Thursday, May 8, 2014
ಗುರುವಿಲ್ಲದ ಕಲಾಕಾರ
Wednesday, September 11, 2013
ಯೋಜನಾಬದ್ಧ ಕೃಷಿಯಿಂದ ಸಮೃದ್ಧಿ
ಕಷ್ಟನಷ್ಟ ಎಲ್ಲಾ ಉದ್ಯೋಗದಲ್ಲಿಯೂ ಸರ್ವೇಸಾಮಾನ್ಯ ಆದರೆ ಇಷ್ಟವಿದ್ದರೆ ಅದರ ಜತೆ ತಾಳ್ಮೆ ಹಾಗೂ ಕೈಗೆತ್ತಿಕೊಳ್ಳುವ ಯೋಜನೆ ಗಳು ಸಮರ್ಪಕವಾಗಿದ್ದರೆ ಎಂತಹಾ ಉದ್ಯೋಗದಲ್ಲಿಯೂ ಯಶಸ್ಸು ಸಾದ್ಯ, ಬೇರೆಲ್ಲಾ ಉದ್ಯೋಗಕ್ಕೆ ಹೋಲಿಸಿದಲ್ಲಿ ಕೃಷಿಕ್ಷೇತ್ರ ಯಶಸ್ಸಿನ ಜತೆ ಉತ್ತಮ ಆರೋಗ್ಯ ಹಾಗೂ ನೆಮ್ಮದಿ ಬೋನಸ್ ಎಂಬುದಕ್ಕೆ ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಕಾನ್ಲೆ ಬಾಬು ಸ್ಕರಿಯಾಚನ್ ಉದಾಹರಣೆಯಾಗಿ ನಿಲ್ಲುತ್ತಾರೆ. ಕಾನ್ಲೆ ರೈಲ್ವೆ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿ ಬಾಬುರವರ ಸಮೃದ್ಧ ಕೃಷಿಕ್ಷೇತ್ರ ಕಾಣಿಸುತ್ತದೆ. ಕೇರಳ ಮೂಲದ ಬಾಬು ಸ್ಕರಿಯಾಚನ್ ೨೮ ವರ್ಷದ ಹಿಂದೆ ತಂದೆಯ ಜತೆ ಕೇರಳದ ಕ್ಯಾಲಿಕಟ್ ನಿಂದ ಸಾಗರ ತಾಲ್ಲೂಕಿನ ಕಾನ್ಲೆ ಗ್ರಾಮಕ್ಕೆ ಬಂದು ೬೦ ಎಕರೆ ಕೃಷಿ ಬರಡು ಭೂಮಿ ಖರೀದಿಸಿದರು. ಅಲ್ಲಿಂದ ತಮ್ಮ ಬದುಕನ್ನು ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡ ಬಾಬು ಒಂದೊಂದೇ ಮೆಟ್ಟಿಲೇರುತ್ತಾ ಚಿಕ್ಕ ಸಂಸಾರ ದೊಡ್ಡ ಕೃಷಿ ಕ್ಷೇತ್ರ ಎಂಬ ನೀತಿ ಪಾಲಿಸಿ ಯಶಸ್ಸಿನ ಜತೆ ನೆಮ್ಮದಿ ಬದುಕು ಕಟ್ಟಿಕೊಂಡಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಖರೀದಿಸಿದ್ದ ಜಮೀನು ಬಾಬುರವರ ಪಾಲಿಗೆ ಬಂದಿದ್ದು ೩೦ ಎಕರೆ. ವಿವಿಧ ಬೆಳೆಗಳಲ್ಲಿ ನಂಬಿಕೆ ಇಟ್ಟಿರುವ ಬಾಬು ಕೃಷಿ ಆರಂಬಿಸಿದ್ದು ಅನಾನಸ್ ಬೆಳೆಯ ಮುಖಾಂತರ. ಅನಾನಸ್ ಜತೆಗೆ ರಬ್ಬರ್ ಬೆಳೆಸಿದರು. ಅನಾನಸ್ ಆದಾಯದಲ್ಲಿ ರಬ್ಬರ್ ತೋಟ ಉಚಿತವಾಗಿ ಇಳುವರಿ ನೀಡಲಾರಂಬಿಸಿತು. ೧೧ ಎಕರೆ ರಬ್ಬರ್, ೮ ಎಕರೆ ತೆಂಗು ೮ ಎಕರೆ ಬಾಳೆ ೩ ಎಕರೆ ಅಡಿಕೆ ಹೀಗೆ ಒಂದು ಕೃಷಿಯ ಲಾಭ ಮತ್ತೊಂದಕ್ಕೆ ತೊಡಗಿಸಿ ೩೦ ಎಕರೆ ಕೃಷಿ ಕ್ಷೇತ್ರ ನಳನಳಿಸುವಂತೆ ಮಾಡಿದ್ದಾರೆ ಬಾಬು. ಅಂತರ ಬೆಳೆ : ಏಕಬೆಳೆ ಕೃಷಿಕರ ಧೈರ್ಯವನ್ನು ಕುಗ್ಗಿಸುತ್ತದೆ, ಆರ್ಥಿಕ ಹಿಂಜರಿತ ಉಂಟಾಗುತ್ತದೆ ಎಂದು ಅಚಲವಾಗಿ ನಂಬಿರುವ ಬಾಬು, ಬೆಳೆಯ ನಡುವೆ ಅಂತರಬೆಳೆ ಬೆಳೆದು ಹೆಚ್ಚಿನ ಲಾಭಗಳಿಸಿದ್ದಾರೆ. ಮಲೆನಾಡಿನಲ್ಲಿ ತೆಂಗು ಬೆಳೆ ಸಮರ್ಪಕವಾಗಿ ಬಾರದು, ತೆಂಗು ಬೆಳೆ ಸಮುದ್ರ ತೀರದಲ್ಲಿ ಎಂಬ ಎಂಬ ನಂಬಿಕೆಯನ್ನು ಬಾಬುರವರು ಹುಸಿಯಾಗಿದ್ದಾರೆ. ತೆಂಗಿನ ಮರ ಉತ್ತಮ ಫಸಲು ನೀಡಲು ಮರದಿಂದ ಮರಕ್ಕೆ ೩೦ ಅಡಿ ಅಂತರ ಕಾಪಾಡಿಕೊಂಡು ನಾಟಿ ಮಾಡಬೇಕು ಹಾಗೂ ಗರಿಷ್ಟ ೨ ಅಡಿ ಹೊಂಡ ತೆಗೆದು ಗಿಡ ನೆಡಬೇಕು, ಬೆಳೆದ ಗಿಡದ ಗರಿಗಳು ಮತ್ತೊಂದು ಗಿಡದ ಗರಿಗೆ ತಾಕದಂತೆ ಇರಬೇಕು ಆವಾಗ ತೆಂಗು ಮಲೆನಾಡಿನಲ್ಲಿ ಲಾಭದಾಯಕ ಎನ್ನುವುದು ಇವರ ಅಭಿಪ್ರಾಯ. ಪ್ರತಿಯೊಂದು ತೆಂಗಿನ ಮರದಿಂದ ೪೦೦ ರಿಂದ ೫೦೦ ತೆಂಗಿನಕಾಯಿ ವರ್ಷವೊಂದಕ್ಕೆ ಪಡೆಯುತ್ತಾರೆ. ಆದರೆ ದರದ ವಿಚಾರದಲ್ಲಿ ತೆಂಗು ಮೂವತ್ತು ವರ್ಷಗಳ ಹಿಂದೆ ಇದೆ, ಆದರೂ ಲಾಭದಾಯಕ, ಕಾಳುಮೆಣಸಿನ ಬಳ್ಳಿ ಪ್ರತೀ ತೆಂಗಿನ ಮರಕ್ಕೆ ಹಚ್ಚಿದರೆ ಲಾಭ ದುಪ್ಪಟ್ಟು. ಅಡಿಕೆಗೂ ಇದೇ ರೀತಿ ೯ ಅಡಿ ಅಂತರ ಇರಬೇಕು, ಹೆಚ್ಚು ಗಿಡ ಕಡಿಮೆ ಫಸಲು ನೀತಿಗಿಂತಲೂ ಕಡಿಮೆ ಗಿಡ ಕಡಿಮೆ ಕೆಲ ಹೆಚ್ಚು ಫಸಲು ಜತೆಗೆ ಹೆಚ್ಚು ಲಾಭ, ಗೊಬ್ಬರ ಹಾಗೂ ನೀರಿನ ಪೂರೈಕೆ ಅತಿಯಾಗಬಾರದು ಮಿತವಾಗಿರಬೇಕು ಎನ್ನುವುದು ಇವರ ಅಭಿಮತ. ರಬ್ಬರ್ ಪರಿಣಿತಿ: ರಬ್ಬರ್ ಬೆಳೆಯಲ್ಲಿ ವಿವಿಧ ರೀತಿಯ ಪ್ರಯೋಗಗಲನ್ನು ನಡೆಸಿ ಬಾಬು ಯಶಸ್ಸು ಕಂಡಿದ್ದಾರೆ. ರಬ್ಬರ್ ಮಂಡಳಿ ನಿಗದಿಪಡಿಸುವ ಅಂತರದಲ್ಲಿ ಗಿದಗಳನ್ನು ನಾಟಿ ಮಾಡಿದರೆ ಸಬ್ಸಿಡಿ ಸಿಗುತ್ತದೆ. ೧೫ ಅಡಿ ಅಂತರ ಮಂಡಳಿಯದು. ಬಾಬು ಕೊಂಚ ಬುದ್ಧಿವಂತಿಕೆ ಉಪಯೋಗಿಸಿ ರಬ್ಬರ್ ತೋಟದ ಕೊನೆಯೆ ಸಾಲಿನಲ್ಲಿ ಕೇವಲ ೫ ಅಡಿ ಅಂತರಕ್ಕೆ ಗಿಡ ನಾಟಿ ಮಾಡಿ ತೋಟದೊಳಗೆ ರಬ್ಬರ್ ಮಂಡಳಿ ನಿಗದಿಪಡಿಸಿದ ಅಂತರದ ನಾಟಿ ಮಾಡಿದ್ದಾರೆ. ಐದು ಅಡಿ ಅಂತರದಲ್ಲಿ ನಾಟಿ ಮಾಡಿದ ರಬ್ಬರ್ ಗಿದಗಳು ಉತ್ತಮ ಗಾತ್ರದಲ್ಲಿ ಬೆಳೆದಿದ್ದು ಅಧಿಕ ಲಾಭವನ್ನು ತರುತ್ತದೆ ಎನ್ನುವುದು ಬಾಬುರವರ ಅನುಭವ. ಬಾಳೆ ಬೆಳೆ: ಬಾಬುರವರು ತೆಂಗಿನತೋಟದ ನಡುವೆ ಬಾಳೆ ಬೆಳೆದು ಯಶಸ್ವಿಯಾಗಿದ್ದಾರೆ. ನೇಂದ್ರ, ಪಚ್ಚಬಾಳೆ, ಪುಟ್ಟಬಾಳೆ ಹಾಗೂ ಸೇಲಂ ಬಾಳೆಗಳನ್ನು ಬೆಳೆಯುವ ಬಾಬು ಬಾಳೆಯೊಂದರಿಂದಲೇ ವರ್ಷಕ್ಕೆ ೩ ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ತೆಂಗಿನ ತೋಟದ ನಡುವೆ ಹಿಟಾಚಿಯಿಂದ ಚರಂಡಿ ತೆಗೆಯಿಸಿ ಬಾಳೆ ನಾಟಿ ಮಾಡುವ ಬಾಬು ಐದು ಕೂಳೆ ಬಾಳೆ ಬೆಳೆದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ದಡ್ಡಿ ಗೊಬ್ಬರ, ಸಾವಯವ ಗೊಬ್ಬರದ ಜತೆ ಕೊಂಚಮಟ್ಟಿಗಿನ ರಾಸಾಯನಿಕವನ್ನು ವೈಜ್ಞಾನಿಕ ಪದ್ದತಿಯಲ್ಲಿ ಬಳಸಿದಲ್ಲಿ ಕೃಷಿ ಕ್ಷೇತ್ರ ಫಲವತ್ತತೆಯಾಗಿರುತ್ತದೆ ಎನ್ನುತ್ತಾರೆ. ಕೃಷಿ ಸಲಹೆ: ಮಲೆನಾಡಿನಲ್ಲಿ ಕೇರಳದಿಂದ ರಬ್ಬರ್ ಬೆಳೆ ಬಹಳ ಹಿಂದೆಯೇ ಕರೆತಂದ ಕೀರ್ತಿ ಬಾಬುರವರದ್ದು. ಸುತ್ತಮುತ್ತಲಿನ ನೂರಾರು ಕೃಷಿಕರಿಗೆ ಇವರು ರಬ್ಬರ್ ಕೃಷಿ ಬಗ್ಗೆ ಅವರ ಜಾಗಕ್ಕೆ ಹೋಗಿ ನಾಟಿ, ರಬ್ಬರ್ ಟ್ಯಾಪಿಂಗ್, ಮತ್ತು ರಬ್ಬರ್ ಬೆಳೆಯ ಬಗ್ಗೆ ಮಾಹಿತಿ ನೀಡಿ ರೈತರನ್ನು ರಬ್ಬರ್ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ. ಇವರು ಇದನ್ನೆಲ್ಲಾ ಉಚಿತವಾಗಿ ಕೇವಲ ಆಸಕ್ತಿಗಾಗಿ ಮಾಡಿದ್ದಾರೆ. ಮಿನಿ ಗಾರ್ಡನ್: ಬಾಬು ರವರ ಪತ್ನಿ ಮಿನಿಬಾಬು ರವರದು ಹೂ ಕೃಷಿ. ಮನೆಯ ಸುತ್ತಮುತ್ತಲಿನ ಇಂಚಿಂಛು ಜಾಗವೂ ಅಂಥೋರಿಯಂ, ಪಾಪಸ್ ಕಳ್ಳಿ , ಗುಲಾಬಿ, ಕಾಗದಾಳಿ ಮುಂತಾದ ಆಕರ್ಷಕ ಹೂವುಗಳಿಂದ ಮನಮೋಹಕವಾಗಿದೆ. ಹೂವಿನ ಕೃಷಿಯಲ್ಲಿ ತೊಡಗಿಸಿ ಕೊಂಡಿರುವ ಮಿನಿಬಾಬು ಕೃಷಿಯಲ್ಲಿಯೂ ಯಜಮಾನರಿಗೆ ಸಾಥ್ ನೀಡುತ್ತಾರೆ. ಇಲ್ಲಿ ಎಲ್ಲವೂ ಇದೆ: ಸರ್ವ ಋತು ಹಲಸಿನಿಂದ ಹಿಡಿದು, ನಿಂಬೆ, ಪೇರಳೆ, ಬಿಳೀ ಕೆಸ, ಹೀಗೆ ಎಲ್ಲಾ ಜಾತಿಯ ಹಣ್ಣು ಹಂಪಲು ಇವರ ಕ್ಷೇತ್ರದಲ್ಲಿ ಲಭ್ಯ. ೩ ಎಕರೆ ಪ್ರದೇಶಲ್ಲಿನ ತೆಂಗಿನ ನಡುವೆ ಅಂತರ ಬೆಳೆಯಾಗಿರುವ ೧೨೦ ಸಪೋಟ ಗಿಡಗಳು ಇವರಿಗೆ ಆದಾಯದ ಮೂಲವೂ ಹೌದು. ಪಕ್ಷಿಪ್ರೀತಿ: ನಮ್ಮ ರಾಷ್ಟ್ರ ಪಕ್ಷಿ ಇಲ್ಲಿ ಹತ್ತಿರದಿಂದ ನೋಡಲು ಸಿಗುತ್ತದೆ. "ವಿವಿ" ಎಂಬ ಹೆಸರಿನ ನವಿಲು ಈ ಮನೆಯ ಸುತ್ತಮುತ್ತ ಓಡಾಡುತ್ತಲಿರುತ್ತದೆ. ಮನೆಗೆ ಬರುವ ಅತಿಥಿಗಳ ಹಿಂದೆ ಮುಂದೆ ಸುತ್ತಾಡುವ ವಿವಿ ಅತಿಥಿಗಳು ಟಾಟಾ ಹೇಳುವವರೆಗೂ ಅವರ ಹಿಂದೆಯೇ ಓಡಾಡುತ್ತಾ ಇರುತ್ತದೆ. ಅಕ್ಕರೆಯಿಂದ ಮನೆಯ ಗಿರಿರಾಜ ಕೋಳಿಗಳ ಜತೆ ಇರುವ ನವಿಲು ನೋಡುಗರಿಗೆ ಅಚ್ಚರಿ ಮೂಡಿಸುತ್ತದೆ. ಕೇರಳದಲ್ಲಿ ಕೃಷಿ ಕೊಂಚ ಸುಲs ಅಲ್ಲಿ ನೀರಿನ ಸಮಸ್ಯೆ ಕಡಿಮೆ, ಜಾನುವಾರು ಕಾಟವಿಲ್ಲ, ಎಲ್ಲರೂ ಅವರವರ ದನಗಳನ್ನು ಅವರೇ ನೊಡಿಕೊಳ್ಳುತ್ತಾರೆ, ಜತೆಗೆ ಅಲ್ಲಿನ ಕೃಷಿಕರು ಧನಾತ್ಮಕ ಯೋಚನೆಯಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆಟೊ ಓಡಿಸುವುದರಿಂದ ಹಿಡಿದು ಬಸ್ ಮಾಲಿಕರವರೆಗೂ, ಸಣ್ಣ ಅಂಗಡಿಯಿಂದ ಹಿಡಿದು ದೊಡ್ದ ಫ್ಯಾಕ್ಟರಿಯವರೆಗೂ ಕಷ್ಟ ನಷ್ಟಗಳು ಇದ್ದೇ ಇರುತ್ತವೆ, ಅವನ್ನೆ ಹಿಡಿದುಕೊಂಡು ಕೊರಗುತ್ತಾ ಕೈಕಟ್ಟಿ ಕುಳಿತರೆ ಎಲ್ಲಿಯೂ ಯಶಸ್ಸು ಸಿಗುವುದಿಲ್ಲ, ನಾವು ೨೮ ವರ್ಷದ ಹಿಂದೆ ೪ ಸಾವಿರ ಎಕರೆಗೆ ಕೊಂಡಿದ್ದ ಜಮೀನು ನಮ್ಮ ಬೆವರಿನ ಫಲವಾಗಿ ಇಂದು ಎಕರೆಗೆ ೨೦ ಲಕ್ಷ ರೂಪಾಯಿ ಆಗಿದೆ. ಈ ಮಧ್ಯೆ ನಮ್ಮ ಜೀವನ ನಡೆದಿದೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಹಬ್ಬ ಹರಿದಿನ ಎಲ್ಲವೂ ನಮಗೆ ಕೃಷಿಯಿಂದಲೇ ಆಗಿದೆ ಹಾಗಾಗಿ ಇಲ್ಲಿ ನಾನು ನೆಮ್ಮದಿ ಕಂಡಿದ್ದೇನೆ, ಪತ್ನಿ ಪುತ್ರಿ ಯ ಜತೆ ಕಾಲ ಕಳೆಯುವುದಕ್ಕೂ ಸಮಯ ಸಿಕ್ಕಿದೆ, ಸವಾಲುಗಳು ಎಲ್ಲಾ ಕ್ಷೇತ್ರದಲ್ಲಿಯೂ ಇದೆ ಹಾಗೆಯೇ ಇಲ್ಲಿಯೂ ಇದೆ, ನಮ್ಮ ಜಾಣತನದಿಂದ ಅದನ್ನು ಎದುರಿಸಬೇಕು, ಇಲ್ಲಿ ಸೋಮಾರಿತನ ಸಲ್ಲದು ಹಾಗೂ ಆಕಳು ಹಿಂಡಿ, ಕೊಟ್ಟಿಗೆಯ ಸಗಣಿ ತೆಗೆಯುವುದರಿಂದ ಪ್ರಾರಂಭಿಸಿ ತೋಟದ ಮಣ್ಣು ಕೆಲಸವೂ ಕೃಷಿಕನಿಗೆ ಗೊತ್ತಿರಬೇಕು ಮತ್ತು ಮಾಡಲು ಸಿದ್ಧವಿರಬೇಕು ಆವಾಗ ಕೃಷಿ ಕಾರ್ಮಿಕರು ನಮ್ಮೊಟ್ಟಿಗೆ ಸಹಕರಿಸುತ್ತಾರೆ, ಎನ್ನುತ್ತಾರೆ ಬಾಬು ಸ್ಕರಿಯಾಚನ್. ಕೃಷಿಕ್ಷೇತ್ರ ಅತ್ಯಂತ ಉತ್ತಮವಾಗಿದ್ದು ಆದರೆ ಯೋಜನೆ ಯೋಚನೆ ಸಮರ್ಪಕವಾಗಿರಬೇಕು ಎನ್ನುವುದಕ್ಕೆ ಕಾನ್ಲೆ ಬಾಬುರವರು ಸಾಕ್ಷಿ. ಪ್ರಕೃತಿಯ ಹಸಿರನ ನಡುವೆ ಸುಂದರವಾದ ಪುಟ್ಟಮನೆ, ಸುತ್ತಮುತ್ತ ಓಡಾಡುವ ನವಿಲು, ಆಕಳಿನ ಕೂಗು, ಬಣ್ಣಬಣ್ಣದ ಹೂವುಗಳು, ಮೈ ತಬ್ಬುವ ನಾಯಿ, ಕೇಳಿದಷ್ಟೂ ಮಾಹಿತಿ ನಿಡುವ ಬಾಬು ದಂಪತಿಗಳು ಎಂತಹವರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ನಾವು ಹೀಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಸೆ ಮೂಡುತ್ತದೆ. ಬಾಬು ಸ್ಕರಿಯಾಚನ್ ಮೊಬೈಲ್ : ೯೬೩೨೬೦೬೧೬೫ ಹಾಗೂ ಮಿನಿಬಾಬು: ೯೪೪೮೯೪೩೯೦೮
Thursday, March 14, 2013
ಕಾರ್ಪೋರೇಟ್ ಕೃಷಿ.
ತಾಳಗುಪ್ಪದಿಂದ ಜೋಗಕ್ಕೆ ಸಾಗುವ ರಾಷ್ತ್ರೀಯ ಹೆದ್ದಾರಿ ೨೦೬ ಮಾರ್ಗದಲ್ಲಿ ಮನಮನೆಯ ನಂತರ ಸಿಗುವ "ಮತ್ತುಗ ಫಾರಂ" ಹೌಸ್ ನರಹರಿಯವರ ಕೃಷಿ ಕ್ಷೇತ್ರ. ಮೂಲತಃ ಕೃಷಿಕುಟುಂಬದವರಾಗಿದ್ದ ನರಹರಿಯವರು ತುಮ್ರಿಯ ಸಮೀಪ ಹುಳಿಸೆ ಕೇರಿ ಊರಿನವರು.ಲಿಂಗನಮಕ್ಕಿ ಆಣೆಕಟ್ಟಿನ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡು ಉದ್ಯೋಗದ ನಿಮಿತ್ತ ಬೆಂಗಳೂರು ಸೇರಿದರು. ಅಲ್ಲಿ ಎಷ್ಟೇ ದುಡಿದರೂ ಮನಸ್ಸಿನಲ್ಲಿ ಹುದುಗಿದ್ದ ಕೃಷಿಕ ಕಾಡುತ್ತಲಿದ್ದ, ೧೯೯೭ ರಲ್ಲಿ ೧೦ ಎಕರೆ ಖುಷ್ಕಿ ಜಮೀನು ಖರಿದಿಸಿದ ನರಹರಿ ಬಾಳೆ ಅಡಿಕೆ ಕಾಳು ಮೆಣಸು ಏಲಕ್ಕಿ ಕೃಷಿ ಆರಂಭಿಸಿದರು. ಖುಷ್ಕಿ ಜಮೀನು ಹಾಗೂ ಕಲ್ಲಿನ ಜಾಗವಾದ್ದರಿಂದ ಅಲ್ಲಿ ಕೃಷಿ ಸುಲಭವಾಗಿರಲಿಲ್ಲ, ಲಾರಿಯಲ್ಲಿ ಕಾಡುಮಣ್ಣು ಜಮೀನಿಗೆ ತುಂಬಿಸಿ ಸಾರಯುತ ಮಾಡುವಂತಹ ಪರಿಸ್ಥಿತಿ ಅಂದು ಇತ್ತು. ಬಹಳ ಹಣ ಬೇಡುತ್ತಿದ್ದ ಕೃಷಿಕ್ಷೇತ್ರ ಜನರ ದೃಷ್ಟಿಯಲ್ಲಿ ನರಹರಿ ತಪ್ಪು ಹೆಜ್ಜೆ ಇಡುತ್ತಿದ್ದಾರೆ ಎಂಬ ಮಾತುಗಳು ಸಾಮಾನ್ಯವಾಗಿತ್ತು. ತೆರೆದಬಾವಿ ಜಮೀನಿಗೆ ನೀರುಣಿಸಲು ವಿಫಲವಾದಾಗ ಕೊಳೆಬಾವಿಯ ಮೊರೆಹೋದರು ನರಹರಿ. ಮೂರು ಕೊಳವೆ ಬಾವಿಗಳು ವಿಫಲವಾದಾಗ ಸ್ವಲ್ಪ ಅಧೀರರಾದರೂ ಹತಾಶರಾಗದೆ ಇನ್ನೊಂದು ಪ್ರಯತ್ನಕ್ಕಿಳಿದರು. ನಾಲ್ಕನೆ ಕೊಳವೆ ಬಾವಿ ಕೈ ಹಿಡಿಯಿತು. ವರ್ಷದಿಂದ ವರ್ಷಕ್ಕೆ ಹತ್ತು ಎಕರೆ ಜಾಗದಲ್ಲಿ ಜಲಮರುಪೂರಣ ಕೈಗೊಂಡ ಕಾರಣ ಬೋರ್ ವೆಲ್ ನೀರು ಸಾಕಷ್ಟು ಹೆಚ್ಚಿ ಹತ್ತು ಎಕರೆ ಹಸಿರಿನಿಂದ ನಳನಳಿಸುವಂತಾಯಿತು.
ಪಾಳೇಕರ್ ಕೃಷಿ: ಅನುಸರಿಸಲು ಹಾಗೂ ಕೃಷಿಕ್ಷೇತ್ರ ಹಸಿರಿನಿಂದ ನಳನಳಿಸಲು ಉತ್ತಮ ಪದ್ದತಿಯೆಂದರೆ "ಪಾಳೇಕರ್ ಕೃಷಿ ವಿಧಾನ" ಎಂಬುದು ನರಹರಿಯವರ ಅನುಭವ ವೇದ್ಯ ಮಾತುಗಳು. ರಾಸಾಯನಿಕಗಳಿಮ್ದ ಗಾವುದ ದೂರವಿರುವ ನರಹರಿ ಹತ್ತು ಎಕರೆಗೂ ಸಾವಯಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಗಿಡಕ್ಕೆ ನೀರಿನ ಮೂಲಕ ದ್ರವರೂಪಿಗೊಬ್ಬರ ವಿತರಣೆ ಮಾಡುತ್ತಾರೆ. ಇದರಿಂದಾಗಿ ಒಂದೇ ಖರ್ಚಿನಲ್ಲಿ ಎರಡು ಕೆಲಸ ಸಾಧಿಸಿಕೊಳ್ಳುತ್ತಿದ್ದಾರೆ. ಜೀವ ಚೈತನ್ಯ ಕೃಷಿಯನ್ನು ಎರಡು ವರ್ಷ ಸಂಪೂರ್ಣ ಅಳವಡಿಸಿದ್ದರೂ ಅದು ಹೆಚ್ಚಿನ ಶ್ರಮ ಬೇಡುವುದರಿಂದ ಕೆಲವು ಸುಲಭವಾದಂತಹ ಸಿಂಪರಣೆಗಳನ್ನು ಮಾತ್ರಾ ಉಳಿಸಿಕೊಂಡು ಮಿಕ್ಕಂತೆ ಪಾಳೇಕರ್ ಕೃಷಿ ಅಳವಡಿಸಿ ಯಶಸ್ಸು ಸಾಧಿಸಿದ್ದಾರೆ.
ಬಗ್ಗಡ ಸರಬರಾಜು: ಮನೆಯ ಸ್ನಾನದ, ಹಾಗೂ ಲ್ಯಾಟ್ರೀನ್ ಗುಂಡಿಗಳ ನೀರನ್ನು ಶುದ್ಧಿಕರಣ ಘಟಕ ಸ್ಥಾಪಿಸಿ ಗಿಡಗಳಿಗೆ ಪೂರಸುವುದರ ಮೂಲಕ ಉತ್ತಮ ಪ್ರತಿಫಲ ಕಂಡಿದ್ದಾರೆ ನರಹರಿ. ಅಲ್ಲಿ ಬಳಕೆಯಾಗುವ ಎಲ್ಲಾ ವಸ್ತುಗಳನ್ನೂ ಗೊಬ್ಬರವಾಗಿ ಬಳಸುವುದರಿಂದ ಗೊಬ್ಬರಕ್ಕಾಗಿ ವ್ಯಯಿಸುವ ಖರ್ಚು ಅರ್ದ ಮಿಗಿಸುತ್ತಾರೆ.
ಬಾಳೆ ಕೃಷಿ: ಹತ್ತು ಎಕರೆ ಅಡಿಕೆ ತೋಟದ ಆದಾಯದಷ್ಟೇ ಆದಾಯವನ್ನು ಅಂತರಬೆಳೆಯ ಮೂಲಕ ಗಳಿಸುತ್ತಿದ್ದಾರೆ. ಆರಂಭದಿಂದಲೂ ಬಾಳೆ ಕೃಷಿಗೆ ಒತ್ತು ನೀಡಿದ ನರಹರಿ, ಪಚ್ಚಬಾಳೆ,ಕರಿಬಾಳೆ ಮುಂತಾದವುಗಳ ಕೃಷಿ ನಡೆಯಿಸಿ ಅಂತಿಮವಾಗಿ ಏಲಕ್ಕಿಬಾಳೆಯಿಂದ ಯಶಸ್ಸುಕಂಡುಕೊಂಡಿದ್ದಾರೆ. ೨೫೦೦ ಬಾಳೆಸಸಿ ನಿರಂತರ ಗೊನೆ ಸಿಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದು ವಾರ್ಷಿಕ ಒಂದೂವರೆ ಲಕ್ಷ ರೂಪಾಯಿಗಳ ಆದಾಯ ಬಾಳೆಯಿಂದ ಗಳಿಸುತ್ತಿದ್ದಾರೆ. ಹಾಲುವಾಣ ಗಿಡಗಳಿಗೆ ಕಾಳುಮೆಣಸು ಹಬ್ಬಿಸುವುದರ ಮೂಲಕ ಉತ್ತಮ ಕಾಳುಮೆಣಸು ಆದಾಯ ಹೊಂದಿದ್ದಾರೆ. ಅಂತರಬೆಳೆಯಾಗಿ ಸೆಲೆಕ್ಷೆನ್ ೯ ಕಾಪಿ ಬೆಳೆದಿದ್ದು ಉಪ ಆದಾಯವಾಗಿ ವಾರ್ಷಿಕ ೫-೬ ಕ್ವಿಂಟಾಲ್ ಉತ್ತಮ ಕಾಫಿ ಬೀಜ ಬೆಳೆಯುತ್ತಿದ್ದಾರೆ. ಖುಷ್ಕಿ ಜಮೀನಿಗೆ ಏಲಕ್ಕಿ ಮಾತ್ರಾ ನಿರಂತರ ಒಗ್ಗದು ಎನ್ನುವುದು ನರಹರಿ ಕಂಡುಕೊಂಡ ಸತ್ಯ. ಸ್ಥಳಿಯ ಏಲಕ್ಕಿ ನಾಟಿ ಮಾಡಿ ಒಂದು ಕ್ವಿಂಟಾಲ್ ಏಲಕ್ಕಿ ಬೆಳೆದರೂ ಗಿಡಗಳು ಮೂರು ವರ್ಷದ ನಂತರ ನಿಲ್ಲಲಿಲ್ಲ, ಕೆರಳದಿಂದ ನೆಲ್ಯಾಣಿ ಏಲಕ್ಕಿ ತಂದು ಪ್ರಯತ್ನಿಸಿದರೂ ಒಂದೆರಡು ವರ್ಷ ಆದಾಯ ನೀಡುತ್ತದೆ ನಂತರ ಕಟ್ಟೆ ರೋಗ ವ್ಯಾಪಿಸುತ್ತದೆ . ಬಾಳೆ ಮಾತ್ರಾ ಮಲೆನಾಡಿನ ಅಡಿಕೆ ತೋಟಕ್ಕೆ ಉತ್ತಮ ಉಪಬೆಳೆಯಾಗಿದ್ದು ತೋಟವನ್ನೂ ಹಾಗೂ ಮಾಲೀಕನನ್ನೂ ನೆಮ್ಮದಿಯಿಂದ ಇಡುತ್ತದೆ ಎನ್ನುತ್ತಾರೆ.
ಜೇನು ಕೃಷಿ: ಫಸಲು ಜಾಸ್ತಿಯಾಗಬೇಕಾದರೆ ಜೇನು ಸಾಕಾಣಿಕೆಗೆ ಮೊರೆಹೋಗುವುದು ಒಳಿತು ಎಂಬುದಕ್ಕೆ ಇಲ್ಲಿದೆ ಸಾಕ್ಷಿ. ನ್ತಾಕಿನ ಉಸ್ತುವಾರಿ ನೊಡಿಕೊಳ್ಳುತ್ತಿರುವ ವಿಗ್ನೇಶನಿಗೆ ಜೇನು ಕೃಷಿಯಲ್ಲಿ ಅಪಾರ ಆಸಕ್ತಿ. ಹಾಗಾಗಿ ತೋಟದ ತುಂಬೆಲ್ಲಾ ತುಡುವೆ ಜೇನಿನ ಪೆಟ್ಟಿಗೆಗಳು ನೋಡುಗರಿಗೆ ಸಿಗುತ್ತವೆ. ಜೇನುತುಪ್ಪ ತೆಗೆಯುವುದರ ಬಗ್ಗೆ ಹೆಚ್ಚು ಆಸಕ್ತಿ ತೋರದೇ ಜೇನಿನ ಅಭಿವೃದ್ಧಿ ಬಗ್ಗೆ ಇಲ್ಲಿ ಹೆಚ್ಚು ಗಮನ. ಇದರ ಆದಾಯ ಫಸಲು ಹೆಚ್ಚಳದಲ್ಲಿ ಬರುತ್ತದೆ, ತುಪ್ಪ ಹುಳುಗಳುಗೆ ಮೀಸಲು, ಕೊಂಚ ಮಾತ್ರಾ ಅಂದರೆ ಮನೆಬಳಕೆಗೆ ತೆಗೆಯಬೇಕು ಅನ್ನುವುದು ಅಭಿಪ್ರಾಯ.
ಹೋಂಸ್ಟೆ: ತಮ್ಮ ವಾಸಕ್ಕೆಂದು ಕಟ್ಟಿಸಿರುವ ಮನೆಯನ್ನು ಹೋಂ ಸ್ಟೆ ಯಾಗಿ ಸರ್ಕಾರದ ಅನುಮತಿ ಪಡೆದು ನಡೆಸುತ್ತಿರುವ ನರಹರಿ ಪಟ್ಟಣದ ಜನರಿಗೆ ಹಳ್ಳಿಯ ಬದುಕನ್ನು ತೋರಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಸ್ಟೆ ಎಟ್ ಮತ್ತುಗ" ಎಂಬ ಹೆಸರಿನಲ್ಲಿ ಈಗಾಗಲೇ ಜನಜನಿತವಾಗಿರುವ ಹೋಂ ಸ್ಟೆ ಮಲೆನಾಡಿನ ಕೃಷಿಕರ ಬದುಕು ಹಾಗೂ ಇಲ್ಲಿಯ ಸಂಸ್ಕೃತಿ, ಮತ್ತು ಮಲೆನಾಡಿನ ಊಟವನ್ನು ನಗರದ ಜನರಿಗೆ ಯಶಸ್ವಿಯಾಗಿ ಪರಿಚಯಿಸಿದ್ದಾರೆ. ಎರಡು ಕುಟುಂಬಗಳ ಉದರ ಪೋಷಣೆ ಹಾಗೂ ಹಳ್ಳಿಯ ಹತ್ತು ಜನರಿಗೆ ಉದ್ಯೋಗ ನೀಡುವುದರ ಮೂಲಕ ಸಾಮಾಜಿಕ ಬದ್ಧತೆಗೂ ಕಾರಣೀಕರ್ತರಾಗಿದ್ದಾರೆ. ತಮ್ಮ ಕೃಷಿ ಕ್ಷೇತ್ರಗಳನ್ನು ಜನರಿಗೆ ಪರಿಚಯಿಸುವುದರ ಮೂಲಕ ಕೃಷಿಕ ಹೀಗೂ ಆದಾಯಗಳಿಸಬಹುದು, ಪಟ್ಟಣದಲ್ಲಿದ್ದವರಿಗೆ ಸಿಗದ ಜೀವನ ಪದ್ದತಿಯನ್ನು ಹೀಗೂ ಕೊಡಬಹುದು ಎಂಬುದನ್ನ ತೊರಿಸಿಕೊಟ್ಟು ಕೃಷಿಕೋ ನಾಸ್ತಿ ದುರ್ಬಿಕ್ಷ್ಯ: ಎಂಬ ಮಾತಿಗೆ ಇಂಬು ನೀಡಿದ್ದಾರೆ.
ಮನುಷ್ಯನಿಗೆ ಶ್ರದ್ಧೆಯಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನರಹರಿಯವರ ಕೃಷಿ ಕ್ಷೇತ್ರ ಸಾಕ್ಷಿಯಾಗಿ ನಿಲ್ಲುತ್ತದೆ. ಪತ್ನಿ ಕಾಮಾಕ್ಷಿ ಕೂಡ ಕೃಷಿ ಆಸಕ್ತಿಯಿರುವುದರಿಂದ ಕೆಲಸ ಸುಲಭವಾಗಿದೆ ಎನ್ನುವುದು ನರಹರಿಯವರ ಮಾತುಗಳು. ನೋಡಿ ಕಲಿ ಮಾಡಿ ತಿಳಿ ಎಂದು ಮೇಲ್ನೋಟದ ಮಾತಾದರೂ ಹತ್ತು ಎಕರೆ ತೋಟ ಹೋಂ ಸ್ಟೇ ಸಹಿತ ಎದ್ದು ನಿಲ್ಲುವುದಕ್ಕೆ ತಗುಲಿದ ಶ್ರಮ ನರಹರಿಯವರ ಅನುಭವಕ್ಕೆ ಮಾತ್ರಾ. ಅದು ಎಲ್ಲರಿಗೂ ತಿಳಿಯಬೇಕು ಎಂದಾದರೆ ಅವರ ಸಂಪರ್ಕದಿಂದ ಸಾದ್ಯ. ಹೀಗೆ ಸಾಧಿಸುವವರ ಸಂಖ್ಯೆ ಜಾಸ್ತಿಯಾದಂತೆಲ್ಲಾ :ಭಾರತ ಸುಂದರ ಹಳ್ಳಿಗಳ ದೇಶ" ಎಂಬ ಸಾಲುಗಳು ಪ್ರಪಂಚಾದ್ಯಂತ ಪಸರಿಸಲು ಸಾದ್ಯವಾಗುತ್ತದೆ.
Mo:9880799975
Friday, March 1, 2013
ಆರಂಭಿಸಿ ಇವತ್ತಿನಿಂದಲೇ
ಆರೋಗ್ಯ ಅನ್ನೋದೊಂದು ಸರಿ ಇದ್ದ ಮನುಷ್ಯನಿಗೆ ಯೋಚನೆ ಇದ್ದೇ ಇರುತ್ತದೆ. ಪುತಪುತನೆ ಹುಟ್ಟುವ ಯೋಚನೆ ಕೆಲವರಿಗಾದರೆ ನಿಧಾನಗತಿಯ ಯೋಚನೆ ಮತ್ತೆ ಕೆಲವರಿಗೆ, ಒಟ್ಟಿನಲ್ಲಿ ಯೋಚನೆ ನಿರಂತರ ಬರುತ್ತಲೇ ಇರುತ್ತದೆ. ಈಗ ವಿಜಯ ಸಾಧಿರುವ ಮನುಷ್ಯ ನ ಯೋಚನೆಗಳೇನು ಅಂಬೋ ಪ್ರಶ್ನೆ ನನಗಂತೂ ಆಗಾಗ ಕಾಡುತ್ತಲಿರುತ್ತದೆ.
ಹುಟ್ಟುವ ಯೋಚನೆಗಳಿಗೆ ರೂಪ ಬಣ್ಣ ಆಕಾರ ಯಾವುದೂ ಇರುವುದಿಲ್ಲ. ಹುಟ್ಟಿದ ಮೇಲೆ ನಾವೆಷ್ಟು ಆಹಾರ ಹಾಕುತ್ತೇವೆ, ಎಂತಹ ಆಹಾರ ಹಾಕುತ್ತೇವೆ, ಏನು ಆಹಾರ ಹಾಕಿ ಪೋಷಿಸಿ ಬೆಳಸಿ ಬಣ್ಣ ಬಳಿದು ರೂಪ ಕೊಡುತ್ತೇವೆ ಅನ್ನುವುದರ ಮೇಲೆ ಪ್ರಪಂಚ. ಏನೂ ಮಾಡದಿದ್ದರೆ ಬಂದ ಯೋಚನೆ ಬಂದಂತೆ ಮಾಯವಾಗಿರುತ್ತದೆ.
ಒಂದಿಷ್ಟು ಜನ ನೆಗೆಟೀವ್ ರೂಪ ಕೊಡುತ್ತಾರೆ ಬಂದ ಯೋಚನೆಗೆ, ಇನ್ನು ಕೆಲವು ಜನ ಪಾಸಿಟೀವ್ ರೂಪ ಕೊಡುತ್ತಾರೆ, ಮದ್ಯಸ್ಥರು ಸುಮ್ಮನಿದ್ದುಬಿಡುತ್ತಾರೆ. ಸೂಪರ್ ಸಕ್ಸಸ್ ಪೀಪಲ್ ಗಳಿಗೆ ಅಪ್ಪಿತಪ್ಪಿಯೂ ನೆಗೇಟೀವ್ ಯೋಚನೆ ಹುಟ್ಟುವುದೇ ಇಲ್ಲ, ಅದಕ್ಕೆ ಅವರ ಅಪ್ಪ ಅಮ್ಮ ಮಾಡಿದ ಯೋಚನೆಯೂ ಕಾರಣ ಎನ್ನುವುದು ಸ್ಪಷ್ಟ.
ಇನ್ನಷ್ಟು ಜನ ಹುಟ್ಟಿದ ನೆಗೇಟಿವ್ ಯೋಚನೆಯನ್ನು ಅದುಮಿ ಪಾಸಿಟೀವ್ ಯೋಚನೆಯನ್ನು ತುರುಕುತ್ತಾರೆ. ಅವರು ಅರ್ದಂಬರ್ದ ಸಕ್ಸಸ್.
ಮತ್ತಷ್ಟು ಜನ ತಾವು ನೆಗೆಟೀವ್ ಯೋಚನೆ ಮಾಡುವುದಷ್ಟೇ ಅಲ್ಲದೆ ಪ್ರಪಂಚದ ನೆಗೆಟೀವ್ ಗಳನ್ನೆಲ್ಲಾ ತುಂಬಿಕೊಂಡು ಸಿಕ್ಕ ಸಿಕ್ಕವರಿಗೆಲ್ಲಾ ಬಿತ್ತುತ್ತಾ ಸಾಗುತ್ತಾರೆ.
ಇವೆಲ್ಲಾ ರಗಳೆ ಖುಶ್ ಖುಶ್ ಇದ್ದು ಸಕ್ಸಸ್ ಆಗಬೇಕು ಅಂತ ಇದೆಯಾ?, ಜಸ್ಟ್ ದಿನಾ ಬೆಳಿಗ್ಗೆ ತಣ್ನೀರು ಸ್ನಾನ ಮಾಡಿ, ಅಥವಾ ಈಜು ಹೊಡೆಯಿರಿ ಹೊಳೆಯಲ್ಲಿ ಅಥವಾ ಸೂಪರ್ ಧ್ಯಾನ ಆರಂಭಿಸಿ ಇವತ್ತಿನಿಂದಲೇ.
ಹುಟ್ಟುವ ಯೋಚನೆಗಳಿಗೆ ರೂಪ ಬಣ್ಣ ಆಕಾರ ಯಾವುದೂ ಇರುವುದಿಲ್ಲ. ಹುಟ್ಟಿದ ಮೇಲೆ ನಾವೆಷ್ಟು ಆಹಾರ ಹಾಕುತ್ತೇವೆ, ಎಂತಹ ಆಹಾರ ಹಾಕುತ್ತೇವೆ, ಏನು ಆಹಾರ ಹಾಕಿ ಪೋಷಿಸಿ ಬೆಳಸಿ ಬಣ್ಣ ಬಳಿದು ರೂಪ ಕೊಡುತ್ತೇವೆ ಅನ್ನುವುದರ ಮೇಲೆ ಪ್ರಪಂಚ. ಏನೂ ಮಾಡದಿದ್ದರೆ ಬಂದ ಯೋಚನೆ ಬಂದಂತೆ ಮಾಯವಾಗಿರುತ್ತದೆ.
ಒಂದಿಷ್ಟು ಜನ ನೆಗೆಟೀವ್ ರೂಪ ಕೊಡುತ್ತಾರೆ ಬಂದ ಯೋಚನೆಗೆ, ಇನ್ನು ಕೆಲವು ಜನ ಪಾಸಿಟೀವ್ ರೂಪ ಕೊಡುತ್ತಾರೆ, ಮದ್ಯಸ್ಥರು ಸುಮ್ಮನಿದ್ದುಬಿಡುತ್ತಾರೆ. ಸೂಪರ್ ಸಕ್ಸಸ್ ಪೀಪಲ್ ಗಳಿಗೆ ಅಪ್ಪಿತಪ್ಪಿಯೂ ನೆಗೇಟೀವ್ ಯೋಚನೆ ಹುಟ್ಟುವುದೇ ಇಲ್ಲ, ಅದಕ್ಕೆ ಅವರ ಅಪ್ಪ ಅಮ್ಮ ಮಾಡಿದ ಯೋಚನೆಯೂ ಕಾರಣ ಎನ್ನುವುದು ಸ್ಪಷ್ಟ.
ಇನ್ನಷ್ಟು ಜನ ಹುಟ್ಟಿದ ನೆಗೇಟಿವ್ ಯೋಚನೆಯನ್ನು ಅದುಮಿ ಪಾಸಿಟೀವ್ ಯೋಚನೆಯನ್ನು ತುರುಕುತ್ತಾರೆ. ಅವರು ಅರ್ದಂಬರ್ದ ಸಕ್ಸಸ್.
ಮತ್ತಷ್ಟು ಜನ ತಾವು ನೆಗೆಟೀವ್ ಯೋಚನೆ ಮಾಡುವುದಷ್ಟೇ ಅಲ್ಲದೆ ಪ್ರಪಂಚದ ನೆಗೆಟೀವ್ ಗಳನ್ನೆಲ್ಲಾ ತುಂಬಿಕೊಂಡು ಸಿಕ್ಕ ಸಿಕ್ಕವರಿಗೆಲ್ಲಾ ಬಿತ್ತುತ್ತಾ ಸಾಗುತ್ತಾರೆ.
ಇವೆಲ್ಲಾ ರಗಳೆ ಖುಶ್ ಖುಶ್ ಇದ್ದು ಸಕ್ಸಸ್ ಆಗಬೇಕು ಅಂತ ಇದೆಯಾ?, ಜಸ್ಟ್ ದಿನಾ ಬೆಳಿಗ್ಗೆ ತಣ್ನೀರು ಸ್ನಾನ ಮಾಡಿ, ಅಥವಾ ಈಜು ಹೊಡೆಯಿರಿ ಹೊಳೆಯಲ್ಲಿ ಅಥವಾ ಸೂಪರ್ ಧ್ಯಾನ ಆರಂಭಿಸಿ ಇವತ್ತಿನಿಂದಲೇ.
Thursday, February 28, 2013
ಮಲೆನಾಡಿನಲ್ಲಿ " ಬಯಲುಸೀಮೆಯ ಕೃಷಿ" ಪಂಡಿತ
ಮಲೆನಾಡಿನಲ್ಲಿ ಆರ್ಥಿಕವಾಗಿ ಲಾಭಕರ ಕೃಷಿ ಎಂದರೆ ಅಡಿಕೆ,ರಬ್ಬರ್, ಮೆಣಸು, ಕೋಕೋ, ಮುಂತಾದ ತೋಟಗಾರಿಕಾ ಬೆಳೆಗಳು. ಈ ಬೆಳೆಗಳನ್ನು ನಂಬಿ ಬದುಕು ಸಾಗಿಸುತ್ತಿರುವ ಹಲವು ರೈತರಿದ್ದಾರೆ.ಉಪಬೆಳೆಯನ್ನಾಗಿ ತರಕಾರಿ ಬೆಯುವ ರೈತರ ಸಂಖ್ಯೆ ಇದೆ, ತರಕಾರಿ ಜೋಳ ಮೆಣಸಿನಕಾಯಿ ಕಬ್ಬು ಶೇಂಗಾ ಮುಂತಾದ ಆಹಾರ ಬೆಳೆಗಳನ್ನು ಪ್ರಧಾನ ಬೆಳೆಯನ್ನಾಗಿ ಬೆಳೆಯುವ ರೈತರ ಸಂಖ್ಯೆ ಬಲು ಅಪರೂಪ. ತಾಳಗುಪ್ಪ ಸಮೀಪದ ಶಿರೂರು ಆಲಳ್ಳಿಯ ರೈತರಾದ ಹುಚ್ಚಪ್ಪ ಕಳೆದ ಮೂವತ್ತು ವರ್ಷಗಳಿಂದ ಆಹಾರ ಬೆಳೆಗಳನ್ನೇ ಮುಖ್ಯ ಬೆಳೆಯನ್ನಾಗಿಸಿಕೊಂಡು ಆರ್ಥಿಕ ಸ್ವಾವಲಂಬಿಯಾಗಿ ನೆಮ್ಮದಿ ಹಾಗೂ ಆರೋಗ್ಯ ಪೂರ್ಣ ಜೀವನ ಸಾಗಿಸುತ್ತಿದ್ದಾರೆ.
ಶಿರೂರು ಆಲಳ್ಳಿ ಸಾಗರ-ಜೋಗ ಹೈವೆ ರಸ್ತೆ ಪಕ್ಕದ ಪುಟ್ಟಹಳ್ಳಿ. ಬಹುಪಾಲು ಭತ್ತ ಕಬ್ಬು ಕೃಷಿಕರ ಈ ಹಳ್ಳಿ ಹುಚ್ಚಪ್ಪವರಂತಹ ಕೃಷಿಯಲ್ಲಿ ತೊಡಗಿಸಿಕೊಂಡವರಿಂದ ಕೂಡಿದೆ. ಹೈವೆ ೨೦೬ ರ ಪಕ್ಕದಲ್ಲಿ ಆರೂವರೆ ಎಕರೆ ಕೃಷಿ ಕ್ಷೇತ್ರ ಹುಚ್ಚಪ್ಪನವರದು. ರಸ್ತೆಯಲ್ಲಿ ಸಾಗುವ ಜನರಿಗೆ ಈ ಕ್ಷೇತ್ರ ಒಮ್ಮೆ ಕಣ್ಣಾಡಿಸುವಂತೆ ಹುಚ್ಚಪ್ಪ ಮಾಡಿದ್ದಾರೆ. ತೊಂಡೆಕಾಯಿಯ ಚಪ್ಪರ, ಅದರಪಕ್ಕದಲ್ಲಿ ಹಸಿರಾಗಿ ಹುಲುಸಾಗಿ ಬೆಳೆದ ಶೇಂಗಾ, ತೆನೆದುಂಬಿ ನಿಂತ ಜೋಳ, ಕೆಂಪು ಬಣ್ಣಕ್ಕೆ ತಿರುಗಿನಿಂತ ಮೆಣಸಿನಕಾಯಿ, ಬಸಳೆ ಸೊಪ್ಪಿನ ಸಾಲು, ಹೀರೆಕಾಯಿ, ಮಗೆಕಾಯಿ, ಕಬ್ಬು, ಬೆಂಡೆ, ಹೀಗೆ ಮುಂದುವರೆಯುತ್ತದೆ ಹುಚ್ಚಪ್ಪನವರ ಕೃಷಿ ಕ್ಷೇತ್ರ. ವರ್ಷಪೂರ್ತಿ ಹವಾಮಾನ ಕಾಲಕ್ಕನುಗುಣವಾಗಿ ತರಕಾರಿ ಬೆಳೆಗಳನ್ನು ಬೆಳೆಯುವ ಹುಚ್ಚಪ್ಪ ರೈತಾಪಿ ಜೀವನದಿಂದ ಆರ್ಥಿಕವಾಗಿಯೂ ಮಾನಸಿಕವಾಗಿಯೂ ನೆಮ್ಮದಿಕಂಡುಕೊಂಡಿದ್ದಾರೆ.
ಕೃಷಿಕ ಯಜಮಾನ: ಸ್ವಂತ ಮಣ್ಣಿನಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ದುಡಿದರೆ ಅದರ ಸುಖ ವರ್ಣಿಸಲು ಆಗದು ಎನ್ನುವುದು ಹುಚ್ಚಪ್ಪನವರ ಸ್ವಯಂ ಅಬುಭವ. ಪತ್ನಿ ಕೂಡ ಇವರ ಕೃಷಿ ಕೈಂಕರ್ಯಗಳಿಗೆ ಜೊತೆಗೂಡುವುದರಿಂದ ಇನ್ನಷ್ಟು ಖುಷಿ ಇವರಿಗೆ. ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಕೂಡ ರಜಾದ ಸಮಯದಲ್ಲಿ ಕೃಷಿ ಕೆಲಸಗಳಿಗೆ ತೊಡಗಿಕೊಳ್ಳುತ್ತಾರೆ. ದಿನಗೂಲಿ ಜನರಿಗೆ ಜೀವನ ಭದ್ರತೆ ಕಡಿಮೆ ಸರ್ಕಾರ ಉದ್ಯೋಗಖಾತ್ರಿ ಯಂತಹ ಕಾರ್ಯಕ್ರಮದ ಮೂಲಕ ಜೀವನ ಭದ್ರತೆ ಒದಗಿಸುವ ಯತ್ನ ಮಾಡಿದರೂ ಅದೇಕೋ ಆಡಳಿತಶಾಹಿಯ ಸಮಸ್ಯೆಯಿಂದ ಸಮರ್ಪಕ ಜಾರಿಯಾಗಿಲ್ಲ, ಸ್ವಂತ ಜಮೀನಿನಲ್ಲಿ ನಾವೇ ಯಜಮಾನ ನಾವೆ ಕೂಲಿಯಾಳು ಎಂಬ ಭಾವನೆಯಿಂದ ದುಡಿದರೆ ಮಾನಸಿಕ ಆರ್ಥಿಕ ದೈಹಿಕ ನೆಮ್ಮದಿ ಸಿಗುತ್ತದೆ ಎಂದು ಅನುಭವ ಮಾತುಗಳು ಹುಚ್ಚಪ್ಪನವರದ್ದು.
ತರಕಾರಿ ಬೆಳೆ : ರೈತರಿಗೆ ವರ್ಷಪೂರ್ತಿ ಹಣ ನೀಡುವುದು ತರಕಾರಿ ಬೆಳೆಗಳು ಎಂಬುದು ಹುಚ್ಚಪ್ಪನವರ ಅನುಭವ. ತೊಂಡೆಯಂತಹ ತರಕಾರಿಗಳಿಗೆ ಒಮ್ಮೆ ಗುಂಡಿ ತೋಡಿ ನಾಟಿ ಮಾಡಿ ಗೊಬ್ಬರ ಹಾಕಿದರೆ ಮತ್ತೆ ನೀರು ಮಾತ್ರಾ ಉಣಿಸಿದರೆ ವಾರದ ಅಂತ್ಯದಲ್ಲಿ ಆದಾಯ ನಿಡುತ್ತಾ ಸಾಗುತ್ತದೆ. ಮೂರು ತಿಂಗಳ ನಂತರ ಅದೇ ಜಾಗದಲ್ಲಿ ಹೀರೇಕಾಯಿ ಹಾಕಿದರೆ ಅದು ಮೂರು ತಿಂಗಳ ನಿರಂತರ ಆದಾಯ, ಹೀಗೆ ನಮ್ಮ ಭೂಮಿಗೆ ನಮ್ಮ ವಾತಾವರಣಕ್ಕೆ ಬೆಳೆಗಳನ್ನು ಆಯ್ದುಕೊಂಡರೆ ಸುಲಭ, ಮಾರುಕಟ್ಟೆಯ ಸಮಸ್ಯೆ ತರಕಾರಿ ಬೆಳೆಗಳಿಗೆ ಇಲ್ಲ, ಸ್ಥಳಕ್ಕೆ ಬಂದು ಗ್ರಾಹಕರು ನೇರವಾಗಿಯೂ ಒಯ್ಯುತ್ತಾರೆ, ಅಥವಾ ದಲ್ಲಾಳಿಗಳು ಸ್ಥಳಕ್ಕೆ ಬರುತ್ತಾರೆ, ಹಾಗಾಗಿ ನಾವು ಸಮರ್ಪಕವಾಗಿ ಬೆಳೆದರಷ್ಟೇ ಮುಗಿಯಿತು . ವಾರ್ಷಿಕ ಆದಾಯಕ್ಕೆ ಭತ್ತ ಅಡಿಕೆ ಕಬ್ಬು ಮುಂತಾದ ಬೆಳೆಗಳು ಸಹಾಯ ಮಾಡುತ್ತವೆ, ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಕೃಷಿಕನಿಗಿರಬೇಕು ಎನ್ನುವುದು ಹುಚ್ಚಪ್ಪನವರ ಮಾತು.
ಸರ್ಕಾರದ ನಿರ್ಲಕ್ಷ್ಯ: ಸರ್ಕಾರದ ರೈತರ ಕುರಿತಾದ ಕಾಳಜಿಯನ್ನ ಸಮರ್ಪಕವಾಗಿ ಪ್ರಕಟಿಸುತ್ತಿಲ್ಲ ಎನ್ನುವುದು ಹುಚ್ಚಪ್ಪನವರ ಕೊರಗು. ಸಾಲಮನ್ನಾ, ಸುವರ್ಣ ಭೂಮಿ ಮುಂತಾದ ಯೋಜನೆಗಳ ಮೂಲಕ ಸಹಾಯ ಹಸ್ತ ಚಾಚಿದೆ ಎನ್ನುವುದು ಸಮಾಧಾನಕರ ಅಂಶ, ಆರ್ಥಿಕ ಸಹಾಯದ ದೃಷ್ಟಿಯಲ್ಲಿ ಅದು ಸಂತೃಪ್ತಿ ತಂದಿದೆ, ಆದರೆ ರೈತರಿಗಾಗಿಯೇ ಇರುವ ಇಲಾಖೆಯ ಅಧಿಕಾರಿಗಳು ರೈತರಿಗೆ ಜ್ಞಾನ ನೀಡುವುದರ ಜತೆ ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು. ಕೃಷಿಯನ್ನು ಆರ್ಥಿಕ ದೃಷ್ಟಿಯ ಹೊರತಾಗಿ ಜೀವನ ಪದ್ದತಿಯಾಗಿ ನೋಡಿದಾಗ ಆರ್ಥಿಕ ಸಂಕಷ್ಟಕ್ಕೆ ಬೆಲೆ ಬಾರದು ಎಂದು ನುಡಿಯುತ್ತಾರೆ. ಬ್ಯಾಂಕ್ ಗಳಿಗೆ ರೈತರ ಮೇಲೆ ನಂಬಿಕೆಯೆ ಹೊರಟುಹೋಗಿದೆ ಎನ್ನುವ ಹುಚ್ಚಪ್ಪ, ತಾಳಗುಪ್ಪದ ಬ್ಯಾಂಕನಲ್ಲಿ ತಾವು ಬೋರ್ ವೆಲ್ ಹಾಗೂ ಹೈನುಗಾರಿಕೆಗೋಸ್ಕರ ಸಾಲ ಕೇಳಲು ಹೋದಾಗ ನಾಳೆ ಬನ್ನಿ ಮುಂದಿನ ತಿಂಗಳು ಬನ್ನಿ ಎಂದು ಅಲೆದಾಡಿಸಿ ನಂತರ ಈಗ ಆಗದು ಎಬ ಉತ್ತರ ಪಡೆದ ಕಹಿ ಘಟನೆ ಬೇಸರ ತರಿಸುತ್ತದೆ . ಇದು ಕೇವಲ ಬ್ಯಾಂಕ್ ನವರ ತಪ್ಪಲ್ಲ ಅಥವಾ ತಪ್ಪು ಯಾರದು ಎನ್ನುವ ಪ್ರಶ್ನೆ ಇದಲ್ಲ, ಸರ್ಕಾರದ ಕಂದಾಯ ಇಲಾSಯೂ ಸೇರಿದಂತೆ, ಇತರೆ ಅಧಿಕಾರಿಗಳು ಹೀಗೆ ಒಟ್ಟಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿರದ ಸಮೂ, ರೈತರನ್ನು ನಿಕೃಷ್ಟವಾಗಿ ಕಾಣುತ್ತಿದೆ . ಧರ್ಮಸ್ಥಳ ಸಂಘ ತಮಗೆ ಉತ್ತಮ ಸಹಕಾರ ನೀಡಿದೆ, ಮಾನಸಿಕವಾಗಿ ಆರ್ಥಿಕವಾಗಿ ಬೆಂಬಲಿಸಿದೆ. ಇದೇ ರೀತಿ ಸರ್ಕಾರ ಮತ್ತು ಬ್ಯಾಂಕ್ ಗಳು ರೈತರ ಬೆನ್ನಿಗೆ ನಿಂತರೆ ದೇಶದ ಬೆನ್ನೆಲುಬಾಗಿ ರೈತ ನಿಲ್ಲುತ್ತಾನೆ ಎನ್ನುತ್ತಾರೆ.
೪೪ ವರ್ಷದ ಹುಚ್ಚಪ್ಪನವರ ಕುಂಟುಂಬ ಕೃಷಿಯನ್ನು ನಂಬಿ ಸಂತೃಪ್ತ ಜೀವ ನಡೆಸುತ್ತಿದೆ. ಆರ್ಥಿಕವಾಗಿ ಶ್ರೀಮಂತರು ಅಂತ ಅನ್ನಿಸಿಕೊಳ್ಳದಿದ್ದರೂ ಮಾನಸಿಕವಾಗಿ ದೈಹಿಕವಾಗಿ ಶ್ರೀಮಂತಿಕೆ ಅವರ ಕುಟುಂಬದಲ್ಲಿ ಎದ್ದುಕಾಣಿಸುತ್ತಿದೆ. ಸಮಾಧಾನ ಸಂತೃಪ್ತಿ ಮನೆಮಾಡಿದೆ. ಸಮಾಜಕ್ಕೆ ಆಹಾರ ಪದಾರ್ಥಗಳ ಕೊಡುಗೆಯಾಗಿ ನೀಡಿದ ನೆಮ್ಮದಿ ಆ ಕುಟುಂಬದಲ್ಲಿದೆ ಎನ್ನುವುದು ನಿಸ್ಸಂಶಯ.
ಫೋನ್ ನಂ: ೭೨೫೯೨೭೮೦೫೫ (ವಿಜಯವಾಣಿಯಲ್ಲಿ ಪ್ರಕಟಿತ)
Tuesday, February 26, 2013
ಯಂತ್ರದ ಮಂತ್ರ ಪಠಿಸಿ ಯಶಸ್ವಿಯಾದ ಕೃಷಿಕ
ಇತ್ತೀಚಿನ ದಿವಸಗಳಲ್ಲಿ ಕೃಷಿಕರ ಸಾಮೂಹಿಕ ಕೊರಗು ಎಂದರೆ ಕೃಷಿಕಾರ್ಮಿಕರ ಕೊರತೆ, ದುಬಾರಿ ಕೂಲಿ ಒಂದೆಡೆಯಾದರೆ, ಕೃಷಿಕಾರ್ಮಿಕರೇ ಇಲ್ಲದಿರುವುದು ಇನ್ನೊಂದೆಡೆ. ಈ ನೆಪವನ್ನೊಡ್ಡಿ ಕೃಷಿಯಿಂದ ವಿಮುಖವಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂಬ ಕೂಗು ಎಲ್ಲಡೆ. ಆದರೆ ತಂತ್ರಜ್ಞಾನ ಅತ್ಯುತ್ತಮವಾಗಿರುವ ಇಂದಿನ ದಿನಗಳಲ್ಲಿ ಯಂತ್ರಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಕೃಷಿಕೂಲಿ ಕಾರ್ಮಿಕರ ಕೊರತೆ ಸಮಸ್ಯೆಯೇ ಅಲ್ಲ ಅದು ಕಳ್ಳನಿಗೊಂದು ಪಿಳ್ಳೆ ನೆವ ಅಷ್ಟೆ ಎನ್ನುತ್ತಾ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ಸ್ವಾವಲಂಬಿಯಾಗಿ, ಎಂಟು ಎಕರೆ ತೋಟ ನಳನಳಿಸುವಂತೆ, ಕೃಷಿಕರಲ್ಲದವರೂ ಬೆಕ್ಕಸಬೆರಗಾಗುವಂತೆ ಮಾಡಿ ತೋರಿಸಿದ್ದಾರೆ ಸಾಗರ ತಾಲ್ಲೂಕು ಸಸರವಳ್ಳಿ ಗ್ರಾಮದ ಸಮೀದ ಊರಿನ ಕಾನುತೋಟದ ಗುರು.
ಸಾಗರದಿಂದ ೧೨ ಕಿಲೋಮೀಟರ್ ದೂರದ ತಾಳಗುಪ್ಪ ಹೊಬಳಿಯಲ್ಲಿರುವ ಕಾನುತೋಟ ಎಂಬುದು ಒಂಟಿಮನೆಯ ಊರು. ಶೇಷಗಿರಿಯಪ್ಪನವರ ಶ್ರಮದಿಂದ ಮೂಡಿದ ಎಂಟು ಎಕರೆ ಅವರ ಹಿರಿಯ ಮಗನಾದ ಗುರುವಿನ ಉಸ್ತುವಾರಿಗೆ ಈಗ ಹದಿನೈದು ವರ್ಷಗಳ ಹಿಂದೆ ಸಿಕ್ಕಿತು. ದೂರದ ಗುಡ್ಡದಿಂದ ಹರಿದು ಬರುವ ಅಬ್ಬಿ ನೀರಿನ ಸಮೃದ್ಧಿ ಒಂದೆಡೆಯಾದರೆ ಒಂಟಿಮನೆಯ ಕಾರಣದಿಂದ ರಸ್ತೆ, ವಿದ್ಯುತ್,ನಂತಹ ಸಾಮೂಹಿಕ ಸವಲತ್ತುಗಳಿಗೆ ಏಕಾಂಗಿ ಹೋರಾಟ ಸಮಸ್ಯೆ ಇನ್ನೊಂದೆಡೆ. ಇವನ್ನೆಲ್ಲಾ ಸಮರ್ಥವಾಗಿ ನಿರ್ವಹಿಸಿದ ಗುರು ಯಶಸ್ವೀ ಕೃಷಿಕ ಎನಿಸಿಕೊಂಡಿದ್ದಾರೆ. ಗುರುರವರ ಕೃಷಿಯಲ್ಲಿನ ಯಾಂತ್ರೀಕರಣದ ಮಜಲು ಮನೆಯ ವಿದ್ಯುತ್ ದೀಪದಿಂದಲೇ ಆರಂಭಗೊಳ್ಳುತ್ತದೆ.
ಅಬ್ಬಿ ನೀರಿನ ಜನರೇಟರ್: ವಿದ್ಯುತ್ ಸಮಸ್ಯೆ ಬಹುವಾಗಿ ಎಲ್ಲರನ್ನು ಕಾಡುವ ಸಂಗತಿ. ದಿನದ ಬಹುಪಾಲು ಸಮಯ ಪವರ್ ಕಟ್ ಎಂಬ ಪೆಡಂಬೂತಕ್ಕೆ ನಲುಗದವರಿಲ್ಲ. ಆದರೆ ಕಾನು ತೋಟದ ಗುರುರವರಿಗೆ ಈ ಸಮಸ್ಯೆ ಕಾಡುವುದಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ. ಕಾರಣ ಇವರು ತಮ್ಮದೇ ಸ್ವಂತ ವಿದ್ಯುತ್ ಉತ್ಪಾದನಾ ಘಟಕ ಹೊಂದಿದ್ದಾರೆ. ಗುಡ್ಡದಿಂದ ಇಳಿದು ತೋಟದಲ್ಲಿ ಹರಿದು ಹೊಳೆ ಸೇರುತ್ತಿದ್ದ ಅಬ್ಬಿನೀರಿಗೆ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಪೈಪ್ ಹಾಕಿಸಿ ಮನೆಯ ಪಕ್ಕದಲ್ಲಿ ಜನರೇಟರ್ ಒಂದನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಇವರ ಮನೆಯಲ್ಲಿ ಪವರ್ ಕಟ್ ಪ್ರಶ್ನೆ ಇಲ್ಲ. ವಿದ್ಯುತ್ ನಲ್ಲಿ ಸ್ವಾವಲಂಬಿಯಾದರೆ ಕೃಷಿ ಕೈಂಕರ್ಯಗಳಿಗೆ ಯಂತ್ರಬಳಸುವ ಬಹುದೊಡ್ಡ ಸಮಸ್ಯೆ ನಿವಾರಣೆಯಾದಂತೆ ಎಂಬುದು ಗುರುರವರ ಅನುಭವವೇದ್ಯ ಮಾತು.
ಕೃಷಿಉಪಯೋಗಿ ಯಂತ್ರಗಳು: ಅಡಿಕೆ ಗೊನೆಯಿಂದ ಅಡಿಕೆ ಬೇರ್ಪಡಿಸುವ ಯಂತ್ರ, ಅಡಿಕೆ ಸುಲಿಯುವ ಯಂತ್ರ, ಮೆಣಸಿನ ಕಾಳು ಬೇರ್ಪಡಿಸುವ ಯಂತ್ರ, ಅಡಿಕೆ ಬೇಯಿಸಲು ರಾಟೆ,ಕೊಟ್ಟಿಗೆ ತೊಳೆಯುವ ಯಂತ್ರ ಹೀಗೆ ಸಾಲು ಸಾಲು ಯಂತ್ರಗಳ ಬಳಕೆ ಇಲ್ಲಿ ಕಾಣಸಿಗುತ್ತವೆ. ಒಂದೆರಡು ಕೃಷಿ ಕಾರ್ಮಿಕರ ಜತೆ ಸೇರಿಕೊಂಡ ಗುರು ಇವೆಲ್ಲವನ್ನೂ ನಿಭಾಯಿಸುತ್ತಾರೆ. ಇದರಿಂದಾಗಿ ಕೂಲಿಕಾರ್ಮಿಕರ ಅವಲಂಬನೆ ತಪ್ಪುವುದರ ಜತೆ ಕೃಷಿ ಕೆಲಸಗಳು ಸಮಯಕ್ಕೆ ಸರಿಯಾಗಿ ಸಾಗುತ್ತವೆ ಎನ್ನುತ್ತಾರೆ.
ಕಾಳುಮೆಣಸಿನ ಕೃಷಿ: ಮಲೆನಾಡಿನಲ್ಲಿ ಅಡಿಕೆ ಕೃಷಿ ಸಾಮಾನ್ಯ. ಕಾಳುಮೆಣಸಿನ ಕೃಷಿಯನ್ನು ಬಳ್ಳಿಯ ಕಟ್ಟೆ ರೋಗದ ಕಾರಣದಿಂದ ಬಹುಪಾಲು ಕೃಷಿಕರು ಕೈಬಿಟ್ಟಿದ್ದಾರೆ. ಗುರು ರವರು ಉಪಬೆಳೆಯಾಗಿ ಕಾಳುಮೆಣಸಿನ ಕೃಷಿಗೆ ಒತ್ತು ನೀಡಿದ್ದಾರೆ, ಪಣಿಯೂರು, ಕೊಟ್ಟಾಯಾಂ ಕರಿಮುಂಡ, ಕೇರಳ ಕರಿಮುಂಡ, ಮುಂತಾದ ನಾಲ್ಕಾರು ತಳಿಯ ಅಭಿವೃದ್ಧಿಗೆ ಆದ್ಯತೆ ನೀಡಿ ವರ್ಷವೊಂದಕ್ಕೆ ೮ ರಿಂದ ಹತ್ತು ಕ್ವಿಂಟಾಲ್ ಕಾಳು ಮೆಣಸು ಬೆಳೆಯುತ್ತಾರೆ. ಮೆಣಸಿನ ಬಳ್ಳಿಗೆ ಕಟ್ಟೆ ರೋಗ ಇರುವುದು ನಿಜವಾದರೂ ಪ್ರತೀ ವರ್ಷ ಹೆಚ್ಚು ಬಳ್ಳಿಗಳನ್ನು ನಾಟಿ ಮಾಡುವುದರ ಮೂಲಕ ಹಾಗೂ ಅಡಿಕೆ ಮರದ ಬುಡವನ್ನು ಗುದ್ದಲಿಯಿಂದ ಅಗೆಯುವುದನ್ನು ನಿಲ್ಲಿಸುವುದರ ಮೂಲಕ ರೋಗ ಹತೋಟಿ ಸಾದ್ಯ ಎನ್ನುತ್ತಾರೆ ಗುರು.
ದ್ರವ ಗೊಬ್ಬರ: ಅಡಿಕೆ ತೋಟಕ್ಕೆ ಹೆಚ್ಚು ಕಾರ್ಮಿಕರನ್ನು ಬೇಡುವ ಕೆಲಸ ಗೊಬ್ಬರ ಪೂರೈಕೆ ಹಾಗೂ ಮರದಿಂದ ಇಳಿಸಿದ ಅಡಿಕೆ ಗೊನೆಗಳ ಸಾಗಾಟ. ಇವೆರಡಕ್ಕೂ ಗುರುರವರು ಸುಲಭ ಮಾರ್ಗ ಕಂಡುಕೊಂಡಿದ್ದಾರೆ. ದ್ರವರೂಪಿ ಗೊಬ್ಬರದ ಟ್ಯಾಂಕ್ ಮಾಡಿಸಿಕೊಂಡಿರುವ ಗುರುರವರು ತಮ್ಮ ತೋಟದ ಎಲ್ಲಾ ಮರಗಳಿಗೂ ಪೈಪ್ ಮುಖಾಂತರ ಗೊಬ್ಬರ ಹರಿಯಬಿಡುತ್ತಾರೆ. ಇದರಿಂದಾಗಿ ಅಡಿಕೆ ಮರಗಳ ಬುಡ ಬಿಡಿಸುವ ಕೆಲಸವೂ ಇಲ್ಲದರ ಜತೆಗೆ ಹತಾರಗಳ ಕಬ್ಬಿಣದಿಂದ ಮರದ ಬೇರುಗಳು ಹಾನಿಗೊಳಗಾಗುವುದೂ ಇಲ್ಲ. ಅಡಿಕೆ ಗೊನೆಗಳ ಸಾಗಾಟಕ್ಕೆ ಅಡಿಕೆತೋಟದೊಳಗೆ ತೆರೆದ ಜೀಪ್ ಓಡಾಡುವಂತಹ ರಸ್ತೆಯನ್ನು ನಿರ್ಮಿಸಿಕೊಂಡಿದ್ದು ಇದರ ಮೂಲಕ ಅಡಿಕೆಗೊನೆಗಳ ಸಾಗಾಟವನ್ನು ಮಾಡುತ್ತಾರೆ. ಇಷ್ಟೆಲ್ಲಾ ಯಂತ್ರ ಬಳಕೆಯಿಂದ ಒಮ್ಮೊಮ್ಮೆ ದುರಸ್ತಿ ಕಾರ್ಯದ ಸಮಸ್ಯೆ ಇರುವುದು ನಿಜವಾದರೂ ಬಹುಪಾಲು ಒಳ್ಳಯದೇ ಆಗುತ್ತದೆ ಎನ್ನುತ್ತಾರೆ ಗುರು
ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಯಶಸ್ವೀ ಕೃಷಿಕ ಜೀವನ ನಡೆಸುತ್ತಿರುವ ಗುರುರವರಿಗೆ ಪತ್ನಿ ಹೇಮಾ ಸಾಥ್ ನೀಡುತ್ತಿದ್ದಾರೆ. ಕೃಷಿಗೆ ಪೂರಕವಾಗಿ ಒಗ್ಗಿ ಆಸಕ್ತಿಯಿಂದ ಪತಿಗೆ ಪೂರಕವಾಗಿ ನಡೆದುಕೊಂಡು ಕೃಷಿಕತನದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮನೆಯ ಸುತ್ತಮುತ್ತಲಿನ ಜಾಗಗಳಲ್ಲಿ ಮನೆ ಬಳೆಕೆಯ ಎಲ್ಲಾ ತರಕಾರಿಯನ್ನು ತಾವೇ ಖುದ್ದು ಬೆಳೆದುಕೊಳ್ಳುತ್ತಿದ್ದಾರೆ. ೭೫ ವರ್ಷದ ತಂದೆ ಶೇಷಗಿರಿಯಪ್ಪನವರು ಸ್ವಂತ ಆಸಕ್ತಿಯಿಂದ ಪುಸ್ತಕಗಳನ್ನು ಓದಿ ಕಂದಾಯ ಇಲಾಖೆಯ ಎಲ್ಲಾ ಕಾನೂನುಗಳನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಕೃಷಿಕ ಕೇವಲ ಹೊಲದಲ್ಲಿ ಮಾತ್ರಾ ದುಡಿಯದೆ, ತನಗೆ ಸರ್ಕಾರದಿಂದ ಬರಬೇಕಾದ ಸವಲತ್ತುಗಳನ್ನು ಸ್ವತಃ ತಿಳಿದುಕೊಂಡರೆ, ಕಾನೂನಿನ ಜ್ಞಾನ ಪಡೆದುಕೊಂಡರೆ ಮಾತ್ರಾ ಯಶಸ್ಸು ಎನ್ನುವುದು ಶೇಷಗಿರಿಯಪ್ಪನವರ ಮಾತುಗಳು. ಕಾಲ ಬದಲಾದಂತೆ ಕೃಷಿಕನೂ ಬದಲಾದರೆ ಸ್ವರ್ಗ ಸ್ವ ಸ್ಥಳದಲ್ಲಿ ನಿರ್ಮಿಸಿಕೊಳ್ಳಬಹುದು ಎಂಬುದಕ್ಕೆ ಕಾನುತೋಟದ ಈ ಕೃಷಿ ಕುಟುಂಬ ಉದಾಹರಣೆಯಾಗಿ ನಿಲ್ಲುತ್ತದೆ.
ಫೋನ್: ೦೮೧೮೩೨೩೧೫೬೫
Wednesday, February 20, 2013
ಹಿರೇಮನೆಯಲ್ಲಿ ಹಿಡಿದ ಕಾಳಿಂಗ ಸರ್ಪ(ಕಿಂಗ್ ಕೋಬ್ರಾ)
ಉರಗ ರಕ್ಷಕ: ಸಾಗರದ ಸಮೀಪದ ಮುಂಡಿಗೆಸರ ಊರಿನ ಮನ್ಮಥ ಕುಮಾರ್ ಉರಗ ಪ್ರೇಮಿ. ಇವರು ಇಲ್ಲಿಯವರೆಗೆ ೪೫೦ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಇಪ್ಪತ್ತೇಳು ಸಾವಿರ ಸರ್ಪವನ್ನು ಹಿಡಿದು ಸುರಕ್ಷಿತ ಮರುಜೀವನ ನೀಡಿದ ಕೀರ್ತಿ ಮನ್ಮಥಕುಮಾರ್ ರವರದ್ದು. ಸರ್ಕಾರದ ವೈಲ್ಡ್ ಲೈಫ್ ನಿಂದ ಹಾವುಗಳನ್ನು ಹಿಡಿಯಲು ಹಾಗೂ ಹಾವುಗಳ ಬಗ್ಗೆ ಸಂಶೋಧನೆ ಕೈಗೊಳ್ಳಲು ಅಧಿಕೃತ ಪರವಾನಗಿಯನ್ನು ಕೂಡ ಹೊಂದಿದ್ದಾರೆ. ಹಾವುಗಳು ನಿರುಪದ್ರವಿ ಆದರೆ ಅವುಗಳ ಬಗೆಗೆ ಇರುವ ಮಿಥ್ ಗಳು ಜನರನ್ನು ದಾರಿತಪ್ಪಿಸಿವೆ ಎನ್ನುವ ಮನ್ಮಥ ಕುಮಾರ್ ಸರ್ಪ ಅಥವಾ ಕಾಳಿಂಗ ಸರ್ಪಗಳು ತಾವಾಗಿಯೇ ಯಾರಿಗೂ ಧಾಳಿ ಮಾಡುವುದಿಲ್ಲ, ತಮ್ಮ ಜೀವ ರಕ್ಷಣೆಯ ಅನಿವಾರ್ಯ ಸಂದರ್ಭದಲ್ಲಿ ಮಾತ್ರಾ ಕಡಿಯುತ್ತವೆ ಎನ್ನುತ್ತಾರೆ. ಹಾವು ಹಿಡಿಯುವುದು ತುಂಬಾ ತಾಳ್ಮೆಯ ಕೆಲಸವಾಗಿದ್ದು ಹಠ ಸಾಧನೆಯಿಂದ ನಿರಂತರ ಕಲಿಕೆಯಿಂದ ಎಲ್ಲರೂ ಕಲಿಯಬಹುದು, ಆದರೆ ತುಂಬಾ ಎಚ್ಚರಿಕೆ ಮತ್ತು ಧೈರ್ಯದ ಅವಶ್ಯಕತೆ ಇದೆ ಎನ್ನುತ್ತಾರೆ. ಹಿಂದೆ ಕಾಳಿಂಗ ಸರ್ಪದಿಂದ ಎರಡು ಬಾರಿ ಹಾಗೂ ಸರ್ಪದಿಂದ ಮೂರು ಬಾರಿ ಅವರೂ ಕೂಡ ಕಡಿತಕ್ಕೆ ಒಳಗಾಗಿದ್ದಿದೆ ಆದರೆ ತಕ್ಷಣದ ಪ್ರಥಮ ಚಿಕೆತ್ಸೆಯಿಂದ ಪ್ರಾಣಾಪಾಯಕ್ಕೆ ಒಳಗಾಗಿಲ್ಲ ಎನ್ನುತ್ತಾರೆ. ತಮ್ಮ ಹನ್ನೆರಡನೆಯ ವರ್ಷದಲ್ಲಿ ಕುತೂಹಲದಿಂದ ಹಾವುಗಳನ್ನು ಹಿಡಿಯುವ ಕಾಯಕಕ್ಕೆ ಇಳಿದ ಮನ್ಮಥ ಕುಮಾರ್ ಕರ್ನಾಟಕ ರಾಜ್ಯಾದ್ಯಂತ ಹಾವು ಹಿಡಿದ್ದಾರೆ. ಗುರುಗಳಿಲ್ಲದೇ ಸ್ವಯಂ ಈ ವಿದ್ಯೆಯನ್ನು ಸಾಧಿಸಿರುವ ಮನ್ಮಥ್ ಕುಮಾರ್ ಈಗ ಅರವತ್ತು ವರ್ಷದ ಪ್ರಾಯ. ಬೇಸಿಗೆಯ ದಿನಗಳಲ್ಲಿ ಪ್ರತಿ ನಿತ್ಯ ಹಗಲಿರುಳು ಎನ್ನದೆ ಜನರ ಕರೆಗೆ ಸ್ಪಂದಿಸುವ ಮನ್ಮಥ್ ಕುಮಾರ್ ಕೆಲವು ಸಲ ದಿನವೊಂದಕ್ಕೆ ಎಂಟು ಕಾಳಿಂಗ ಸರ್ಪಗಳನ್ನು ಹಿಡಿದ ಉದಾಹರಣೆ ಇದೆ. ಕೋಲು, ಕಬ್ಬಿಣದ ಸರಳು ಮುಂತಾದ ಯಾವುದೇ ಸಲಕರಣೆಗಳ ಸಹಾಯವಿಲ್ಲದೆ ಹಾವು ಹಿಡಿಯುವುದು ತುಂಬಾ ಅಪಾಯಕಾರಿಯಾಗಿದ್ದರೂ ಕೂಡ ಅವುಗಳನ್ನು ಬಳಸಿದರೆ ಹಾವುಗಳಿಗೆ ಗಾಯವಾಗುತ್ತದೆ ಎನ್ನುವ ಕಾರಣದಿಂದ ಬರಿಗೈಯಲ್ಲಿ ಹಾವು ಹಿಡಿಯುವುದನ್ನು ರೂಢಿಸಿಕೊಂಡಿದ್ದಾರೆ. ಹಾವುಗಳನ್ನು ವೃಥಾ ಕೊಲ್ಲಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಾರೆ ಮನ್ಮಥ್ ಕುಮಾರ್. ಮೊಬೈಲ್: ೯೪೪೮೧೦೪೯೯೧
Subscribe to:
Posts (Atom)