Tuesday, February 1, 2011

"ಓಂ" ಕಾರದಲ್ಲಿ ಎಲ್ಲಾ ಇದೆ.!

ಅಯ್ಯೋ ಅದು ಖಡಾಖಂಡಿತಾ ನಿಜ ಅಂತ ನಮಗೆ ಗೊತ್ತು ನೀನೇನು ಹೊಸತಾಗಿ ಹೇಳಬೇಕಾಗಿಲ್ಲ ಅಂತ ಅಂದಿರಾ..? ವಾಕೆ ಮುಂದುವರೆಸೋಣ. ಅವರೆಂಬ ಅವರು ಏನೆಂತಾರೆ ಎಂದರೆ, " ನೀವು ಎಲ್ಲಾ ಯೋಚನೆಗೂ ಮಿದುಳನ್ನು ಆಶ್ರಯಸುತ್ತೀರಿ, ಹಾಗಾಗಿ ಯೋಚನೆಯೆಂಬುದು ಯೆಗ್ಗಿಲ್ಲದೆ ನಿಮ್ಮನ್ನು ಎಲ್ಲೆಲ್ಲಿಗೋ ಕೊಂಡೊಯ್ಯುತ್ತದೆ. ಮಡೆಸ್ನಾನ ಮಾಡುವವರೂ ಹಾಗೂ ಕ್ರಿಕೆಟ್ ಹರಾಜಾಗುವವರು ತಲೆಕೆಡಿಸಿಕೊಳ್ಳದ್ದಕ್ಕೆ ನೀವು ಬರಪ್ಪೂರ್ ಕಿತ್ತಾಡಿ ಸುಸ್ತಾಗುತ್ತೀರಿ, ಸುಮ್ಮನೆ ಯೆಸ್ ಎಂದು ಮುಗುಮ್ಮಾಗಿ ಕುಳಿತುಕೊಂಡು ಮಜ ಅನುಭವಿಸಬಹುದಾಗಿದ್ದ ಸಮಯವನ್ನು ತಲೆಕೂದಲೆಲ್ಲಾ ನಿಮರುವಂತೆ ಮಂಡೆಬಿಸಿಮಾಡಿಕೊಂಡು ವ್ಯಗ್ರರಾಗುತ್ತೀರಿ, ಆದರೆ ಮಜ ಗೊತ್ತ ? ಹೀಗೆ ನಿಮ್ಮ ವರ್ತನೆಯಿಂದ ಪ್ರಪಂಚ ದಲ್ಲಿ ಗುಲಗುಂಜಿ ಬದಲಾವಣೆ ಆಗುವುದಿಲ್ಲ, ಅಕಸ್ಮಾತ್ ಆದರೂ ಅದು ನೀವು ಮಂಡೆಬಿಸಿಮಾಡಿಕೊಂಡಿದಕ್ಕಂತೂ ಆಗಿರುವುದಿಲ್ಲ. ಹೀಗೆಲ್ಲಾ ಆಗುವುದಕ್ಕೆ ನಿಮ್ಮ ಮೆದುಳಿನ ಹೆಚ್ಚು ಬಳಕೆಯೇ ಕಾರಣ," ಬಿಟ್ಟಾಕಿ ಅವೆಲ್ಲಾ, ಪ್ರೀತಿಯನ್ನು ಹೃದಯದಿಂದ, ಪ್ರಪಂಚವನ್ನು ನಾಭಿಯಿಂದ ನೋಡಿ ಕೇಳಿ ಅನುಭವಿಸಿ, ಆಗ ನೋಡಿ ಸ್ವರ್ಗದಲ್ಲಿ ತೇಲಾಡುತ್ತೀರಿ. ಆಗ ನಿಮ್ಮಲ್ಲಿ ಹುಟ್ಟುವ ಯೋಚನೆಗಳು ಮಿದುಳಿನಲ್ಲಿ ರೂಪ ಪಡೆದು ಸದ್ದು ಮೂಡುತ್ತಲ್ಲ ಅಲ್ಲಿ ಬದಲಾವಣೆ ಆಗಬಹುದು, ಇಲ್ಲ ಆಗಲೇ ಇಲ್ಲ ಎನ್ನಿ ಆಗದ ಚಿಂತೆ ನಿಮ್ಮನ್ನು ಕಾಡದು, ಅಷ್ಟಾದರೆ ಸಾಕಲ್ಲ ಇನ್ನೇಕೆ ತಡ. ಪ್ರೀತಿ ಮಾಡುವ ಮನಸ್ಸು ಇಲ್ಲದಿದ್ದರೆ ನಾಭಿಯತ್ತ ನಿಮ್ಮ ಗಮನವನ್ನು ಕೊಡಿ.
ಅದೆಲ್ಲಾ ಸರಿ ನಾಭಿಯತ್ತ ಗಮನ ಅಂದರೆ ಏನು? ಅಂತ ನಿಮ್ಮ ಪ್ರಶ್ನೆ ಅಂತ ತಾನೆ?. ಅದೇ ಓಂಕಾರ, ಸಿಕ್ಕಾಪಟ್ಟೆ ಭಯ ಆದಾಗ ಹೊಟ್ಟೆಯಲ್ಲಿ ಅದೇನೋ ತಳಮಳ ಅಂತೀವಿ ತಾನೆ?, ಅಲ್ಲಿಗೆ ಅಲ್ಲಿ ಏನೋ ಇದೆ ಅಂತಾಯ್ತು, ಹೌದು ಅಲ್ಲಿಂದಲೇ ಎಲ್ಲವಂತೆ, ನಾಭಿ ನಮ್ಮ ಮೂಲಕೇಂದ್ರವಂತೆ, ಅದರ ಬಗ್ಗೆ ದಿನಕ್ಕೊಮ್ಮೆ ಗಮನಹರಿಸಿದರೆ ನಮ್ಮ ಯೋಚನೆಯ ದಿಕ್ಕು ಬದಲಾಗಿ ಸ್ವಲ್ಪ ರಿಲೀಫ್ ಸಿಗುತ್ತಂತೆ, ಅದರತ್ತ ಗಮನ ಹರಿಸಲು ಅತ್ಯಂತ ಸುಲಭ ಈ ಓಂಕಾರವಂತೆ. ಹೀಗೆ ಅಂತೆಕಂತೆಗೆಳ ಸಂತೆಯನ್ನು ತೀರಾ ಒಂತರಾ ಹಳೇಬಾಟಲಿ ಹೊಸ ಮದ್ಯದ ತರಹದ ಆಲೋಚನೆಗೆ ಒಡ್ಡಬೇಡಿ, ನೀವು ಮಂಡೆಬಿಸಿಯಿಂದ ಬಳಲುವ ಜನ ಆಗಿದ್ದರೆ ಸುಮ್ಮನೆ ರವಿಶಂಕರ್ ಯೋಗ, ಮತ್ತೊಂದು ಧ್ಯಾನ ಮಗದೊಂದು ನಗುಥೆರಪಿ ಮಗಮಗದೊಂದು ಹೀಲಿಂಗ್ ಅಂತೆಲ್ಲಾ ಹಣ ಕಳೆದುಕೊಳ್ಳಬೇಡಿ, ಅವೆಲ್ಲಾ ನಿಮ್ಮಲ್ಲಿರುವ ಶಕ್ತಿಯನ್ನು ಬಳಸಿಕೊಂಡು ನಿಮಗೆ ಅದೇನೋ ಕಲಿಸಿಕೊಟ್ಟಂತೆ ಅನಿಸಿಬಿಡುತ್ತಾರೆ, ಸುಮ್ಮನೆ ಬೆಳಗ್ಗೆ ಒಂದೈದು ನಿಮಿಷ ಓಂ...... ಎಂದು ದೀರ್ಘವಾಗಿ ಎಳೆದು ಎಳೆದು ಒಂದಿಪ್ಪತ್ತು ಬಾರಿ ಹೇಳಿ, ಮಜ ಬರುತ್ತೆ,ಆಗ ನಿಮ್ಮ ಯೋಚನೆ ನಾಭಿಯತ್ತ ಹೊರಳುತ್ತದೆ. ಹೌದು ಅದು ನಾಭಿಯಿಂದ ಹೊರಡಿಸಬಹುದಾದ ಸದ್ದು ಅದು. ಆನಂತರ ಪುಕ್ಕಟ್ಟೆ ನೆಮ್ಮದಿ ನಿಮ್ಮದಾಗುತ್ತದೆ. ಒಮ್ಮೆ ನಾಭಿಯತ್ತ ಗಮನ ಹರಿದು ಅದು ವಿಕಸನಗೊಂಡಮೇಲೆ ಓಂಕಾರ ತನ್ನಷ್ಟಕ್ಕೆ ಬದುಕು ಕಟ್ಟಿಕೊಡುತ್ತದೆ.
ಅಯ್ಯೋ ಸಾಕು ಬಿಡು ಇವೆಲ್ಲಾ ಚೊರೆ ಎಂದಿರಾ ಸರಿ ಹಾಗಾದರೆ ನಿಮಗೆ ಈಗಾಗಲೇ ಆ ವಿದ್ಯೆಗಳೆಲ್ಲಾ ಒಲಿದಿದೆ, ಅಥವಾ ಏನೂ ಒಲಿದಿಲ್ಲ. ಒಲಿದಿದ್ದರೆ ಸಂತೋಷ, ಒಲಿಯದಿದ್ದರೆ ಅಂತಹ ಅವಶ್ಯಕತೆಯಕಾಲ ಬಂದಾಗ ಇದನ್ನು ನಿಧಾನ ಕುಳಿತು ಓದಿ. ಹ್ಯಾಪಿ "ಓಂ"

2 comments:

Dr.D.T.Krishna Murthy. said...

ಶರ್ಮಅವರಿಗೆ;ಇಂತಹ ಒಳ್ಳೆಯ ಐಡಿಯ ಸುಲಭದಲ್ಲಿ ಕೊಟ್ಟಿದ್ದಕ್ಕೆ ಅನಂತ ಧನ್ಯವಾದಗಳು.ಈ ಸಲ ತಪ್ಪದೆ ಬ್ಲಾಗಿಗೆ ಬನ್ನಿ.ಒಂದು ವಿಶೇಷವಿದೆ.ನಮಸ್ಕಾರ.

ದಿನಕರ ಮೊಗೇರ said...

houdu... mahaan shaktiyide OM nalli... thank you...