
ಈ ಮೇಲಿನ ಘಟನೆ ವಿವೇಕಾನಂದರ ಗ್ರಾಹ್ಯಶಕ್ತಿಯನ್ನು ಉದಾಹರಿಸುತ್ತದೆ. ಮತ್ತು ಇಷ್ಟು ಗ್ರಾಹ್ಯ ಶಕ್ತಿ ಧ್ಯಾನದ ಮೊದಲನೆ ಹಂತದಲ್ಲಿಯೇ ಮನುಷ್ಯನಿಗೆ ಒಲಿಯುತ್ತದೆಯಂತೆ. ನಮಗೆ ಇಂಗ್ಲೀಷ್ ಅಥವಾ ಕನ್ನಡದ ವಾಕ್ಯದಲ್ಲಿನ ಒಂದೊಂದೇ ಶಬ್ಧಗಳು ಪಟಕ್ಕನೆ ತಲೆಯೊಳಗೆ ಹೋದಂತೆ ವಿವೇಕಾನಂದರಿಗೆ ಪುಟಗಳು ನೋಡಿದಾಕ್ಷಣ ತಲೆಯೊಳಗೆ ಹೋಗುತ್ತಿದ್ದವಂತೆ, ಇರಲಿ ಅವೆಲ್ಲಾ ಅಂತೆಕಂತೆಗಳಾಯಿತು, ಏಕೆಂದಂರೆ ನಾನು ವಿವೇಕಾನಂದರನ್ನು ನೋಡಿಲ್ಲ ಅವರ ಬಗ್ಗೆ ಓದಿಲ್ಲ ಸಂಪೂರ್ಣ ಹೇಗೂ ತಿಳಿದಿಲ್ಲ. ಆದರೆ ಮೊನ್ನೆ ಅವರ ತತ್ವಗಳನ್ನು ಅರೆದುಕುಡಿದ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದೆ. ಅವರೇ ಡಾ.ದೀಪಕ್.
ಡಾ ದೀಪಕ್ ಸಾಗರದಲ್ಲಿ ಯಶಸ್ವಿ ಎಂಬಿಬಿಎಸ್ ಯುವ ಡಾಕ್ಟರ್. ಒಂದಿಷ್ಟು ಆಧ್ಯಾತ್ಮವನ್ನು ವಿವೇಕಾನಂದರ, ರಾಮಕೃಷ್ಣಪರಮಹಂಸರ ತತ್ವವನ್ನು ತಿಳಿದುಕೊಂಡವರು. ಹಾಗಂತ ವಿಜ್ಞಾನವನ್ನು ಅಲ್ಲಗಳೆದು ದೇವರಮೇಲೆ ಭಾರ ಹೊರಿಸುವ ಗಿರಾಕಿಯಲ್ಲ. ವಿಜ್ಞಾನದಿಂದ ಉತ್ತರ ಸಿಗದು ಎಂದಾದಮೇಲೆ ದೇವರ ಮೊರೆಹೋಗುವ ಜನ. ಬಹಳಷ್ಟು ಆಲೋಪತಿ ಡಾಕ್ಟರ್ ತರಹ ಹಣದ ಹಿಂದೆ ಹೋದವರಲ್ಲ. ಈ ಕಾಲದಲ್ಲಿಯೂ ಅವರ ಭೇಟಿ ಫೀ ೧೫-೨೦ ರ ಆಸುಪಾಸಿನಲ್ಲಿಯೇ ಇದೆ. ಅವರು ಹಾಸ್ಟೆಲ್ಲಿನಲ್ಲಿದ್ದಾಗ ಒಮ್ಮೆ ಖಾಯಿಲೆ ಬಿದ್ದಿದ್ದರಂತೆ. ಹಾಸ್ಟೆಲ್ಲಿನ ವಾರ್ಡನ್ ಒಬ್ಬ ರಾಮಕೃಷ್ಣಾಶ್ರಮದ ಸನ್ಯಾಸಿ. ಖಾಯಿಲೆಬಿದ್ದಿರುವ ದೀಪಕರನ್ನು ಅವರು ಸ್ನಾನಮಾಡಿಸಿದರಂತೆ. ಸ್ನಾನ ಮಾಡಿಸುವಾಗ ಆ ಸನ್ಯಾಸಿ ಪುರುಷಸೂಕ್ತ ವನ್ನು ಪಠಿಸುತ್ತಿದ್ದರಂತೆ. ಇವರಿಗೆ ಆಶ್ಚರ್ಯವಾಯಿತು. ದೀಪಕ್ ಸ್ವಾಮೀಜಿಯಬಳಿ ತನ್ನನ್ನು ಸ್ನಾನ ಮಾಡಿಸುವಾಗ ಪುರುಷಸೂಕ್ತ ಪಠಿಸುವ ಕಾರಣ ಕೇಳಿದರಂತೆ. ಆವಾಗ ಅವರು" ಇದು ಭಗವಂತನ ಅಭಿಷೇಕ ಹಾಗಾಗಿ ಅದೇ ಸೂಕ್ತ." ಎಂದರಂತೆ. ದೀಪಕ್ ಗೆ ಅವರು ತನ್ನಲ್ಲಿಯೂ ದೇವರನ್ನು ಕಂಡಿದ್ದು ಆಶ್ಚ್ರಯ ಮೂಡಿಸಿತಂತೆ.
ನಂತರದ ದಿನಗಳಲ್ಲಿ ಒಮ್ಮೆ ವಿವೇಕಾನಂದರ ಕುರಿತು ಭಾಷಣ ಮಾಡುತ್ತಿದ್ದ್ರರಂತೆ. ಭಾಷಣ ಮುಗಿದ ಮೇಲೆ ವ್ಯಕ್ತಿಯೊಬ್ಬರು "ನೀವು ವಿವೇಕಾನಂದರ ಪ್ರತಿ ರೂಪ, ನಾನು ನಿಮ್ಮಲ್ಲಿ ವಿವೇಕಾನಂದರನ್ನು ಕಂಡೆ ಎಂದು ದಡಾಲನೆ ಕಾಲುಮುಟ್ಟಿ ನಮಸ್ಕರಿಸಿದರಂತೆ." ದೀಪಕ್ ಗೆ ಆ ಅನುಭವ ಅನಿರೀಕ್ಷಿತ.
ನಾವು ಮಾಡುವ ಕೆಲಸದಲ್ಲಿ ಭಗವಂತನನ್ನು ನಾವು ಕಾಣಲು ಸಾದ್ಯವೇ ಎಂಬಂತಹ ಲವಲೇಶದ ಅನುಮಾನವೂ ಇಲ್ಲದೆ ಮಗ್ನನಾದರೆ ಭಗವಂತನನ್ನು ಕಾಣಬಹುದು. ಅಥವಾ ಕಂಡಿದ್ದನ್ನು ಭಗವಂತ ಅಂದುಕೊಳ್ಳಬಹುದೆಂಬ ತರ್ಲೆ ಉತ್ತರವನ್ನೂ ಕಂಡುಕೊಳ್ಳಬಹುದು ಬಿಡಿ ಆ ವಿಚಾರವನ್ನು ಈಗ ವಿಷಯಕ್ಕೆ ಬರೋಣ
ಇದೂ ಅಂತೆ ಕಂತೆಗಳು , ಡಾ ದೀಪಕ್ ಹೇಳಿದ್ದು ಮತ್ತು ನಾನು ಕೇಳಿದ್ದು. ಡಾ ದೀಪಕ್ ಮನೆಗೆ ಕರೆದು ತಂಪಾಗಿ ಊಟ ಹಾಕಿ ಒಂದೂವರೆ ತಾಸು ಉಚಿತ ಪಾಠ ಮಾಡಿದ್ದು. ಮಾರನೇ ದಿನ ಡಾ.ದೀಪಕ್ ಹೇಳಿದ ಮಾತುಗಳು ತಲೆಯಲ್ಲಿ ಇನ್ನೂ ಗುಂಯ್ ಗುಟ್ಟುತ್ತಿತ್ತು. ಎಂಬತ್ತು ವರ್ಷದ ಅಪ್ಪಯ್ಯನಿಗೆ ದಿನವಿಡಿ ಮನೆಯಲ್ಲಿ ಕೂರಲು ಬೇಸರ. ದಿನಕ್ಕೊಮ್ಮೆ ತಾಳಗುಪ್ಪಕ್ಕೆ ಭೇಟಿಕೊಡಬೇಕು. ನನಗೆ ದಿನನಿತ್ಯ ಅವರನ್ನು ತಾಳಗುಪ್ಪಕ್ಕೆ ಹೋಗಲು ಬೈಕ್ ನಲ್ಲಿ ಬಸ್ಸಿಗೆ ಬಿಡಬೇಕು. ಏನೋ ಕೆಲಸವಿದ್ದಾಗ ಹೀಗೆ ಡ್ರಾಪ್ ಕೊಡುವುದು ಬೇಸರತರಿಸಿಬಿಡುತ್ತದೆ. ವಾಪಾಸು ಬರುವ ಬಸ್ಸನ್ನು ಕಾದು ಮನೆಗೆ ಕರೆದುಕೊಂಡು ಬರಬೇಕು. ಅಕಸ್ಮಾತ್ ಒಂದೈದು ನಿಮಿಷ ವ್ಯತ್ಯವಾದರೂ ಹತ್ತು ಬಾರಿ ಸರಿಯಾದ ಸಮಯಕ್ಕೆ ಕರೆದುಕೊಂಡುಹೋಗಿ ಬಿಟ್ಟ ವಿಷಯವನ್ನೂ ಮರೆತು ಬೈಸಿಕೊಳ್ಳಬೇಕು. ಅದು ಅವರ ಸ್ವಭಾವ ಬಿಡಿ. ಆದರೂ ಒಮ್ಮೊಮ್ಮೆ ತಾಳ್ಮೆಕೆಡುತ್ತದೆ. ಆವಾಗೆಲ್ಲ ಸಿಟ್ಟನ್ನು ಅದುಮುತ್ತೇನೆ. ಒಮ್ಮೊಮ್ಮೆ ಬಹಳ ಕಷ್ಟವಾಗುತ್ತದೆ. ಆದರೂ ಈ ಹತ್ತು ವರ್ಷದಲ್ಲಿ ಒಂದು ಬಾರಿಯೂ ಸಿಟ್ಟನ್ನು ವ್ಯಕ್ತಪಡಿಸಲಿಲ್ಲ. ವ್ಯಕ್ತಪಡಿಸದಿದ್ದರೂ ಮ ನಸ್ಸಿಗೆ ಕಷ್ಟವಾಗುತ್ತದೆ. ಮೊನ್ನೆ ಹಾಗೆಯೇ ಆ ಯಿತು, ಬಸ್ಸಿಗೆ ಕಾದೂ ಕಾದೂ ಅ ಸಹನೆ ಪ್ರಾರಂಭವಾಯಿತು. ಆ ವಾಗ ಡಾ ದೀಪಕ್ ರ ಸ್ನಾನದ ಕತೆ ನೆನಪಾಯಿತು. ಹೌದು ಬಸ್ಸಿಗೆ ಬರುವುದು ಭಗವಂತ, ಅವನ ದರ್ಶನಕ್ಕೆ ನಾನು ಕಾಯುತ್ತಿದ್ದೇನೆ ಅಂತ ಅಂದುಕೊಂಡೆ. ಅರೆ ಆಶ್ಚರ್ಯ ನನ್ನೊಳಗಿನ ಅಸಹನೆ ತಟ್ಟನೆ ಮಾಯವಾಯಿತು. ನನಗೆ ಆಶ್ಚ್ರಯ ಆಗಲು ಪ್ರಮುಖ ಕಾರಣ ನಾನು ಇತ್ತೀಚಿಗೆ ದೇವರು ಭಗವಂತ ಅಂತ ಹಿಂದೆ ಅಷ್ಟಾಗಿ ಹೋದವನಲ್ಲ. ಇದೇನೋ ಹೊಸ ಅನುಭವ. ಇರಲಿ ಇಂತಹ ನಂಬಿಕೆಗಳು ಖುಷಿಕೊಡುತ್ತವೆ ಅಂತಾದರೆ ಇರಲಿ.
ವಿವೇಕಾನಂದರ ಹೇಳಿದ ಬೇಸಿಕ್ ತತ್ವ ಕೆಲಸದಲ್ಲಿ ಭಗವಂತನನ್ನು ಕಾಣುವುದಂತೆ. ಎಲ್ಲವುದಕ್ಕೂ ಗೊತ್ತಿಲ್ಲ, ಸಣ್ಣ ಪುಟ್ಟ ಅಸಮಾಧಾನವನ್ನು ಹೀಗೆ ಹೋಗಲಾಡಿಸಿಕೊಳ್ಳಬಹುದು. ಅಷ್ಟೊಂದು ಆ ಳವಾದ ಅ ರ್ಥ ನಮ್ಮಂತಹ ಪಾಮರರಿಗೆ ಆಗದು. ಗಟ್ಟಿ ಕೇಳಿದರೆ ನಮಗೆಲ್ಲಾ ಆಳವಾದ ಅಧ್ಯಾತ್ಮ ಅ ಗತ್ಯವೂ ಇ ಲ್ಲ. ಮೇಲ್ಪದರಿನ ಟಚ್ ಅರ್ಥವಾದರೆ ಹ್ಯಾಪಿ ಲೈಫ್ ಚಾನ್ಸು ಅಷ್ಟೆ.
3 comments:
ಚೆನ್ನಾಗಿ ಬರ್ದಿದೀರ ಸರ್. ನನಗೂ ಈ ದೀಪಕ್ ಬಗ್ಗೆ ವಿಶೇಷ ಭಾವನೆಗಳಿವೆ.
ಭಾರತದ ದೇಶಭಕ್ತ ಸನ್ಯಾಸಿ ಸ್ವಾಮಿ ವಿವೇಕಾನಂದರ ಬಗ್ಗೆ ತುಂಬು ಅಭಿಮಾನದಿಂದ ಈ ಲೇಖನ ಬರೆದಿದ್ದೀರಿ. ಲೇಖನ ನನಗಿಷ್ಟವಾಯಿತು. ನಿಮಗೆ ದನ್ಯವಾದಗಳು..
To: jagadish Sharma And Vijay Joshi
Dhanyavadagalu
Post a Comment