Friday, April 23, 2010

ಕಟ್ಟಿಗೆ ಲೋಡ್ ತಯಾರು

ನೀರಿನ ಮೇಲೆ ತೆಪ್ಪದಲ್ಲಿ ಕುಳಿತು ತೇಲುವುದೆಂದರೆ ಅದೊಂದು ಮಧುರ ಅನುಭವ. ತಿಳಿ ನೀರಿನಲ್ಲಿ ಹುಟ್ಟು ಹಾಕುತ್ತಾ ಸಾಗುತ್ತಿದರೆ ತನ್ನಷ್ಟಕ್ಕೆ ಹಾಡು ಗುನುಗುತ್ತದೆ. ದೂರದಲ್ಲಿ ಕಾಣುವ ಮೂರು ಜನ ತೆಪ್ಪದಲ್ಲಿ ಹೀಗೆಯೇ ಮಾಡುತ್ತಾ ಹೋಗುತ್ತಲಿದ್ದಾರೆ ಎಂದೆಣಿಸಿದರೆ ಅದು ಸುಳ್ಳು. ತೆಪ್ಪದಂತೆ ತೋರುವ ಆದರೆ ತೆಪ್ಪವಲ್ಲದ ಈ ಕೆಲಸದ ಹಿನ್ನಲೆ ತಿಳಿದರೆ ತನ್ನಷ್ಟಕ್ಕೆ ಅಬ್ಬಾ ಈ ಜನರ ಸಾಹಸವೇ ಎಂಬ ಉದ್ಘಾರ ಹೊರಡದಿರದು. ಮಾರ್ಚ್ ತಿಂಗಳು ಬಂತೆಂದರೆ ಮಲೆನಾಡಿನಲ್ಲಿ ಕಬ್ಬು ಕಟಾವಿನ ಸಮಯ. ಗಾಣಕ್ಕೆ ಕಬ್ಬು ಕೊಟ್ಟು ಹಾಲು ತೆಗೆದು ಕಾಯಿಸಿ ಬೆಲ್ಲ ಮಾಡುವ ಕೆಲಸ ಭರಾಟೆಯಿಂದ ಸಾಗುತ್ತಿರುತ್ತದೆ. ಈ ಬೆಲ್ಲ ಕಾಯಿಸುವ ಕೆಲಸಕ್ಕೆ ಉರುವಲು ಹೇರಳ ಬೇಕಾಗುತ್ತದೆ. ಊರಿನಂಚಿನ ಕಾಡುಗಳಲ್ಲಿ ಕಟ್ಟಿಗೆಗಳು ಮನೆ ಬಳಕೆಗೆ ಸೀಮಿತ. ರಕ್ಷಿತ ಅರಣ್ಯಗಳಿಂದ ಉರುವಲು ತರಲು ಅರಣ್ಯಾಧಿಕರಗಳ ಕಾಟ. ಇದಕ್ಕೆ ಉಪಾಯ ಈ ಕಾಷ್ಠೋತ್ಸವ. ಲಿಂಗನಮಕ್ಕಿ ಹಿನ್ನೀರಿನ ನಡುಗುಡ್ಡೆಗಳು ಒಣಗಿದ ಮರಗಳ ತೌರು. ಆದರೆ ಅಲ್ಲಿರುವ ಕಟ್ಟಿಗೆ ಹಿನ್ನೀರು ದಾಟಿ ಈಚೆ ಬರಬೇಕೆಂದರೆ ಈ ಸಾಹಸ. ಊರಿನಲ್ಲಿ ಕಬ್ಬು ಬೆಳೆಯುವ ರೈತರು ಮೂರ್ನಾಲ್ಕು ಜನ ಸೇರಿ ವಾರಕ್ಕಾಗುವ ಆಹಾರ ಕಟ್ಟಿಕೊಂಡು ಹಿನ್ನೀರಿನ ನಡುಗುಡ್ಡೆ ಸೇರುತ್ತಾರೆ. ಅಲ್ಲಿ ಒಣಗಿದ ಮರದ ದಿಮ್ಮಿಗಳನ್ನು ಕಡಿದು ಒಂದೆಡೆ ಗುಡ್ಡೆ ಹಾಕುತ್ತಾರೆ. ಸಾಕಷ್ಟು ಉರುವಲು ಸಂಗ್ರಹವಾಯಿತು ಎಂದಾಗ ನೀರಿನಲ್ಲಿ ಒಂದೊಂದೇ ದಿಮ್ಮಿಗಳನ್ನು ಹಾಕಿ ಮರದ ಬಳ್ಳಿಯಿಂದ ಕಟ್ಟುತ್ತಾರೆ. ಹೀಗೆ ಒಂದರ ಮೇಲೆ ಒಂದು ಒಣಗಿದ ಮರ ಇಟ್ಟಾಗ ತೆಪ್ಪ ಕಂ ಕಟ್ಟಿಗೆ ಲೋಡ್ ತಯಾರು. ಅಲ್ಲಿಯೇ ಮರದ ಹುಟ್ಟು ತಯಾರಿಸಿ ಊರಿನತ್ತ ಹುಟ್ಟುಹಾಕುತ್ತಾರೆ. ಸಂಜೆ ಹೊತ್ತಿಗೆ ವರ್ಷಕ್ಕಾಗುವಷ್ಟು ಕಟ್ಟಿಗೆಯೊಂದಿಗೆ ತಟದ ಸಮೀಪದ ಊರಿಗೆ ಮರಳುತ್ತಾರೆ. ಈ ಚಿತ್ರದಲ್ಲಿ ಕಾಣಿಸುತ್ತಿರುವ ಕಟ್ಟಿಗೆ ಸುಮಾರು ಎರಡು ಲಾರಿ ಲೋಡ್ ನಷ್ಟಿದೆ. ಶೇಕಡಾ ಇಪ್ಪತ್ತರಷ್ಟು ಮೇಲ್ಬಾಗದಲ್ಲಿ ಕಾಣಿಸುತ್ತಿದ್ದರೆ ಇನ್ನುಳಿದ ಎಂಬತ್ತರಷ್ಟು ನೀರಿನಲ್ಲಿ ಮುಳುಗಿದೆ. ದಿನವಿಡೀ ತೇಲುವ ಮಜ ಅನುಭವಿಸುವ ಇವರಿಗೆ ಒಮ್ಮೊಮ್ಮೆ ಅಧಿಕಾರಿಗಳಿಂದ ಕಿರುಕುಳವೂ ಇದೆ. ವಾರಪೂರ್ತಿ ಕಾಡಿನಲ್ಲಿ ಇರುವ ಧೈರ್ಯವಿದ್ದರೆ ಕೊನೆಯ ದಿನದ ತೇಲು ತೆಪ್ಪ ವನ್ನು ನೀವೂ ಅನುಭವಿಸಬಹುದು..!.

4 comments:

ವಿ.ರಾ.ಹೆ. said...

good.. ಎಂತೆಂತಾ ಐಡಿಯಾ ಮಾಡ್ತಾರಪ್ಪ!

ಸಾಗರದಾಚೆಯ ಇಂಚರ said...

ಗ್ರೇಟ್ ಉಪಾಯ

ಸುಮ said...

ಅಬ್ಬಾ.... ಹೀಗೂ ಉಂಟೆ!!!

ಮಾವೆಂಸ said...

ondu adbutha `nudi chithra'lekhana aagabahudaada vishaya putta blog mahithiyayitha? che!