರೆ "ಹಂಗಂದ್ರೆ ಒಂಬತ್ತೂ ಕಾಲು" ಅನ್ನಲು ಅಮ್ಮ ಬೇಕೇ ಬೇಕು. ಕೆಲದಿನಗಳ ನಂತರ ಎಲ್ಲಾ ತನ್ನಷ್ಟಕ್ಕೆ.
ಇವತ್ತು ಬೆಳಿಗ್ಗೆ ವೆಂಕಟರಮಣನ ಮಗಳು "ಉದ್ದಮುಳ್ಳು........." ಎಂದು ಅಪ್ಪನ ಬಳಿ ಕೇಳಿದ್ದಕ್ಕೆ ಇವೆಲ್ಲಾ ನೆನಪಾಯಿತು. ಕಾಲ ಎಂಬುದು ಚಕ್ರವೇ ಇಲ್ಲಿ ಹೊಸತನ ಬದಲಾವಣೆ ಅಂತೆಲ್ಲಾ ನಾವು ಅಂದುಕೊಳ್ಳುತ್ತೇವೆ, ಎಲ್ಲಾ ಹಾಗೆಯೇ ಪುನರಾವರರ್ತನೆಯಲ್ಲಿಯೇ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಮುಂದುವರೆಯುತ್ತೇವೆ.
ನಮ್ಮ ಮನೆಯ "ಟಿಕ್ ಟಿಕ್ ಗೆಳೆಯ" ಡಣ್ ಎಂದು ಭಾರಿಸುತ್ತಿದ್ದಾನೆ. ಅಲ್ಲಿಗೆ ಗಂಟೆ ಒಂದಾಯಿತು, ಇನ್ನು ಸ್ನಾನ ಮಾಡಿ ಸಂಧ್ಯಾವಂದನೆ(ಮಟ ಮಟ ಮಧ್ಯಾಹ್ನ....!) ಮಾಡಿ ಊಟ ಮಾಡಬೇಕು ಅಷ್ಟರಲ್ಲಿ ಆತ್ ಡಣ್ ಡಣ್ ಎನ್ನುತ್ತಾನೆ. ಅವನು ಹೀಗೆ ಇನ್ನು ಎಷ್ಟು ಸಮಯವೋ ಪಾಪ, ಸಮಯ ಹೇಳುತ್ತಾ ತೋರಿಸುತ್ತಾ ಸವೆಯುತ್ತಿದ್ದಾನೆ, ಆತನಿಗದು ತಿಳಿದಿಲ್ಲ ನಮಗೆ ತಿಳಿದಿದೆ ಹೊಸತಕ್ಕೆ ಹೋಗಬೇಕು ಅಂತ ನಾವು ಅಂದುಕೊಳ್ಳೋದು ಆದರೆ ಆ ಕಾಲಪುರುಷ ನಮ್ಮ ಲೆಕ್ಕವನ್ನು ಎಲ್ಲಿಯವರೆಗೆ ಇಟ್ಟಿದ್ದಾನೋ ಸವೆಯುವವರೆಗೋ ಅಥವಾ ಗಟ್ಟಿ ಇದ್ದಾಗಲೋ ಯಾರಿಗೆ ಗೊತ್ತು.?.
Subscribe to:
Posts (Atom)