Saturday, November 5, 2011
ಗೊತ್ತಿಲ್ಲ ಗುರಿಯಿಲ್ಲ...!
ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆಯೂ ಇರಬಹುದು. ಆದರೆ ಒಂದಂತೂ ಸತ್ಯ "ಜೀವನದಲ್ಲಿ ಭವಿಷ್ಯದ ಪ್ರಶ್ನೆಗಳಿಗೆ" ಸಮರ್ಪಕವಾದ ಉತ್ತರವೆಂದರೆ "ಗೊತ್ತಿಲ್ಲ" ಎಂಬುದು. ಅರೆ ಹೌದೇ ಹೌದು ಅಂತಲೂ ಅಥವಾ ಅಲ್ಲವೇ ಅಲ್ಲ ಅಂತಲೂ ಎಲ್ಲರಿಗೂ ಅವರವರದೇ ಆದ ತರ್ಕದ ರೀತಿಯಲ್ಲಿ ಅನ್ನಿಸಿದರೂ ಅನ್ನಿಸದಿದ್ದರೂ ಉತ್ತರ ಮಾತ್ರಾ ಅದೇ. ಆದರೆ ಮಜ ಎಂದರೆ ಆ ಮೂರಕ್ಷರದ ಉತ್ತರ ಹೇಳಿ ನಿರುಂಬಳವಾಗಿ ಕುಳಿತುಕೊಳ್ಳಲು ಮನಸ್ಸೆಂಬ ಮನಸ್ಸು ಬಿಡುವುದಿಲ್ಲ. ಹಾಗೆ ಬಿಡದಿದ್ದ ಪರಿಣಾಮ ವಾಗಿ ಗುರಿ ನಿಶ್ಚಿತಗೊಳ್ಳುತ್ತದೆ. ಯಾವಾಗ ಗುರಿ ನಿಶ್ಚಿತಗೊಂಡಿತೋ ಅಲ್ಲಿಗೆ ನಾವು ನೀವು ಗೊತ್ತಿಲ್ಲ ಅನ್ನುವಂತಿಲ್ಲ. ಆದರೂಕೂಡ ಗೊತ್ತಿಲ್ಲ ಎನ್ನುವುದೂ ಸತ್ಯವಂತೂ ಹೌದು. ಹಾಗಾದರೆ ಹೀಗೆ ಮಾಡೋಣ ಗುರಿ ನಿಶ್ಚಯಿಸೋಣ ಗೊತ್ತಿಲ್ಲ ಅನ್ನೋಣ. ಅಯ್ಯ ಅದೇಗೆ ಸಾದ್ಯ?, ಗುರಿ ಎಂಬುದು ನಿಶ್ಚಯವಾದಮೇಲೆ ಗೊತ್ತಿಲ್ಲ ಎಂದರೆ ಅದಕ್ಕೆ ನೆಗೇಟೀವ್ ಅಟ್ಯಾಚ್ ಆಗುತ್ತದೆ. ಅಲ್ಲಿಗೆ ಅದು ಗುರಿಯಮೇಲೆ ಪರಿಣಾಮ ಬೀರಬಹುದು. ಸರಿಬಿಡಿ ಗೊತ್ತಿಲ್ಲ ಅನ್ನುವುದು ಬೇಡ ಗುರಿ ನಿಶ್ಚಯಿಸಿ ಸುಮ್ಮನಿದ್ದುಬಿಡೋಣ ಅಥವಾ ಸುಲಭವಾಗಿ ಗೊತ್ತಿಲ್ಲ ಅಂದುಬಿಡೋಣ ಎಂಬಲ್ಲಿಗೆ ಗೊತ್ತಿಲ್ಲ ಗುರಿಯಿಲ್ಲ ಎಂಬುದರ ವ್ಯಾಖ್ಯಾನ ಮುಕ್ತಾಯವು. ಇದನ್ನು ಓದಿದ ನಂತರ ಸಿಕ್ಕಾಪಟ್ಟೆ ಗೊಂದಲಕ್ಕೆ ಬಿದ್ದರೆ "ಗೊತ್ತಿಲ್ಲ" ಎನ್ನಿ ಇಲ್ಲದಿದ್ದರೆ ಗುರಿ ಇದೆ ಎನ್ನಿ....!/.
Saturday, October 29, 2011
"ಬ್ಲಾಗ್ ಬರಹ" ಬಿಡುಗಡೆಯಾಯಿತು.
ಕಾರ್ಯಕ್ರಮ ಚನ್ನಾಗಿ ನಡೆಯಿತು. ಎಂಟುಗಂಟೆಗೆ ಧಾರಾಕಾರ ಮಳೆ, ಆದರೂ ಕರೆಂಟು ಹೋಗಲಿಲ್ಲ. ವಿ ಎಸ್ ಹೆಗಡೆ ಬೊಂಬಾಟ್ ಮಾತನಾಡಿದರು( ನನ್ನ ಹೊಗಳಿದ್ದು ಎಂಬ ಒಂದೇ ಕಾರ್ಣಕ್ಕೆ ಅಲ್ಲ....!) ತಿನ ಶ್ರಿನಿವಾಸ, ಹಿತಕರ ಜೈನ್, ಲಲಿತಾ ನಾರಾಯಣ್, ಶಾಂಭವಿ ಹಾಗೂ ಎಂಬತ್ತು ಜನ ಪ್ರೇಕ್ಷಕರ ಸಮ್ಮುಖದಲ್ಲಿ "ಬ್ಲಾಗ್ ಬರಹ" ಬಿಡುಗಡೆಯಾಯಿತು.
ಇನ್ನು ನೀವು ಸಿಕ್ಕಾಗ ಇದೊಂದು ಪುಸ್ತಕ ಕೊಡುವ ಕೆಲಸ ಇದೆ. ಸೂಪರ್ ಅಂತ ನಿಮ್ಮ ಬಾಯಿಂದ ಬರುತ್ತೆ ಅಂತ ಗೊತ್ತು. ಅದಕ್ಕೆ ಅಡ್ವಾನ್ಸ್ ತ್ಯಾಂಕ್ಸ್.
Tuesday, October 25, 2011
........ಎಂಬುದು ನನ್ನ ಮುನ್ನುಡಿ
"ನನಗೆ ಗೊತ್ತಿಲ್ಲ" ಎಂಬ ಸರಳ ವಾಕ್ಯದೊಡನೆ ಜೀವನವನ್ನು ಸ್ವಾಗತಿಸಿದರೆ ಮಾಹಿತಿಗಳು ದಶದಿಕ್ಕಿನಿಂದ ನಮ್ಮನ್ನು ಆವರಿಸಿಕೊಳ್ಳತೊಡಗುತ್ತದೆ. ಅಂತಹ ಮಾಹಿತಿಗಳಲ್ಲಿ ನಮಗೆ ಬೇಕಾದ್ದನ್ನು ಜತನವಾಗಿಟ್ಟುಕೊಂಡು ಮಿಕ್ಕಿದ್ದನ್ನು ಉಫ಼್ ಎನ್ನಿಸುವ ತಾಕತ್ತು ಇದ್ದರೆ ಬದುಕು ಸುಂದರ ಜೀವನ ಸುಮಧುರ. ಈ ಸುಂದರ ಜೀವನ ಎಂಬುದು ಮಗದೊಮ್ಮೆ ಅವರವರ ಕಲ್ಪನೆಯ ಕೂಸು. ಕಲ್ಪನಾ ಶಕ್ತಿ ಎಷ್ಟರಮಟ್ಟಿಗೆ ಇದೆ ಎಂಬ ವಿಷಯವನ್ನವಲಂಬಿಸಿ ತರ್ಕಕ್ಕೆ ಒಡ್ಡಿ ಕಡೆದು ಮೊಸರು ಬೆಣ್ಣೆಯನ್ನು ತೆಗೆದು ಉಳಿದ ಮಜ್ಜಿಗೆಯನ್ನೂ ಗುಟುಕರಿಸುವ ಶಕ್ತಿ ಆಯಾ ಮನುಷ್ಯರ ಚೈತನ್ಯಕ್ಕೆ ಸಂಬಧಿಸಿದ ವಿಚಾರ.
ಎಲ್ಲರ ಬದುಕೂ ಹುಟ್ಟಿನಿಂದ ಸಾವಿನವರೆಗೂ ಘಟನೆಗಳ ಸರಮಾಲೆಯೇ. ನಮ್ಮೀ ದೇಹವೆಂಬ ಬಳ್ಳಿಯ ಸುತ್ತ ಘಟನೆಗಳು ತನ್ನಷ್ಟಕ್ಕೇ ನಡೆಯುತ್ತವೆಯೋ, ಅಥವಾ ಅದರ ಸೃಷ್ಟಿಕರ್ತರು ನಾವೋ ಎಂಬುದು ನಿಖರವಾದ ಉತ್ತರವಿಲ್ಲದ ಪ್ರಶ್ನೆ. ನಮ್ಮ ಪಂಚೇಂದ್ರಿಯಗಳ ಮೂಲಕ ಗ್ರಹಿಸುವ ವಿಷಯಗಳನ್ನು ವಿಚಾರಗಳನ್ನು ಮೂರನೆಯವರಾಗಿ ಕುಳಿತು ವಿವೇಚನೆಗೆ ಹರಿಬಿಟ್ಟಾಗ ಸೃಷ್ಟಿಯ ಎತ್ತರ ಆಳದ ಬಗ್ಗೆ ಹಾಗೂ ಅಗಾಧ ಶಕ್ತಿಯ ಬಗ್ಗೆ ಅರೆಕ್ಷಣ ಅಚ್ಚರಿಮೂಡದಿರದು. ಈ ಎಲ್ಲಾ ಸಮಗ್ರವನ್ನೂ ಎಲ್ಲರೂ ದಾಖಲಿಸುತ್ತಾ ಸಾಗಿದರೆ ಅದು ಅಂತ್ಯವಿಲ್ಲದ ಅಳತೆಯ ಬೃಹತ್ ಗ್ರಂಥವಾಗಿಬಿಡಬಹುದು. ಹಿಗೆಲ್ಲಾ ಅನಾಹುತಕ್ಕೆ ಭಗವಂತ ಅಣತಿ ನೀಡಲಾರ. ಎಲ್ಲರ ಅನುಭವಾಮೃತವನ್ನೂ ಮತ್ತೊಬ್ಬರಿಗೆ ಹಂಚಿಕೊಳ್ಳಲು ಅವಕಾಶ ನೀಡಲಾರ. ಹಾಗಂತ ಹಠ ಹಿಡಿದವನ ಆಸೆಯನ್ನು ಪೂರೈಸದೇಯೂ ಇರಲಾರ. ಹಾಗೆ ಆ ಸೃಷ್ಟಿಕರ್ತ ಪೂರೈಸಿದ ನನ್ನ ಆಸೆ ಈಗ ನಿಮ್ಮ ಕೈಯಲ್ಲಿರುವ "ಬ್ಲಾಗ್ ಬರಹಗಳು".
ಇದರೊಳಗೆ ಏನಿದೆ ಏನಿಲ್ಲ ಎನ್ನುವುದಕ್ಕಿಂತ ನಾನು ಕಂಡಿರುವ ನೋಡಿರುವ ಕೇಳಿರುವ ಘಟನೆಗಳ ಸಣ್ಣದೊಂದು ಗುಚ್ಛವಿದೆ ಅನ್ನಬಹುದು. ಇದು ಎಷ್ಟರಮಟ್ಟಿಗೆ ನಿಮಗೆ ನಿಮ್ಮ ಜೀವನಕ್ಕೆ ಸಹಾಯವಾಗುತ್ತದೆಯೋ ನನಗೆ ಗೊತ್ತಿಲ್ಲ. ನನಗಂತೂ ಮನಸ್ಸಿಗೆ ಅದೇನೋ ಆನಂದಭಾವವನ್ನು ತಂದಿಡುತ್ತದೆ. ನನ್ನ ಈ ಆನಂದಕ್ಕೆ ಸಹಕರಿಸಿದ ನಿಮಗೆ, ಮುದ್ರಿಸಿದ ಗಣಪತಿ ಪ್ರಿಂಟರ್ಸ್ ಹಾಗೂ ಸಿಬ್ಬಂದಿಗೆ, ವಿಶೇಷವಾಗಿ ವೇಣುಮಾಧವನಿಗೆ, ನನ್ನ ಮನೆಯವರಿಗೆ, ನೆಂಟರಿಷ್ಟರಿಗೆ, ಕಟ್ಟೆ ಮಿತ್ರರಿಗೆ, ತಲವಾಟ ಗ್ರಾಮಪಂಚಾಯ್ತಿ ಅಧ್ಯಕ್ಷರು ಸದಸ್ಯರು ಹಾಗೂ ಜನರಿಗೆ, ೨೦೦೮ ರಿಂದಲೂ ನನ್ನ ಬ್ಲಾಗನ್ನು ನೆಟ್ ಲ್ಲಿ ಓದುತ್ತಾ ಕಾಮೆಂಟ್ ದಾಖಲಿಸುತ್ತಾ ಬಂದಿರುವವರಿಗೆ ಹಾಗೂ ಬ್ಲಾಗ್ ಮಿತ್ರರಿಗೆ, ಉಚಿತವಾಗಿ ತಾಣ ಒದಗಿಸಿಕೊಟ್ಟ ಗೂಗಲ್ ನವರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಅನಂತಾನಂತ ವಂದನೆಗಳು. ಕಾನೂನಿನ ಕೆಳಗೆ ತೂರಿಕೊಳ್ಳಲು ಕಾನೂನು ಇದೆಯಂತೆ ಆದರೆ ಮನುಷ್ಯಧರ್ಮದ ಕೆಳಗೆ ಮತ್ತೆ ಇರುವುದು ಮನುಷ್ಯಧರ್ಮವೇ ಅಂತೆ. ಹಾಗಾಗಿ ಆ ಸೃಷ್ಟಿಕರ್ತನ ಹತ್ತಿರ ನನ್ನ ನಿತ್ಯ ಬೇಡಿಕೆ "ಹೇ ಭಗವಂತಾ, ಇಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳು ಆಗಬೇಕಿದೆ, ಅದು ನನ್ನ ಮೂಲಕ ಆಗಲಿ, ತನ್ಮೂಲಕ ನನಗೆ ನೆಮ್ಮದಿ ಸಿಗಲಿ" ಎಂಬ ನನ್ನದೂ ಸ್ವಾರ್ಥವನ್ನೂ ಸೇರಿಸುತ್ತಾ ನಿಮಗೆ ನನ್ನ ಬರಹಕ್ಕೆ ಸ್ವಾಗತ,
-ಆರ್.ಶರ್ಮಾ.ತಲವಾಟ
೯೩೪೨೨೫೩೨೪೦
ಎಲ್ಲರ ಬದುಕೂ ಹುಟ್ಟಿನಿಂದ ಸಾವಿನವರೆಗೂ ಘಟನೆಗಳ ಸರಮಾಲೆಯೇ. ನಮ್ಮೀ ದೇಹವೆಂಬ ಬಳ್ಳಿಯ ಸುತ್ತ ಘಟನೆಗಳು ತನ್ನಷ್ಟಕ್ಕೇ ನಡೆಯುತ್ತವೆಯೋ, ಅಥವಾ ಅದರ ಸೃಷ್ಟಿಕರ್ತರು ನಾವೋ ಎಂಬುದು ನಿಖರವಾದ ಉತ್ತರವಿಲ್ಲದ ಪ್ರಶ್ನೆ. ನಮ್ಮ ಪಂಚೇಂದ್ರಿಯಗಳ ಮೂಲಕ ಗ್ರಹಿಸುವ ವಿಷಯಗಳನ್ನು ವಿಚಾರಗಳನ್ನು ಮೂರನೆಯವರಾಗಿ ಕುಳಿತು ವಿವೇಚನೆಗೆ ಹರಿಬಿಟ್ಟಾಗ ಸೃಷ್ಟಿಯ ಎತ್ತರ ಆಳದ ಬಗ್ಗೆ ಹಾಗೂ ಅಗಾಧ ಶಕ್ತಿಯ ಬಗ್ಗೆ ಅರೆಕ್ಷಣ ಅಚ್ಚರಿಮೂಡದಿರದು. ಈ ಎಲ್ಲಾ ಸಮಗ್ರವನ್ನೂ ಎಲ್ಲರೂ ದಾಖಲಿಸುತ್ತಾ ಸಾಗಿದರೆ ಅದು ಅಂತ್ಯವಿಲ್ಲದ ಅಳತೆಯ ಬೃಹತ್ ಗ್ರಂಥವಾಗಿಬಿಡಬಹುದು. ಹಿಗೆಲ್ಲಾ ಅನಾಹುತಕ್ಕೆ ಭಗವಂತ ಅಣತಿ ನೀಡಲಾರ. ಎಲ್ಲರ ಅನುಭವಾಮೃತವನ್ನೂ ಮತ್ತೊಬ್ಬರಿಗೆ ಹಂಚಿಕೊಳ್ಳಲು ಅವಕಾಶ ನೀಡಲಾರ. ಹಾಗಂತ ಹಠ ಹಿಡಿದವನ ಆಸೆಯನ್ನು ಪೂರೈಸದೇಯೂ ಇರಲಾರ. ಹಾಗೆ ಆ ಸೃಷ್ಟಿಕರ್ತ ಪೂರೈಸಿದ ನನ್ನ ಆಸೆ ಈಗ ನಿಮ್ಮ ಕೈಯಲ್ಲಿರುವ "ಬ್ಲಾಗ್ ಬರಹಗಳು".
ಇದರೊಳಗೆ ಏನಿದೆ ಏನಿಲ್ಲ ಎನ್ನುವುದಕ್ಕಿಂತ ನಾನು ಕಂಡಿರುವ ನೋಡಿರುವ ಕೇಳಿರುವ ಘಟನೆಗಳ ಸಣ್ಣದೊಂದು ಗುಚ್ಛವಿದೆ ಅನ್ನಬಹುದು. ಇದು ಎಷ್ಟರಮಟ್ಟಿಗೆ ನಿಮಗೆ ನಿಮ್ಮ ಜೀವನಕ್ಕೆ ಸಹಾಯವಾಗುತ್ತದೆಯೋ ನನಗೆ ಗೊತ್ತಿಲ್ಲ. ನನಗಂತೂ ಮನಸ್ಸಿಗೆ ಅದೇನೋ ಆನಂದಭಾವವನ್ನು ತಂದಿಡುತ್ತದೆ. ನನ್ನ ಈ ಆನಂದಕ್ಕೆ ಸಹಕರಿಸಿದ ನಿಮಗೆ, ಮುದ್ರಿಸಿದ ಗಣಪತಿ ಪ್ರಿಂಟರ್ಸ್ ಹಾಗೂ ಸಿಬ್ಬಂದಿಗೆ, ವಿಶೇಷವಾಗಿ ವೇಣುಮಾಧವನಿಗೆ, ನನ್ನ ಮನೆಯವರಿಗೆ, ನೆಂಟರಿಷ್ಟರಿಗೆ, ಕಟ್ಟೆ ಮಿತ್ರರಿಗೆ, ತಲವಾಟ ಗ್ರಾಮಪಂಚಾಯ್ತಿ ಅಧ್ಯಕ್ಷರು ಸದಸ್ಯರು ಹಾಗೂ ಜನರಿಗೆ, ೨೦೦೮ ರಿಂದಲೂ ನನ್ನ ಬ್ಲಾಗನ್ನು ನೆಟ್ ಲ್ಲಿ ಓದುತ್ತಾ ಕಾಮೆಂಟ್ ದಾಖಲಿಸುತ್ತಾ ಬಂದಿರುವವರಿಗೆ ಹಾಗೂ ಬ್ಲಾಗ್ ಮಿತ್ರರಿಗೆ, ಉಚಿತವಾಗಿ ತಾಣ ಒದಗಿಸಿಕೊಟ್ಟ ಗೂಗಲ್ ನವರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಅನಂತಾನಂತ ವಂದನೆಗಳು. ಕಾನೂನಿನ ಕೆಳಗೆ ತೂರಿಕೊಳ್ಳಲು ಕಾನೂನು ಇದೆಯಂತೆ ಆದರೆ ಮನುಷ್ಯಧರ್ಮದ ಕೆಳಗೆ ಮತ್ತೆ ಇರುವುದು ಮನುಷ್ಯಧರ್ಮವೇ ಅಂತೆ. ಹಾಗಾಗಿ ಆ ಸೃಷ್ಟಿಕರ್ತನ ಹತ್ತಿರ ನನ್ನ ನಿತ್ಯ ಬೇಡಿಕೆ "ಹೇ ಭಗವಂತಾ, ಇಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳು ಆಗಬೇಕಿದೆ, ಅದು ನನ್ನ ಮೂಲಕ ಆಗಲಿ, ತನ್ಮೂಲಕ ನನಗೆ ನೆಮ್ಮದಿ ಸಿಗಲಿ" ಎಂಬ ನನ್ನದೂ ಸ್ವಾರ್ಥವನ್ನೂ ಸೇರಿಸುತ್ತಾ ನಿಮಗೆ ನನ್ನ ಬರಹಕ್ಕೆ ಸ್ವಾಗತ,
-ಆರ್.ಶರ್ಮಾ.ತಲವಾಟ
೯೩೪೨೨೫೩೨೪೦
Monday, October 24, 2011
ಕರುಳು ಚುರುಕ್ ಎನ್ನುತ್ತದೆ
ನಮ್ಮ ಮಲೆನಾಡು ಈಗ ಅತ್ಯಂತ ಸುಂದರ. ಮಳೆಗಾಲ ಮುಗಿದಿದೆ ಚಳಿಗಾಲ ಶುರುವಾಗಿಲ್ಲ. ಬೆಳಿಗ್ಗೆ ಎಂಟರತನಕ ಇಬ್ಬನಿಯ ರಂಗು, ಅದರ ನಡುವೆ ಸೂರ್ಯನ ಇಣುಕು. ಎಲ್ಲೆಲ್ಲಿಯೂ ಹಸಿರು ಹಸಿರು ಹಸಿರು. ಕೆರೆಕಟ್ಟೆಗಳು ತುಂಬಿ ತುಳುಕಾಡುತ್ತಲಿರುತ್ತವೆ. ಶುದ್ಧ ನೀರಿನ ಜುಳುಜುಳು ಸದ್ದು, ವಲಸೆ ಹಕ್ಕಿಗಳ ಹಾರಾಟ, ಕಾಡುಕೋಳಿಗಳ, ಕೆರೆಬಾತುಕೋಳಿಗಳ, ಚೀರಾಟ. ಸರಿ ಸರಿ ಇಲ್ಲಿಯವರೆಗೆ ಒಂಥರಾ ಒಳ್ಳೆಯ ಪದಗಳಿತ್ತು ಈಗ ಇದ್ದಕ್ಕಿದ್ದಂತೆ ಚೀರಾಟ ಎಂಬ ಪದ ಬಂದು ಒಂಥರಾ ಇರಿಸುಮುರಿಸಾಯಿತಿರಬೇಕು ನಿಮಗೆ, ಅದಕ್ಕೆ ಕಾರಣಗಳಿವೆ ಹೇಳುತ್ತೇನೆ ಕೇಳಿ.
ಮಳೆಗಾಲ ಮುಗಿಯುತ್ತಿದ್ದಂತೆ ಬಯಲುಸೀಮೆಯಿಂದ ಅದ್ಯಾವುದೋ ತಂಡ ಪ್ರತೀ ವರ್ಷ ಈ ಸಮಯಕ್ಕೆ ಸರಿಯಾಗಿ ಊರಮುಂದೆ ಬಂದು ಟೆಂಟ್ ಹಾಕುತ್ತದೆ. ಹತ್ತೆಂಟು ಜನರ ಆ ತಂಡದಲ್ಲಿ ಹಿರಿಯರು ಮೂರ್ನಾಲ್ಕು, ಯುವಕರು ಮತ್ತೆ ಮೂರ್ನಾಲ್ಕು ಚಿಳ್ಳೆಪಿಳ್ಳೆ ಮೂರ್ನಾಲ್ಕು ಹಾಗೂ ಒಂದಿಬ್ಬರು ಹೆಂಗಸರು. ಅವರ ತಂಡ ಬಂತೆಂದರೆ ನನಗೆ ಮಾತ್ರಾ ಕರುಳು ಚುರುಕ್ ಎನ್ನುತ್ತದೆ. ಕಾರಣ ಅವರು ನಮ್ಮ ಹಳ್ಳಿಯ ಸುತ್ತಮುತ್ತ ಕಾಡಿನಲ್ಲಿರುವ ಕೋಳಿ ಹಾಗೂ ಕೆರೆಯಲ್ಲಿರುವ ಬಾತುಕೋಳಿಯನ್ನು ಬೆನ್ನೆತ್ತಿ ಬೇಟೆಯಾಡುತ್ತಾರೆ. ಅವರು ಬೇಟೆಯಲ್ಲಿ ನಿಸ್ಸೀಮರು. ಬಗಲಲ್ಲಿ ಕವಣೆ ಕೈಯಲ್ಲಿ ಚೀಲ ಹಿಡಿದು ಹೊರಟರೆಂದರೆ ವಾಪಾಸು ಚೀಲ ಫುಲ್ ಕೋಳಿ ಗ್ಯಾರಂಟಿ. ಅವುಕ್ಕೆ ಕೋಳಿಯೇ ಆಗಬೇಕೆಂದಿಲ್ಲ ಏನಾದರೂ ಆದಿತು. ಮೊನ್ನೆ ನಮ್ಮ ಗ್ರಾಮಪಂಚಾಯಿತಿಯ ಗಿಡ್ಡ ಗೊಣಗುತ್ತಿದ್ದ. ನಮ್ಮ ಪಂಚಾಯ್ತಿಗೆ ಬರುತ್ತಿದ್ದ ಬೆಕ್ಕು ಪತ್ತೆಯೇ ಇಲ್ಲ ಮಾರಾಯರೇ", ಎಂಬಲ್ಲಿಗೆ ವಿಶೇಷ ಅಡುಗೆಯಾಗಿ ಅಲ್ಲಿಯೇ ಪಕ್ಕದಲ್ಲಿ ಡರ್ ತೇಗಿನ ಮುಖಾಂತರ ಹೊರಡುತ್ತಿದೆ ಬೆಕ್ಕು.
ಕೊಂದ ಪಾಪ ತಿಂದು ಪರಿಹಾರವಂತೆ ನಾವು ಅದನ್ನೆಲ್ಲಾ ಕಂಡೂ ಕಾಣದಂತೆ ಇರುವುದು ಕ್ಷೇಮ, ಹೇಳಲು ಹೋದರೆ ವಿವಾದವಾದರೂ ಆದೀತೆ. ಹಾಗಾಘಿ ನಾವು ನೀವೆಲ್ಲ ಯಥಾಪ್ರಕಾರ " ಆಹಾ ಎಂತಹ ಹಸಿರು, ಎಂಥಹಾ ಇಬ್ಬನಿ" ಎನ್ನುತ್ತಾ ಇದ್ದುಬಿಡೋಣ, ಏನಂತೀರಿ?.
Friday, October 21, 2011
ಅದಕ್ಕೆ ಸರ್ಕಾರ ಸಂಬಳ ಕೊಡುತ್ತೆ’
ಈಗ ಆರು ತಿಂಗಳಿಂದೀಚೆಗೆ ನನಗೆ ಹೊಸ ಹೊಸ ಜನರ ಹೊಸ ಹೊಸ ಪ್ರಪಂಚದ ಅನಾವರಣ. ಅದರಲ್ಲೊಂದು ಇದು. ನನಗೆ ರೆವಿನ್ಯೂ ಡಿಪಾರ್ಟ್ ಮೆಂಟಿನಿಂದ ವಂಶವೃಕ್ಷ, ಹಿಡುವಳಿ ಪ್ರಮಾಣಪತ್ರ ಹಾಗೂ ಆದಾಯಪ್ರಮಾಣ ಪತ್ರ ಬೇಕಿತ್ತು. ಸರಿ ಮಾಮೂಲಿಯಂತೆ ಅರ್ಜಿ ಬರೆದು ನೆಮ್ಮದಿಕೇಂದ್ರಕ್ಕೆ ಸಲ್ಲಿಸಿದೆ. ಜನಸಾಮಾನ್ಯರು ಹೇಳುವಂತೆ ಸರ್ಕಾರದ ಇಲಾಖೆಯೆಂದರೆ ಲಂಚ ತಡ ಮುಂತಾದ ಆರೋಪ ನನ್ನ ಮನಸಿನಾಳದಲ್ಲಿಯೂ ಹುಗಿದಿತ್ತು. ನೆಮ್ಮದಿ ಕೇಂದ್ರದಾಕೆ ನನ್ನ ಮೊಬೈಲ್ ನಂಬರ್ ಅರ್ಜಿಯಲ್ಲಿ ಬರೆಯಿಸಿಕೊಂಡು ಎಂಡಾಸ್ ಮೆಂಟ್ ಕೊಟ್ಟಳು. ಸರಿಯಾಗಿ ಎಂಟು ದಿವಸಕ್ಕೆ ಮೊಬೈಲ್ ಗೆ ಎಸ್ ಎಂ ಎಸ್ ಬಂತು ಯುವರ್ ಸರ್ಟಿಫಿಕೇಟ್ ಈಸ್ ರೆಡಿ, ಪ್ಲೀಸ್ ಕಲೆಕ್ಟ್ ಪ್ರಂ ನೆಮ್ಮದಿಕೇಂದ್ರ" ಎಂದು.
ಬೆಳಿಗ್ಗೆ ಹತ್ತೂವರೆಗೆ ತಾಳಗುಪ್ಪದ ನೆಮ್ಮದಿ ಕೇಂದ್ರದ ಬಾಗಿಲಲ್ಲಿ ನಿಂತೆ. ಎಸ್ ಎಂ ಎಸ್ ನಂಬರ್ ಕೇಳಿದ ಆಕೆ ಚಕಚಕನೆ ಪ್ರಿಂಟ್ ಔಟ್ ಕೊಟ್ಟಳು ಪ್ರಮಾಣ ಪತ್ರದ್ದು. ಸರ್ಕಾರಿ ಫೀ ಹತ್ತು ರೂಪಾಯಿಯನ್ನಷ್ಟೇ ಕೇಳಿದ್ದು ಮತ್ತು ನಾನು ಕೊಟ್ಟಿದ್ದು. ಎಂಬಲ್ಲಿಗೆ ಲಂಚದ ಕಿಂಚಿತ್ತೂ ಬೇಡಿಕೆಯಿಲ್ಲದೆ ನನಗೆ ಎಂಟು ದಿವಸದೊಳಗೆ ಸಿಕ್ಕ ಖುಷಿಯಲ್ಲಿ "ಮೇಡಂ ನಿಮ್ಮ ಡಿಪಾರ್ಟ್ ಮೆಂಟ್ ಅಂದ್ರೆ ಲಂಚ ಅಂತಾರಲ್ಲ , ನನಗೆ ಅಂತ ಅನುಭವ ಆಗಲೇ ಇಲ್ಲವಲ್ಲ ಎಂದೆ" . ಏನಪ್ಪ ಎಂದು ಮುಗಳ್ನಕ್ಕಳು ಆಕೆ,
ಇನ್ನು ವಂಶವೃಕ್ಷದ್ದು ಕತೆ. ಅದನ್ನ ವಿಲೇಜ್ ಅಕೌಂಟೆಟ್ ಹತ್ತಿರ ಖುದ್ದಾಗಿ ಪಡೆದುಕೊಳ್ಳಬೇಕು, ನೆಮ್ಮದಿ ಕೇಂದ್ರದ ಅವಶ್ಯಕತೆ ಅದಕ್ಕಿಲ್ಲ. ಸೀದಾ ವಿ ಎ ಹತ್ತಿರ ಹೋಗಿ ವಂಶವೃಕ್ಷದ ಬೇಡಿಕೆ ಇಟ್ಟೆ. ಕ್ಷಣ ಮಾತ್ರದಲ್ಲಿ ಅವರದೇ ಹಾಳೆ ಅವರದೇ ಪೆನ್ ನಲ್ಲಿ ನನ್ನ ವಂಶವೃಕ್ಷ ಕೈ ಸೇರಿತು. ಓಹ್ ಇದಕ್ಕೆ ನಾನು ಲಂಚ ಕೊಡಬೇಕೇನೋ ಎಂದು ಐವತ್ತರ ಒಂದು ನೋಟು ಅಂಜುತ್ತಾ ಕೊಡಲು ಹೋದೆ. ವಿ ಎ ಮಂಜುಳಾ ಮೇಡಂ "ಹಣ ಯಾಕೆ?’ ಅಂದರು. ನಾನು ಹಾಂ ಅದೂ ಇದೂ ಅಂದೆ. ನೋಡಿ ನಾನು ನನ್ನ ಡ್ಯೂಟಿ ಮಾಡಿದ್ದೇನೆ, ಅದಕ್ಕೆ ಸರ್ಕಾರ ಸಂಬಳ ಕೊಡುತ್ತೆ’ ಅಂತ ಅಂದರು.
ನಾನು ಯಾವ ತೀರ್ಮಾನಕ್ಕೆ ಬರಬೇಕು ಅಂತ ತಿಳಿಯದೇ ಬೆಕ್ಕಸಬೆರಗಾದೆ. ಬಹುಶಃ ನ್ಯಾಯವಾದ ಪ್ರಮಾಣ ಪತ್ರಗಳಿಗೆ ಲಂಚ ದ ಹೆಸರು ಅಗತ್ಯ ಬೀಳುವುದಿಲ್ಲ ಅಂತ ಅಂದುಕೊಂಡೆ.ಇಂತಹ ಪ್ರಾಮಾಣಿಕರು ಹಲವರಿದ್ದಾರೆ, ಆದರೆ ಜನರು ಅವರ ಸುದ್ದಿಯನ್ನು ಮರೆಮಾಚಿ ಎಲ್ಲಿಯೋ ಹತ್ತು ಪರ್ಸೆಂಟ್ ಅಧಿಕಾರಗಳ ಕತೆಯನ್ನು ತೇಲಿಬಿಡುತ್ತಾರೇನೋ ಅಂತಲೂ ಅನ್ನಿಸಿದ್ದು ಸುಳ್ಳಲ್ಲ
ಬೆಳಿಗ್ಗೆ ಹತ್ತೂವರೆಗೆ ತಾಳಗುಪ್ಪದ ನೆಮ್ಮದಿ ಕೇಂದ್ರದ ಬಾಗಿಲಲ್ಲಿ ನಿಂತೆ. ಎಸ್ ಎಂ ಎಸ್ ನಂಬರ್ ಕೇಳಿದ ಆಕೆ ಚಕಚಕನೆ ಪ್ರಿಂಟ್ ಔಟ್ ಕೊಟ್ಟಳು ಪ್ರಮಾಣ ಪತ್ರದ್ದು. ಸರ್ಕಾರಿ ಫೀ ಹತ್ತು ರೂಪಾಯಿಯನ್ನಷ್ಟೇ ಕೇಳಿದ್ದು ಮತ್ತು ನಾನು ಕೊಟ್ಟಿದ್ದು. ಎಂಬಲ್ಲಿಗೆ ಲಂಚದ ಕಿಂಚಿತ್ತೂ ಬೇಡಿಕೆಯಿಲ್ಲದೆ ನನಗೆ ಎಂಟು ದಿವಸದೊಳಗೆ ಸಿಕ್ಕ ಖುಷಿಯಲ್ಲಿ "ಮೇಡಂ ನಿಮ್ಮ ಡಿಪಾರ್ಟ್ ಮೆಂಟ್ ಅಂದ್ರೆ ಲಂಚ ಅಂತಾರಲ್ಲ , ನನಗೆ ಅಂತ ಅನುಭವ ಆಗಲೇ ಇಲ್ಲವಲ್ಲ ಎಂದೆ" . ಏನಪ್ಪ ಎಂದು ಮುಗಳ್ನಕ್ಕಳು ಆಕೆ,
ಇನ್ನು ವಂಶವೃಕ್ಷದ್ದು ಕತೆ. ಅದನ್ನ ವಿಲೇಜ್ ಅಕೌಂಟೆಟ್ ಹತ್ತಿರ ಖುದ್ದಾಗಿ ಪಡೆದುಕೊಳ್ಳಬೇಕು, ನೆಮ್ಮದಿ ಕೇಂದ್ರದ ಅವಶ್ಯಕತೆ ಅದಕ್ಕಿಲ್ಲ. ಸೀದಾ ವಿ ಎ ಹತ್ತಿರ ಹೋಗಿ ವಂಶವೃಕ್ಷದ ಬೇಡಿಕೆ ಇಟ್ಟೆ. ಕ್ಷಣ ಮಾತ್ರದಲ್ಲಿ ಅವರದೇ ಹಾಳೆ ಅವರದೇ ಪೆನ್ ನಲ್ಲಿ ನನ್ನ ವಂಶವೃಕ್ಷ ಕೈ ಸೇರಿತು. ಓಹ್ ಇದಕ್ಕೆ ನಾನು ಲಂಚ ಕೊಡಬೇಕೇನೋ ಎಂದು ಐವತ್ತರ ಒಂದು ನೋಟು ಅಂಜುತ್ತಾ ಕೊಡಲು ಹೋದೆ. ವಿ ಎ ಮಂಜುಳಾ ಮೇಡಂ "ಹಣ ಯಾಕೆ?’ ಅಂದರು. ನಾನು ಹಾಂ ಅದೂ ಇದೂ ಅಂದೆ. ನೋಡಿ ನಾನು ನನ್ನ ಡ್ಯೂಟಿ ಮಾಡಿದ್ದೇನೆ, ಅದಕ್ಕೆ ಸರ್ಕಾರ ಸಂಬಳ ಕೊಡುತ್ತೆ’ ಅಂತ ಅಂದರು.
ನಾನು ಯಾವ ತೀರ್ಮಾನಕ್ಕೆ ಬರಬೇಕು ಅಂತ ತಿಳಿಯದೇ ಬೆಕ್ಕಸಬೆರಗಾದೆ. ಬಹುಶಃ ನ್ಯಾಯವಾದ ಪ್ರಮಾಣ ಪತ್ರಗಳಿಗೆ ಲಂಚ ದ ಹೆಸರು ಅಗತ್ಯ ಬೀಳುವುದಿಲ್ಲ ಅಂತ ಅಂದುಕೊಂಡೆ.ಇಂತಹ ಪ್ರಾಮಾಣಿಕರು ಹಲವರಿದ್ದಾರೆ, ಆದರೆ ಜನರು ಅವರ ಸುದ್ದಿಯನ್ನು ಮರೆಮಾಚಿ ಎಲ್ಲಿಯೋ ಹತ್ತು ಪರ್ಸೆಂಟ್ ಅಧಿಕಾರಗಳ ಕತೆಯನ್ನು ತೇಲಿಬಿಡುತ್ತಾರೇನೋ ಅಂತಲೂ ಅನ್ನಿಸಿದ್ದು ಸುಳ್ಳಲ್ಲ
ಮತ್ತೆ ಸಿಕ್ಕಾಗ ನಗೋಣ, ಹರಟೋಣ,
ಬಂತು ದೀಪಗಳ ಹಬ್ಬ ದೀಪಾವಳಿ. ಎಲ್ಲರ ಮನೆ ದೀಪ ಬೆಳಗಲಿ. ಹ್ಯಾಪಿ ದೀಪಾವಳಿ, ದೀಪಾವಳಿ ಹಬ್ಬದ ಶುಭಾಶಯಗಳು, ಹೀಗೆಲ್ಲಾ ನಾನು ನೀವು ಅನ್ನುವ ದಿವಸ ಅಕ ಇಕ ಅನ್ನುವುದರಒಳಗೆ ಬಂದೇಬಿಟ್ಟಿತು. ನಿಮಗೆ ಇದು ಎಷ್ಟನೇ ದೀಪಾವಳಿಯೋ ಗೊತ್ತಿಲ್ಲ. ನನಗಂತೂ ನಲವತ್ನಾಲ್ಕನೆಯದು ಅಂತ ಡೇಟ್ ಆಫ್ ಬರ್ತ್ ಹೇಳುತ್ತೆ. ಆದರೆ ನೆನಪಿಗೆ ಒಂದಿಪ್ಪತ್ತೈದು ಮೂವತ್ತು ಬರಬಹುದು. ದನಗಳ ಹಬ್ಬ ನಮ್ಮ ಹಳ್ಳಿಯಲ್ಲಿ ಪಟಾಕಿ ಹಬ್ಬ ನಿಮ್ಮ ಪಟ್ಟಣಗಳಲ್ಲಿ. ಕಡುಬು ಕಜ್ಜಾಯ ನಮ್ಮಲ್ಲಿ ನಿಮ್ಮಲ್ಲಿ ಒಂದೇ. ಇರಲಿ ಅವೆಲ್ಲದರ ನಡುವೆ ನನ್ನದೊಂದು ಸಣ್ಣ ವಿಷಯವಿದೆ.
ಈ ಬ್ಲಾಗ್ ೨೦೦೮ ರಲ್ಲಿ ನಾನು ಶುರುಮಾಡಿದ್ದು. ಏನು ಬರೆದೆನೋ ಏನು ಬಿಟ್ಟೆನೋ ನನಗಂತೂ ಒಮ್ಮೊಮ್ಮೆ ಅತಿ ಅನಿಸುವಷ್ಟಾಗಿದೆ. ಆದರೆ ಮಜ ಬಂದಿದೆ. ನೀವು ಏನು ಓದಿದಿರೋ ಏನು ಬಿಟ್ಟಿರೋ ಒಮ್ಮೊಮ್ಮೆ ಅತಿ ಅಂತಲೂ ಅನ್ನಿಸಿರಬಹುದು. ಇರಲಿ ಅದನ್ನು ಹೊಟ್ಟೆಗೆ ಹಾಕಿಕೊಳ್ಳಿ. ಆದರೆ ನನಗೆ ಈ ಬ್ಲಾಗಿಗೆ ನನ್ನ ವರಾತ ಹಂಚಿಕೊಳ್ಳಲು ಸಹಕಾರ ನೀಡಿದವರು ನೀವು. ಕಾಮೆಂಟ್ ಬಾಕ್ಸ್ ನಲ್ಲಿ ನಾನು ಉತ್ತರ ನೀಡದಿದ್ದರೂ( ಕ್ಷಮಿಸಿ ನನ್ನ ಸ್ಲೋ ನೆಟ್ ಕಾರಣದಿಂದ ಇಲ್ಲಿ ಕಾಮೆಂಟ್ ಬಾಕ್ಸ್ ಓಪನ್ ಆಗೋದು ತುಂಬಾ ಅಪರೂಪ, ಹಾಗಾಗಿ ನಾನು ಕಾಮೆಂಟ್ ಗೆ೪ ತ್ಯಾಂಕ್ಸ್ ಹೇಳಲು ಕಷ್ಟ ಹೊರತು ಸೊಕ್ಕಿನಿಂದಲ್ಲ) ಓದಿ ಕಾಮೆಂಟ್ ಜಡಿದು ಹುರುಪು ತುಂಬಿದ್ದೀರಿ. ಸೀತಾರಾಂ ರಿಂದ ಹಿಡಿದು ಮಾವೆಂಸ, ಜಿತು, ದಿಲೀಪ್, ವಿರಾ ಹೆಗಡೆ, ವಿಜಯಶ್ರೀ, ಡಾ ಕೃಷ್ಣಮೂರ್ತಿ, ಮುತ್ತು, ಹೊಸಮನೆ, ರಮ್ಯಾ, ತೇಜಸ್ವಿನಿ, ಅರವಿಂದ್ ಜಿ ಜೆ, ಪರಾಂಜಪೆ, ಪ್ರಕಾಶಣ್ಣ, ಸುಶ್ರುತ, ವಿನಾಯಕ, ಭಾರತೀಶ, ಮನ್ ಮುಕ್ತಾ, ಶಾಂತಲಾ ಭಂಡಿ, ಪ್ರೀತಿಯಿಂದ ಸಿಂಧು, ಆದಿತ್ಯ ಬೇದೂರು, ಪ್ರಸನ್ನ ಕನ್ನಡಿಗ, ನವ್ಯ, ನಾಣು, ಮಂಜುನಾಥ್, ರಾಜ್ ಬಾವಯ್ಯ, ರತ್ನಕ್ಕ, ಕಾವ್ಯ, ದಿವ್ಯ, ದಿಗ್ವಾಸ್ ಹೆಗಡೆ ಸುಬ್ರಹ್ಮಣ್ಯ, ವೇಣು, ಯಜ್ನೇಶ್, ಜಗದೀಶ್ ಶರ್ಮಾ, ಹೀಗೆ ಹೇಳುತ್ತಾ ಹೋದರೆ ಇಡೀ ಬ್ಲಾಗರ್ ರೇ ಬೇಕಾದೀತು. ಇನ್ನೂ ಕಾಮೆಂಟ್ ಹಾಕದೇ ಓದುವವರ ಲಿಸ್ಟ್ ಬೇರೆಯೇ ಇದೆ, ಇರಲಿ ಹೆಸರು ಕೈಬಿಟ್ಟವರಿಗೂ ನಿಮಗೂ ತ್ಯಾಂಕ್ಸ್.
ಈ ಎಲ್ಲಾ ವಿಷಯದ ಜತೆ ಇದೇ ೨೭-೧೦-೧೧ ರ ಗುರುವಾರ ತಲವಾಟ ಶಾಲೆಯಲ್ಲಿ (ನಾನು ನಾಲ್ಕಕ್ಷರ ಕಲಿತ ಜಾಗ) ನನ್ನ ಬ್ಲಾಗ್ ಬರಹ ಪುಸ್ತಕ ಬಿಡುಗಡೆ ಅಂತ್ ಮುಹೂರ್ತ ಇಟ್ಟಾಗಿದೆ. ನೋಡಿ ನೀವು ಅಲ್ಲಿಂದ ಇಲ್ಲಿಗೆ ಇದಕ್ಕಾಗಿಯೇ ಬರಲು ಆಗುವುದಿಲ್ಲ ಅನ್ನೋದು ನನಗೆ ಗೊತ್ತು, ಅಕಸ್ಮಾತ್ ಹಬ್ಬಕ್ಕೆ ಊರಿಗೆ ಬಂದಿದ್ದರೆ ಅಂದು ಬನ್ನಿ. ನಾನಂತೂ ಅಂದು ಬಾಸಿಂಗ ಕಟ್ಟಿದ ದೀಪಾವಳಿಯ ಎತ್ತಿನಂತಾಗಿರುತ್ತೇನೆ. ಅಕಸ್ಮಾತ್ ನಿಮ್ಮನ್ನು ಖುದ್ದು ಮಾತನಾಡಿಸಲು ಆಗದೆಯೂ ಇರಬಹುದು. ಹಾಗಾಗಿ ಬೇಸರಬೇಡ . ಮತ್ತೆ ಸಿಕ್ಕಾಗ ನಗೋಣ, ಹರಟೋಣ,
ಬನ್ನಿ, ಮತ್ತೆ ನಾನು ಫೋನ್ ಮಾಡುವುದಿಲ್ಲ,
Thursday, October 20, 2011
ಎರಡನೆಯವರಾದ ವಕೀಲರ .......
ಸರಿ ಅದು ವಕಾರಾದಿ ವೈದ್ಯರ ಕತೆಯಾಯಿತು ಇನ್ನು ಎರಡನೆಯವರಾದ ವಕೀಲರ ಕತೆಯತ್ತ ನೋಡೋಣ.
ಈಗ ಮೂರು ತಿಂಗಳ ಹಿಂದೆ ನಾ ಕಟ್ಟಿಸುತ್ತಿರುವ ಮನೆಯೆ ಮೌಲ್ಡ್ ಸಮಯ. "ರಾಗು, ನೀ ಮೌಲ್ಡ್ ಹಾಕುವ ಸಮಯಕ್ಕೆ ಸರಿಯಾಗಿ ಕೋರ್ಟ್ ನಿಂದ ಸ್ಟೆ ತರುತ್ತಾರಂತೆ" ಎಂಬ ಸುದ್ದಿ ಕಿವಿಗೆ ಬಿತ್ತು. ಒಮ್ಮೆ ಗಾಬರಿಯಾದೆ. ಹೌದಪ್ಪ ಹೌದು ಮೂರ್ನಾಲ್ಕು ಲಕ್ಷದ ಮೆಟೀರಿಯಲ್ ತಂದಿಟ್ಟುಕೊಂಡು ಅಕಸ್ಮಾತ್ ಸ್ಟೆ ಬಂದುಬಿಟ್ಟರೆ ಕತೆಯೇನು? ಎಂದು ಒಳಮನಸ್ಸು ಪದೇಪದೇ ಒಳಗಿನಿಂದ ನಡುಕವನ್ನು ಸೃಷ್ಟಿಮಾಡಿ ಹೊರಬಿಡತೊಡಗಿತು. ಕೋರ್ಟು ಕಾನೂನು ನನಗೆ ಗೊತ್ತಿಲ್ಲ. ಮಾಡುವುದೇನು?. ಹೈಕೋರ್ಟ್ ಲಾಯರ್ ಸ್ನೇಹಿತ ಬಾಬುವಿಗೆ ಫೋನಾಯಿಸಿದೆ. ಆತ "ಅಯ್ಯೋ ಬಿಡ ಮಾರಾಯ ಹಾಗೆಲ್ಲ ಸ್ಟೆ ತರುವುದಕ್ಕೆ ಬರುವುದಿಲ್ಲ, ನಿನ್ನ ಸ್ವಂತ ಜಮೀನಿನಲ್ಲಿ ಮನೆಕಟ್ಟಿಸುವುದು ನಿನಗೆ ಸಂವಿಧಾನ ಕೊಟ್ಟ ಹಕ್ಕು, ಕೋರ್ಟ್ ಎಂದರೆ ನೀವೆಲ್ಲಾ ಏನೆಂದು ತಿಳಿದುಕೊಂಡಿದ್ದೀರಿ, ಆದರೂ ಸ್ಥಳೀಯ ವಕೀಲರನ್ನು ಒಮ್ಮೆ ಭೇಟಿ ಮಾಡಿ ಪರಿಚಯ ಮಾಡಿಕೋ, ಅದು ಒಳ್ಳೆಯದು" ಎಂದ. ಅಕ್ಕನ ಮಗ ಮಂಜು ಪಕ್ಕನೆ ನೆನಪಾದ. ಆತನ ಮುಖಾಂತರ ಲಾಯರ್ ರಮಣರ ಮನೆಯ ಮೆಟ್ಟಿಲೇರಿದೆ ಕಡತ ಸಹಿತ. ಹಾಗೆಯೇ ಪರಿಚಯ ಜತೆಗೆ ಸಮಸ್ಯೆ ಹೇಳಿಕೊಂಡೆ. ಇದಕ್ಕೊಂದು ಕೇವಿಯಟ್ ಬೇಕು( ಹಾಗೆಂದರೆ ಏನೂ ಅಂತಾನೂ ನನಗೆಗ್ೊತ್ತಿರಲಿಲ್ಲ) ಕಡತವನ್ನು ಪರಾಮರ್ಶಿಸಿ ಕೇವಿಯಟ್ ಅಂದರೆ ಅನ್ಯತಾ ಕೋರ್ಟ್ ಜಗಳ ಮೈಮೇಲೆಎ ಳೆದುಕೊಂಡಂತೆ. ಇದಕ್ಕೆಲ್ಲಾ ಹಾಗೆಲ್ಲ ಸ್ಟೆ ತರಲು ಬರುವುದಿಲ್ಲ, ಅಕಸ್ಮಾತ್ ಬಂದರೂ ನಾವಿದ್ದೇವೆ ಬಿಡಿ ಚಿಂತೆ" ಎಂದರು. ಒಳಗಿನಿಂದ ಧೈರ್ಯದ ಸೆಲೆ ಒಸರತೊಡಗಿತು. "ಫೀ ಎಷ್ಟು? ಎಂದೆ. "ಅಯ್ಯ ಇದೆಕ್ಕೆಲ್ಲಾ ಎಂತಾ ಫೀ" ಎಂದು ಬೀಳ್ಕೊಟ್ಟರು.
ಮತ್ತೊಂದು ಪ್ರಕರಣದಲ್ಲಿ ಖಂಡಿಕದ ರಾಗಣ್ಣ ಹಾಗೂ ಅರುಣ ಎಂಬ ವಕೀಲರ ಭೇಟಿಯಾಗುವ ಸಂದರ್ಭ ಬಂತು. ಅವರೂ ಹಾಗೆಯೇ ಸುಮ್ನೆ ಯಾಕೆ ಕೋರ್ಟು ಕಛೇರಿ, ಸುಮ್ಮನಿದ್ದು ಬಿಡಿ" ಎಂದರು.
ಅಲ್ಲಿಯತನಕ ಪರಿಚಯವೇ ಇಲ್ಲದ ನನ್ನನ್ನು ಸುಲಭವಾಗಿ ಹಾದಿತಪ್ಪಿಸಿ ದುಡ್ಡು ತೆಗೆದುಕೊಳ್ಳಬಹುದಾಗಿದ್ದ ಸಂದರ್ಭದಲ್ಲಿಯೂ ಸಮಾಧಾನದ ಮಾತನ್ನಾಡಿ ಮನೆಗೆ ಕಳುಹಿಸಿದ ವಕೀಲರು ನಮಗೆ ಸಿಕ್ಕರೆ ಜೀವನ ಸುಗಮವಲ್ಲದೇ ಮತ್ತಿನ್ನೇನು?. ಅವರು ಕುಂತಿದ್ದು ನ್ಯಾಯಕ್ಕಾಗಿ ಎಂದು ಮತ್ತೆ ಹೊಸತಾಗಿ ಹೇಳಬೇಕಾಗಿಲ್ಲ ತಾನೆ. ತ್ಯಾಂಕ್ಸ್ ವಕೀಲರೇ ಎನ್ನುತ್ತಾ ಎರಡನೆಯವರು ನಮ್ಮ ಜೀವನದಲ್ಲಿ ಸುಗಮ ದಾರಿ ಮಾಡಿಕೊಡಬಲ್ಲರು ಎಂಬ ಪುರಾಣ ಮುಕ್ತಾಯೂ ಇನ್ನು ಮೂರನೆಯವರು.
ಈಗ ಮೂರು ತಿಂಗಳ ಹಿಂದೆ ನಾ ಕಟ್ಟಿಸುತ್ತಿರುವ ಮನೆಯೆ ಮೌಲ್ಡ್ ಸಮಯ. "ರಾಗು, ನೀ ಮೌಲ್ಡ್ ಹಾಕುವ ಸಮಯಕ್ಕೆ ಸರಿಯಾಗಿ ಕೋರ್ಟ್ ನಿಂದ ಸ್ಟೆ ತರುತ್ತಾರಂತೆ" ಎಂಬ ಸುದ್ದಿ ಕಿವಿಗೆ ಬಿತ್ತು. ಒಮ್ಮೆ ಗಾಬರಿಯಾದೆ. ಹೌದಪ್ಪ ಹೌದು ಮೂರ್ನಾಲ್ಕು ಲಕ್ಷದ ಮೆಟೀರಿಯಲ್ ತಂದಿಟ್ಟುಕೊಂಡು ಅಕಸ್ಮಾತ್ ಸ್ಟೆ ಬಂದುಬಿಟ್ಟರೆ ಕತೆಯೇನು? ಎಂದು ಒಳಮನಸ್ಸು ಪದೇಪದೇ ಒಳಗಿನಿಂದ ನಡುಕವನ್ನು ಸೃಷ್ಟಿಮಾಡಿ ಹೊರಬಿಡತೊಡಗಿತು. ಕೋರ್ಟು ಕಾನೂನು ನನಗೆ ಗೊತ್ತಿಲ್ಲ. ಮಾಡುವುದೇನು?. ಹೈಕೋರ್ಟ್ ಲಾಯರ್ ಸ್ನೇಹಿತ ಬಾಬುವಿಗೆ ಫೋನಾಯಿಸಿದೆ. ಆತ "ಅಯ್ಯೋ ಬಿಡ ಮಾರಾಯ ಹಾಗೆಲ್ಲ ಸ್ಟೆ ತರುವುದಕ್ಕೆ ಬರುವುದಿಲ್ಲ, ನಿನ್ನ ಸ್ವಂತ ಜಮೀನಿನಲ್ಲಿ ಮನೆಕಟ್ಟಿಸುವುದು ನಿನಗೆ ಸಂವಿಧಾನ ಕೊಟ್ಟ ಹಕ್ಕು, ಕೋರ್ಟ್ ಎಂದರೆ ನೀವೆಲ್ಲಾ ಏನೆಂದು ತಿಳಿದುಕೊಂಡಿದ್ದೀರಿ, ಆದರೂ ಸ್ಥಳೀಯ ವಕೀಲರನ್ನು ಒಮ್ಮೆ ಭೇಟಿ ಮಾಡಿ ಪರಿಚಯ ಮಾಡಿಕೋ, ಅದು ಒಳ್ಳೆಯದು" ಎಂದ. ಅಕ್ಕನ ಮಗ ಮಂಜು ಪಕ್ಕನೆ ನೆನಪಾದ. ಆತನ ಮುಖಾಂತರ ಲಾಯರ್ ರಮಣರ ಮನೆಯ ಮೆಟ್ಟಿಲೇರಿದೆ ಕಡತ ಸಹಿತ. ಹಾಗೆಯೇ ಪರಿಚಯ ಜತೆಗೆ ಸಮಸ್ಯೆ ಹೇಳಿಕೊಂಡೆ. ಇದಕ್ಕೊಂದು ಕೇವಿಯಟ್ ಬೇಕು( ಹಾಗೆಂದರೆ ಏನೂ ಅಂತಾನೂ ನನಗೆಗ್ೊತ್ತಿರಲಿಲ್ಲ) ಕಡತವನ್ನು ಪರಾಮರ್ಶಿಸಿ ಕೇವಿಯಟ್ ಅಂದರೆ ಅನ್ಯತಾ ಕೋರ್ಟ್ ಜಗಳ ಮೈಮೇಲೆಎ ಳೆದುಕೊಂಡಂತೆ. ಇದಕ್ಕೆಲ್ಲಾ ಹಾಗೆಲ್ಲ ಸ್ಟೆ ತರಲು ಬರುವುದಿಲ್ಲ, ಅಕಸ್ಮಾತ್ ಬಂದರೂ ನಾವಿದ್ದೇವೆ ಬಿಡಿ ಚಿಂತೆ" ಎಂದರು. ಒಳಗಿನಿಂದ ಧೈರ್ಯದ ಸೆಲೆ ಒಸರತೊಡಗಿತು. "ಫೀ ಎಷ್ಟು? ಎಂದೆ. "ಅಯ್ಯ ಇದೆಕ್ಕೆಲ್ಲಾ ಎಂತಾ ಫೀ" ಎಂದು ಬೀಳ್ಕೊಟ್ಟರು.
ಮತ್ತೊಂದು ಪ್ರಕರಣದಲ್ಲಿ ಖಂಡಿಕದ ರಾಗಣ್ಣ ಹಾಗೂ ಅರುಣ ಎಂಬ ವಕೀಲರ ಭೇಟಿಯಾಗುವ ಸಂದರ್ಭ ಬಂತು. ಅವರೂ ಹಾಗೆಯೇ ಸುಮ್ನೆ ಯಾಕೆ ಕೋರ್ಟು ಕಛೇರಿ, ಸುಮ್ಮನಿದ್ದು ಬಿಡಿ" ಎಂದರು.
ಅಲ್ಲಿಯತನಕ ಪರಿಚಯವೇ ಇಲ್ಲದ ನನ್ನನ್ನು ಸುಲಭವಾಗಿ ಹಾದಿತಪ್ಪಿಸಿ ದುಡ್ಡು ತೆಗೆದುಕೊಳ್ಳಬಹುದಾಗಿದ್ದ ಸಂದರ್ಭದಲ್ಲಿಯೂ ಸಮಾಧಾನದ ಮಾತನ್ನಾಡಿ ಮನೆಗೆ ಕಳುಹಿಸಿದ ವಕೀಲರು ನಮಗೆ ಸಿಕ್ಕರೆ ಜೀವನ ಸುಗಮವಲ್ಲದೇ ಮತ್ತಿನ್ನೇನು?. ಅವರು ಕುಂತಿದ್ದು ನ್ಯಾಯಕ್ಕಾಗಿ ಎಂದು ಮತ್ತೆ ಹೊಸತಾಗಿ ಹೇಳಬೇಕಾಗಿಲ್ಲ ತಾನೆ. ತ್ಯಾಂಕ್ಸ್ ವಕೀಲರೇ ಎನ್ನುತ್ತಾ ಎರಡನೆಯವರು ನಮ್ಮ ಜೀವನದಲ್ಲಿ ಸುಗಮ ದಾರಿ ಮಾಡಿಕೊಡಬಲ್ಲರು ಎಂಬ ಪುರಾಣ ಮುಕ್ತಾಯೂ ಇನ್ನು ಮೂರನೆಯವರು.
Subscribe to:
Posts (Atom)