Thursday, April 2, 2009

ಹೇಳಬಲ್ಲಿರ ನೀವು...?

ಏಕೆ ಎಲ್ಲ ಮುಗಿದು ಹೋಗಿದೆ.?
ಏಕೀಗ ಹಾಲ್ಗಡಲ ಕಡೆಯುವುದಿಲ್ಲ
ಐರಾವತ, ಉಚ್ಛೈಶ್ವಗಳು ಹುಟ್ಟುವುದಿಲ್ಲ
ಅಮೃತ ಕುಂಭ ಮೇಲೆದ್ದು ಬರುತ್ತಿಲ್ಲ.
ಏಕೆ ಎಲ್ಲ ಮುಗಿದು ಹೋಗಿದೆ.
ಸ್ವರ್ಗದಲ್ಲೇಕೆ ಕುಮಾರ ಸಂಭವವಾಗುತ್ತಿಲ್ಲ
ದೇವಸುತ, ಪ್ರವಾದಿಗಳೇಕೆ ಬರುತ್ತಿಲ್ಲ
ಶಿವೆ ಪತಿ ಮಾತು ಧಿಕ್ಕರಿಸಿ ಅಗ್ನಿಗಾಹುತಿಯಾಗುತ್ತಿಲ್ಲ
ಏಕೆ ಎಲ್ಲ ಮುಗಿದು ಹೋಗಿದೆ.?
ಋಷಿಗಳ ತಪವೇಕೆ ಭಂಗವಾಗುತ್ತಿಲ್ಲ
ಶಕುಂತಲೆ ಭರತರೇಕೆ ಹುಟ್ಟುತ್ತಿಲ್ಲ
ಗಂಗೆಯಂತೆ ಇನ್ನೊಬ್ಬಳು ಬರುತ್ತಿಲ್ಲ
ಏಕೆ ಎಲ್ಲ ಮುಗಿದು ಹೋಗಿದೆ.?
ಸೂರ್ಯ ಚಂದ್ರ ವಂಶಗಳು
ಪುತ್ರಕಾಮೇಷ್ಟಿ ಯಾಗಗಳು
ಭೂ ಬಾರವಿಳಿಸಲು ದಶಾವತಾರಗಳು
ಏಕೆ ಎಲ್ಲ ಮುಗಿದು ಹೋಗಿದೆ.?
ಹರನಂ ನರನೊತ್ತಿದ -
ಗೊಡೆಯನೊಡೆದು ಭಕ್ತನ ಕಂಡ
ದೇವ ಕಂಬನಿ ಮಿಡಿದು ಸತಿಯ ಹುಡುಕಿದ
ಪಾರಿಜಾತವ ತಂದು ಸತಿಯ ಕೆಣಕಿದ
ಒಲಿಸಿದ ದೇವಕತೆಗಳು.
ಏಕೆಲ್ಲ ಮುಗಿದು ಹೋಗಿದೆ?.
ತಡಮಾಡಿದೆನೆ ? ನಾನು !
ಏಕೆಲ್ಲ ಮುಗಿದು ಹೋಗಿದೆ
ಬೆಂಗಳೂಲ್ಲಿ ಸಾವಿರಕ್ಕೆ ಸಿಗುತ್ತಿದ್ದ ಸೈಟುಗಳು
ಐದು ಹತ್ತು ಸಾವಿರಕೆ ಮನೆಗಳು
ಏಕೆಲ್ಲ ಮುಗಿದು ಹೋಗಿದೆ?.
ತಡಮಾಡಿದೆನೆ ? ನಾನು !
-ಗಾಯತ್ರಿ ರಘುಪತಿ ಬೆಂಗಳೂರು . ಬರೆದದ್ದು . ನಿಮಗಾಗಿ ಕಾಪಿ ಮಾಡಿ ಪೇಸ್ಟ್ ಮಾಡಿದ್ದು ನಾನು.

2 comments:

ಮೂರ್ತಿ ಹೊಸಬಾಳೆ. said...

ಉತ್ತರ ಹೇಳುವಷ್ಟರವನಲ್ಲ ಆದರೆ ಯೋಚಿಸುವಂತಹ ವಿಚಾರ ಹೌದು.

Anonymous said...

ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/