Friday, March 1, 2013

ಆರಂಭಿಸಿ ಇವತ್ತಿನಿಂದಲೇ

ಆರೋಗ್ಯ ಅನ್ನೋದೊಂದು ಸರಿ ಇದ್ದ ಮನುಷ್ಯನಿಗೆ ಯೋಚನೆ ಇದ್ದೇ ಇರುತ್ತದೆ. ಪುತಪುತನೆ ಹುಟ್ಟುವ ಯೋಚನೆ ಕೆಲವರಿಗಾದರೆ ನಿಧಾನಗತಿಯ ಯೋಚನೆ ಮತ್ತೆ ಕೆಲವರಿಗೆ, ಒಟ್ಟಿನಲ್ಲಿ ಯೋಚನೆ ನಿರಂತರ ಬರುತ್ತಲೇ ಇರುತ್ತದೆ. ಈಗ ವಿಜಯ ಸಾಧಿರುವ ಮನುಷ್ಯ ನ ಯೋಚನೆಗಳೇನು ಅಂಬೋ ಪ್ರಶ್ನೆ ನನಗಂತೂ ಆಗಾಗ ಕಾಡುತ್ತಲಿರುತ್ತದೆ.
           ಹುಟ್ಟುವ ಯೋಚನೆಗಳಿಗೆ ರೂಪ ಬಣ್ಣ ಆಕಾರ ಯಾವುದೂ ಇರುವುದಿಲ್ಲ. ಹುಟ್ಟಿದ ಮೇಲೆ ನಾವೆಷ್ಟು ಆಹಾರ ಹಾಕುತ್ತೇವೆ, ಎಂತಹ ಆಹಾರ ಹಾಕುತ್ತೇವೆ, ಏನು ಆಹಾರ ಹಾಕಿ ಪೋಷಿಸಿ ಬೆಳಸಿ ಬಣ್ಣ ಬಳಿದು ರೂಪ ಕೊಡುತ್ತೇವೆ ಅನ್ನುವುದರ ಮೇಲೆ ಪ್ರಪಂಚ. ಏನೂ ಮಾಡದಿದ್ದರೆ ಬಂದ ಯೋಚನೆ ಬಂದಂತೆ ಮಾಯವಾಗಿರುತ್ತದೆ.
           ಒಂದಿಷ್ಟು ಜನ ನೆಗೆಟೀವ್ ರೂಪ ಕೊಡುತ್ತಾರೆ ಬಂದ ಯೋಚನೆಗೆ, ಇನ್ನು ಕೆಲವು ಜನ ಪಾಸಿಟೀವ್ ರೂಪ ಕೊಡುತ್ತಾರೆ, ಮದ್ಯಸ್ಥರು ಸುಮ್ಮನಿದ್ದುಬಿಡುತ್ತಾರೆ. ಸೂಪರ್ ಸಕ್ಸಸ್ ಪೀಪಲ್ ಗಳಿಗೆ ಅಪ್ಪಿತಪ್ಪಿಯೂ ನೆಗೇಟೀವ್ ಯೋಚನೆ ಹುಟ್ಟುವುದೇ ಇಲ್ಲ, ಅದಕ್ಕೆ ಅವರ ಅಪ್ಪ ಅಮ್ಮ ಮಾಡಿದ ಯೋಚನೆಯೂ ಕಾರಣ ಎನ್ನುವುದು ಸ್ಪಷ್ಟ.

      ಇನ್ನಷ್ಟು ಜನ ಹುಟ್ಟಿದ ನೆಗೇಟಿವ್ ಯೋಚನೆಯನ್ನು ಅದುಮಿ ಪಾಸಿಟೀವ್ ಯೋಚನೆಯನ್ನು ತುರುಕುತ್ತಾರೆ. ಅವರು ಅರ್ದಂಬರ್ದ ಸಕ್ಸಸ್.
      ಮತ್ತಷ್ಟು ಜನ ತಾವು ನೆಗೆಟೀವ್ ಯೋಚನೆ ಮಾಡುವುದಷ್ಟೇ ಅಲ್ಲದೆ ಪ್ರಪಂಚದ ನೆಗೆಟೀವ್ ಗಳನ್ನೆಲ್ಲಾ ತುಂಬಿಕೊಂಡು ಸಿಕ್ಕ ಸಿಕ್ಕವರಿಗೆಲ್ಲಾ ಬಿತ್ತುತ್ತಾ ಸಾಗುತ್ತಾರೆ.
     ಇವೆಲ್ಲಾ ರಗಳೆ ಖುಶ್  ಖುಶ್ ಇದ್ದು ಸಕ್ಸಸ್ ಆಗಬೇಕು ಅಂತ ಇದೆಯಾ?, ಜಸ್ಟ್ ದಿನಾ ಬೆಳಿಗ್ಗೆ ತಣ್ನೀರು ಸ್ನಾನ ಮಾಡಿ, ಅಥವಾ ಈಜು ಹೊಡೆಯಿರಿ ಹೊಳೆಯಲ್ಲಿ ಅಥವಾ ಸೂಪರ್ ಧ್ಯಾನ ಆರಂಭಿಸಿ ಇವತ್ತಿನಿಂದಲೇ.

No comments: