Friday, March 9, 2012

ಅದು ಮತ್ತೊಂದು ತರ

ವಿಜಯವಾಣಿ ಎಂಬ ಹೆಸರು ವಿಜಯ ಸಂಕೇಶ್ವರ ಅದರ ಒಡೆಯ ಎಪ್ರಿಲ್ ೨ ನೇ ತಾರೀಕು ಬಿಡುಗಡೆ. ಶಶಿ ಸಂಪಳ್ಳಿ ಶಿವಮೊಗ್ಗ ಬ್ಯೂರೋ ಚೀಫ್, ದೀಪಕ್ ಸಾಗರ್ ಸಾಗರ ಸ್ಟ್ರಿಂಜರ್. ಇಷ್ಟೆಲ್ಲಾ ಯಾಕೆ ಹೇಳುತ್ತೀದ್ದೀನೆಂದರೆ ನಾನೂ ಕೂಡ ತಾಳಗುಪ್ಪ-ಕಾರ್ಗಲ್-ಜೋಗ ಕ್ಕೆ ಸ್ಟ್ರಿಂಜರ್ ಆಗಿ ಸೇರುವ ಇರಾದೆ ಹೊಂದಿದ್ದೇನೆ.
ಬರಹದ ಪ್ರಪಂಚವೇ ಹಾಗೆ ಬಿಟ್ಟಿರಲು ಆಗದು ಹಾಗೂ ಬಿಡಲೂ ಬಾರದು. ಕಾರಣ ನಾನೇ ಜ್ವಲಂತ ಸಾಕ್ಷಿ. ನಾನು ವರದಿಗಾರನಾಗಿ ಸಂಕೇಶ್ವರರ ಉಷಾಕಿರಣದಲ್ಲಿದ್ದಾಗ ನಿತ್ಯ ಹತ್ತು ಹಲವು ನ್ಯೂಸು ಕುಟ್ಟಿದ್ದೆ. ಉಷಾಕಿರಣ ಎಂದು ಬಂದ್ ಆಯಿತೋ ಅಲ್ಲಿಗೆ ನಾನು ಕೂಡ ವರದಿಗಾರನಾಗಿ ಬಂದ್ ಆದೆ. ಅಲ್ಲಿಂದ ಶುರುವಾಯಿತು ನೋಡಿ ಸಮಸ್ಯೆ. ನಾನು ವರದಿಗಾರನಾಗಿದ್ದಾಗ ಕುಟ್ಟಿದ್ದ ನ್ಯೂಸಿನ ಎಲ್ಲಾ ಪಾತ್ರಧಾರಿಗಳೂ ಬೆನ್ನೆತ್ತಿ ಕಾಡತೊಡಗಿದವು.
ಈಗ ಅವರುಗಳ ಕಾಟ ತಪ್ಪಿಸಿಕೊಳ್ಳಲಾದರೂ ಮತ್ತೆ ವರದಿಗಾರನಾಗಬೇಕು. ಪ್ರಪಂಚವೇ ಹಾಗೆ ರೌಡಿ ಯಿಂದ ಹಿಡಿದು ಪೋಲೀಸ್ ರ ವರಗೂ ಅಧಿಕಾರ ಹೋದಮೇಲೆ ಕಷ್ಟ ಕಷ್ಟ ಕಷ್ಟ. ಹಾಗಂತ ಅದಿದ್ದಾಗ ಸುಖ ಅಂತಲ್ಲ. ಅದು ಮತ್ತೊಂದು ತರ. ಒಟ್ಟಿನಲ್ಲಿ ಯಾವುದೂ ನಮ್ಮ ಕೈಯಲ್ಲಿಲ್ಲ.

1 comment: