Friday, October 21, 2011

ಮತ್ತೆ ಸಿಕ್ಕಾಗ ನಗೋಣ, ಹರಟೋಣ,




ಬಂತು ದೀಪಗಳ ಹಬ್ಬ ದೀಪಾವಳಿ. ಎಲ್ಲರ ಮನೆ ದೀಪ ಬೆಳಗಲಿ. ಹ್ಯಾಪಿ ದೀಪಾವಳಿ, ದೀಪಾವಳಿ ಹಬ್ಬದ ಶುಭಾಶಯಗಳು, ಹೀಗೆಲ್ಲಾ ನಾನು ನೀವು ಅನ್ನುವ ದಿವಸ ಅಕ ಇಕ ಅನ್ನುವುದರಒಳಗೆ ಬಂದೇಬಿಟ್ಟಿತು. ನಿಮಗೆ ಇದು ಎಷ್ಟನೇ ದೀಪಾವಳಿಯೋ ಗೊತ್ತಿಲ್ಲ. ನನಗಂತೂ ನಲವತ್ನಾಲ್ಕನೆಯದು ಅಂತ ಡೇಟ್ ಆಫ್ ಬರ್ತ್ ಹೇಳುತ್ತೆ. ಆದರೆ ನೆನಪಿಗೆ ಒಂದಿಪ್ಪತ್ತೈದು ಮೂವತ್ತು ಬರಬಹುದು. ದನಗಳ ಹಬ್ಬ ನಮ್ಮ ಹಳ್ಳಿಯಲ್ಲಿ ಪಟಾಕಿ ಹಬ್ಬ ನಿಮ್ಮ ಪಟ್ಟಣಗಳಲ್ಲಿ. ಕಡುಬು ಕಜ್ಜಾಯ ನಮ್ಮಲ್ಲಿ ನಿಮ್ಮಲ್ಲಿ ಒಂದೇ. ಇರಲಿ ಅವೆಲ್ಲದರ ನಡುವೆ ನನ್ನದೊಂದು ಸಣ್ಣ ವಿಷಯವಿದೆ.

ಈ ಬ್ಲಾಗ್ ೨೦೦೮ ರಲ್ಲಿ ನಾನು ಶುರುಮಾಡಿದ್ದು. ಏನು ಬರೆದೆನೋ ಏನು ಬಿಟ್ಟೆನೋ ನನಗಂತೂ ಒಮ್ಮೊಮ್ಮೆ ಅತಿ ಅನಿಸುವಷ್ಟಾಗಿದೆ. ಆದರೆ ಮಜ ಬಂದಿದೆ. ನೀವು ಏನು ಓದಿದಿರೋ ಏನು ಬಿಟ್ಟಿರೋ ಒಮ್ಮೊಮ್ಮೆ ಅತಿ ಅಂತಲೂ ಅನ್ನಿಸಿರಬಹುದು. ಇರಲಿ ಅದನ್ನು ಹೊಟ್ಟೆಗೆ ಹಾಕಿಕೊಳ್ಳಿ. ಆದರೆ ನನಗೆ ಈ ಬ್ಲಾಗಿಗೆ ನನ್ನ ವರಾತ ಹಂಚಿಕೊಳ್ಳಲು ಸಹಕಾರ ನೀಡಿದವರು ನೀವು. ಕಾಮೆಂಟ್ ಬಾಕ್ಸ್ ನಲ್ಲಿ ನಾನು ಉತ್ತರ ನೀಡದಿದ್ದರೂ( ಕ್ಷಮಿಸಿ ನನ್ನ ಸ್ಲೋ ನೆಟ್ ಕಾರಣದಿಂದ ಇಲ್ಲಿ ಕಾಮೆಂಟ್ ಬಾಕ್ಸ್ ಓಪನ್ ಆಗೋದು ತುಂಬಾ ಅಪರೂಪ, ಹಾಗಾಗಿ ನಾನು ಕಾಮೆಂಟ್ ಗೆ೪ ತ್ಯಾಂಕ್ಸ್ ಹೇಳಲು ಕಷ್ಟ ಹೊರತು ಸೊಕ್ಕಿನಿಂದಲ್ಲ) ಓದಿ ಕಾಮೆಂಟ್ ಜಡಿದು ಹುರುಪು ತುಂಬಿದ್ದೀರಿ. ಸೀತಾರಾಂ ರಿಂದ ಹಿಡಿದು ಮಾವೆಂಸ, ಜಿತು, ದಿಲೀಪ್, ವಿರಾ ಹೆಗಡೆ, ವಿಜಯಶ್ರೀ, ಡಾ ಕೃಷ್ಣಮೂರ್ತಿ, ಮುತ್ತು, ಹೊಸಮನೆ, ರಮ್ಯಾ, ತೇಜಸ್ವಿನಿ, ಅರವಿಂದ್ ಜಿ ಜೆ, ಪರಾಂಜಪೆ, ಪ್ರಕಾಶಣ್ಣ, ಸುಶ್ರುತ, ವಿನಾಯಕ, ಭಾರತೀಶ, ಮನ್ ಮುಕ್ತಾ, ಶಾಂತಲಾ ಭಂಡಿ, ಪ್ರೀತಿಯಿಂದ ಸಿಂಧು, ಆದಿತ್ಯ ಬೇದೂರು, ಪ್ರಸನ್ನ ಕನ್ನಡಿಗ, ನವ್ಯ, ನಾಣು, ಮಂಜುನಾಥ್, ರಾಜ್ ಬಾವಯ್ಯ, ರತ್ನಕ್ಕ, ಕಾವ್ಯ, ದಿವ್ಯ, ದಿಗ್ವಾಸ್ ಹೆಗಡೆ ಸುಬ್ರಹ್ಮಣ್ಯ, ವೇಣು, ಯಜ್ನೇಶ್, ಜಗದೀಶ್ ಶರ್ಮಾ, ಹೀಗೆ ಹೇಳುತ್ತಾ ಹೋದರೆ ಇಡೀ ಬ್ಲಾಗರ್ ರೇ ಬೇಕಾದೀತು. ಇನ್ನೂ ಕಾಮೆಂಟ್ ಹಾಕದೇ ಓದುವವರ ಲಿಸ್ಟ್ ಬೇರೆಯೇ ಇದೆ, ಇರಲಿ ಹೆಸರು ಕೈಬಿಟ್ಟವರಿಗೂ ನಿಮಗೂ ತ್ಯಾಂಕ್ಸ್.

ಈ ಎಲ್ಲಾ ವಿಷಯದ ಜತೆ ಇದೇ ೨೭-೧೦-೧೧ ರ ಗುರುವಾರ ತಲವಾಟ ಶಾಲೆಯಲ್ಲಿ (ನಾನು ನಾಲ್ಕಕ್ಷರ ಕಲಿತ ಜಾಗ) ನನ್ನ ಬ್ಲಾಗ್ ಬರಹ ಪುಸ್ತಕ ಬಿಡುಗಡೆ ಅಂತ್ ಮುಹೂರ್ತ ಇಟ್ಟಾಗಿದೆ. ನೋಡಿ ನೀವು ಅಲ್ಲಿಂದ ಇಲ್ಲಿಗೆ ಇದಕ್ಕಾಗಿಯೇ ಬರಲು ಆಗುವುದಿಲ್ಲ ಅನ್ನೋದು ನನಗೆ ಗೊತ್ತು, ಅಕಸ್ಮಾತ್ ಹಬ್ಬಕ್ಕೆ ಊರಿಗೆ ಬಂದಿದ್ದರೆ ಅಂದು ಬನ್ನಿ. ನಾನಂತೂ ಅಂದು ಬಾಸಿಂಗ ಕಟ್ಟಿದ ದೀಪಾವಳಿಯ ಎತ್ತಿನಂತಾಗಿರುತ್ತೇನೆ. ಅಕಸ್ಮಾತ್ ನಿಮ್ಮನ್ನು ಖುದ್ದು ಮಾತನಾಡಿಸಲು ಆಗದೆಯೂ ಇರಬಹುದು. ಹಾಗಾಗಿ ಬೇಸರಬೇಡ . ಮತ್ತೆ ಸಿಕ್ಕಾಗ ನಗೋಣ, ಹರಟೋಣ,

ಬನ್ನಿ, ಮತ್ತೆ ನಾನು ಫೋನ್ ಮಾಡುವುದಿಲ್ಲ,

9 comments:

Aravind GJ said...

All the best!!

Sushrutha Dodderi said...

Sakhath khushiyaathu.. aadre ee salanu miss aagthu. :( Anyway, congratsu.. Yavaglaru nimmanigE bandu mooroo pustaka tagaLthi. :-)

ಸುಷ್ಮಾ ಮೂಡುಬಿದಿರೆ said...

ಅಭಿನಂದನೆಗಳು...
ದೀಪಾವಳಿ ಹಬ್ಬದ ಶುಭಾಶಯಗಳು..

ಶ್ರೀನಿಧಿ.ಡಿ.ಎಸ್ said...

subhashayagaLu!

Gowtham said...

ಸೂಪರ್! ವೆಲ್ ಡನ್!!! ಅಭಿನಂದನೆಗಳು ಮೂರನೇ ಕೃತಿಗೆ.

nagarathna rajarama said...

addille taga batyan kayi holigenu tindhange aatu. nammellara shubha haaraikrgalu.

ಮೋಹನ್ ತಲಕಾಲುಕೊಪ್ಪ said...

Congrats! Good Harvest for Deepavali!

Ramya said...

Awesome kano all the best :D Murru movathagali moonaragli :D anta wish madthyan yelru :D

ಮನಮುಕ್ತಾ said...

ರಾಘಣ್ಣ,
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.