
Wednesday, June 4, 2008
ಊರಲ್ಲಿ ರಂಗ ಪರ ಊರಲ್ಲಿ..

Monday, June 2, 2008
ಮೇಲ್ಮಾತು .......ಹೀಗೆ ಸುಮ್ಮನೆ
Sunday, June 1, 2008
ಬಡ ಬ್ರಾಹ್ಮಣ ಮತ್ತು ಬಡ ಸಾಹಿತಿಗಳಿಬ್ಬರೂ ಬೆಂಕಿಯಂತಂತೆ
Friday, May 30, 2008
ಒಂಟಿತನ ಮತ್ತು ಪ್ರಪಂಚ
Thursday, May 29, 2008
ಹೊನ್ನೇಮರಡು ಪರಿಸರ ಶಿಕ್ಷಣ ಮತ್ತು ನನ್ನ ಮುಚ್ಕಣ್ಣು
ಕಣ್ಣುಮುಚ್ಚಿ ಗಮನಿಸಿ ಕೇಳಿ ಎಂದು ನೊಮಿತೋ ಮೆಡಂ ಹೇಳುತ್ತಾರೆ. ಬಿದಿರುಮಳೆಯಿಂದ ಆವರಿಸಿದ ರೌಂಡ್ ಬಯಲು ಮಂಟಪದಲ್ಲಿ ಬಣ್ಣ ಬಣ್ಣದ ಅಂಗಿತೊಟ್ಟ ಬೆಂಗಳೂರಿನ ಹಾಲುಗಲ್ಲದ ಹಸುಳೆಗಳು ಹಸಿರುಹೊದಿಕೆಯ ಕೆಳಗೆ ಕಣ್ಣುಮುಚ್ಚಿ ಕುಳಿತುಕೊಂಡರು. ನಾನೂ ಅವರ ಜತೆ ಸೇರಿಕೊಂಡೆ , ಚಿಲಿಪಿಲಿ ಹಕ್ಕಿಗಳ ಕೂಗು, ಎಣಿಸುತ್ತಾ ಸಾಗಿದೆ ಹದಿನೆಂಟು ತರಹದ ಕೂಗು ಕೇಳಿಸಿತು. ನೊಮಿತೋ ಮೆಡಂ ಈಗ ಕಣ್ಣು ಬಿಡಿ ಎಂದು ಗಡಸು ದನಿಯಲ್ಲಿ ಹೇಳಿದಾಗ ಒಲ್ಲದ ಮನಸ್ಸಿನಿಂದ ಕಣ್ತೆರೆದೆ. ಅಬ್ಬಾ ಎಷ್ಟೊಂದು ಮಜ. ಅದ್ಯಾವುದೋ ಹೊಸ ಲೋಕಕ್ಕೆ ಬಂದ ಅನುಭವ. ಒಂಟಿಮನೆಯ ಕಾಡಿನ ನಡುವೆಯೇ ವಾಸವಾಗಿರುವ ನಲವತ್ತು ವರ್ಷದ ನಾನು ಇಷ್ಟೊಂದು ಕಾಲವೂ ಹೀಗೆ ಕಣ್ಮಿಚ್ಚಿಕೊಂಡು ಹಕ್ಕಿಯ ಸ್ವರ ಕೇಳಿರಲಿಲ್ಲ . ಗುಜರಾತಿನ ನೊಮಿತು ಬೆಂಗಳೂರಿನ ಸ್ವಾಮಿಯನ್ನು ಮದುವೆಯಾಗಿ ಇಬ್ಬರೂ ಹೊನ್ನೆಮರಡು ಎಂಬ ಕುಗ್ರಾಮಕ್ಕೆ ಬಂದು ನನಗೆ ಇದನ್ನು ಹೇಳಿಕೊಡಬೇಕಾಯಿತು. ಕಣ್ಮುಚ್ಚಿ ದೇವರ ಧ್ಯಾನ ಮಾಡು ಎಂದಾಗ ಹಿರಿಯರ ಅಣತಿ ಮೀರಲಾರದೆ ಹೆದರಿಕೆಯಿಂದ ಕಣ್ಮುಚ್ಚಿಕುಳಿತು ಬೇಡದ ಆಲೋಚನೆ ತಡೆಗಟ್ಟಲಾಗದೆ ಒದ್ದಾಡಿಹೋಗಿದ್ದೆ. ದೇವರ ಎದುರಿನಿಂದ ಎದ್ದೆಳುವಾಗ ದೇಹವೆಲ್ಲಾ ಮಣಭಾರವಾದಂತೆ ಅನ್ನಿಸಿತ್ತು. ಆದರೆ ಈಗ ಹಾಗಲ್ಲ. ದೇವರು ಎಂಬ ವಿಷಯ ನಮ್ಮ ಎಣಿಕೆಗೆ ಸಿಗುವಂತಹದ್ದಲ್ಲ, ಅದರ ಮೊದಲ ಮೆಟ್ಟಿಲು ಪ್ರಕೃತಿಯಿಂದಲೂ ಏರಲು ಸಾಧ್ಯ ಅಂಬ ಸುಲುಬೋಪಾಯವನ್ನು ಹೊನ್ನೇಮರಡುವಿನಲ್ಲಿ ಕಲಿತೆ. ಅದೆಲ್ಲಾ ಇರಲಿ ಬೆಂಗಳೂರಿನ ಎಂಟು ಹತ್ತು ವರ್ಷ ವಯಸ್ಸಿನ ಬೋರ್ಡಿಂಗ್ ಸ್ಕೂಲಿನ ಮಕ್ಕಳು ಮುನ್ನೂರು ಕಿಲೋಮೀಟರ್ ದೂರದ ಹೊನ್ನೆಮರಡುವಿಗೆ ಬಂದು ಪರಿಸರವನ್ನು ಅಭ್ಯಾಸ ಮಾಡುತ್ತಾರೆ. ಈಜು ಕಲಿಯುತ್ತಾರೆ. ಗುಡ್ಡ ಹತ್ತುತ್ತಾರೆ. ನಲಿಯುತ್ತಾರೆ.ಕುಣಿಯುತ್ತಾರೆ. ಮತ್ತೆ ಸವಿನೆನಪಿನೊಂದಿಗೆ ವಾಪಾಸು ಹೋಗುತ್ತಾರೆ. ಇಲ್ಲಿ ಆಟದ ಮೂಲಕ ಪಾಠ ಕಲಿಯುತ್ತಾರೆ. ಇದೇ ಪರಿಸರದಲ್ಲಿನ ನಮ್ಮ ಮಕ್ಕಳು ಟಿ.ವಿ ಬಿಟ್ಟೇಳುವುದಿಲ್ಲ. ಕಾರ್ಟೂನ್ ನೆಟ್ವರ್ಕ್ ತುಂಬಾ ಇಷ್ಟ ಅಂತಾರೆ. ಗೀಜಗ, ಕೆಂಬೂತ ಹಸಿರು ಗಿಳಿ, ರೇಷ್ಮೆ ಹುಳ, ಗೋಪಿ ಹಕ್ಕಿ ಯಾವುದೂ ಅವುಕ್ಕೆ ಗೊತ್ತಿಲ್ಲ.
ತಪ್ಪು ನಮ್ಮದು ಅಂತ ಅನ್ನಿಸುತ್ತದೆ . ಸ್ವರ್ಗದಲ್ಲಿದ್ದ ಅವುಕ್ಕೆ ನಾವು ಕಂಪ್ಯೂಟರ್ ಕಲಿಸಲು ಒದ್ದಾಡುತ್ತೇವೆ. ಕಂಪ್ಯೂಟರ್ ಕೊನೆಗೂ ಕಲಿಯಬಹುದು ಎಂದು ಬೆಂಗಳೂರಿನ ಮಕ್ಕಳು ಪರಿಸರ ಪಾಠ ಕಲಿಯುತ್ತಿವೆ, ಒಟ್ಟನಲ್ಲಿ ದೂರದ ಬೆಟ್ಟ ನುಣ್ಣಗೆ.
Tuesday, May 27, 2008
ಅಪ್ಪಯ್ಯನ ಗಾಯಿತ್ರಿ ಮಂತ್ರ ಮತ್ತು ನನ್ನ ಅಬದ್ಧ ಪ್ರಲಾಪ
Monday, May 26, 2008
ಬಂತು ಮಳೆ . ಚಳಕ್ ಎಂತು ಬೆನ್ನಿನ ಎಳೆ
ಅಂದು ಮೆ ೧೩ ೧೯೯೩. ಹೀಗೆ ಸಂಜೆ ಮಳೆ ಬಂತು. ಮಳೆ ಬಂದ ಸ್ವಲ್ಪ ಹೊತ್ತಿನಲ್ಲಿಯೇ ಕರೆಂಟ್ ಡಮಾರ್. ಕರೆಂಟಿಲ್ಲದೆ ಹೊತ್ತು ಕಳೆಯುವುದು ಎಂದರೆ ಬಲು ಬೇಸರ. ಮೂರು ಫೇಸಿನ ಲೈನ್ ನಲ್ಲಿ ಒಂದು ಫೇಸ್ ಕರೆಂಟು ಇತ್ತು. ಮನೆಗೆ ಕರೆಂಟ್ ತರುವ ಉಮೇದಿನಲ್ಲಿ ಕಂಬ ಹತ್ತಿದೆ. ಕಂಬ ಹತ್ತಿ ಕರೆಂಟ್ ತಂದಿದ್ದು ಅದೇ ಮೊದಲನೇ ಸರಿ ಆಗಿರಲಿಲ್ಲ. ಆದರೆ ಈ ಬಾರಿ ಅದೇನು ವ್ಯತ್ಯಾಸವಾಯಿತೋ ತಿಳಿಯಲಿಲ್ಲ. ಒಂದು ವೈರ್ ತಿರುಗಿ ಕೈಮೇಲೆ ಕುಳಿತುಕೊಂಡಿತು. ಜುಮ ಜುಮ ಇಡೀ ಮೈ ಅದೇನೋ ಆಗುತ್ತಿದೆ. ಕರೆಂಟು ಹೊಡೆಯುತ್ತಿರುವುದು ನಾನು ಕಂಬದ ಮೇಲೆ ಇರುವುದು ಎಲ್ಲಾ ತಿಳಿಯುತ್ತಿದೆ. ಆದರೆ ತಪ್ಪಿಸಿಕೊಳ್ಳಲಾಗುತ್ತಿಲ್ಲ. ಮೂರ್ನಾಲ್ಕು ಅಸಾಹಾಯಕ ಪ್ರಯತ್ನದ ನಡುವೆ ಸಾವಿನಂಚಿನ ಅನುಭವವಾದಂತಾಯಿತು. ಅಂತಹ ಸಂದರ್ಭದಲ್ಲಿ ಮನೆಯವರೆಲ್ಲಾ ನೆನಪಿಗೆ ಬಂದರು. ನನ್ನ ಇಡೀ ದೇಹ ಸಣ್ಣವಾಗುತ್ತಿರುವಂತೆಯೂ ಹಾಗೆ ಹಾಗೂ ಹಗೂರವಾದಂತೆಯೂ ಅನುಭವ ಆಗತೊಡಗಿತು. ಅಂತಹ ಸಂದರ್ಭದಲ್ಲಿಯೂ ಸಾವು ಎಂದರೆ ಇದೇನಾ, ವಾವ್ ಎನ್ನುವ ಅನುಭವ. ನಾನು ಹತ್ತಿದ ಕಂಬದೆದುರು ನಾವು ಸಣ್ಣಕ್ಕಿದ್ದ ಕಾಲದಿಂದಲೂ ನಂಬಿದ ಯಕ್ಷಿ ಬಣ್ಣ ಇತ್ತು ಜುಮ ಜುಮ ಕರೆಂಟಿನ ಷಾಕ್ ನ ನಡುವೆ ಯಕ್ಷಿಬಣ್ಣ ಕಂಡಿತು. ಅದೇನು ಪವಾಡವೋ, ಸತ್ಯವೋ, ಅಥವಾ ನನ್ನ ನಂಬಿಕೆಯೂ ನನಗೆ ಇಂದೂ ಅರ್ಥವಾಗಿಲ್ಲ. ಯಕ್ಷಿಕಲ್ಲು ಕಣ್ಣಿಗೆ ಕಂಡ ಮರುಕ್ಷಣ ನನ್ನ ಕೈಗೆ ತಗುಲಿದ್ದ ವೈರ್ ತಪ್ಪಿತು. ಕಂಬದ ಮೇಲಿಂದ ದಡಾರನೆ ಕೆಳಗೆ ಬಿದ್ದೆ. ೫೦ ಅಡಿ ಕೆಳಗೆ ಬೀಳಬೇಕಾಗಿದ್ದ ಜಾಗದಲ್ಲಿ ಸಣ್ಣ ಗಿಡವೊಂದರ ಕಾರಣದಿಂದ ೨೦ ಅಡಿ ಕೆಳಗೆ ಬಿದ್ದೆ. ಸ್ಪೈನಲ್ ಕಾರ್ಡ್ ಡಮಾರ್ ಅಂತು. ಅಲ್ಲಿಂದ ಸಾಗರಕ್ಕೆ ನಂತರ ಮಣಿಪಾಲಿಗೆ ೧೫ ದಿವಸದ ನಂತರ ವಾಪಾಸು ಮನೆಗೆ ಆನಂತರ ಮೂರು ತಿಂಗಳು ಅಪೂಟ್ ಬೆಡ್ ರೆಸ್ಟ್. ಮತ್ತೆ ನಂತರವೆಂದರೆ ಹಾಗೂ ಅದರ ಕೊಡುಗೆಯೆಂದರೆ ಈ ಗಳಿಗೆಯವರೆಗೂ ನಿರಂತರ ಕಾಡುವ ಬೆನ್ನು ನೋವು. ಆ ನೋವನ್ನು ಸಹಿಸಬಹುದು ೩೬ ಹರೆಯದ ಭಟ್ಟು ಬಾಯಿ ಕ್ಯಾನ್ಸರ್ ಬಂದು ಆಲೋಪತಿಯೆಲ್ಲಾ ಮೋಸ ನಾಟಿಯೇ ಸರಿ ಎಂದು ಮೂರುತಿಂಗಳಿಂದ ಚಕ್ಕೆ ತೆಯ್ದು ಹಚ್ಚುತ್ತಾ ಶೀಘ್ರದಲ್ಲಿಯೇ ಹುಷಾರಾಗ್ತು ನೋಡು ಎನ್ನುತ್ತಾ ಮಲಗಿದ್ದಾನೆ. ಅದಕ್ಕಿಂತ ಈ ನೋವೇ ಎಷ್ಟೋ ವಾಸಿ ಎಂಬ ಸಮಾಧಾನ.
ಇದು ಒಂದು ಗಳಿಗೆಯ ಕರೆಂಟ್ ಪಡೆಯಲು ಹೋದ ಕತೆ. ಕೆ.ಇ.ಬಿ ಯವರು ಕೇಸ್ ಹಾಕುತ್ತಾರೆ ಎಂದು ಯಾರೋ ಹೇಳಿದ್ದರಿಂದ. ಮನೆಯ ಆಂಟೆನಾ ಸರಿಮಾಡಲು ಹೋಗಿ ಕೆಳಗೆ ಬಿದ್ದೆ ಎಂಬ ಹಸಿ ಸುಳ್ಳು ಹೇಳಯಾಯಿತು. ಇವತ್ತು ಆವತ್ತಿನ ತರಹದ್ದೇ ಮಳೆ ಬಂದಿದೆ ಇನ್ನು ಯಾರಿಗೆ ಕಾದಿದೆಯೋ...