Sunday, December 12, 2010

ಬಟ್ಟೆ ಒಗೆಯುವುದರಲ್ಲೂ ಕಂಡಾಬಟ್ಟೆ ಸೊಬಗಿದೆ!

ನಿಮ್ಮ ಗಮನಕ್ಕೆ - 2) : ಟೈಮ್ಸ್ ಆಫ್ ಇಂಡಿಯಾ ಮಾಲೀಕತ್ವದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕಳೆದ ಕೆಲ ದಿನಗಳಲ್ಲಿ ನಡೆದ ಕ್ಷಿಪ್ರ (ಮತ್ತು ನಮಗೆಲ್ಲ ತೀವ್ರ ಅಸಮಾಧಾನಕರ) ಬದಲಾವಣೆಗಳೆಂದರೆ ವಿಶ್ವೇಶ್ವರ ಭಟ್ ಅವರು ಸಂಪಾದಕ ಹುದ್ದೆಗೆ ರಾಜೀನಾಮೆಯಿತ್ತಿದ್ದಾರೆ, ಅವರನ್ನು ಹಿಂಬಾಲಿಸುತ್ತ ಪ್ರತಾಪ್ ಸಿಂಹ, ತ್ಯಾಗರಾಜ್, ರಾಧಾಕೃಷ್ಣ ಭಡ್ತಿ ಮುಂತಾಗಿ ಉಪಸಂಪಾದಕ ವರ್ಗದವರೂ ರಾಜೀನಾಮೆ ಕೊಟ್ಟು ಹೊರನಡೆದಿದ್ದಾರೆ. ಅವರೆಲ್ಲರ ಆಕರ್ಷಕ ಅಂಕಣಗಳು ಈಗ ಪ್ರಕಟವಾಗುತ್ತಿಲ್ಲ. ಹಾಗೆಯೇ ಎಸ್. ಷಡಕ್ಷರಿಯವರ ಜನಪ್ರಿಯ ದೈನಂದಿನ ಅಂಕಣ ’ಕ್ಷಣಹೊತ್ತು ಆಣಿಮುತ್ತು’, ರವಿ ಬೆಳಗೆರೆಯವರ ಸಾಪ್ತಾಹಿಕ ಅಂಕಣ ’ಸೂರ್ಯ ಶಿಕಾರಿ’, ಹಾಲ್ದೊಡ್ಡೇರಿ ಸುಧೀಂದ್ರ ಅವರ ’ನೆಟ್ ನೋಟ’ ಅಂಕಣಗಳೂ ನಿಂತು ಹೋಗಿವೆ. ’ಪರಾಗ ಸ್ಪರ್ಶ’ ಅಂಕಣ?- stay tuned for further announcement...

ಹೀಗೆ ಈ ವಾರದ ಪರಾಗ ಸ್ಪರ್ಷದ ಜತೆ ಶ್ರೀವತ್ಸ ಜೋಷಿಯವರು ಒಂದು ಪರ್ಸನಲ್ ಮೈಲ್ ಮಾಡಿಬಿಟ್ಟಿದ್ದಾರೆ ಎಂಬಲ್ಲಿಗೆ ವಿಜಯಕರ್ನಾಟಕದಲ್ಲಿ ಅವರ ಅಂಕಣವೂ ಡೋಲಾಯಮಾನ ಅಂತಲೂ ಲೆಕ್ಕಾಚಾರಕ್ಕೆ ಇಳಿಯಬಹುದು. ಒಟ್ಟಿನಲ್ಲಿ ಕನ್ನಡದ ನಂ ೧ ಪ್ರಸಾರದ ವಿಜಯಕರ್ನಾಟಕದ ಒಳಗಡೆ ಏನೇನೋ ನಡೆದಿದೆ ಅಂತ ಪತ್ರಿಕೋದ್ಯಮದ ಆಸಕ್ತಿ ಇರುವವರಿಗೆ ಗೊತ್ತಾಗಿದೆ. ಕುಟ್ಟಿ ಕಟ್ಟಿ ಮೆಟ್ಟಿ ವಿಕ ಬೆಳಸಿದ "ವಿ ಭಟ್ರು ವಿಕ ಬಿಟ್ರು" ಎಂಬ ವಿಷಯದೊಂದಿಗೆ ಬಜ್, ಎಸ್ ಎಂ ಎಸ್ ಹರಿದಾಡಿದಾಗ ನಾನೂ ಒಮ್ಮೆ ಆಶ್ಚರ್ಯಕ್ಕೆ ಒಳಗಾಗಿದ್ದೆ. ಆದರೆ ಬಟ್ಟೆ ಗಲೀಜಾದರೆ ಒಗೆಯಲೇ..! ಬೇಕಲ್ಲ ಅಂತ ಬೆಂಗಳೂರಿನಿಂದ ಮಿತ್ರರೊಬ್ಬರು ಫೋನ್ ಮಾಡಿ ಹೇಳಿದಾಗ ಒಳಾರ್ಥ ಅರ್ಥವಾಗದೆ ಗಲಿಬಿಲಿಗೊಳಗಾದೆ. ಹಾಯ್ ಬೆಂಗಳೂರಿನಲ್ಲಿ ಬಂದ ವರದಿಯನ್ನಾಧರಿಸಿ ಬಂದ ಫೋನ್ ಗಳು ಎನೇನನ್ನೋ ಹೇಳತೊಡಗಿದಾಗ "ಛೆ" ಅಂತ ನಿರ್ಲಕ್ಷ್ಯ ಮಾಡಿಬಿಟ್ಟೆ. ಕಾರಣ ಅವೆಲ್ಲಾ ದೊಡ್ಡವರ ಕತೆಗಳು ಎತ್ತರಕ್ಕೆ ಏರಿದ ಮನುಷ್ಯನ ಸುತ್ತ ಬೇಕಾದ್ದು ಬೇಡಾದ್ದು ಹುಟ್ಟಿಕೊಳ್ಳುವುದೂ ಸಹಜ. ಹಾಗೆಲ್ಲಾ ಬರೆಯುವ ಬೆಳೆಗೆರೆಯ ಬಗ್ಗೆಯೂ ನೂರಾರು ಕತೆಗಳಿವೆ, ನಾವು ಹಾಗೆ ಹುಟ್ಟುವ ಕತೆಗಳನ್ನು ತಲೆಯೊಳಗೆ ಇಟ್ಟು ಸಾಕತೊಡಗಿದರೆ ಅವರ ಬರಹಗಳನ್ನ ಸವಿಯಲು ಆಗುವುದೇ ಇಲ್ಲ ಎಂಬ ನನ್ನ ಓದುಗ ಮಿತ್ರರೊಬ್ಬರ ಮಾತು ನೆನಪು ಮಾಡಿಕೊಂಡು ಸುಮ್ಮನುಳಿದೆ.

ಏನೆಲ್ಲಾ ನಡೆಯುತ್ತದೇ ಈ ಪ್ರಪಂಚದಲ್ಲಿ ನಿತ್ಯ. ಕಾಲ ಅವನ್ನೆಲ್ಲಾ ತನಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಮುಗಳ್ನಗುತ್ತಾ ನುಂಗಿ ಮುನ್ನಡೆಯುತ್ತದೆ. ವಿಜಯ ಕರ್ನಾಟಕ ವಿ ಭಟ್ಟರೊಡನೆ ಒಂದು ದೊಡ್ಡ ಟೀಂ ಕಳೆದುಕೊಂಡಿದೆ. ಒಂದೆರಡು ದಿನ ಛೆ ಅಂತ ಅನ್ನಿಸಿ ಮತ್ತೆ ಮುನ್ನುಗ್ಗುತ್ತಿದೆ. ಹೊರ ಹೊರಟವರು ಮತ್ತೊಂದು ಪತ್ರಿಕೆ ಕಟ್ಟುತ್ತಾರಂತೆ ಎಂಬ ಸುದ್ದಿ ಸುದ್ದಿಮನೆಯ ಕತೆಯಂತೆ ಜನರ ಬಾಯಲ್ಲಿ ಹೊರಟು ನೂರೆಂಟು ಮಾತಾಗುತ್ತಿದೆ.
ನಮ್ಮೂರಿನ ಗಣಪತಿ ಭತ್ತವ ಕೊಯ್ದು ಹಸನು ಮಾಡುತ್ತಿದ್ದ. ಅವನಿಗೆ ವಿ.ಕ ಡಲ್ ಆಗಿದ್ದು ಸುದ್ದಿಯಲ್ಲ ಅದಕ್ಕೆ ಹಿಂದೆ ಚಾರ್ಮ್ ಬಂದಿದ್ದೂ ಸುದ್ದಿಯಲ್ಲ. ಲಾಭವೋ ನಷ್ಟವೋ ಅವನು ಪ್ರತೀ ವರ್ಷ ಭತ್ತ ಬಿತ್ತುತ್ತಾನೆ ಅಕ್ಕಿ ಬೆಳೆಯುತ್ತಾನೆ. ಅವನಿಗೆ ಸಿಟ್ಟು ಬಂದು ಭತ್ತ ಬೆಳೆಯುವುದ ನಿಲ್ಲಿಸುವವರಿಗೂ ನಮ್ಮ ತಾಕತ್ತು ಹೀಗೆ ಮುಂದುವರೆಯುತ್ತದೆ.

2 comments:

Handigodu Muthu said...

V.Bhatru illada V.K. Oodalu manassaguttilla. Idu nijavaaglu Besarada Sangathi. olle team ittu.
Really we miss you Mr.Bhat.

ಸೀತಾರಾಮ. ಕೆ. / SITARAM.K said...

koneyadakke maatra naavu tale kedisikollabeku ennuvadanna maarmikavaagi helioddiraa..