Friday, July 2, 2010

ರೊಟ್ಟಿಗಾಗಿ ಜೇನುರೊಟ್ಟು

ಬೇಸಿಗೆ ಮುಗಿದು ಮಳೆಗಾಲ ಶುರುವಾಗುತ್ತದೆ ಎನ್ನುವಾಗ ಮಲೆನಾಡಿನ ರಸ್ತೆಬದಿಯಲ್ಲಿ ನಿಮಗೆ ಹೀಗೆ ಮೂರಡಿ ಅಗಲದ ಗೋಣಿಯಂತಹ ವಸ್ತುವನ್ನು ಹಿಡಿದ ಜನ ನಿಮಗೆ ಕಾಣಸಿಗಬಹುದು. ಅದೇನದು ಎಂಬ ನಿಮ್ಮ ಆಲೋಚನೆ ಹತ್ತಿರ ಹೋದರಷ್ಟೆ ಪತ್ತೆಯಾಗುತ್ತದೆ. ಅದು ಗೋಣಿ ಯಲ್ಲ ಗೋಣಿಯನ್ನು ಹೋಲುವ ಹೆಜ್ಜೇನು ತತ್ತಿ.
ಮಲೆನಾಡಿನ ಮುಂಗಾರಿನ ಮಳೆಯ ಅಬ್ಬರಕ್ಕೆ ಹೆಜ್ಜೇನು ಊರುಬಿಟ್ಟು ಬಯಲುಸೀಮೆ ಅಥವಾ ಅರೆಮಲೆನಾಡಿನತ್ತ ಕಂಬಿಕೀಳುತ್ತವೆ. ಹಾಗಾದಾಗ ದೊಡ್ಡ ಮರಗಳಲ್ಲಿ ಇಂಥಹ ಮೂರು ಅಡಿ ಅಗಲದ ಹತ್ತಾರು ಜೇನು ರೊಟ್ಟುಗಳು ಖಾಲಿ ಬಿದ್ದಿರುತ್ತವೆ. ಕಾಡು ತಿರುಗುವ ಊರುಮಂದಿ ಮರಹತ್ತಿ ಇವುಗಳನ್ನೆಲ್ಲಾ ಸಂಗ್ರಹಿಸಿ ಮನೆಯಾಕೆಗೆ ನೀಡುತ್ತಾರೆ. ಈ ಹೆಜ್ಜೇನು ತತ್ತಿಗಳನ್ನು ಸೂಕ್ತರೀತಿಯ ಕ್ರಮದಲ್ಲಿ ಕಾಯಿಸಿ ಇದರಿಂದ ಜೇನು ಮೇಣವನ್ನು ತೆಗೆದು ಮಾರಾಟ ಮಾಡುತ್ತಾರೆ. ಒಂದೊಂದು ತತ್ತಿಯಿಂದ ಕಡಿಮೆಯೆಂದರೂ ಕಾಲು ಕೆಜಿ ಯಷ್ಟು ಜೇನು ಮೇಣ ದೊರಕುತ್ತದೆ. ಮಾರುಕಟ್ಟೆಯಲ್ಲಿ ಕೆಜಿಗೆ ೩೦೦ ರಿಂದ ೪೦೦ ರೂಪಾಯಿಗೆ ಬಿಕರಿಯಾಗುವ ಜೇನುಮೇಣ ಮನೆಯ ವಾರದ ಖರ್ಚನ್ನು ನೀಗಿಸುತ್ತದೆ. ಹೀಗಿದೆ ಜೇನು ರೊಟ್ಟಿಯಿಂದ ರೊಟ್ಟಿ ಹುಟ್ಟುವ ಕತೆ.
(ಇಂದಿನ ವಿ.ಕ. ಲವಲವಿಕೆಯಲ್ಲಿ ಪ್ರಕಟಿತ)
http://www.vijaykarnatakaepaper.com//svww_showarticle.php?art=20100702l_008101003