Tuesday, October 13, 2009

ನಮ್ಮ ಪೆಜತ್ತಾಯರ ಕಾಗದದ ದೋಣಿ ಮತ್ತು ಬೇಳೂರು ಸುದರ್ಶನರ ಮಾತು

ಬದುಕನ್ನು ಬಂದ ಹಾಗೆ ಸ್ವೀಕರಿಸುವುದು, ಸ್ವೀಕರಿಸಿದ್ದನ್ನು ಸಿಂಗರಿಸುವುದು, ನಾವೂ ಆನಂದಿಸುವುದು, ಇನ್ನೊಬ್ಬರಿಗೂ ಆನಂದ ಕೊಡಲು ಮನಸಾರೆ ಯತ್ನಿಸುವುದು, ಸುತ್ತಮುತ್ತ ಇರುವ ಸಹೃದಯ ಜೀವಗಳನ್ನು ಗೌರವಿಸುವುದು…. ಒಪ್ಪಿಕೊಂಡಿರುವ ಸತ್ಯ ಬದಲಾದಾಗ ಬದಲಾವಣೆಯನ್ನೂ ಪ್ರಾಂಜಲವಾಗಿ ಒಪ್ಪಿಕೊಳ್ಳುವುದು – ಇವೆಲ್ಲ ಮನುಕುಲವೆಂಬ ಬಳಗದ ಎಲ್ಲ ಸದಸ್ಯರಲ್ಲಿ ಇರಬೇಕಾದ ಗುಣಗಳು. ಈ ಗುಣಗಳು ಇರಬೇಕೆಂದು ಹೇಳುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ!

pejathaya-mitramaadhyama

ಮೂರು ವಾರಗಳ ಹಿಂದೆ ಮಿಂಚಂಚೆ ಮೂಲಕ, ಆಮೇಲೆ ದೂರವಾಣಿ ಮೂಲಕ ಪರಿಚಯವಾದ ಎಸ್ ಎಂ ಪೆಜತ್ತಾಯ ಇಂಥ ಮಾತುಗಳನ್ನು ಚಾಚೂ ತಪ್ಪದೆ ತಮ್ಮ ಜೀವನದ ಉದ್ದಕ್ಕೂ ಆಚರಿಸುತ್ತಿರುವ ಕೆಲವೇ ಚೇತನಗಳಲ್ಲಿ ಒಬ್ಬರು ಎಂದು ನನಗೆ ಅನ್ನಿಸಿದ್ದು ಅವರು ಪ್ರೀತಿಯಿಂದ ಕಳಿಸಿದ `ಕಾಗದದ ದೋಣಿ’ ಪುಸ್ತಕವನ್ನು ಓದಿದಾಗ.

ಅನನ್ಯ ಜೀವನಾನುಭವದ ನೆನಪಿನ ಬುತ್ತಿ ಎಂಬ ವಿಶೇಷಣಗಳನ್ನು ಹೊತ್ತು ತಂದ ಮುಖಪುಟವನ್ನು ಬದಿಗೆ ಸರಿಸಿಂ ಓದಿದರೂನೂ ಅವರ ಜೀವನಪ್ರೀತಿಯನ್ನು ಎಲ್ಲ ಪುಟಗಳಲ್ಲಿ ಕಾಣಬಹುದು. ನಿಜಕ್ಕೂ ಅನನ್ಯ ಜೀವನ ಎಂದು ಒಪ್ಪಿಕೊಳ್ಳಬಹುದು!

ಈ ಪುಸ್ತಕದಲ್ಲಿ ಇರುವುದೆಲ್ಲ ಅವರ ಜೀವನದಲ್ಲಿ ನಡೆದ ಹಲವು ಘಟನೆಗಳು; ಅವರು ಕಂಡ ಹಲವು ವ್ಯಕ್ತಿತ್ವಗಳು. ೨೮೩ ಪುಟಗಳಲ್ಲಿ ಹರಡಿರುವ ಈ ೫೫ ಕಥೆಗಳು ಒಂದಿಲ್ಲೊಂದು ರೀತಿಯಲ್ಲಿ ಕಾಡುವ ಕಥೆಗಳು. ಕೆಲವು ವೈಯಕ್ತಿಕ ಘಟನೆಗಳ ನಿರೂಪಣೆಯಾಗಿದ್ದರೆ, ಕೆಲವು ಅವರು ಕಂಡ ವ್ಯಕ್ತಿತ್ವಗಳ ಪರಿಚಯ, ಯಾವುದಕ್ಕೂ ಅಂಥ ವಿಶೇಷಣಗಳೇನೂ ಇಲ್ಲ. ಮೊದಲು ಆತ್ಮಕಥೆಯಂತೆ ಆರಂಭವಾಗುವ ಈ ಪುಸ್ತಕ ಕೊನೆಗೆ ಬದುಕಿನ ಹಲವು ಅನುಭವಗಳನ್ನು ಕಟ್ಟಿಕೊಡುವ ಸಾಮಾಜಿಕ ದಾಖಲೆಯಾಗಿ ಪರಿವರ್ತಿತವಾಗುತ್ತವೆ. ಪೆಜತ್ತಾಯರು ಬಾಲ್ಯದಲ್ಲಿ ಅನುಭವಿಸುತ್ತಿದ್ದ ಬೇಸಗೆ ರಜಾಕಾಲದ ಅನುಭವದಿಂದ ಆರಂಭವಾಗುವ ಈ ಪುಸ್ತಕ `ನನಗೂ ಹೃದಯದ ಶಸ್ತ್ರಚಿಕಿತ್ಸೆ ಆಯಿತು’ ಎಂಬ ಖಾಸಗಿ ಬ್ಲಾಗ್‌ನೊಂದಿಗೆ ಮುಗಿಯುತ್ತದೆ. ತಮ್ಮ ಮಒದಲ ಲೇಖನದಲ್ಲಿ `ಯಾವ ಊರಿಗೂ ಹೋಗದೆ, ಯಾವ ಸಮ್ಮರ್ ಕ್ಯಾಂಪಿಗೂ ಹೋಗದೆ ಬೇಸಗೆ ರಜಾ ಕಳೆಯುತ್ತಿದ್ದ’ ಪೆಜತ್ತಾಯರು ಬದುಕಿನ ಹಲವು ಮಜಲುಗಳನ್ನು ದಾಟಿದ ಮೇಲೆ `ಪಥ್ಯದ ಆಹಾರ ಸೇವನೆ ಮತ್ತು ಡಾಕ್ಟರುಗಳು ಹೇಳಿದಷ್ಟು ವ್ಯಾಯಾಮಗಳನ್ನು ತಪ್ಪದೇ ಮಾಡುತ್ತಾ, ನಾನು ನನ್ನ ಮುಂದಿನ ಜೀವಿತವನ್ನು ಕಳೆಯುವ ನಿರ್ಧಾರ ಮಾಡಿದ್ದೇನೆ’ ಎಂಬ ಹೇಳಿಕೆಯೊಂದಿಗೆ ಪುಸ್ತಕವನ್ನು ಮುಗಿಸಿದ್ದಾರೆ. ಬದುಕು ಎಷ್ಟೆಲ್ಲ ಕಲಿಸುತ್ತದೆ ಅಲ್ಲವೆ?

ದಕ್ಷಿಣ ಕನ್ನಡದಲ್ಲಿ ಹುಟ್ಟಿ ಚಿಕ್ಕಮಗಳೂರಿನಲ್ಲಿ ಕೃಷಿ ಮಾಡಿ ಈಗ ಬೆಂಗಳೂರಿನಲ್ಲಿ ವಾಸವಾಗಿರುವ ಶ್ರೀನಿವಾಸ ಮಧುಸೂಧನ ಪೆಜತ್ತಾಯರದು ಸ್ನೇಹಪ್ರಿಯ ವ್ಯಕ್ತಿತ್ವ. ಆದ್ದರಿಂದಲೇ ಅವರಿಗೆ ಬಾಲ್ಯದಿಂದಲೂ ಹಲವು ಹಿರಿಯ ಗೆಳೆಯರು ಸಿಕ್ಕಿದ್ದಾರೆ; ಅವರಿಗೆ ಬದುಕಿನ ಪಾಠ ಕಲಿಸಿದ್ದಾರೆ. ಸಾಮಾನ್ಯವಾಗಿ ಈ ಎಲ್ಲ ಪ್ರಬಂಧಗಳಲ್ಲೂ ಅವರು ಅತ್ಯಂತ ಮುಕ್ತ ಮನಸ್ಸಿನಿಂದ ತಾವು ಕಲಿತ ಸಂಗತಿಗಳನ್ನು ಪಟ್ಟಿ ಮಾಡಿ, ಕಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಎಲ್ಲೂ ಆಧುನಿಕ ಸಾಹಿತ್ಯದ ಕ್ಲೀಷೆಗಳನ್ನು ಬಳಸದೆ, ತಮಗೆ ಬಂದ ಭಾಷೆಯಲ್ಲಿ ಸರಳವಾಗಿ ಕಥೆ ಹೇಳಿದ್ದರಿಂದಲೇ ಪೆಜತ್ತಾಯ ಅದ್ಭುತ ಸಾಹಿತಿಯಾಗಿ ರೂಪುಗೊಂಡಿದ್ದಾರೆ. ಅನುಭವ ಅವರನ್ನು ಮಾಗಿಸಿದೆ. ಉತ್ಪ್ರೇಕ್ಷೆ ಇಲ್ಲದ, ವಿಶೇಷಣಗಳಿಲ್ಲದ, ಈ ಕಥೆಗಳಲ್ಲಿ ಪೆಜತ್ತಾಯರು ಕಂಡ ದೃಶ್ಯಗಳಿವೆ. ಅನುಭವಗಳನ್ನು ಇಷ್ಟು ಸರಳವಾಗಿ ಬರೆಯಬಹುದೇ ಎಂಬುದಕ್ಕೆ ಈ ಪುಸ್ತಕ ಒಂದು ಮಾದರಿಯಾಗಿದೆ.

ಈ ಪುಸ್ತಕವನ್ನು ಓದುವಾಗ ನನಗೆ ಫಕ್ಕನೆ ನೆನಪಾಗಿದ್ದು ಬೆಳಗೆರೆ ಕೃಷ್ಣಶಾಸ್ತ್ರಿಯವರ `ಮರೆಯಲಾದೀತೇ?’ ಪುಸ್ತಕ. ಅಲ್ಲೂ ವ್ಯಕ್ತಿಚಿತ್ರಣಗಳಿವೆ. ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ ಅನುಭಾವಿಗಳನ್ನು ಕುರಿತ ಅನುಭವದ ಲೇಖನಗಳಿವೆ. ಇಲ್ಲಿ ಪೆಜತ್ತಾಯರು ಅಲೌಕಿಕವಾದದ್ದೇನನ್ನೂ ಹೇಳುವುದಿಲ್ಲ. ಅವರು ಎಲ್ಲವನ್ನೂ ಹೇಳಿದ ಮೇಲೆ ಈ ಬದುಕು ಎಷ್ಟೆಲ್ಲ ಸಾಧ್ಯತೆಗಳನ್ನು ಒಳಗೊಂಡಿದೆ ಎಂಬ ಭಾವ ಆವರಿಸುತ್ತದೆ.
ಸಾಹಿತ್ಯ ರಚನೆ ಮಾಡಿ ಬದುಕನ್ನು ಕಾಲ್ಪನಿಕ ಘಟನೆಗಳಲ್ಲಿ ವಿವರಿಸುವುದಕ್ಕಿಂತ ಬದುಕನ್ನು ಅನುಭವಿಸಿ ಸತ್ಯ ಘಟನೆಗಳನ್ನೇ ಸರಳ ಭಾಷೆಯಲ್ಲಿ ಬರೆದರೆ ಅದೇ ಬಹುದೊಡ್ಡ ಸಾಹಿತ್ಯಕೃತಿಯಾಗಬಹುದು ಎನ್ನುವುದಕ್ಕೆ ಪೆಜತ್ತಾಯರದು ಹೊಸ ಉದಾಹರಣೆ ಅಷ್ಟೆ.

ಈ ಪುಸ್ತಕ ಬಹುಶಃ ಇತ್ತೀಚೆಗೆ ಬಂದ ಆತ್ಮಕಥನಗಳಲ್ಲೇ ಅತ್ಯಂತ ಸರಳ ನಿರೂಪಣೆಯದು. ನನ್ನ ಅತಿಪ್ರಿಯ ಕನ್ನಡ ಪುಸ್ತಕಗಳಲ್ಲಿ ಇದೂ ಒಂದಾಗಿದೆ. ನೀವೂ ಓದಿ ಎಂದು ಮನಸಾರೆಯಾಗಿ ಶಿಫಾರಸು ಮಾಡುತ್ತಿರುವೆ!

-ಮಿತ್ರಮಾಧ್ಯಮದ ಬೇಳೂರು ಸುದರ್ಶನರಿಂದ


Monday, October 12, 2009

ತಲೆ ಅಂದ್ರೆ ತಲೆ ಕಣ್ರೀ......

http://funzu.com/index.php/crazy-video/fantasy-tale-explains-everything-09102009.html

ವೈದ್ಯರು "ಎರಡು ರೂಪಾಯಿ" ಎಂದು ಹೇಳಿದರು.

ಮುನ್ನಾಭಾಯಿ ಎಂ.ಬಿ.ಬಿ.ಎಸ್ ನೀವು ನೋಡಿದ್ದೀರಿ. ಅದರಲ್ಲಿನ ಹೃದಯಹೀನ ವೈದ್ಯರು ಮಾಡಲಾಗದ್ದನ್ನು ಹೃದಯವಂತ ರೌಡಿ ಮಾಡಿ ಮುಗಿಸುತ್ತಾನೆ. ಎಲ್ಲೆಡೆ ಬೇಕುಬೇಕಂತ ರೋಗಿಗೂ ತನಗೂ ಸಿಕ್ಕಾಪಟ್ಟೆ ಗ್ಯಾಪ್ ಇಟ್ಟುಕೊಂಡು ಸ್ಟೈಲ್ ಹೊಡೆಯುವ ಡಾಕ್ಟರ್ ಗಳ ಬದಲು ಮುನ್ನಾಭಾಯಿಯ ಹೃದಯವಂತಿಕೆಯ ಚಿಂಕಿಯ ಹಾಗೂ ಅವಳಪ್ಪನ ಬುದ್ದಿವಂತಿಕೆಯ ಹೃದಯವಂತ ವೈದ್ಯರೇ ಇದ್ದುಬಿಟ್ಟಿದ್ದರೆ ಏನಾಗುತ್ತಿತ್ತು.? ಎಂಬ ಪ್ರಶ್ನೆ ನಿಮಗೆ ಒಮ್ಮೆಯಾದರೂ ಕಾಡಿರಬಹುದು. ಹಾಗಿರಲು ಸಾಧ್ಯವಿಲ್ಲ ಬಿಡಿ. ಒಮ್ಮೆ ಹಾಗಿದ್ದರೇ ಆಗುವುದು ಎಂದರೆ ಮುನ್ನಾಭಾಯಿ ಸಿನೆಮಾ ಹುಟ್ಟುತ್ತಿರಲಿಲ್ಲ ಹಾಗೂ ಅದಕ್ಕೆ ಅರ್ಥವೂ ಇರುತ್ತಿರಲಿಲ್ಲ ಏನಂತೀರಿ?. ಇರಲಿ ಬಿಟ್ಟಾಕಿ ವೈದ್ಯರ ಕುರಿತು ಬರೆಯಬೇಕು ಎಂದು ಹೊರಟ ನನಗೆ ಇದು ಹೇಗೋ ನೆನಪಾಗಿಬಿಟ್ಟಿತು ಅದನ್ನು ಸುಮ್ಮನೆ ದಾಖಲಿಸಿದ್ದೇನೆ, ಬಿಟ್ಟಾಕಿ ಬಿಟ್ಟಾಕಿ ಬಿಟ್ಟಾಕಿ.
ಈಗ ( ಸಿನೆಮಾದಲ್ಲಿ ಹೇಳುವಂತೆ....!) ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆ. ನನ್ನ ಅಕ್ಕ ಕೊಪ್ಪ ಪೋಸ್ಟ್ ಆಪೀಸ್ ನಲ್ಲಿ ನೌಕರಿಯಲ್ಲಿದ್ದಳು . ನಾನು ಹೈಸ್ಕೂಲ್ ನವರಾತ್ರಿ ರಜಕ್ಕೆ ಅಲ್ಲಿಗೆ ಹೋಗಿ ಹದಿನೈದು ದಿನ ಜಾಂಡಾ ಹೊಡೆಯುತ್ತಿದ್ದೆ. ಅಲ್ಲಿನ ಪೋಸ್ಟ್ ಮಾಸ್ಟರ್ ಮೊಮ್ಮಗನೊಬ್ಬ ನನ್ನ ಹಾಗೆಯೇ ಸ್ಕೂಲ್ ರಜಕ್ಕೆ ಬರುತ್ತಲಿದ್ದ. ನಾನೂ ಅವನು ಸೇರಿ ಅದೂ ಇದೂ ಸಣ್ಣಪುಟ್ಟ ಆಟಗಳನ್ನು ಆಡುತಿದ್ದೆವು. ಹೀಗೆ ಅವನ ಬಳಿ ಸ್ಕೋಪ್ ತೆಗೆದುಕೊಳ್ಳಲು ಹಳ್ಳಿಯ ಹಲವಾರು ವಿಷಯಗಳನ್ನು ನನ್ನದೇ ಆದ ಗತ್ತಿನಲ್ಲಿ ವಿವರಿಸುತ್ತಿದ್ದೆ. ಮಜ ಎಂದರೆ ಅವನಿಗೆ ಕನ್ನಡ ಬಾರದು ಹಿಂದಿ ಹುಡುಗ ಆತ. ನನಗೆ ಹಿಂದಿ ಬಾರದು ಕನ್ನಡದ ಹುಡುಗ ನಾನು. ಆದರೂ ಇಬರ ನಡುವೆ ಅದು ಹೇಗೋ ಸಾಮರಸ್ಯ ಬೆಳೆದಿತ್ತು. ಮತ್ತು ಸಂಭಾಷಣೆ ನಡೆಯುತ್ತಿತ್ತು ಅರ್ಥವೂ ಆಗುತ್ತಿತ್ತು. ಹೀಗೆ ಅದೂ ಇದೂ ಸ್ಕೋಪಿನ ವಿಚಾರಗಳನ್ನು ಅರುಹುತ್ತಿರಬೇಕಾದರೆ ಕಳ್ಳಿಗಿಡ(ಪೋಸ್ಟ್ ಆಪೀಸ್ ಆವರಣದಲ್ಲಿತ್ತು ಅಂತ ಹೊಸತಾಗಿ ಹೇಳಬೇಕಾಗಿಲ್ಲ ತಾನೆ?) ಕಾಣಿಸಿತು. ಹಿಂದಿ ಹುಡುಗನ ಬಳಿ ಸಿಕ್ಕಾಪಟ್ಟೆ ಸ್ಕೋಪ್ ತೆಗೆದುಕೊಳ್ಳಲು ಹೊಸ ವಿಷಯ ನನಗೆ ಪಕಪಕನೆ ತಲೆಯಲ್ಲಿ ಮಿಂಚಿತು. ತಕ್ಷಣ ಕಳ್ಳಿ ಎಲೆಯೊಂದನ್ನು ಮುರಿದು ಉಪ್ ಅಂತ ಊಬಿ ಪುರುಪುರು ಗುಳ್ಳೆಗಳನ್ನು ಮಾಡಿ ಹಿಂದಿಹುಡುಗನಿಗೆ ತೋರಿಸಿದೆ. ಆತನ ಕಣ್ಣುಗಳಲ್ಲಿ ಮಹದಾಶ್ಚರ್ಯ. ಮತ್ತೆ ಮತ್ತೆ ಎಲೆಗಳನ್ನು ಕಿತ್ತು ಊಬಿದೆ, ಗುಳ್ಳೆಗಳ ರಾಶಿಯನ್ನೇ ಸೃಷ್ಟಿಸಿ ಹಿಂದಿಯವನನ್ನು ಆಶ್ಚರ್ಯಗೊಳಿಸಿದೆ. ಅವನು ವಾವ್ ವಾವ್ ಹೇಳುತ್ತಿದ್ದಂತೆ ನನ್ನ ಏರುವಿಕೆ ಹೆಚ್ಚಾಯಿತು. ಆತ ನಾನೂ ಊಬುತ್ತೇನೆ ಎಂದ " ಇಲ್ಲ ಅದರ ಹಯ ಡೇಂಜರ್ ಕಣ್ಣಿಗೆ ಹೋದರೆ ಕಣ್ಣು ಕುರುಡಾಗುತ್ತದೆ" ಎಂದೆ. ಮತ್ತಷ್ಟು ಎಲೆ ಕಿತ್ತು ಗುಡ್ಡೆ ಹಾಕಿ ಊಬತೊಡಗಿದೆ. ಆತ ಮೆಟ್ಟಿಲುಗಳ ಮೇಲೆ ಕುಳಿತು ಬೆರೆಗುಗಣ್ಣಿನಿಂದ ನೋಡುತ್ತಿದ್ದ. ನನಗೋ ನನ್ನ ಲೆವಲ್ ಹೆಚ್ಚಾಯಿತೆಂಬ ಭ್ರಮೆಯಲ್ಲಿ ಊಬಿಯೇ ಊಬಿದೆ. ಆಗಲೆ ಒಂದು ದೊಡ್ಡಗುಳ್ಳೆ ಪಟ್ ಎಂದು ಊಬುತ್ತಿದ್ದಂತೆ ಒಡೆಯಿತು. ಒಂದು ಹನಿ ಕಳ್ಳಿ ಹಂಯ ಬಲಗಣ್ಣಿಗೆ ಸೇರಿತು. ಉರಿ ಪ್ರಾರಂಭವಾಗಿ ಕಣ್ಣು ಕೆಂಪೇರತೊಡಗಿತು. ಹಿಂದಿ ಹುಡುಗ ಪೋಸ್ಟ್ ಆಪೀಸಿನ ಒಳಗೆ ಓಡಿಹೋಗಿ ಇಷ್ಟು ಹೊತಿನ ತನಕ ಮಜ ಅನುಭವಿಸುತ್ತಿದ್ದವನು ಈಗ ಕಣ್ಣಿಗೆ ಹಂಯ ಬಿದ್ದ ಕತೆ ಹೇಳಿ ಸ್ಕೋಪ್ ತೆಗೆದುಕೊಳ್ಳತೊಡಗಿದ. ಮರುಕ್ಷಣ ಅಕ್ಕನ ದುಗುಡದ ಮುಖದೊಂದಿಗೆ ಸೆಂಟ್ರಲ್ ಗವರ್ನ್ಮೆಂಟ್ ಸ್ಟ್ಪಾಪ್ ನನ್ನ ಸುತ್ತ ನೆರೆಯಿತು. ಆಳಿಗೊಂದು ಕಲ್ಲು ಬೀಳತೊಡಗಿತು. ನಾನು ತೆಪ್ಪಜ್ಜಿ ಮುಖಮಾಡಿಕೊಂಡು ಕಣ್ಣಮೇಲೆ ಕೈಯಿಟ್ಟು ನಿಂತೆ. ಒಂದಿಷ್ಟು ಚರ್ಚೆಯ ನಂತರ ಕಣ್ಣಿನ ವಿಷಯವಾದ್ದರಿಂದ ಡಾ . ಬಳಿ ಕರೆದುಕೊಂಡು ಹೋಗುವಿದೆಂದು ತೀರ್ಮಾನಿಸಿ ಹತ್ತಿರದಲ್ಲಿದ್ದ ಡಾ ಬಳಿ ಕರೆದುಕೊಂಡೂ ಹೋದರು.
ಡಾಕ್ಟರ್ ಬರಿಗಣ್ಣಿನಿಂದ ಒಮ್ಮೆ ನೋಡಿ ನಂತರ ಒಳಗೆ ಮಂಚದಮೇಲೆ ಮಲಗಿಸಿದರು. ಅದೆಂತದದೋ ಹತ್ತಾರು ಉಪಕರಣಗಳಿಂದ ಒಂದಾದ ನಂತರ ಒಂದು ಟೆಸ್ಟ್ ಮಾಡತೊಡಗಿದರು. ಪಕ್ಕದಲ್ಲಿಯೇ ಇದ್ದ ಅಕ್ಕನಿಗೆ ತಮ್ಮನ ಕಣ್ಣಿನ ಚಿಂತೆ ಒಂದೆಡೆ ಸಿಕ್ಕಾಪಟ್ಟೆ ಟೆಸ್ಟ್ ಮಾಡುತ್ತಿರುವ ಡಾಕ್ಟರ್ ಬಿಲ್ ಎಷ್ಟಾಗುತ್ತೋ ಎನ್ನುವುದು ಇನ್ನೊಂದೆಡೆ. ಒಟ್ಟಿನಲ್ಲಿ ಆತಂಕವೋ ಆತಂಕ. ಹೀಗೆ ಒಂದು ಘಂಟೆಗಳ ಕಾಲ ಪರೀಕ್ಷೆ ಮಾಡಿ ಅಂತಿಮವಾಗಿ ಒಂದು ಡ್ರಾಪ್ಸ್ ಕಣ್ಣಿಗೆ ಬಿಟ್ಟು ಏನೂ ಆಗಿಲ್ಲ ಎಂದು ವೈದ್ಯರಬಾಯಿಂದ ಬಾಂದಾಗ ಅರ್ದ ಆತಂಕ ಮಾಯ. ಇನ್ನು ಉಳಿದದ್ದು ಬಿಲ್ ಕಥೆ. ಕನಿಷ್ಟವೆಂದರೂ ಮುನ್ನೂರೋ ನಾನೂರೋ (ಆಗ ಅಕ್ಕನ ಸಂಬಳ ೭೦೦ ರೂ) ಖರ್ಚಿಗೆ ಬಂತು ಎಂದು ವೈದ್ಯ ರ ಮುಂದೆ ಸಣ್ಣ ಮುಖ ಮಾಡಿ ಎಷ್ಟು? ಎಂದಳು.
ವೈದ್ಯರು "ಎರಡು ರೂಪಾಯಿ" ಎಂದು ಸಹಜವಾಗಿ ಹೇಳಿದರು.
ನಮಗೆ ನಂಬಲಾಗದ ಸತ್ಯ . ಅಕ್ಕ ಇಷ್ಟೆಲ್ಲಾ ಕೆಲಸಕ್ಕೆ ಅದು ಅತೀ ಕಡಿಮೆಯಾಯಿತೆಂದು ಇಪ್ಪತ್ತು ರೂಪಾಯಿ ಕೊಟ್ಟು ಹೊರಡಲನುವಾದಳು. ಆದರೆ ವೈದ್ಯರು ನನ್ನ ಕೆಲಸಕ್ಕೆ ನಾನು ಬಿಲ್ ಮಾಡುವುದು ನೀವಲ್ಲ ಎಂದು ಹೇಳಿ ಮಿಕ್ಕ ಹದಿನೆಂಟು ವಾಪಾಸು ಕೊಟ್ಟು ನೆಕ್ಸ್ಟ್ ಎಂದರು.
ಅಕಸ್ಮಾತ್ ಈಗಿನ ಕಾಲದಲ್ಲಿ ಹೀಗಾಗಿದ್ದರೆ..ಕನಿಷ್ಟವೆಂದರೂ....? ಎಂಬ ರಾಗದ ಪ್ರಶ್ನೆ ನಿಮಗೆ ಹುಟ್ಟುತ್ತದೆ ಎಂದು ನನಗೆ ಗೊತ್ತು. ಇಲ್ಲ ಈಗಲೂ ಅಂತಹ ಸಿದ್ಧಾಂತಕ್ಕೆ ಜೋತುಬಿದ್ದ ವೈದ್ಯರು ಇದ್ದಾರೆ. ಡಾ ದೀಪಕ್ ಎಂಬ ಹರೆಯದ ವೈದ್ಯ. ಅವರ ಬಗ್ಗೆ ಮುಂದೆ ಎಂದಾದರೂ ಬರೆಯುತ್ತೇನೆ.

Sunday, October 11, 2009

What happens when desi returns from USA ?

Tries to use Credit Card in road side Hotel.
Drinks and carries Mineral Water and always speaks of Health. (proving to be very health conscious).
Sprays DEO such so that he doesn't need to take bath.
Sneezes and says 'Excuse me'..
Says "Hey" instead of "Hi".
Says "Yogurt" instead of "Curds"..
Says "Cab" instead of "Taxi".
Says "Candy" instead of "Chocolate".
Says "Cookie" instead of "Biscuit"..
Says "Free Way" instead of "Highway".
Says "Got To Go" instead of "Have To Go".
Says "Oh" instead of "Zero", (for 704, says Seven Oh Four Instead of Seven Zero Four)
Doesn't forget to crib about air pollution. Keeps cribbing every time he steps out.
Says all the distances in Miles (Not in KiloMeters), and counts in Millions.(Not in Lakhs)
Tries to figure all the prices in Dollars as far as possible (but deep down the heart multiplies by 43 times).
Tries to see the % of fat on the cover of a milk pocket.
When need to say Z (zed), never says Z (Zed), repeats "Zee" several times, if the other person unable to get, then says X, Y, Zee (but never says Zed).
Writes date as MM/DD/YYYY & on watching traditional DD/MM/YYYY, says "Oh! British Style!!!!"
Makes fun of Indian Standard Time and Indian Road Conditions.
Even after 2 months, complaints about "Jet Lag".

Avoids eating more chili (hot) stuff.
Tries to drink "Diet Coke", instead of Normal Coke.
Tries to complain about any thing in India as if he is experiencing it for the first time..
Pronounces "schedule" as "skejule", and "module" as "Mojule".
Looks suspiciously towards Hotel/Dhaba food.
Few more important stuff:-
From the luggage bag, does not remove the stickers of Airways by which he traveled back to India, even after 4 months of arrival.
Takes the cabin luggage bag to short visits in India, tries to roll the bag on Indian Roads.
And The Ultimate One:-
Tries to begin conversation with "In US ...." or "When I was in US..."

Friday, October 9, 2009

ಏರು ಏರು ಎಂಟಾಣೆ


ಎಂಟಾಣೆ ಎಂದು ನಮ್ಮಲ್ಲಿ ಕರೆಯಿಸಿಕೊಳ್ಳುವ ಈ ಜೀವಿ ಅಪ್ರತಿಮ ಬಕಾಸುರ. ನಿಧಾನವಾಗಿ ಚಲಿಸುವ ಇದು ಹಿತ್ತಲ ಗಿಡಗಳನ್ನು ಹಠಹೊತ್ತು ದಿನಪೂರ್ತಿ ಕಾರ್ಯನಿರ್ವಹಿಸಿ ಭಕ್ಷಿಸಿಬಿಡುತ್ತದೆ. ಹಸಿರು ಬಣ್ಣದ ಇದು ಅರಿಶಿನ ಬಣ್ಣದ ಗಿಡ ತಿಂದರೆ ಅದೇ ಬಣ್ಣಕ್ಕೆ ತಿರುಗುತ್ತದೆ. ಅಕಸ್ಮಾತ್ ಮೈಗೆ ತಗುಲಿಸಿಕೊಂಡಿರೋ ತುರಿಕೆ ಶುರು. ಈಗ ಇದು ಸೂಜಿಮೆಣಸಿನ ಗಿಡಕ್ಕೆ ಗಂಟುಬಿದ್ದಿದೆ.

Tuesday, October 6, 2009

ಹಳೆ ಕಥೆ - ಹೊಸ ಕತೆ

ಹಳೆ ಕಥೆ

ಒಂದನೊಂದು ಊರಲ್ಲಿ ಒಂದು ದೇವಸ್ಥಾನ ಇತ್ತು. ಅಲ್ಲಿ ಸನ್ಯಾಸಿಯೊಬ್ಬರು ಇದ್ದರು. ಅವರು ದೇವರಲ್ಲಿ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಒಂದು ದಿವಸ ಅ ಊರಿಗೆ ಪ್ರವಾಹ ಬಂತು. ಊರಿನ ಜನರೆಲ್ಲ ಗುಳೆ ಹೊರಟರು .ಹಾಗೆ ಹೊರಟಾಗ ಊರಿನ ಜನರು ಸನ್ಯಾಸಿಯ ಬಳಿ "ಬನ್ನಿ ಸ್ವಾಮಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತೀರ" ಎಂದರು.

ಆಗ ಸನ್ಯಾಸಿ " ಇಲ್ಲ ನೀವೆಲ್ಲ ಹೋಗಿ ಬದುಕಿಕೊಳ್ಳಿ, ನನ್ನನ್ನು ಕರೆದೊಯ್ಯಲು ಭಗವಂತ ಬರುತ್ತಾನೆ" ಎಂದು ಧ್ಯಾನದಲ್ಲಿ ಕುಳಿತರು. ಪ್ರವಾಹ ಹೆಚ್ಚುತ್ತಾ ಹೋಯಿತು ದೇವಸ್ಥಾನ ಮುಳುಗುತ್ತಾ ಬಂತು. ಸನ್ಯಾಸಿ ದೇವಸ್ಥಾನದ ನೆತ್ತಿಯ ಮೇಲೆ ಕುಳಿತು ದೇವರ ಧ್ಯಾನ ಮುಂದುವರೆಸಿದರು. ಆಗ ಒಂದು ದೋಣಿಯಾತ ಬಂದು 'ಬನ್ನಿ ಸ್ವಾಮಿ " ಎಂದು ಕರೆದ. ಆಗಲೂ ಸನ್ಯಾಸಿ ಬರಲೊಲ್ಲೆ ಎಂದರು. ನೀರು ದೇವಸ್ಥಾನದ ನೆತ್ತಿಯನ್ನೂ ಮುಳುಗಿಸತೊಡಗಿತು ಆಗ ಬಂದದ್ದು ಹೆಲಿಕ್ಯಾಪ್ಟರ್ ಆಗಲೂ ಸನ್ಯಾಸಿಯ ಉತ್ತರ ಅಷ್ಟೆ "ಇಲ್ಲ ನನ್ನನ್ನು ಕರೆದೊಯ್ಯಲು ಭಗವಂತ ಬರುತ್ತಾನೆ" ಆ ಉತ್ತರದ ನಂತರ ಪ್ರವಾಹ ಹೆಚ್ಚಿ ಸನ್ಯಾಸಿ ಅಲ್ಲಿ ಮುಳುಗಿ ಹೋದರು.
ದೇಹ ಬಿಟ್ಟ ಸನ್ಯಾಸಿಯ ಆತ್ಮ ದೇವರ ಬಳಿ ಸೇರಿತು. ಮತ್ತು ಸಿಟ್ಟಿನಿಂದ ಕೇಳಿತು " ಹೇ ಭಗವಂತಾ ನಾನು ನಿನ್ನನ್ನು ಅನವರತ ಭಜಿಸುತ್ತಿದ್ದೆ , ಆದರೂ ನೀನು ನನ್ನ ದೇಹವನ್ನು ಪ್ರವಾಹದಿಂದ ಕಾಪಾಡಲು ಬರಲಿಲ್ಲವೇಕೆ?"

ಭಗವಂತ ಯಥಾಪ್ರಕಾರ ಮುಗುಳ್ನಗುತ್ತಾ ಉತ್ತರಿಸಿದ, " ನಾನು ನಿನ್ನನ್ನು ರಕ್ಷಿಸಲು ಮೊದಲು ಜನರನ್ನು ನಂತರ ದೋಣಿಯನ್ನು ಅಂತಿಮವಾಗಿ ಹೆಲಿಕ್ಯಾಪ್ಟರ್ ನ್ನು ಕಳುಹಿಸಿದೆ, ಆದರೆ ನೀನು ಅದನ್ನು ಅರಿತುಕೊಳ್ಳಲಿಲ್ಲ ನೀನು ನಾನೇ ಬರಬೇಕೆಂದು ಹಠ ಹಿಡಿದೆ ಆದರಿಂದ ನೀನು ದೇಹವನ್ನು ಕಳೆದುಕೊಳ್ಳಬೇಕಾಯಿತು., ಭಗವಂತನಾದ ನಾನು ನಿಮ್ಮಗಳಿಗೆ ಹಲವಾರು ರೂಪದಲ್ಲಿ ಕಾಣಿಸಿಕೊಳ್ಳುತ್ತೇನೆ ಅದನ್ನು ಅರಿತುಕೊಳ್ಳುವ ಚೈತನ್ಯ ನಿಮಗಿರಬೇಕು, ಆಗಲಿ ನಿನ್ನ ಗಟ್ಟಿ ಮನಸ್ಸಿನಿಂದ ಹಠದ ಸ್ವಭಾವದಿಂದ ಅಥವಾ ಅಜ್ಞಾನದಿಂದ ನೀನು ದೇಹವನ್ನು ಕಳೆದುಕೊಂದಿರಬಹುದು ಆದರೆ ಮನುಷ್ಯರ ದೃಷ್ಟಿಯಲ್ಲಿ ಮಹಾತ್ಮನಾಗಿದ್ದೀಯ ನೋಡಲ್ಲಿ ಎಂದು ಭಗವಂತ ಸನ್ಯಾಸಿಗಳಿಗೆ ಅವರು ದೇವಸ್ಥಾನದ ನೆತ್ತಿಯಲ್ಲಿ ಬಿಟ್ಟು ಬಂದ ದೇಹವನ್ನು ತೋರಿಸಿದ. ಅಲ್ಲಿ ಪ್ರವಾಹ ಇಳಿದಿತ್ತು. ಸನ್ಯಾಸಿಯ ದೇಹದ ಸುತ್ತ ಸಾವಿರಾರು ಜನ ಸೇರಿದ್ದರು ಮತ್ತು ಅವರಿಗೆ ಮಹಾತ್ಮನ ಪಟ್ಟ ಕಟ್ಟಿದ್ದರು. ಉಘೇ ಉಘೇ ಎನ್ನುತಿದ್ದರು.
ನಂತರದ ವರ್ಷಗಳಲ್ಲಿ ಅದು ಪುಣ್ಯ ಕ್ಷೇತ್ರವಾಯಿತು.
ಹೊಸ ಕತೆ

ಅದೇ ಪುಣ್ಯಕ್ಷೇತ್ರದಲ್ಲಿ ನೂರಾರು ವರ್ಷದ ನಂತರ ಮತ್ತೆ ಪ್ರವಾಹ ಬಂತು. ಆಗಲೂ ಅಲ್ಲೊಬ್ಬರು ಸನ್ಯಾಸಿಗಳಿದ್ದರು. ಅವರಿಗೆ ಈ ಹಿಂದಿನ ಕಥೆ ಗೊತ್ತಿತ್ತು. ಅವರಿಗೂ ಭರ್ಜರಿ ಮಹಾತ್ಮನಾಗುವ ಆಸೆ ಇತ್ತು ಆದರೆ ಆಗಿರಲಿಲ್ಲ.
ಪ್ರವಾಹದ ನೀರು ದೇವಸ್ಥಾನದ ಆವರಣಕ್ಕೆ ಬರುತ್ತಿದ್ದಂತೆ ಅವರಬಳಿ ಕಾರೊಂದು ಬಂತು. ನೂರಾರು ಭಕ್ತರು ಪ್ರವಾಹದ ಭಯದಲ್ಲಿ ಅತ್ತಿಂದಿತ್ತ ಓಡಾಡುತಿದ್ದರೂ ಸನ್ಯಾಸಿಗಳು ಅದನ್ನು ಲೆಕ್ಕಿಸದೆ "ಭಗವಂತ ನನ್ನನ್ನು ಬದುಕಿಸಲು ಕಾರನ್ನು ಕಳುಹಿಸಿದ್ದಾನೆ" ಎಂದು ಕಾರನ್ನೇರಿದರು. ಆದರೆ ಕಾರು ಹೆಚ್ಚು ದೂರ ಹೋಗಲಿಲ್ಲ. ನೀರು ಹೆಚ್ಚಿದ ಕಾರಣ ರಸ್ತೆ ಇಲ್ಲದೆ ಮತ್ತೆ ದೇವಸ್ಥಾನಕ್ಕೆ ವಾಪಾಸು ಬಂತು. ಪ್ರವಾಹದ ನೀರು ದೇವಸ್ಥಾನದ ಒಳಗೆ ಬಂತು. ಸನ್ಯಾಸಿಗಳು ಮಹಡಿ ಏರಿದರು. ಅಲ್ಲೂ ಬಂತು ಸನ್ಯಾಸಿಗಳು ದೇವರು ಕಳುಹಿಸುವ ದೋಣಿಗಾಗಿ ಹುಡುಕಿದರು, ದೋಣಿ ಬಂತು, ದೇವಸ್ಥಾನದ ಮಹಡಿಯಲ್ಲಿ ಸೇರಿದ್ದ ನೂರಾರು ಜನರನ್ನು ಮರೆತು ಸನ್ಯಾಸಿಗಳು ಅದನ್ನು ಏರಿದರು. ಆದರೆ ದೋಣಿ ಹೆಚ್ಚು ದೂರ ಸಾಗಲಿಲ್ಲ . ನೀರಿನ ರಭಸಕ್ಕೆ ತೇಲುತ್ತಾ ತೇಲುತ್ತಾ ಮತ್ತೊಂದು ಕಟ್ಟಡದ ನೆತ್ತಿಯವರೆಗೆ ಬಂತು. ಸನ್ಯಾಸಿಗಳು ಅಲ್ಲಿ ಇಳಿದುಕೊಂಡು ಭಗವಂತ ಕಳುಹಿಸುವ ಕೆಲಿಕ್ಯಾಪ್ಟರ್ ಗಾಗಿ ಆಕಾಶ ನೋಡತೊಡಗಿದರು. ಅರೆ ಎಂಥಾ ಆಶ್ಚರ್ಯ ಕ್ಷಣ ಮಾತ್ರದಲ್ಲಿ ಅದೂ ಹಾರಿಕೊಂಡು ಬಂದು ಸನ್ಯಾಸಿಯಿದ್ದ ಕಟ್ಟಡದಲ್ಲಿ ಇಳಿಯಿತು. ಲಗುಬಗೆಯಿಂದ ಸನ್ಯಾಸಿ ಪೀಠ, ಗಂಟು ಮೂಟೆಯೊಡನೆ ಹೆಲಿಕ್ಯಾಪ್ಟರ್ ಹತ್ತಿ ಕುಳಿತರು. ಇನ್ನೂ ಹತ್ತೆಂಟು ಜನ ಅಲ್ಲಿದ್ದರು. ಸನ್ಯಾಸಿಗಳು ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ. ಗಂಟೆಯೊಳಗೆ ಸನ್ಯಾಸಿಗಳನ್ನು ದೂರದ ಸುರಕ್ಷಿತ ಜಾಗಕ್ಕೆ ಇಳೀಸಿದರು. ಅಲ್ಲಿ ಟಿವಿ ೯ ನವರು ಮೈಕ್ ನ್ನು ಸನ್ಯಾಸಿಗಳ ಮುಂದೆ ಹಿಡಿದು ಪ್ರವಾಹದ ಬಗ್ಗೆ ಕೇಳಿ ನಂತರ " ಪ್ರವಾಹದಲ್ಲಿ ಸಿಲುಕಿರುವ ನೂರಾರು ಭಕ್ತರ ಕಥೆ ಏನು? " ಎಂದು ಕೇಳಿದರು. ಅದಕ್ಕೆ ಸನ್ಯಾಸಿಗಳು " ನೀರು ನೀರು ಎಲ್ಲೆಲ್ಲಿಯೂ ನೀರು, ಉಳಿದ ಭಕ್ತರು ಅಲ್ಲಿ ಇದ್ದಾರೆ , ಅದೇನು ಅಂತಹಾ ದೊಡ್ಡ ವಿಷಯವಲ್ಲ ನೀರಿಳಿದ ಮೇಲೆ ಎಲ್ಲಾ ಸುರಕ್ಷಿತ" ಎಂದರು.
ಪ್ರವಾಹ ತಗ್ಗಿತು. ಸನ್ಯಾಸಿಗಳು ಮತೆ ದೇವಸ್ಥಾನಕ್ಕೆ ವಾಪಾಸಾದರು ಮತ್ತು ಹತ್ತಾರು ವರ್ಷ ಬದುಕಿದ್ದರು ಆದರೆ ಅವರು ಮಹಾತ್ಮರಾಗಲಿಲ್ಲ. ಹಾಗೆಯೇ ಒಂದು ದಿನ ಸನ್ಯಾಸಿಗಳು ದೇಹ ತ್ಯಜಿಸಿದರು. ಸನ್ಯಾಸಿಯ ಆತ್ಮಕ್ಕೆ ತಾನು ಸಿಕ್ಕಾಪಟ್ಟೆ ದೊಡ್ಡ ಮಹಾತ್ಮನಾಗಲಿಲ್ಲ ಎಂಬ ಕೊರಗು ಇತ್ತು. ಭಗವಂತನ ಬಳಿ " ಅದೇನು ? ಆ ಪ್ರವಾಹದ ಸಮಯದಲ್ಲಿ ನೀನು ಕಳುಹಿಸಿದ ಎಲ್ಲಾ ವಾಹನಗಳನ್ನು ಉಪ ಯೋಗಿಸಿದೆ ನಾನು, ಆದರೂ ತದನಂತರ ನಾನು ಭರ್ಜರಿ ಮಹಾತ್ಮ ಆಗಲೇ ಇಲ್ಲ? " ಎಂದು ಕೇಳಿದರು.
ಯಥಾಪ್ರಕಾರ ಭಗವಂತ ಹಸನ್ಮುಖಿಯಾಗಿ ಉತ್ತರಿಸಿದ " ಅಯ್ಯಾ, ನಾನು ನೀನ್ನನ್ನು ಮಹಾತ್ಮನನ್ನಾಗಿಸಲು ನೀನಿದ್ದ ಜಾಗಕೆ ಪ್ರವಾಹ ಕಳುಹಿಸಿದೆ ಆದರೆ ನೀನು ಕಾರನ್ನೇರಿದೆ. ರಸ್ತೆಗೆ ಅಡ್ಡ ನೀರನ್ನು ಹರಿಸಿದೆ ನೀನು ದೇವಸ್ಥಾನದ ಮಹಡಿಯನ್ನೇರಿದೆ. ನಿನ್ನ ಜತೆಗಿದ್ದ ಭಕ್ತರನ್ನು ದೋಣಿಯಲ್ಲಿ ಏರಿಸು ಎಂದು ದೋಣಿ ಕಳುಹಿಸಿದೆ ನೀನೇ ಏರಿದೆ. ಅದನ್ನು ತೇಲಿಸಿದೆ ಆದರೆ ನೀನು ಮತ್ತೊಂದು ಕಟ್ಟಡ ಏರಿದೆ. ಕೊನೆಯಲ್ಲಿ ಉಳಿದ ನಾಲ್ಕಾರು ಜನರನ್ನಾದರು ಬದುಕಿಸಿ ನೀನು ಮಹಾತ್ಮನಾಗುತ್ತೀಯ ಎಂದು ಹೆಲಿಕ್ಯಾಪ್ಟರ್ ಕಳುಹಿಸಿದೆ ಆದರೆ ನಿನಗೆ ನಿನ್ನ ಜೀವವೇ ಹೆಚ್ಚಾಯಿತು. ಹೋಗಲಿ ದೂರದಲ್ಲಿರುವ ಭಕ್ತರಿಗೆ ನೀನು ನಾಲ್ಕು ಒಳ್ಳೆಯ ಮಾತನ್ನಾದರೂ ಆಡಲಿ ಎಂದು ಟಿವಿ ೯ ನ ವರದಿಗಾರನನ್ನು ಕಳುಹಿಸಿದೆ ಆದರೆ ಅಲ್ಲೂ ನೀನು ಸಂಕಷ್ಟದಲ್ಲಿರುವ ಜನರಿಗೆ ಒಳ್ಳೆಯ ಮಾತನಾಡಲಿಲ್ಲ ಆದರೂ ಪ್ರವಾಹ ಮುಗಿದ ನಂತರದ ವರ್ಷಗಳಲ್ಲಿ ನಿನ್ನನ್ನೂ ನಂಬುವ ಹುಂಬ ಭಕ್ತರನ್ನು ಇರಿಸಿದೆನಲ್ಲಾ ಅದಕ್ಕೆ ಖುಷಿ ಪಡು" ಎಂದ. ಸನ್ಯಾಸಿಗೆ ಆವಾಗ ಅರ್ಥವಾದಂತಾಯಿತು.
ಆದರೆ ಏನು ಪ್ರಯೋಜನ ಇತ್ತ ಭೂಮಿಯಲ್ಲಿ ಆ ಸನ್ಯಾಸಿಯ ಜಾಗದಲ್ಲಿ ಅರ್ಥವಾಗದ ಮತೊಬ್ಬ ಸನ್ಯಾಸಿ ಕುಳಿತಿದ್ದರು. ಭಕ್ತರ ಜಾಗದಲ್ಲಿ.......................ನಾವು ....... ನೀವು ....................?


ಭಾರತದವರ ಬಗ್ಗೆ ಹೀಗೆಲ್ಲ ಇದೆಯಂತೆ ನೋಡಿ

WHY ARE INDIANS EASY TO IDENTIFY
We are like this, so true, so very true..........
1. Everything you eat is savored in garlic, onion and tomatoes. 2. You try and reuse gift wrappers, gift boxes, and of course aluminum foil. 3. You are always standing next to the two largest size suitcases at the Airport. 4. You arrive one or two hours late to a party - and think it's normal. 5. You peel the stamps off letters that the Postal Service missed to stamp. 6. You recycle Wedding Gifts, Birthday Gifts and Anniversary Gifts. 7. You name your children in rhythms (example, Sita & Gita, Ram & Shyam, Kamini & Shamini...) 8. All your children have pet names, which sound nowhere, close to their real names. 9. You take Indian snacks anywhere it says 'No Food Allowed.' 10. You talk for an hour at the front door when leaving someone's house. 11. You load up the family car with as many people as possible. 12. HIGH PRIORITY ***** You use plastic to cover anything new in your house whether it's the remote control, VCR, carpet or new couch. ***** 13. Your parents tell you not to care what your friends think, but they won't let you do certain things because of what the other 'Uncles and Aunties' will think. 14. You buy and display crockery, which is never used, as it is for special occasions, which never happen. 15.You have a vinyl tablecloth on your kitchen table. 16 You use grocery bags to hold garbage. 17.You keep leftover food in your fridge in as many numbers of bowls as possible. 18. Your kitchen shelf is full of jars, varieties of bowls and plastic utensils (got free with purchase of other stuff) 19. You carry a stash of your own food whenever you travel (and travel means any car ride longer than 15 minutes). 20. You own a rice cooker or a pressure cooker. 21. You fight over who pays the dinner bill. 22. You live with your parents and you are 40 years old. (And they prefer it that way). 23. You don't use measuring cups when cooking. 24. You never learnt how to stand in a queue. 25. You can only travel if there are 5 persons at least to see you off or receive you whether you are traveling by bus, train or plane. 26. If she is NOT your daughter, you always take interest in knowing whose daughter has run with whose son and feel proud to spread it at the velocity of more than the speed of light. 27. You only make long distance calls after 11p.m. 28. If you don't live at home, when your parents call, they ask if you've eaten, even if it's midnight. 29. You call an older person you never met before Uncle or Aunty. 30. When your parents meet strangers and talk for a few minutes, you discover you're talking to a distant cousin. 31. Your parents don't realize phone connections to foreign countries have improved in the last two decades, and still scream at the top of their lungs when making foreign calls. 32. You have bed sheets on your sofas so as to keep them from getting dirty. 33. Its embarrassing if you're wedding has less than 600 people. 34. All your Tupperware is stained with food color. 35. You have drinking glasses made of steel. 36. You have mastered the art of bargaining in shopping. 37. You have really enjoyed reading this mail - forward it to as many Indians as possible.
I STILL LOVE TO BE AN INDIAN