Wednesday, September 21, 2011

ಹಾಗಾಗಿ ಹೀಗೆಲ್ಲ......!

ಅದೇಕೋ ಬ್ಲಾಗ್ ಬರೆಯಲಾಗುತ್ತಿಲ್ಲ. ಕೆಲಸದ ಒತ್ತಡ ಅಂತಲ್ಲ, ಒತ್ತಡದ ಕೆಲಸ ಅಂತ ಅನ್ನಬಹುದು. ನನ್ನ ನಲವತ್ತೈದನೇ ವಯಸ್ಸಿನ ವರೆಗೆ ಕಂಡಿರದ ಕೋರ್ಟು ಪೋಲೀಸ್ ಸ್ಟೇಷನ್ ಮುಂತಾದರ ಮೆಟ್ಟಿಲನ್ನ ಏರುವ ಪ್ರಸಂಗಗಳು ಒಂದರ ಹಿಂದೆ ಒಂದು ಬಂದ ಪರಿಣಾಮ ಅಕ್ಷರಗಳನ್ನು ಕುಟ್ಟುವ ಮನಸ್ಥಿತಿ ಇಲ್ಲವಾಗಿದೆ.
........ಎಂಬ ಜ್ಯೋತಿಷಿ ಬಡತನದಲ್ಲಿ ಬೆಳೆದವ. ಸೇರಿ ಪ್ರಪಂಚ ನೋಡಿ ಊರಿಗೆ ಬಂದು ಕವಡೆ ಹಾಕತೊಡಗಿದ. ಅವನ ಪಾಡಿಗೆ ಅವನು ಊರವರ ಪಾಡಿಗೆ ನಾವು. ಅವನ ಬಳಿ ಹೇರಳ ಹಣ ಸೇರಿತು. ಊರನ್ನಾಳುವ ಮನಸ್ಸು ಗರಿಕೆದರಿತು. ದೇವಸ್ಥಾನಕ್ಕೆ ಜಾಗಕ್ಕೆ ಬೇಲಿ ಹಾಕಿದ. ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಬೇಲಿ ಕಿತ್ತೆಸೆದು ಮುಗಿಯಿತು. ಆದರೆ .......ಜ್ಯೋತಿಷಿಯ ಮನಸ್ಸಿನಿಂದ ಸೋಲನ್ನು ಕಿತ್ತುಹಾಕಲಾಗಲಿಲ್ಲ. ಊರವರ ಮೇಲೆ ಸೇದಿಗೆ ಇಳಿದ. ಕೈಯಲ್ಲಿ ಹಣ ಜತೆಗೊಂದಿಷ್ಟು ಹುಂಬ ಭಕ್ತರು. ರಾಕ್ಷಸ ಮನಸ್ಥ್ತಿಗೆ ಇಳಿಯಲು ಇನ್ನೇನು ಬೇಕು. ನನ್ನನ್ನೂ ಸೇರಿದಂತೆ ಊರಿನ ಹದಿಮೂರು ಜನರ ಮೇಲೆ ಹಲ್ಲೆ ದರೋಡೆ ಮುಂತಾದ ಏನೇನೋ ಕೇಸು ಹಣದ ಮುಖಾಂತರ ದಾಖಲಾಯಿತು. ಈಗ ಕೋರ್ಟ್ ಮುಂದೆ ನಾವುಗಳು ಕೈಕಟ್ಟಿ ನಿಲ್ಲಬೇಕು ಪ್ರತೀ ತಿಂಗಳು. ಸಾರ್ವಜನಿಕ ರಸ್ತೆಗೆ ಅಡ್ಡಲಾದ ಬೇಲಿ ತೆರವು ಮಾಡಿದ್ದಕ್ಕೆ ನಮಗೆ ಈಗ ಈ ಬಳುವಳಿ ಆಶ್ರಮದ ನಿರ್ದೇಶಕನಾಗಿದ್ದ .........ಎಂಬ ಈಪುರುಷನ ...! ಸಾಹಸ......! ಆಶ್ರಮಕ್ಕೆ ತಲುಪಿಸಿಯಾಯಿತು. ಒಂದೇ ಸುತ್ತಿನ ಸರ್ವಾನುಮತದ ತೀರ್ಮಾನದೊಂದಿಗೆ ......ನಿರ್ದೇಶಕ ಸ್ಥಾನದಿಂದ ............ಔಟ್.
ಇಂತಹದ್ದು ಹಳ್ಳಿ ರಾಜಕೀಯ. ಇಲ್ಲಿದ್ದೂ ಇದನ್ನೆಲ್ಲಾ ನೋಡುತ್ತಾ ಸುಮ್ಮನೆ ಕೂರಲಾಗುವುದಿಲ್ಲ. ಸುಮ್ಮನೆ ಕೂರಲಿಲ್ಲ ಅಂದಮೇಲೆ ಇತರರು ನಮ್ಮನ್ನು ಸುಮ್ಮನೆ ಕೂರಲು ಬಿಡುವುದಿಲ್ಲ. ಕೂರಲೇ ಆಗಲಿಲ್ಲಎಂದಮೇಲೆ ಬರೆಯಲಾಗುತ್ತದಯೇ..? ಹಾಗಾಗಿ ಹೀಗೆಲ್ಲ..

2 comments:

ಸಾಗರದಾಚೆಯ ಇಂಚರ said...

nija, kelavomme yarigo anukoola maadalu hogi naave balipashu aagutteve, sadya nanagoo idara anubhava aagide,

nidhaana bareyiri

baraha nimminda huttali aadare huttisabedi

Ramya said...

Hmmmm So Court kacheri shuru aatha!!!
Beda Beda helire keltralle Urru udhara mada chatta ningakella!!!

Hingella Baiskatha idiku alda ninga???

Face it Fight it ashte!!! Dont worry!