Thursday, October 20, 2011

ಎರಡನೆಯವರಾದ ವಕೀಲರ .......

ಸರಿ ಅದು ವಕಾರಾದಿ ವೈದ್ಯರ ಕತೆಯಾಯಿತು ಇನ್ನು ಎರಡನೆಯವರಾದ ವಕೀಲರ ಕತೆಯತ್ತ ನೋಡೋಣ.
ಈಗ ಮೂರು ತಿಂಗಳ ಹಿಂದೆ ನಾ ಕಟ್ಟಿಸುತ್ತಿರುವ ಮನೆಯೆ ಮೌಲ್ಡ್ ಸಮಯ. "ರಾಗು, ನೀ ಮೌಲ್ಡ್ ಹಾಕುವ ಸಮಯಕ್ಕೆ ಸರಿಯಾಗಿ ಕೋರ್ಟ್ ನಿಂದ ಸ್ಟೆ ತರುತ್ತಾರಂತೆ" ಎಂಬ ಸುದ್ದಿ ಕಿವಿಗೆ ಬಿತ್ತು. ಒಮ್ಮೆ ಗಾಬರಿಯಾದೆ. ಹೌದಪ್ಪ ಹೌದು ಮೂರ್ನಾಲ್ಕು ಲಕ್ಷದ ಮೆಟೀರಿಯಲ್ ತಂದಿಟ್ಟುಕೊಂಡು ಅಕಸ್ಮಾತ್ ಸ್ಟೆ ಬಂದುಬಿಟ್ಟರೆ ಕತೆಯೇನು? ಎಂದು ಒಳಮನಸ್ಸು ಪದೇಪದೇ ಒಳಗಿನಿಂದ ನಡುಕವನ್ನು ಸೃಷ್ಟಿಮಾಡಿ ಹೊರಬಿಡತೊಡಗಿತು. ಕೋರ್ಟು ಕಾನೂನು ನನಗೆ ಗೊತ್ತಿಲ್ಲ. ಮಾಡುವುದೇನು?. ಹೈಕೋರ್ಟ್ ಲಾಯರ್ ಸ್ನೇಹಿತ ಬಾಬುವಿಗೆ ಫೋನಾಯಿಸಿದೆ. ಆತ "ಅಯ್ಯೋ ಬಿಡ ಮಾರಾಯ ಹಾಗೆಲ್ಲ ಸ್ಟೆ ತರುವುದಕ್ಕೆ ಬರುವುದಿಲ್ಲ, ನಿನ್ನ ಸ್ವಂತ ಜಮೀನಿನಲ್ಲಿ ಮನೆಕಟ್ಟಿಸುವುದು ನಿನಗೆ ಸಂವಿಧಾನ ಕೊಟ್ಟ ಹಕ್ಕು, ಕೋರ್ಟ್ ಎಂದರೆ ನೀವೆಲ್ಲಾ ಏನೆಂದು ತಿಳಿದುಕೊಂಡಿದ್ದೀರಿ, ಆದರೂ ಸ್ಥಳೀಯ ವಕೀಲರನ್ನು ಒಮ್ಮೆ ಭೇಟಿ ಮಾಡಿ ಪರಿಚಯ ಮಾಡಿಕೋ, ಅದು ಒಳ್ಳೆಯದು" ಎಂದ. ಅಕ್ಕನ ಮಗ ಮಂಜು ಪಕ್ಕನೆ ನೆನಪಾದ. ಆತನ ಮುಖಾಂತರ ಲಾಯರ್ ರಮಣರ ಮನೆಯ ಮೆಟ್ಟಿಲೇರಿದೆ ಕಡತ ಸಹಿತ. ಹಾಗೆಯೇ ಪರಿಚಯ ಜತೆಗೆ ಸಮಸ್ಯೆ ಹೇಳಿಕೊಂಡೆ. ಇದಕ್ಕೊಂದು ಕೇವಿಯಟ್ ಬೇಕು( ಹಾಗೆಂದರೆ ಏನೂ ಅಂತಾನೂ ನನಗೆಗ್ೊತ್ತಿರಲಿಲ್ಲ) ಕಡತವನ್ನು ಪರಾಮರ್ಶಿಸಿ ಕೇವಿಯಟ್ ಅಂದರೆ ಅನ್ಯತಾ ಕೋರ್ಟ್ ಜಗಳ ಮೈಮೇಲೆಎ ಳೆದುಕೊಂಡಂತೆ. ಇದಕ್ಕೆಲ್ಲಾ ಹಾಗೆಲ್ಲ ಸ್ಟೆ ತರಲು ಬರುವುದಿಲ್ಲ, ಅಕಸ್ಮಾತ್ ಬಂದರೂ ನಾವಿದ್ದೇವೆ ಬಿಡಿ ಚಿಂತೆ" ಎಂದರು. ಒಳಗಿನಿಂದ ಧೈರ್ಯದ ಸೆಲೆ ಒಸರತೊಡಗಿತು. "ಫೀ ಎಷ್ಟು? ಎಂದೆ. "ಅಯ್ಯ ಇದೆಕ್ಕೆಲ್ಲಾ ಎಂತಾ ಫೀ" ಎಂದು ಬೀಳ್ಕೊಟ್ಟರು.
ಮತ್ತೊಂದು ಪ್ರಕರಣದಲ್ಲಿ ಖಂಡಿಕದ ರಾಗಣ್ಣ ಹಾಗೂ ಅರುಣ ಎಂಬ ವಕೀಲರ ಭೇಟಿಯಾಗುವ ಸಂದರ್ಭ ಬಂತು. ಅವರೂ ಹಾಗೆಯೇ ಸುಮ್ನೆ ಯಾಕೆ ಕೋರ್ಟು ಕಛೇರಿ, ಸುಮ್ಮನಿದ್ದು ಬಿಡಿ" ಎಂದರು.
ಅಲ್ಲಿಯತನಕ ಪರಿಚಯವೇ ಇಲ್ಲದ ನನ್ನನ್ನು ಸುಲಭವಾಗಿ ಹಾದಿತಪ್ಪಿಸಿ ದುಡ್ಡು ತೆಗೆದುಕೊಳ್ಳಬಹುದಾಗಿದ್ದ ಸಂದರ್ಭದಲ್ಲಿಯೂ ಸಮಾಧಾನದ ಮಾತನ್ನಾಡಿ ಮನೆಗೆ ಕಳುಹಿಸಿದ ವಕೀಲರು ನಮಗೆ ಸಿಕ್ಕರೆ ಜೀವನ ಸುಗಮವಲ್ಲದೇ ಮತ್ತಿನ್ನೇನು?. ಅವರು ಕುಂತಿದ್ದು ನ್ಯಾಯಕ್ಕಾಗಿ ಎಂದು ಮತ್ತೆ ಹೊಸತಾಗಿ ಹೇಳಬೇಕಾಗಿಲ್ಲ ತಾನೆ. ತ್ಯಾಂಕ್ಸ್ ವಕೀಲರೇ ಎನ್ನುತ್ತಾ ಎರಡನೆಯವರು ನಮ್ಮ ಜೀವನದಲ್ಲಿ ಸುಗಮ ದಾರಿ ಮಾಡಿಕೊಡಬಲ್ಲರು ಎಂಬ ಪುರಾಣ ಮುಕ್ತಾಯೂ ಇನ್ನು ಮೂರನೆಯವರು.

No comments: