Sunday, December 28, 2008

ಎರಡು ಬ್ಲಾಗ್ ಗಳು

"ನನಗೇಂತ ಹಣ್ಣು ಕೊಳ್ಳಲು ಅಪ್ಪಯ್ಯ(ಮಾವ) ಹಣ್ಣಿನಂಗಡಿಗೆ ಹೋಗಿದ್ದರಿರಬೇಕು. ಬಸ್ಸು ಇನ್ನೇನು ಬಿಡಬೇಕು ಅನ್ನುವಷ್ಟರಲ್ಲಿ ಬಂದೇ ಬಿಟ್ಟರು. ಕಿಟಕಿಯಲ್ಲಿ ಹಣ್ಣು ಕೊಟ್ಟರು. ತಗೊಂಡೆ. ಇನ್ನೊಂದು ಬಾರಿ ಅವರನ್ನಪ್ಪಿ ಅಳಬೇಕೆನ್ನಿಸಿದರೂ ಬಸ್ಸು ಹೊರಟೇ ಬಿಟ್ಟಿತು. ಟಾ...ಟಾ..." ಹೀಗೆ ಶಾಂತಲಾ ಭಂಡಿಯವರ ನಕ್ಕುಬಿಡಿ ಒಮ್ಮೆ ಬರಹ ನೆನಪು ಕನಸುಗಳ ನಡುವೆ ಎಂಬ ಬ್ಲಾಗ್ ಮುಖಾಂತರ ತಲುಪುತ್ತದೆ http://shantalabhandi.blogspot.com/). ಊರಿಂದ ವಾಪಾಸು ಹೊರಟಾಗ, ಕೊಟ್ಟ ಮನೆಯಲ್ಲಿ ನಡೆಯುವ ಸಣ್ಣ ಘಟನೆಯನ್ನು ನಮ್ಮ ಕಣ್ಣಮುಂದೆ ಬಿಚ್ಚಿಡುವಲ್ಲಿ ಶಾಂತಲಭಂಡಿ ಯಶಸ್ಸು ಸಾಧಿಸುತ್ತಾರೆ. ಬರಹದ ಆರಂಭದಲ್ಲಿ ನಮಗೆ ಶಾಂತಲಾ ಭಂಡಿ ಯಾಗಿದ್ದವರು ಬರಹದ ಮುಕ್ತಾಯದಲ್ಲಿ ನಮಗೆ ಗೊತ್ತಿಲ್ಲದಂತೆ ತನ್ನದೇ ಕಥೆ ಹೇಳುತ್ತಾ ನಮ್ಮ ನಿಮ್ಮ ಅಕ್ಕತಂಗಿಯರಂತೆ ಅನಿಸಿ ಶಾಂತಲಕ್ಕ ಆಗಿಬಿಡುತ್ತಾರೆ. ಅವರೆಲ್ಲೋ ನಾವೆಲ್ಲೋ ಎನ್ನುವ ಸಂಬಂಧ ಬ್ಲಾಗ್ ಮೂಲಕ ನಮಗೆ ಅವರಿಗೆ ಗೊತ್ತಿಲ್ಲದಂತೆ ಒಂದು ಸುಮಧುರ ಬಾಂಧವ್ಯ ಹುಟ್ಟಿಕೊಂಡಿರುತ್ತದೆ. ಇದಕ್ಕೆ ಬರಹಗಳು ಎನ್ನುವುದು. ಓದಿನ ಆರಂಭದಲ್ಲಿ ಅಪರಿಚಿತರು ಓದಿದನಂತರ ಅಪರಿಚಿತರಾದರೂ ಅದು ಹೇಗೋ ಪರಿಚಿತರು. ಹೀಗೆ ಎಲ್ಲಿಯದೋ ಕಥೆಯನ್ನು ಯಾರಿಗೋ ತಲುಪಿಸುವ ಬ್ಲಾಗ್ ಗೆ ಜೈ ಅನ್ನೋಣ.
ಇದು ತೀರ್ಪು ಅಂದ್ಕೊಬೇಡಿ, ಚಪ್ಪಾಳೆ ಅನ್ನಿ, ಹಸ್ತಲಾಘವ ಅನ್ನಿ, 'ಗೋ-ಪರಾಕ್' ಅನ್ನಿ ಅಥವಾ 'ಭೇಷ್' ಎಂಬ ಹೆಸರಿನಲ್ಲಿ ಬೆನ್ನಿಗೊಂದು ಮೆದುಬಾರು ಅಂದುಕೊಳ್ಳಿ. ಉತ್ತಮ, ನಂಬಲಸಾಧ್ಯ ಕೆಲಸ ಮಾಡುತ್ತಿದ್ದೀರಿ. ನಿಮ್ಮೊಳಗೊಬ್ಬ ಇಷ್ಟೊಂದು ಚಟುವಟಿಕೆಯ, ಚಲನಶೀಲ, ರಂಜನೀಯ, ಜೀವಪರ, ರೈತಪರ, ಸಹೃದಯೀ ಶ್ರಮಿಕ ಉದಯಶಂಕರ್ ಇದ್ದಾರೆ ಅನ್ನೋದೇ ಗೊತ್ತಿರಲಿಲ್ಲ. ನಾನು ಪ್ರಜಾವಾಣಿಯಲ್ಲಿದ್ದಾಗ ದಿನಾ ಮೆಲ್ಲಗೆ ಬಂದು 'ಇಂದಿನ ಈದಿನ' ವನ್ನು ತೋರಿಸಿ ಹೋಗುತ್ತಿದ್ದ ದೊಗಲೆ ಅಂಗಿಯೊಳಗಿನ ಉದಯಶಂಕರ್ ಬೇರೆಯೇ ಇರಬಹುದೆ?
ನಿಮ್ಮ ಬ್ಲಾಗ್ ನಿತ್ಯ ನೂತನವಾಗಿದೆ, ಸುಂದರವಾಗಿದೆ, ಸಮೃದ್ಧವಾಗಿದೆ. ಹೀಗೆಯೇ ಸುದೀರ್ಘ ಸುಮಂಗಲಿಯಾಗಿರಲಿ ಎಂದು ಹಾರೈಸುತ್ತೇನೆ.
ಅಂತ
ನಾಗೇಶ್ ಹೆಗಡೆಯವರು ಬ್ಲಾಗ್ ಗೆ ಹಾರೈಸಿದ್ದಾರೆ ಎಂದಮೇಲೆ ಆ ಬ್ಲಾಗ್ ಬಗ್ಗೆ ನಾವು ಹೇಳುವುದು ಇನ್ನೇನು ಉಳಿದಿದೆ..!?. ಅದು ನೆತ್ರಕೆರೆ ಉದಯಶಂಕರ್ ರವರ ಬರಪ್ಪೂರ ಮಾಹಿತಿಯ (http://paryaya.blogspot.com/) ಬ್ಲಾಗ್. ಅಲ್ಲಿ ಏನುಂಟು ಏನಿಲ್ಲ?, ಇಂದಿನ ಇತಿಹಾಸ ಎಂಬ ಬರವಣಿಗೆಯ ಮೂಲಕ ನಮಗೆ ಪ್ರಪಂಚ ತೋರಿಸುತ್ತಾರೆ ನೆತ್ರಕೆರೆ. ಪ್ರಿಂಟ್ ಮೀಡಿಯಾದಲ್ಲಿ ಉದ್ಯೋಗಿಯಾಗಿರುವ ನೆತ್ರಕೆರೆ ತಾವು ಕೆಲಸ ಮಾಡುವ ಪ್ರಜಾವಾಣಿಯಷ್ಟೇ ತಮ್ಮ ಬ್ಲಾಗನ್ನೂ ಒಪ್ಪ ಓರಣವಾಗಿದ್ದಾರೆ. ಬ್ಲಾಗ್ ನ ಬದಿಯಲ್ಲಿ ಮಾಹಿತಿ ಮಾಹಿತಿ ಮಾಹಿತಿ ಕ್ರಿಕೆಟ್ ನಿಂದ ಶೇರ್ ಸೂಚ್ಯಂಕದ ವರೆಗೂ ಹರಿದು ಹೊಳೆಯಾಗಿದೆ.
ಹೀಗೆ ತಮ್ಮದೇ ವಿಷಯವನ್ನು ತಮ್ಮದೇ ಘಟನೆಯನ್ನು ಬೇರೆಯದೇ ವಿಷಯವನ್ನು ಬೇರೆಯದೇ ಮಾಹಿತಿಯನ್ನು ಶ್ರದ್ದೆಯಿಂದ ಯಾವ ಪ್ರತಿಪಲಾಪೇಕ್ಷೆ ಇಲ್ಲದೆ ಅಪ್ಲೋಡ್ ಮಾಡುವ ಬ್ಲಾಗಿಗಳಿಗೆ ಒಂದು ತ್ಯಾಂಕ್ಸ್ ಸಲಾಮ್. ಮತ್ತೆ ಮುಂದಿನವಾರದವ್ ಬೇಟೆಗೆ ಯಾರು ಸಿಗುತ್ತಾರೋ ನೋಡೋಣ. ಅಲ್ಲಿಯವರೆಗೆ ಟೆಕ್ ಕೇರ್. -ಕೆ.ಆರ್.ಶರ್ಮಾ.ತಲವಾಟ

2 comments:

Anonymous said...

sharmare,
nija,blog balaga doddadaaguttide. olle prayatna maaduttaa iddiri. tubha khushiyaayitu
kodsara

ಶಾಂತಲಾ ಭಂಡಿ (ಸನ್ನಿಧಿ) said...

ರಾಘಣ್ಣ...
ಅನಂತಾನಂತ ಧನ್ಯವಾದಗಳು. ಹೆಚ್ಚಿಗೆ ಹೇಳಲು ಮಾತೇ ತೋಚುತ್ತಿಲ್ಲ.

ವಂದನೆಗಳೊಂದಿಗೆ,
-ಶಾಂತಲಾ ಭಂಡಿ.