Sunday, June 27, 2010

ನಾಲ್ಕು ಹನಿ

ಸಂಸಾರಿಯ ಸಾರ

ಅಡುಗೆ ಭಟ್ಟರೊಯ್ಯುವರು
ಯಜ್ಞ ಸುಟ್ಟವರೊಯ್ಯುವರು
ಸರ್ವಬಿಟ್ಟವರೊಯ್ಯುವರು
ಸಂಸಾರಿಯಿಂದ

ಕನ್ನಡವೆಂದರೆ.......
ಹುಡುಗ ಹೇಳಿದ
"ಕನ್ನಡವೆಂದರೆ ಕುಣಿದಾಡುವುದೆನ್ನೆದೆ"
ಹುಡುಗಿ ಹೇಳಿದಳು
"ಎನ್ನದಿದ್ದರೂ ..................."

ರಾಜಕೀಯವೆಂದರೆ
ರಾವಣ
ರಾಸಂಧ
ಕೀಚಕ
ಮರುಗಳಕೂಟ

ನಾನ್ಯಾರು..?

"ಪ್ರಿಯೇ ಹೃದಯ ಶ್ರೀಮಂತಿಕೆಯಲ್ಲಿ
ನಾನು ಟಾಟಾ ಬಿರ್ಲಾ
ಹುಡುಗಿ ಹೇಳಿದಳು
ಹಾಗಾದರೆ ನಾನು ಟಾಟಾ ಬರ್ಲಾ"
ವೇದಿಕೆಯಲ್ಲಿದ್ದವರು ಕವನ ಓದಿದ ಕವಿಯ ಕರೆದು ಹೇಳಿದರು
ಇದು ದುಂಡಿರಾಜರ ಹನಿಗವನ
ಕವಿ ಹೇಳಿದ "ನಾನೇ ದುಂಡಿರಾಜ"
ಅಲ್ಲಿಯೇ ಇದ್ದ ದುಂಡಿರಾಜರು ಕೇಳಿದರು
ಹಾಗಾದರೆ ನಾನ್ಯಾರು?.

5 comments:

PARAANJAPE K.N. said...

ಚೆನ್ನಾಗಿದೆ

Mruthyu said...

neat...good.

ಸೀತಾರಾಮ. ಕೆ. / SITARAM.K said...

ಚೆನ್ನಾಗಿವೆ.

ವಿ.ರಾ.ಹೆ. said...

:-)

ಸಾಗರದಾಚೆಯ ಇಂಚರ said...

ಕೊನೆಯದು ತುಂಬಾ ಚೆನ್ನಾಗಿದೆ