Thursday, October 20, 2011
ಎರಡನೆಯವರಾದ ವಕೀಲರ .......
ಈಗ ಮೂರು ತಿಂಗಳ ಹಿಂದೆ ನಾ ಕಟ್ಟಿಸುತ್ತಿರುವ ಮನೆಯೆ ಮೌಲ್ಡ್ ಸಮಯ. "ರಾಗು, ನೀ ಮೌಲ್ಡ್ ಹಾಕುವ ಸಮಯಕ್ಕೆ ಸರಿಯಾಗಿ ಕೋರ್ಟ್ ನಿಂದ ಸ್ಟೆ ತರುತ್ತಾರಂತೆ" ಎಂಬ ಸುದ್ದಿ ಕಿವಿಗೆ ಬಿತ್ತು. ಒಮ್ಮೆ ಗಾಬರಿಯಾದೆ. ಹೌದಪ್ಪ ಹೌದು ಮೂರ್ನಾಲ್ಕು ಲಕ್ಷದ ಮೆಟೀರಿಯಲ್ ತಂದಿಟ್ಟುಕೊಂಡು ಅಕಸ್ಮಾತ್ ಸ್ಟೆ ಬಂದುಬಿಟ್ಟರೆ ಕತೆಯೇನು? ಎಂದು ಒಳಮನಸ್ಸು ಪದೇಪದೇ ಒಳಗಿನಿಂದ ನಡುಕವನ್ನು ಸೃಷ್ಟಿಮಾಡಿ ಹೊರಬಿಡತೊಡಗಿತು. ಕೋರ್ಟು ಕಾನೂನು ನನಗೆ ಗೊತ್ತಿಲ್ಲ. ಮಾಡುವುದೇನು?. ಹೈಕೋರ್ಟ್ ಲಾಯರ್ ಸ್ನೇಹಿತ ಬಾಬುವಿಗೆ ಫೋನಾಯಿಸಿದೆ. ಆತ "ಅಯ್ಯೋ ಬಿಡ ಮಾರಾಯ ಹಾಗೆಲ್ಲ ಸ್ಟೆ ತರುವುದಕ್ಕೆ ಬರುವುದಿಲ್ಲ, ನಿನ್ನ ಸ್ವಂತ ಜಮೀನಿನಲ್ಲಿ ಮನೆಕಟ್ಟಿಸುವುದು ನಿನಗೆ ಸಂವಿಧಾನ ಕೊಟ್ಟ ಹಕ್ಕು, ಕೋರ್ಟ್ ಎಂದರೆ ನೀವೆಲ್ಲಾ ಏನೆಂದು ತಿಳಿದುಕೊಂಡಿದ್ದೀರಿ, ಆದರೂ ಸ್ಥಳೀಯ ವಕೀಲರನ್ನು ಒಮ್ಮೆ ಭೇಟಿ ಮಾಡಿ ಪರಿಚಯ ಮಾಡಿಕೋ, ಅದು ಒಳ್ಳೆಯದು" ಎಂದ. ಅಕ್ಕನ ಮಗ ಮಂಜು ಪಕ್ಕನೆ ನೆನಪಾದ. ಆತನ ಮುಖಾಂತರ ಲಾಯರ್ ರಮಣರ ಮನೆಯ ಮೆಟ್ಟಿಲೇರಿದೆ ಕಡತ ಸಹಿತ. ಹಾಗೆಯೇ ಪರಿಚಯ ಜತೆಗೆ ಸಮಸ್ಯೆ ಹೇಳಿಕೊಂಡೆ. ಇದಕ್ಕೊಂದು ಕೇವಿಯಟ್ ಬೇಕು( ಹಾಗೆಂದರೆ ಏನೂ ಅಂತಾನೂ ನನಗೆಗ್ೊತ್ತಿರಲಿಲ್ಲ) ಕಡತವನ್ನು ಪರಾಮರ್ಶಿಸಿ ಕೇವಿಯಟ್ ಅಂದರೆ ಅನ್ಯತಾ ಕೋರ್ಟ್ ಜಗಳ ಮೈಮೇಲೆಎ ಳೆದುಕೊಂಡಂತೆ. ಇದಕ್ಕೆಲ್ಲಾ ಹಾಗೆಲ್ಲ ಸ್ಟೆ ತರಲು ಬರುವುದಿಲ್ಲ, ಅಕಸ್ಮಾತ್ ಬಂದರೂ ನಾವಿದ್ದೇವೆ ಬಿಡಿ ಚಿಂತೆ" ಎಂದರು. ಒಳಗಿನಿಂದ ಧೈರ್ಯದ ಸೆಲೆ ಒಸರತೊಡಗಿತು. "ಫೀ ಎಷ್ಟು? ಎಂದೆ. "ಅಯ್ಯ ಇದೆಕ್ಕೆಲ್ಲಾ ಎಂತಾ ಫೀ" ಎಂದು ಬೀಳ್ಕೊಟ್ಟರು.
ಮತ್ತೊಂದು ಪ್ರಕರಣದಲ್ಲಿ ಖಂಡಿಕದ ರಾಗಣ್ಣ ಹಾಗೂ ಅರುಣ ಎಂಬ ವಕೀಲರ ಭೇಟಿಯಾಗುವ ಸಂದರ್ಭ ಬಂತು. ಅವರೂ ಹಾಗೆಯೇ ಸುಮ್ನೆ ಯಾಕೆ ಕೋರ್ಟು ಕಛೇರಿ, ಸುಮ್ಮನಿದ್ದು ಬಿಡಿ" ಎಂದರು.
ಅಲ್ಲಿಯತನಕ ಪರಿಚಯವೇ ಇಲ್ಲದ ನನ್ನನ್ನು ಸುಲಭವಾಗಿ ಹಾದಿತಪ್ಪಿಸಿ ದುಡ್ಡು ತೆಗೆದುಕೊಳ್ಳಬಹುದಾಗಿದ್ದ ಸಂದರ್ಭದಲ್ಲಿಯೂ ಸಮಾಧಾನದ ಮಾತನ್ನಾಡಿ ಮನೆಗೆ ಕಳುಹಿಸಿದ ವಕೀಲರು ನಮಗೆ ಸಿಕ್ಕರೆ ಜೀವನ ಸುಗಮವಲ್ಲದೇ ಮತ್ತಿನ್ನೇನು?. ಅವರು ಕುಂತಿದ್ದು ನ್ಯಾಯಕ್ಕಾಗಿ ಎಂದು ಮತ್ತೆ ಹೊಸತಾಗಿ ಹೇಳಬೇಕಾಗಿಲ್ಲ ತಾನೆ. ತ್ಯಾಂಕ್ಸ್ ವಕೀಲರೇ ಎನ್ನುತ್ತಾ ಎರಡನೆಯವರು ನಮ್ಮ ಜೀವನದಲ್ಲಿ ಸುಗಮ ದಾರಿ ಮಾಡಿಕೊಡಬಲ್ಲರು ಎಂಬ ಪುರಾಣ ಮುಕ್ತಾಯೂ ಇನ್ನು ಮೂರನೆಯವರು.
Wednesday, October 19, 2011
Tuesday, October 18, 2011
ಸೋಲನ್ನು ಮೆಟ್ಟಿಲು ಮಾಡಿಕೊಂಡು ..........
ಜೀವನ ಎಂದಮೇಲೆ ಸೋಲು ಗೆಲುವು,ಹುಟ್ಟು ಸಾವು, ನೋವು ನಲಿವು, ಎಂಬಂತದೆಲ್ಲಾ ಇದ್ದದ್ದೇ. ಅದರಾಚೆ ಎಂದರೆ ಶೂನ್ಯ ಭಾವ ಅಷ್ಟೆ. ಅಲ್ಲಿ ಮಜ ಇಲ್ಲ ಅಥವಾ ಗೊತ್ತಿಲ್ಲ. ಈಗ ಅಂತಹ ಗೊತ್ತಿಲ್ಲದ ವಿಚಾರಗಳನ್ನೆಲ್ಲಾ ಬದಿಗೊತ್ತಿ ಚೂರುಪಾರು ಗೊತ್ತಾಗುತ್ತದೆ, ಗೊತ್ತಾಗುತ್ತಿದೆ ಎನ್ನುವ ವಿಚಾರದತ್ತ ಹೊರಳೋಣ.
"ಗೆಲುವು" ಎಂಬ ಮೂರಕ್ಷರದ ಪದ ಇದೆಯಲ್ಲ, ಅದನ್ನು ಸಾಕಾರಗೊಳಿಸಿಕೊಳ್ಳಲು ಸೋಲನ್ನು ಮೆಟ್ಟಿಲು ಮಾಡಿಕೊಳ್ಳಬೇಕು" ಎಂಬ ವಿಚಾರ ಬಹು ವಿಶೇಷವಾಗಿದೆ. ಗೆಲುವು ಸೋಲುಗಳು ವಿಷಯಾಧಾರಿತವಾದದ್ದು. ಅವನು ಯಾವುದನ್ನು ಯಾಕಾಗಿ ಎಷ್ಟು ಪ್ರಮಾಣದಲ್ಲಿ ಗೆಲ್ಲಲು ಹೊರಟಿದ್ದಾನೆ ಎಂಬುದರ ಮೇಲೆ ಫಲಿತಾಂಶ. ಗೆಲುವನ್ನ ಸಾವಿನಲ್ಲೂ ಕಾಣಬಹುದು ಸೋಲನ್ನು ಬದುಕಿದ್ದೂ ಕಾಣಬಹುದು. ಅದಕ್ಕೊಂದು ಮಜವಾದ್ ಕತೆ ಮಾಡಿದ್ದಾರೆ ಯಾರೋ ಬುದ್ಧಿವಂತರು. ಒಮ್ಮೆ ಓದಿ.
ಅಕ್ಕಪಕ್ಕದಲ್ಲಿ ಮನೆ ಕಟ್ಟಿಕೊಂಡವರಿಬ್ಬರು ಕೆಲ ವರ್ಷ ಅತೀ ಆತ್ಮೀಯತೆಯಿಂದ ಇದ್ದರು. ಆ ಅತಿ ಯ ಪರಿಣಾಮ ಅವರಿಬ್ಬರು ಪರಮ ಶತ್ರುಗಳಾಗಿ ಬದಲಾದರು. ಬೆಳಗಿನಿಂದ ಸಂಜೆಯ ತನಕ ಪುರ್ಸೊತ್ತು ಸಿಕ್ಕಾಗಲೆಲ್ಲ ಜಗಳ ಜಗಳ ಜಗಳ. ಬಾಯಿಮಾತಿನಿಂದ ಶುರುವಾದ ಜಗಳ ಪೋಲೀಸ್ ಸ್ಟೇಷನ್ ಕೋರ್ಟು ಮೆಟ್ಟಿಲೇರಿತು. ಗಡಿ ವ್ಯಾಜ್ಯ, ಸದ್ದಿನ ವ್ಯಾಜ್ಯ ಸಪ್ಪಳದ ವ್ಯಾಜ್ಯ ಹೀಗೆ ಒಂದರ ಹಿಂದೊಂದು ಕಾರಣಗಳು. ಒಂದರಲ್ಲಿ ಒಬ್ಬನಿಗೆ ಸೋಲಾದರೆ ಮತ್ತೊಂದರಲ್ಲಿ ಮತ್ತೊಬ್ಬನಿಗೆ ಸೋಲು, ಗೆಲುವೂ ಹಾಗೆ ಹೇಗೂ ಉಲ್ಟಾ. ಹೀಗೆ ಗಲಾಟೆ ದೊಂಬಿಯಲ್ಲಿ ನೆರೆಹೊರೆಯವರಿಬ್ಬರೂ ತಮ್ಮ ಆಯುಷ್ಯವನ್ನೇ ಕಳೆಯುತ್ತಾ ಬಂದರು.
ಇಂತಿಪ್ಪ ಸಂದರ್ಭದಲ್ಲಿ ಒಂದು ಮನೆಯವನಿಗೆ ಖಾಯಿಲೆ ದೇಹಕ್ಕೆ ಆವರಿಸಿತು. ದಿನದಿಂದ ದಿನಕ್ಕೆ ಖಾಯಿಲೆ ಉಲ್ಬಣಿಸಿ ಇನ್ನು ಹೆಚ್ಚು ದಿನ ಆತ ಬದುಕಲಾರ ಎಂಬ ಸ್ಥಿತಿಗೆ ಬಂತು. ಮತ್ತೊಬ್ಬನಿಗೆ ಒಳಗೊಳಗೆ ಆನಂದ. "ಉರದಾ ಉರದಾ ಈಗ ನೋಡು ಅನುಭವಿಸುತ್ತಾ ಇದ್ದಾನೆ" ಎಂದು ಒಳಗೊಳಗೆ ಬೀಗತೊಡಗಿದ. ಹೀಗೆ ಒಳಾನಂದವನ್ನು ಅನುಭವಿಸುತ್ತಾ ಇರಬೇಕಾದ ಸಂದರ್ಭದಲ್ಲಿ ಪಕ್ಕದ ಮನೆಯವನಿಂದ ಒಮ್ಮೆ ತನ್ನನ್ನು ಭೇಟಿ ಮಾಡಿ ಹೋಗುವಂತೆ ಆಹ್ವಾನ ಬಂತು. ಈತನಿಗೂ ಜಗಳ ಸಾಕಾಗಿತ್ತು, ಪಾಪ ಇನ್ನು ಸತ್ತು ಹೋಗುತ್ತಾನೆ ,ಇನ್ನೆಂಥಾ ದ್ವೇಷ ಎನ್ನುತ್ತಾ ಸೀದಾ ಮಲಗಿದವನ ಹಾಸಿಗೆಯ ಬಳಿಗೆ ಬಂದ. ಆಗ ಖಾಯಿಲೆಯಾತ " ನೋಡು ನಾನು ಕ್ಷಮಿಸಲಾರದ ತಪ್ಪುಗಳನ್ನು ಮಾಡಿದ್ದೇನೆ, ಅದಕ್ಕಾಗಿ ಭಗವಂತ ನನಗೆ ಈ ಶಿಕ್ಷೆ ಕೊಟ್ಟಿದ್ದಾನೆ" ಎಂದು ಕಣ್ಣೀರ್ಗರೆದ. ಈತನಿಗೂ ಛೆ ಅಂತ ಅನಿಸಿತು. "ಆಯಿತು ಆಗಿದ್ದೆಲ್ಲಾ , ಮರೆತುಬಿಡು, ನನ್ನ ಗ್ರಹಚಾರವೂ ಹಾಗಿತ್ತು, ಎಲ್ಲಾ ಭಗವಂತನ ಆಟ" ಎಂದು ಕಣ್ಣೀರ್ಗರೆದ. ಅಲ್ಲಿಯತನಕ ಪರಮ ಶತ್ರುಗಳಾಗಿದ್ದವರು ಮತ್ತೆ ಪರಮಮಿತ್ರರಾಗಿ ಹರಟಿದರು. ಖಾಯಿಲೆ ಮರೆತು ನಕ್ಕ ಮತ್ತೊಬ್ಬ. ಸ್ವಲ್ಪ ಸಮಯದ ನಂತರ ಖಾಯಿಲೆಯಾತ " ನನ್ನದೊಂದು ಕೊನೆಯ ಆಸೆ ಇದೆ ಈಡೇರಿಸಿಕೊಡುತ್ತೀಯಾ ಮಿತ್ರ" ಎಂದು ಕೈ ಹಿಡಿದು ಕೇಳಿದ. "ಆಯಿತು ಹೇಳು" ಎಂದ ಈತ.
"ನಾನು ಹೇಗೂ ಇನ್ನೊಂದೆರಡು ದಿವಸದಲ್ಲಿ ಸಾಯುತ್ತೇನೆ, ನಾನು ಸತ್ತಮೇಲೆ ನನ್ನ ಗುಧದ್ವಾರದಲ್ಲಿ ನೀನು ಹಾರೆಯೊಂದನ್ನು ತೂರಿಸಬೇಕು, ಇದು ನಾನು ನಿನಗೆ ಕೊಟ್ಟ ತೊಂದರೆಗಾಗಿ ಪ್ರಾಯಶ್ಚಿತ್ತ, ಮುಂದಿನ ಜನ್ಮದಲ್ಲಾದರೂ ಒಳ್ಳೆಯ ಬುದ್ಧಿ ನನಗೆ ದೇವರು ಕೊಡಲಿ" ಎಂದ
ಹಳೆ ಶತ್ರು ಪ್ರಸೆಂಟ್ ಮಿತ್ರನ ವಿಚಿತ್ರ ಬಯಕೆಯನ್ನು ಈತ ಅನಿವಾರ್ಯವಾಗಿ ಒಪ್ಪಿಕೊಂಡ. ಎರಡಿ ದಿವಸದನಂತರ ಆತ ಸಾವನ್ನಪ್ಪಿದ. ಈತ ಕೊಟ್ಟ ಮಾತಿನಂತೆ ಸಾವು ಖಚಿತವಾದನಂತರ ಒಂದು ಬರೊಬ್ಬರಿ ಕಬ್ಬಿಣದ ಹಾರೆಯನ್ನು "ಅಲ್ಲಿ" ತೂರಿಸಿದ. ನಂತರ ಜನ ಒಬ್ಬೊಬ್ಬರಾಗಿ ಬರತೊಡಗಿದರು, ಎಲ್ಲರೂ ಹಾರೆಯ ವಿಷಯ ಕುತೂಹಲದಿಂದ ಕೇಳತೊಡಗಿದರು. ಈತ ನಡೆದ ಕತೆ ಹೇಳಿ ತಾನೇ ತೂರಿಸಿದ್ದು ಎಂದ. ಆದರೆ ಜನರಿಗೇಕೋ ಅನುಮಾನ, ಗುಸು ಗುಸು ಪಿಸ ಪಿಸ. ಈ ಗುಸುಗುಸು ಪಿಸಪಿಸ ಕ್ಕೆ ದನಿಯಾಗಿ ಕೆಲ ಸಮಯದ ನಂತರ ಪೋಲೀಸರು ಬಂದರು. ಮತ್ತು ಹಾರೆಯನ್ನು "ಅಲ್ಲಿ" ಹಾಕಿ ಶತ್ರುವಾಗಿದ್ದ ಆತನನ್ನು ಕೊಂದ ಆಪಾದನೆಯ ಮೇಲೆ ಆರೆಸ್ಟ್ ಮಾಡಿ ಈತನನ್ನು ಜೈಲಿಗಟ್ಟಿದರು.
ಆತ ಸಾವೆಂಬ ಸೋಲನ್ನು ಮೆಟ್ಟಿಲು ಮಾಡಿಕೊಂಡು ಶತ್ರುವನ್ನು ಸೋಲಿಸಿ ತಾನು ಗೆಲುವು ಕಂಡಿದ್ದ.
Monday, October 17, 2011
ಕತೆಯೇ ಸರಿ.
ಇಪ್ಪತ್ತು ವರ್ಷದ ಹಿಂದಿರಬಹುದು. ಮುಖದಲ್ಲಿನ ಭಾವ ಮಸುಕು ಆದರೆ ದನಿ ಇನ್ನೂ ನೆನಪಿದೆ" ರಾಗೂ ಅಂವನು ಪ್ರೀತಿಸಿ ಮೋಸಮಾಡಿಬಿಟ್ಟ, ನೀನಾದರೂ ಹೋಗಿ ಹೇಳು, ಅವನದು ನಾಟಕ ಅಂತ ನನಗೆ ಈಗ ಗೊತ್ತಾಗಿದೆ, ಒಂದಿಷ್ಟು ದುಡ್ಡು ಕಳಕೊಂಡೆ." ಎಂದು ಹೇಳಿದಳಾಕೆ. ನನಗೆ ಕರುಳು ಚುರುಕ್ ಎಂದಿತಾದರೂ ಮುಂದುವರೆಯುವ ಧೈರ್ಯ ಇರಲಿಲ್ಲ. ಏನಂತ ಹೇಳಬೇಕು? ಹಗೂರವಾಗಿ ಕೇಳಿದೆ. "ಆವತ್ತು ನಾವಿಬ್ಬರು ಮೋರಿಕಟ್ಟೆಯ ಮೇಲೆ ಮಾತನಾಡಿದನ್ನು ನೀನು ನೋಡಿ, ಯಾರದು ಎಂದೆಯಲ್ಲ, ಅದನ್ನ ಉದಾಹರಿಸಿ ಕೇಳು ಮದುವೆಯಾಗಲು ಹೇಳು" ಎಂದಳು. ಯಾಕೋ ಮನಸ್ಸಾಗಲಿಲ್ಲ, ಕಾರಣ ಇನ್ನೂ ಗೊತ್ತಿಲ್ಲ. "ನೋಡು.. ಆತ ಮೋಸಗಾರ ಎಂದು ನಿನಗೆ ಈಗಲೇ ಗೊತ್ತಾಗಿದ್ದು ತುಂಬಾ ಒಳ್ಳೆಯದಾಯಿತು, ಸಂಸಾರವೇ ಜೀವನವಲ್ಲ, ಮರೆತು ಮುಂದಿನ ಜೀವನ ಬಾಳು ಇಲ್ಲದಿದ್ದರೆ ಇದು ಪ್ಯಾಚ್ ಕಟ್ಟಿದ ಸಂಸಾರ ಹಾಗಾಗಿ ನಿತ್ಯ ಗೋಳು" ಎಂದು ಸಮಾಧಾನಿಸಿದೆ. ನಂತರ ಬಹಳ ದಿವಸಗಳು ಈ ವಿಷಯ ಕಾಡಿದ್ದಿದೆ. ನಾನು ತಪ್ಪಿದೆನೆ?, ಅಸಹಾಯಕ ಹೆಣ್ಣುಮಗಳಿಗೆ ಸಹಾಯ ಮಾಡಲಿಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು. ಕಾಲ ಎಲ್ಲವನ್ನೂ ನುಂಗಿ ನೀರು ಕುಡಿಯಿತುಬಿಡಿ.
ಆಕೆಯ ಮದುವೆ ಬೇರೆಯವರ ಜತೆ ನಡೆಯಿತು. ಮೊನ್ನೆ ಸಿಕ್ಕಿದ್ದಳು, ಸುಖೀ ಸಂಸಾರದ ಭಾವ ಮುಖದಲ್ಲಿ ಎದ್ದು ಕುಣಿಯುತ್ತಿತ್ತು. ಆತನ ಮದುವೆಯೂ ನಡೆದು ಎರಡು ಮಕ್ಕಳು, ಆದರೆ ಇಂದಿಗೂ ಆತ ಸ್ಯಾಡಿಸ್ಟ್ ವರ್ತನೆ ತೋರಿಸುತ್ತಿದ್ದಾನೆ. ಒಮ್ಮೊಮ್ಮೆ ಬುಡಕ್ಕೆ ತಂದಿಟ್ಟು ಚಂದ ನೋಡುತ್ತಾನೆ. ಸಂಸಾರದ ಮುಖದಲ್ಲಿ ಕಳೆ ಇಲ್ಲ. ಕಾರಣ ಆತನ ಆ "ಅದರ" ಹುಡುಕಾಟ ಇನ್ನೂ ಮುಗಿದಿಲ್ಲ.
ಅಂತೂ ಸಮಾಧಾನವಾಯಿತು. ಇಲ್ಲ ಅಂದು ನಾನು ಸುಮ್ಮನುಳಿದಿದ್ದೇ ಒಳ್ಳೆಯದಾಯಿತು. ಹೌದು ಒಮ್ಮೊಮ್ಮೆ ಸುಮ್ಮನುಳಿಯಬೇಕಾಗುತ್ತದೆ, ಮಗದೊಮ್ಮೆ ಬುಸ್ ಎನ್ನಬೇಕಾಗುತ್ತದೆ. ಆದರೆ ಕಚ್ಚಬಾರದು. ಅಕಸ್ಮಾತ್ ಕಚ್ಚಿದರೆ ಉಳಿಯಬಾರದು ಎಂಬ "ಸನ್ಯಾಸಿ ಮತ್ತು ನಾಗರಹಾವಿನ" ಕತೆಯೇ ಸರಿ.
Saturday, October 15, 2011
ತೀರಾ ಅರ್ಥವಾಗದಿದ್ದರೆ ತಲೆಕೆಡಿಸಿಕೊಳ್ಳಬೇಡಿ, ಅರ್ಥವಾಗುವವರಿಗೆ ಆಗಿರುತ್ತದೆ
Friday, October 14, 2011
ಗೊತ್ತಾ ನಿಮಗೆ ವಕಾರಾದಿ ಪಂಚಮರು...?
ವೈದ್ಯ-ವಕೀಲ-ವಣಿಕ-ವೈದೀಕ-ವೇಶ್ಯೆ ಹೀಗೆ ಸರಿಸುಮಾರು ಅರ್ಥದ ಜನರ ಬಳಿ ಸಿಕ್ಕಿಕೊಂಡರೆ ಲೈಫೆಂಬ ಜೀವನ ಕಷ್ಟವಂತೆ. ಆದರೆ ಸಿಕ್ಕಿಕೊಳ್ಳದೆ ದಾಟುವ ಮನಸಿದ್ದರೆ ಏನೂ ಮಾಡಲಾಗುವುದಿಲ್ಲವಂತೆ. ಆದರೆ ನನಗೆ ಈ ಐದು ಜನ ಸಮರ್ಥರು ಸಿಕ್ಕರೆ ಜೀವನ ಸುಗಮ ಎಂಬ ಆಲೋಚನೆ ಪಳಕ್ಕನೆ ಮಿಂಚುತ್ತಿದೆ.
ಹೌದು, ನಿಮಗೆ ಅನುಭವಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ, ನನಗಂತೂ ಒಳ್ಳೆಯ ಅನುಭವ. ನಾನು ತಾಳಗುಪ್ಪದ ಡಾಕ್ಟರ್ ಗುರುರಾಜ ದೀಕ್ಷಿತ್ ರನ್ನು ಆಯ್ಕೆಮಾಡಿಕೊಂಡಿದ್ದೇನೆ. ಅಂತಹಾ ಘನಾಂದಾರಿ ಖಾಯಿಲೆ ಜೀವನದಲ್ಲಿ ಬಂದಿರದಿದ್ದರೂ ಸಣ್ಣ ಪುಟ್ಟ ಕಾಯಿಲೆಗಳಿಗೆ ಅವರು ತಾಳ್ಮೆಯಿಂದ ದೊಡ್ಡ ಖಾಯಿಲೆ ಯಾಗದಂತೆ ಮಾಡದೆ ಗುಣಮಾಡಿದ್ದಾರೆ. ಆದರೆ ಇತ್ತೀಚಿಗೆ ವಯಸ್ಸು ನಲವತ್ತೈದು ಆಗಿರುವ ಪರಿಣಾಮವೋ ಅಥವಾ ಕೆಲಸದ ಒತ್ತಡವೋ ಅಥವಾ ಡ್ಯಾಶ್ ಡ್ಯಾಶ್ ಸಮಸ್ಯೆಯೋ...? ಪಟಕ್ಕನೆ ನಿದ್ರೆ ಬರುತ್ತಿರಲಿಲ್ಲ. ವಾರೊಪ್ಪತ್ತು ನೋಡಿ ದೀಕ್ಷಿತರ ಬಳಿ ಓಡಿದೆ. "ಹೌದಾ.. ಖಾಲಿ ಕೂತಾಗ, ಪ್ರಪಂಚ ಒಳ್ಳೆಯದು ಅಂತಿದ್ದೀರಿ, ಈಗ ಅರ್ಥವಾಯಿತ?, ನಿಮ್ಮ ಶತ್ರುಗಳು ಎಷ್ಟಿದ್ದಾರೆ ಅಂತ?" ಎಂದು ನಕ್ಕರು. "ಅಯ್ಯಾ ಅದಕ್ಕೂ ನನ್ನ ನಿದ್ರೆಗೂ ಎಂಥ ಸಂಬಂಧ ಎಂದೆ. ಸಮಸ್ಯೆಯ ಕುರಿತು ಹೆಚ್ಚು ಯೋಚನೆ ಮಾಡಿದ್ದರ ಪರಿಣಾಮ, ಬ್ಲಾಗ್, ಕುಟ್ಟುತ್ತಾ, ಕಥೆ ಬರೆಯುತ್ತಾ ಲೇಖನ ಗೀಚುತ್ತಾ, ಭ್ರಮಾಪ್ರಪಂಚದಲ್ಲಿ ಬದುಕುವುದು ಸುಲಭ, ವಾಸ್ತವಕ್ಕೆ ಬಂದಾಗ ಅನ್ಯಾಯ ಕಂಡರೂ ಯಾರು ಮಾಡಿದ್ದು ಎನ್ನುವುದರ ಮೇಲೆ ಬಾಯಿ ಬಿಚ್ಚುವುದು ಹಾಗೂ ಬಾಯಿ ಮುಚ್ಚುವುದೂ ಮಾಡಬೇಕು, ಇರಲಿ ಆಗಿದ್ದಾಯಿತಲ್ಲ, ಇವೆರಡು ಮಾತ್ರೆ ನುಂಗಿ ರಾತ್ರಿ ಊಟಕ್ಕೆ ಅರ್ದ ಗಂಟೆ ಮೊದಲು ಎಂದು ನೆಕ್ಸ್ಟ್ ಎಂದರು.
ವೈದ್ಯೋ ನಾರಾಯಣೋ ಹರಿಃ ಎಂದು ಮನೆ ಸೇರಿ ಮಾತ್ರೆ ನುಂಗಿ ಮಲಗಿದೆ. ನಿದ್ರೆ ಯಾವಾಗ ಬಂತೋ ತಿಳಿಯಲಿಲ್ಲ. ಬೆಳಗ್ಗೆ ಎದ್ದು ಫ್ರೆಶ್ ಆಗಿದ್ದೆ. ಆದರೆ ಮನಸ್ಸಿನಲ್ಲಿ ಕುರಿಕುರಿ, ನಿದ್ರೆ ಮಾತ್ರೆ ನುಂಗಿ ನಿದ್ರೆ ಮಾಡುವುದು ಎಷ್ಟು ಸರಿ?. ಮಾರನೇ ದಿನ ಸಂಜೆ ಮತ್ತೆ ದೀಕ್ಷಿತರಲ್ಲಿಗೆ ಓಡಿದೆ. "ಡಾಕ್ತ್ರೇ ಅದ್ಯಾಕೋ ನಿದ್ರೆ ಮಾತ್ರೆ ನುಂಗಿ ನಿದ್ರೆ ಮಾಡುವುದು ಒಂಥರಾ ಅವಮಾನ ಅಂತ ಅನ್ನಿಸತೊಡಗಿದೆ". ಎಂದೆ. "ನಿಮಗೆ ನಿದ್ರೆ ಮಾತ್ರೆ ಕೊಟ್ಟವರ್ಯಾರು? ಡಾಕ್ಟರಿಂದ ಮರುಪ್ರಶ್ನೆ. "ಮತ್ತೆ ಅಷ್ಟೊಂದು ಚೆನ್ನಾಗಿ ನಿದ್ರೆ ಬಂತು. ಅದಕ್ಕೆ ಹೇಳಿದ್ದು ದೇಹಕ್ಕೆ ವಯಸ್ಸಾಗಿದೆ ಮನಸ್ಸಿಗಲ್ಲ ಈಗ ಕೇಳಿ "ಆಯುರ್ವೇದ ಅದ್ಬುತ ಶಕ್ತಿಯುಳ್ಳದ್ದು , ನಾನು ನಿಮಗೆ ಕೊಟ್ಟದ್ದು ವಾತ-ಪಿತ್ಥ-ಕಫ ವನ್ನು ಸಮತೋಲನ ಮಾಡುವ ತ್ರಿಫಲ ಚೂರ್ಣ, ಜತೆಗೆ ವಿಟಮಿನ್ ಸಿ. ಹಿಂದಿನ ಕಾಲದಲ್ಲಿ ತ್ರಿಫಲ ಚೂರ್ಣದ ಜತೆ ಮೂಸಂಬಿ ಹಣ್ಣು ಕೊಡುತ್ತಿದ್ದರು, ಕಾರಣ ವಿಟಮಿನ್ ಸಿ ಮಾತ್ರೆ ಇರಲಿಲ್ಲ. ಈಗ ಮೂಸಂಬಿ ಬದಲಿಗಾಗಿ ಮಾತ್ರೆ ಅಷ್ಟೆ. ನಿಮ್ಮ ಮನಸ್ಸಿನ ಆಲೋಚನೆಗಳು ವಾತ-ಪಿತ್ಥ-ಕಫ ಪ್ರಮಾಣವನ್ನು ಏರುಪೇರು ಮಾಡುತ್ತದೆ ಈ ಚೂರ್ಣ ಮತ್ತದನ್ನ ಸಮತೋಲನಕ್ಕೆ ಒಯ್ಯುತ್ತದೆ ಆಗ ನಿದ್ರೆ ತನ್ನಷ್ಟಕ್ಕೆ. ಎಂದರು. ಜತಜತಗೆ ಅವರ ಇಷ್ಟು ಟ್ರೀಟ್ ಮೆಂಟ್ ಗೆ ತಗುಲಿದ ವೆಚ್ಚ ಮಾತ್ರೆ ಸೇರಿ ಮೂವತ್ತು ರೂಪಾಯಿಯಷ್ಟೆ.
ಈಗ ನಿಮಗೆ ವ ಕಾರದ ಆರಂಭದ ಕತೆಯಾಯಿತು. ಎರಡನೇ ಯವರ ಕತೆಯನ್ನು ಇಷ್ಟವಿದ್ದರೆ ನಾಳೆ ಓದುವಿರಂತೆ. ಓಕೆ ಗುಡ್ ನೈಟ್.
Wednesday, October 12, 2011
ಆಗದಿದ್ದರೆ ನಮ್ಮ ಪಾಡು ನಮಗೆ.
ಸಾಗರ:ಸಮೀಪದ ತಲವಾಟ ಗ್ರಾಮಪಂಚಾಯಿತಿ ವ್ಯಾಪ್ತಿ ಸ.ನಂ.೮೨ ರಲ್ಲಿ ರಾಷ್ಟ್ರೀಯ ಸಂಪತ್ತು ವಿಶಾಲವಾದ ಕೆರೆಯಿದ್ದು,ಕೆರೆ ಅಚ್ಚುಕಟ್ಟು ಭೂಮಿ ಸಮೃದ್ಧವಾಗಿದೆ.
ಕಳೆದ ನೂರಾರು ವರ್ಷಗಳಿಂದ ರೈತಕುಟುಂಬಗಳು ಕೃಷಿ ನಿರ್ವಹಿಸಿಕೊಂಡು ಮಲೆನಾಡಿನ ಸಾಂಪ್ರದಾಯಿಕ ಬೆಳೆ ಅಡಿಕೆ ತೋಟವನ್ನು ನಿರ್ಮಿಸಿಕೊಂಡಿದ್ದಾರೆ.
ಇಲ್ಲಿನ ಸಾಂಪ್ರದಾಯಿಕ ಅಡಿಕೆ ತೋಟವನ್ನು ಹಣನೀಡಿ ಖರೀದಿಸಿಕೊಂಡಿರುವ ವ್ಯಕ್ತಿಯೋರ್ವರು ಬೆಳೆದು ನೂರಾರು ವರ್ಷಗಳಿಂದ ಫಸಲು ನೀಡುತ್ತಿರುವ ಅಡಿಕೆ ಮರವನ್ನೇ ಕಡಿದು ತೋಟವನ್ನು ಸರ್ವನಾಶ ಮಾಡಿ ಪ್ರವಾಸೋದ್ಯಮದ ಹೆಸರಿನಲ್ಲಿ ಹೋಮ್ ಸ್ಟೇ ನಿರ್ಮಿಸಲು ಹೊರಟಿರುವುದು ಅಡಿಕೆ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಅಡಿಕೆ ತೋಟವನ್ನು ಕಂದಾಯ ಇಲಾಖೆಯಲ್ಲಿ ಸರ್ವೆ ನಡೆಸಿ ಬಾಗಾಯ್ತು ಎಂದು ದಾಖಲು ಮಾಡಲು ಕಳೆದ ೩ ದಶಕಗಳಿಂದ ಸಾಧ್ಯವಾಗುತ್ತಿಲ್ಲ.ಹೊಸದಾಗಿ ಅಡಿಕೆ ತೋಟ ಮಾಡಿದ ಭೂಮಿಯ ಬೆಳೆಯನ್ನು ಕೇವಲ ಸಸಿ ಬಾಳೆ ಎಂದು ನಮೂದಿಸಬಹುದಾಗಿದೆಯೇ ಹೊರತು ಬಾಗಾಯ್ತು ಎಂದು ನಮೂದಿಸಲು ಅಸಾಧ್ಯವಾಗಿದೆ.
ಹೀಗಿರುವಾಗ ಪಹಣಿಯಲ್ಲಿ ಬಾಗಾಯ್ತು ಎಂದು ನಮೂದಾಗಿರುವ ಅಮೂಲ್ಯ ಫಲವತ್ತಾದ ಅಡಿಕೆ ತೋಟವನ್ನು ನಾಶ ಮಾಡಿರುವುದು ಮಲೆನಾಡಿನ ಸಂಪ್ರದಾಯ ಸಂಸ್ಕೃತಿಯನ್ನೇ ನಶ ಮಾಡಿದಂತಾಗಿದೆ ಎಂದು ಅಡಿಕೆ ಬೆಳೆಗಾರರು,ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಲವಾಟದ ರಾಘವೇಂದ್ರ ಎನ್ನುವವರ ಹುಚ್ಚು ನಿರ್ದಾರದಿಂದ ಅಡಿಕೆ ತೋಟ ನಾಶವಾಗಿದೆ.ಕಂದಾಯ ಇಲಾಖೆಯ ನಿಯಮಾನುಸಾರ ಪಹಣಿಯಲ್ಲಿ ಬಾಗಾಯ್ತು ಅಡಿಕೆ ಬೆಳೆಯುವ ಭೂಮಿ ಎಂದು ದಾಖಲಾದ ಮೇಲೆ ಸದರಿ ಭೂಮಿಯನ್ನು ಬೇರೆ ಮುಖ್ಯ ಬೆಳೆಯಲು ಸ್ವಯಂಪ್ರೇರಿತರಾಗಿ ಪರಿವರ್ತಿಸುವುದು ನಿಯಮದ ಉಲ್ಲಂಘನೆಯಾಗುತ್ತದೆ.
ಗ್ರಾಮದ ಪ್ರಮುಖ ಜಲಮೂಲ ಕೆರೆ ಅಚ್ಚುಕಟ್ಟು ಭೂಮಿಯನ್ನು ಬೆಳೆ ಬೆಳೆಯುವ ಬದಲಿಗೆ ವ್ಯವ್ಯಹಾರಿಕ ಉದ್ದೇಶಿತ ಕಟ್ಟಡ ನಿರ್ಮಾಣ ಕಾನೂನು ಉಲ್ಲಂಘನೆಯಾಗುತ್ತದೆ.ಹೋಮ್ಸ್ಟೇ ಮೊದಲಾದ ಉದ್ದಿಮೆ ನಡೆಸಲು ಖುಷ್ಕಿ ಪಾಳು ಭೂಮಿಯನ್ನು ಭೂ ಪರಿವರ್ತನೆ ನಿಯಮದ ಅಡಿಯಲ್ಲಿ ಪರಿವರ್ತಿಸಿಕೊಂಡು ಕಟ್ಟಡ ನಿರ್ಮಿಸಲು ಮಾತ್ರ ಅವಕಾಶವಿರುತ್ತದೆ.
ಸ್ಥಳಿಯ ಗ್ರಾಮಪಂಚಾಯಿತಿಯೂ ಸರ್ಕಾರದಿಂದ ಭೂ-ಪರಿವರ್ತನೆಯಾಗದ ಅಡಿಕೆ ತೋಟ ಭಾಗಾಯ್ತಿನಲ್ಲಿ ಬೃಹತ್ ಕಟ್ಟಡ ನಿರ್ಮಿಸುತ್ತಿರುವುದಕ್ಕೆ ಪರವಾನಿಗೆ ಕೊಟ್ಟರೆ ನ್ಯಾಯಾಲಯದಿಂದ ನಿಂದನೆಗೆ ಗುರಿಯಾಗಬೇಕಾಗುತ್ತದೆ.
ಈ ಎಲ್ಲಾ ಅಂಶಗಳನ್ನು ಮುಂದಿಟ್ಟು ತಲವಾಟ ಪಂಚಾಯಿತಿ ಗ್ರಾಮಸ್ಥರಾದ ಹೆಚ್.ಕೆ.ರಾಮಚಂದ್ರ ಬಿನ್ ಕೃಷ್ಣಯ್ಯ ಅವರು ತಾಲ್ಲೂಕು ಕಚೇರಿಗೆ ಮತ್ತು ಜಿ.ಪಂ.ಹಾಗೂ ತಾ.ಪಂ ಮತ್ತು ಗ್ರಾಮಪಂಚಾಯಿತಿಗಳಿಗೆ ತಕರಾರು ಅರ್ಜಿ ಗುಜರಾಯಿಸಿದ್ದಾರೆ.
ಕಂದಾಯ ಇಲಾಖೆಯಿಂದ ಸೂಕ್ತ ತನಿಖೆ ನಡೆಸಿ ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. "
ಓದಿ ಮುಗಿಸಿದ ತಕ್ಷಣ ಅನಿಸಿದ್ದು. ಇದು ಸೂಪರ್ ತಲೆ ಉಪಯೋಗಿಸಿದ ನ್ಯೂಸು ಅಂತ ಅನಿಸಿತು. ಹೇಳಿಕೇಳಿ ಹಿತಕರ ಜೈನ್ ಸುವರ್ಣ ಪ್ರಭದ ಸಂಪಾದಕ ನನ್ಗೆ ಪರಿಚಯಸ್ಥ. ನನಗೂ ಏನೂ ಆಗದಂತೆ ಹಾಗೂ ನ್ಯೂಸು ಮಾಡಲು ಗಂಟುಬಿದ್ದ ಜನಕ್ಕೂ ಸಮಾಧಾನವಾಗುವಂತೆ ಮಾಡಿಬಿಟ್ಟಿದ್ದ. ಅಸಲಿಗೆ ನಾನು ನಿರ್ಮಿಸುತ್ತಿರುವುದು ಸದ್ಯಕ್ಕೆ ತೋಟದ ಮನೆಯೆಂದೇ. ಬ್ಲಾಗಿನಲ್ಲಿ ಹೋಂ ಸ್ಟೇ ಎಂದಿದ್ದನ್ನ ಬರಪ್ಪೂರ್ ಸಾಕ್ಷಿ ಅಂದುಕೊಂಡ ರಾಮಚಂದ್ರ ಎಂಡ್ ಮೆಂಬರ್ಸ್ ಅದನ್ನೇ ಹೋಂ ಸ್ಟೇ ಎಂದು ಸ್ವಯಂ ಘೋಷಿಸಿಬಿಟ್ಟಿದ್ದಾರೆ. ಇರಲಿ ಅವರಿಗೆ ನನ್ನ ಮೇಲೆ ಉರಿ ಇದೆ. ಹೇಗಾದರೂ ಮಾಡಿ ತೀರಿಸಿಕೊಳ್ಳಬೇಕು, ಹೀಗಾದರೂ ನನ್ನಿಂದ ಸಮಾಧಾನವಾಗುವುದಾದರೆ ನನಗೆ ಒಂಥರಾ ಖುಷಿ. ನನ್ನನ್ನು ಯಾರೂ ಪ್ರಶ್ನಿಸಬಾರದೆಂಬ ಮನೋಭಾವ ನನ್ನದಲ್ಲ. ನಾನು ಮಾಡಹೊರಟಿರುವ ಕೆಲಸ ಸರ್ಕಾರಿಜಾಗ ಹಾಗೂ ರಸ್ತೆಗೆ ಬೇಲಿ ಹಾಕಲಲ್ಲ ಎಂಬ ಸಮಾಧಾನ ನನಗಿದೆ. ನನ್ನ ಎಲ್ಲಾ ದಾಖಲೆಗಳೂ ಸಾರ್ವಜನಿಕರಿಗೆ ಸಿಗುವಂತಾಗಬೇಕು. ಇದೇ ರಾಮಚಂದ್ರ ಬಿನ್ ಕೃಷ್ಣಯ್ಯ ಹದಿನೈದು ದಿನದ ಹಿಂದೆ ರಸ್ತೆ ಹಾಳುಮಾಡಿದ್ದಾರೆ ಎಂದು ಪಂಚಾಯತಿಗೆ ಕಂಪ್ಲೇಟ್ ಮಾಡಿದ ಮಾರನೇ ದಿವಸ ಹಾಳಾಗದಿದ್ದ ರಸ್ತೆಗೆ ನಾನು ಹಾಳುಮಾಡಿರದ ರಸ್ತೆಗೆ ಹದಿಮೂರು ಲೋಡ್ ಮಣ್ಣು ನನ್ನ ಸ್ವಂತ ಹಣದಿಂದ ಹಾಕಿದವನು ನಾನು.
ಅಯ್ಯಾ ಇದನ್ನೆಲ್ಲಾ ಯಾಕೆ ರಗಳೆ ಮಾಡುತ್ತೀ ಅಂತ ನೀವು ಕೇಳಬಹುದು. ಇಂದು ಮುಂಜಾನೆ ನನ್ನ ಬ್ಲಾಗ್ ನ ಹಳೇ ಪೋಸ್ಟ್ ನಲ್ಲಿ
"Anonymous said...
Yenidu marayre
http://suvarnaprabhadaily.blogspot.com/
Clarification kodtheera?
-Nimma Abhimaani
ತಲವಾಟ ಗ್ರಾಮದ ಸರ್ವೆ ನಂ ೮೨ ಪಹಣಿಯಲ್ಲಿ "ಹುಲ್ಲುಬನ್ನಿ ಹರಾಜು" ಎಂದು ನಮೂದಾಗಿದೆ. ಹಾಗಾಗಿ ಸರ್ಕಾರಕ್ಕೇ ಇದು ಕೆರೆಯೋ ಹರಾಜೋ ಎಂಬ ಅನುಮಾನ, ಸಮೃದ್ದವಾಗಿ ಅಲ್ಲಿ ಹುಲ್ಲು ಬೆಳೆದಿದೆ ನೀರು ಜನವರಿಗೆ ಖಲಾಸ್.
ನೂರಾರು ವರ್ಷದಿಂದ ಅಲ್ಲಿ ಅಡಿಕೆ ಇಲ್ಲ. ಕೇವಲ ಹತ್ತು ವರ್ಷದಿಂದ ನಾನೇ ಸ್ವತಹ ಅಡಿಕೆ ಸಸಿ ಹಾಕಿದ್ದೆ. ಪಹಣಿಯಲ್ಲಿ ತರಿ ಎಂದೇ ಹಾಗೂ ಬೆ: ಅಡಿಕೆಬಾಳೆ ಎಂದೇ ಬರುತ್ತಿದೆ. ಹಾಗೂ ನನ್ನ ಸ್ವಂತ ವಾಸಕ್ಕಾಗಿ ಬೆಳೆಯಿಲ್ಲದ ಅಡಿಕೆ ಮರ ಬೆಳೆಯದ ಕಲ್ಲು ಜಾಗದಲ್ಲಿ ಮನೆ ಕಟ್ಟಿರುತ್ತೇನೆ. ಒಂದೇ ಒಂದು ಅಡಿಕೆ ಮರವನ್ನೂ ಕಡಿದಿಲ್ಲ. ನನಗೆ ಹುಚ್ಚು ಧೈರ್ಯವೂ ಇಲ್ಲ. ಇನ್ನೂ ಹೋಂ ಸ್ಟೆ ನನಗಿಂತ ಹೆಚ್ಚಿನ ಆಸಕ್ತಿ ಅರ್ಜಿದಾರರಿಗೆ ಇದೆ ಹಾಗೂ ನಾನು ಯಾವ ಸರ್ಕಾರಿ ದಾಖಲೆ ಅಥವಾ ಅರ್ಜಿಯಲ್ಲಿ ಹೋಮ್ ಸ್ಟೆ ಕುರಿತು ಹೇಳಿಲ್ಲ.
ನಾನು ಸರ್ಕಾರಕ್ಕೆ ಅರ್ಜಿ ಹಾಕಿದ್ದು ಹಾಗೂ ಕಟ್ಟಿಸುವ ಉದ್ದೇಶ ವಾಸಕ್ಕಾಗಿ ಎಂದಿದೆ. ಇಷ್ಟಾಗ್ಯೂ ಹೋಂ ಸ್ಟೆ ವ್ಯಾವಾಹಾರಿಕ ವ್ಯಾಪ್ತಿಯಲ್ಲಿ ಬರುವುದಿಲ್ಲ. ನಮ್ಮ ವಾಸದ ಮನೆಯ ಹೆಚ್ಚುವರಿಕೋಣೆಯನ್ನು ಇಷ್ಟಪಟ್ಟವರಿಗೆ ಕೊಡಬಹುದು. ಅದನ್ನು ಸರ್ಕಾರ ಕಾನೂನು ಮಾಡಿ ಅದಕ್ಕೆ ಹೋಂ ಸ್ಟೆ ಎಂಬ ಹೆಸರನ್ನಿಟ್ಟಿದೆ.
ರೆವಿನ್ಯೂ ಕಾನೂನಿನ ೯೫/೧ ರ ಪ್ರಕಾರ ಜಮೀನಿನ ಒಡೆಯನು ಕೃಷಿ ಅಭಿವೃದ್ದಿಗೆ ಪೂರಕವಾಗಿ ಕಟ್ಟಡಗಳನ್ನು ಹಾಗೂ ಬಾವಿಯನ್ನು ನಿರ್ಮಿಸಿಕೊಳ್ಳಬಹುದು, ಅದಕ್ಕೆ ಯಾರ ಪರವಾನಿಗೆಯ ಅವಶ್ಯಕತೆಯಿಲ್ಲ. ಹಾಗೂ ಸದರಿ ರೆವಿನ್ಯೂ ಜಾಗದಲ್ಲಿರುವ ಕಟ್ಟಡಕ್ಕೆ ಕೃಷಿಕನಿಗೆ ಸಾಂವಿಧಾನಿಕ ಹಕ್ಕಾದ್ದರಿಂದ ಗ್ರಾಮ ಪಂಚಾಯ್ತಿಯವರು ಪರವಾನಿಗಿ ನೀಡಲು ಬರುವುದಿಲ್ಲ ಅವರು ಎನ್ ಒ ಸಿ ನೀಡಬಹುದಷ್ಟೆ. ಹಾಗಾಗಿ ಪರವಾನಿಗಿ ನೀಡಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಅದೂ ಕೂಡ ನ್ಯಾಯಾಂಗ ನಿಂದನೆ ಎಂಬುದಲ್ಲ ಸಂವಿಧಾನ ಬಾಹೀರ.
ಇನ್ನು ಅಂತಿಮವಾಗಿ ನನಗೆ ಸದರಿ ತಲವಾಟ ಹಾಗೂ ಹಿರೇಮನೆ ಗ್ರಾಮಸ್ಥರು ಮತ್ತು ತಲವಾಟ ಗ್ರಾಮ ಪಂಚಾಯ್ತಿ ಸಂಪೂರ್ಣ ಬೆಂಬಲ ನೀಡಿದೆ. ಹಿರೇಮನೆ ಗ್ರಾಮವಾಸಿಯಾದ ಹೆಚ್.ಕೆ.ರಾಮಚಂದ್ರ ಬಿನ್ ಕೃಷ್ಣಯ್ಯ ರವರು ವೈಯಕ್ತಿಕ ದ್ವೇಷದಿಂದ ಈ ರೀತಿ ಅರ್ಜಿಗಳನ್ನು ಗುಜರಾಯಿಸಿದ್ದಾರೆ. ಸದರಿ ವ್ಯಕ್ತಿಯು ಕಳೆದವರ್ಷ ಅವರ ಆಪ್ತ್ರರಾದ ಎಚ್ ಡಿ ಅನಂತ ಬಿನ್ ಗಂಗೆ ದತ್ತಪ್ಪ ಎಂಬುವವರು ಹಿರೇಮನೆ ಗಂಗಾವಿಶ್ವೇಶ್ವರ ದೇವಸ್ಥಾನದ ಬಳಕೆಯ ಜಮೀನಿಗೆ ಬೇಲಿ ಹಾಕಿದಾಗ ಅದರ ಪರವಾಗಿ ನನ್ನನ್ನು ಸಹಕರಿಸಿ ಎಂದು ಕೇಳಲು ಬಂದಿದ್ದರು, ನಾನು ಅನ್ಯಾಯಕ್ಕೆ ಸಹಕಾರ ನೀಡುವುದಿಲ್ಲ ಎಂದಿದ್ದಕ್ಕಾಗಿ ಅನಂತರವರ ಹಣಬಲದಿಂದ ನನಗೆ ಹೀಗೆ ಕಳೆದ ಆರುತಿಂಗಳಿನಿಂದ ಕಿರುಕುಳ ನೀಡುತ್ತಿದ್ದಾರೆ.
ಈ ಮೇಲ್ಕಂಡ ಕಾರಣಗಳು ಕೇವಲ ನನ್ನ ಸಮಜಾಯಿಶಿ ಅಲ್ಲ ವಾಸ್ತವ. ಹೆಚ್ಚಿನ ಮಾಹಿತಿ ನೋಡಲು ಅಥವಾ ತಿಳಿಯಲು ಬಯಸಿದಲ್ಲಿ ಖುದ್ದು ಭೇಟಿಯನ್ನೂ ನೀಡಬಹುದು.
ಹೀಗೋಂದು ಕಾಮೆಂಟ್ ಬಿದ್ದದ್ದರಿಂದ ಹೀಗೆ ಸೃಷ್ಟೀಕರಣ ಕೊಡಬೇಕಾಯಿತು. ನಾನು ಕಾನೂನುಬಾಹೀರವಾಗಿ ಯಾವುದೇ ಚಟುವಟಿಕೆಯನ್ನು ಮಾಡಿದ್ದರೆ ನನಗೇನು ಅಧಿಕಾರಿಗಳೇ ಬಂದು ಪ್ರಶ್ನಿಸಬೇಕಿಲ್ಲ. ನನ್ನ ಎಲ್ಲಾ ಕೆಲಸಗಳೂ ಕಾನೂನಿನ ಚೌಕಟ್ಟಿನಲ್ಲಿ ಹಾಗೂ ಸಂವಿಧಾನ ಕೃಷಿಕನಿಗೆ ಕೊಟ್ಟ ಹಕ್ಕಿನ ವ್ಯಾಪ್ತಿಯಲ್ಲಿದೆ. ಇಷ್ಟಕ್ಕೂ ತರಲೆಗಳಿಗೆ ಯಾರೂ ಏನೂ ಮಾಡಲಾಗುವಿದಿಲ್ಲ. ಇನ್ನು ಪತ್ರಿಕೆಯಲ್ಲಿನ ವಿಚಾರ, ಅವರು ಇರುವುದೇ ನಮ್ಮ ತಪ್ಪನ್ನು ತಿದ್ದಲು, ಅಕಸ್ಮಾತ್ ಆಗಿದ್ದರೆ ತಿದ್ದಿಕೊಂಡರಾಯಿತಲ್ಲ. ಆಗದಿದ್ದರೆ ನಮ್ಮ ಪಾಡು ನಮಗೆ.
ಆದರೆ ಮಜ ಎಂದರೆ ಇದೊಂದು ನ್ಯೂಸ್ ನಿಂದ ನನಗೆ ಸಾಗರದ ಹಳೇ ಸ್ನೇಹಿತರು ಒಂದಿಷ್ಟು ಮತ್ತೆ ಸಿಕ್ಕಂತಾಯಿತು. ಸಂಜೆ ಏಳರಿಂದ ಹತ್ತ ರ ತನಕ ಎಂಟು ಫೋನು. "ರಾಘು ನಾವಿದ್ದೇವೆ ಎಷ್ಟು ಹೊತ್ತಿಗೆ ಬೇಕಾದರೂ ಹೇಳು" . ಹಾಗಾಗಿಯೇ ಹೇಳಿದ್ದು ಹಿಂದೆ ...."ನಾವಲ್ಲ ಗ್ರೇಟ್ ಅವರೇ.." ಎಂದು ಮತ್ತು ನಿಂದಕರು ಇರಬೇಕು..... ಆಗಲೇ ನಾವು ಮತ್ತು ನಮ್ಮ ಬುದ್ದಿ ಬೆಳೆಯುವುದು.
