Sunday, June 1, 2008

ಬಡ ಬ್ರಾಹ್ಮಣ ಮತ್ತು ಬಡ ಸಾಹಿತಿಗಳಿಬ್ಬರೂ ಬೆಂಕಿಯಂತಂತೆ


ಒಂದಾನೊಂದು ಊರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದನು " ಎಂದು ಆರಂಭವಾಗುವ ಕತೆಗಳನ್ನು ನೀವು ಓದಿದ್ದೀರಿ. ಅದೇ ರೀತಿ ಕಾಸಿಲ್ಲದ ಸಾಹಿತಿಯ ಬಗ್ಗೆಯೂ ವ್ಯಂಗ್ಯ ಹಾಸ್ಯಬರಹಗಳನ್ನು ಓದಿರುತ್ತೀರಿ. ಇದೇಕೆ ಬ್ರಾಹ್ಮಣನನ್ನು ಹಾಗೂ ಸಾಹಿತಿಗಳನ್ನೂ ಬಡವನನ್ನಾಗಿ ಚಿತ್ರಿಸುತ್ತಿದ್ದರು ಅಂತ ಒಮ್ಮೆಯಾದರೂ ಯೋಚಿಸಿಯೇ ಯೋಚಿಸುತ್ತೀರಿ. ನಿಮ್ಮದೇ ಆದ ಉತ್ತರ ಸಿಕ್ಕಿರಲೂಬಹುದು. ಆದರೆ ಇದೂ ಕೂಡ ಒಂದು ಉತ್ತರ ಎಂಬ ಸತ್ಯ ನಿಮ್ಮೆದುರಿಗೆ ಇದೆ.
ಮನು ಮಾಡಿದ ನಾಲ್ಕು ವರ್ಣಗಳು ಹುಟ್ಟಿನಿಂದಲ್ಲ. ಅದು ಮನಸ್ಥಿತಿಯಿಂದ. ಅವರವರ ಮನಸ್ಥಿತಿ ಅವರ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಂತರದ ದಿನಗಳಲ್ಲಿ ಅವುಗಳು ಜಾತಿಯೆಂಬ ರೂಪ ಪಡೆದು ಹುಟ್ಟಿನಿಂದಲೇ ಅಂಟಿಕೊಂಡು ಬಿಡುತ್ತವೆ. ಬ್ರಾಹ್ಮಣ ಮನಸ್ಥಿತಿಯೆಂದರೆ, ಪುಂಖಾನು ಪುಂಖವಾದ ಯೋಚನೆಯ ಮಿದುಳು. ಮಿದುಳಿಗೆ ಕ್ಷಣ ಕ್ಷಣಕ್ಕೂ ಆಹಾರ ಬೇಕು. ಕ್ಷತ್ರಿಯ ಮನಸ್ಥಿತಿಯೆಂದರೆ ಧೈರ್ಯ, ಹಿಂದು ಮುಂದಿನ ಆಲೋಚನೆ ಯಿಲ್ಲ ದ ಹುಂಬತನ. ವೈಶ್ಯ ಮನಸ್ಥಿತಿಯೆಂದರೆ ಕುಂತಿದ್ದಕ್ಕೂ ನಿಂತಿದ್ದಕ್ಕೂ ಲಾಭ ನಷ್ಟದ ಲೆಕ್ಕಾಚಾರ, ಶೂದ್ರ ಮನಸ್ಥಿತಿಯೆಂದರೆ ಹಿಡಿದ ಕೆಲಸವನ್ನು ಬೇಸರವಿಲ್ಲದೆ ಎಡಬಿಡದೆ ಮಾಡುವುದು. ಈ ಎಲ್ಲಾ ಗುಣಗಳೂ ಎಲ್ಲರಲ್ಲಿಯೂ ಇದ್ದು, ಒಂದು ಗುಣ ಇಡೀ ವ್ಯಕ್ತಿತ್ವವನ್ನು ಆಳುತ್ತಿರುತ್ತದೆ. ಬ್ರಾಹ್ಮ್ಣಣ ವ್ಯಕ್ತಿತ್ವ ನಿಮ್ಮನ್ನಾಳುತ್ತಿದ್ದರೆ, ನಿಮಗೆ ಯೋಚಿಸಿದಂತೆಲ್ಲಾ ಯೋಚನೆಗಳ ಸರಣಿಯೇ ನಿರ್ಮಾಣವಾಗುತ್ತದೆ. ಪಾಸಿಟೀವ್ ಯೋಚನೆ ಶುರು ಮಾಡಿದರೆ ಅದೇ ರಿಸಲ್ಟ್. ನೆಗೆಟೀವ್ ಯೋಚನೆ ಬೆನ್ನತ್ತಿದರೆ ಅದೇ ರಿಸಲ್ಟ. ಹೆದರಿಕೆಯ ಕುರಿತು ಯೋಚನೆ ಆರಂಭಿಸಿದರೆ ಅದಕ್ಕೂ ಅಂತ್ಯವೇ ಇಲ್ಲ. ಈ ಮನಸ್ಥಿತಿಯವರಿಗೆ ಅದ್ಭುತ ಕಲ್ಪನಾಶಕ್ತಿ. ಹಾಗಾಗಿ ಹಿತೋಪದೇಶಕ್ಕೂ ಶಕ್ತರು. ಕತೆ ಕಟ್ಟುವುದಕ್ಕೂ ನಿಸ್ಸೀಮರು. ಆದರೆ ಈ ಮನಸ್ಥಿತಿಯವರಿಗೆ ಪಾಪ ಪುಣ್ಯ ಜಾಸ್ತಿ, ಲಾಭ ನಷ್ಟಗಳ ಅಂದಾಜು ಇಲ್ಲ. ಹಿಡಿದ ಕೆಲಸ ನಿರಂತರ ಮಾಡಲಾರರು. ಅವರ ಹಿಡಿತವಿಲ್ಲದ ಯೋಚನಾಲಹರಿಗೆ ಧ್ಯಾನ, ಸಂದ್ಯಾವಂದನೆಯಂತಹ ಕ್ರಿಯೆಗಳ ಮುಖಾಂತರ ಕನಿಷ್ಟ ದಿನಕ್ಕೊಮ್ಮೆಯಾದರೂ ಬ್ರೆಕ್ ಹಾಕಿದರೆ ಸ್ವಸ್ಥ ರಾಗಿರ ಬಲ್ಲರು. ಇಲ್ಲದಿದ್ದರೆ ನಿರಂತರ ಯೋಚಿಸಿ ಅಧೋಗತಿಗಿಳಿದುಬಿಡುತ್ತಾರೆ.ಸಾಹಿತಿಗಳೂ ಈ ಬ್ರಾಹ್ಮಣ ಮನಸ್ಥಿತಿಯ ಜನರು ಆಗಿರುವುದರಿಂದ ಮಿಕ್ಕ ಜನರ ಆಲೋಚನಾ ಮಟ್ಟಕ್ಕಿಂತ ಮೇಲ್ಮಟ್ಟದ ಆಲೋಚನೆ ಇವರಾದ್ದರಿಂದ. ಜನಸಾಮಾನ್ಯರಿಂದ ಅಹಂಕಾರದವರು ಎಂಬ ಪಟ್ಟ ಕಟ್ಟಿಕೊಂಡು ತಮ್ಮ ಜೀವನವನ್ನು ಲಾಭ ನಷ್ಟಗಳ ವ್ಯವಹಾರಕ್ಕೆ ಇಳಿಸಲಾರದೆ ಅಸಾಹಾಯಕರಾಗಿ ಆರ್ಥಿಕ ಹಿನ್ನಡೆಹೊಂದುತ್ತಾರೆ
ಆದ್ದರಿಂದ ಬಡ ಬ್ರಾಹ್ಮಣ ಹಾಗೂ ಸಾಹಿತಿ ಬೆಂಕಿಯಂತೆ ತಾವು ಉರಿದು......ಬೆಚ್ಚನೆಯ ಬೆಳಕು ನೀಡಬಲ್ಲರು, ಕೋಪಾಗ್ನಿಯಾದರೆ ಸುಡಲೂ ಬಲ್ಲರು. ಉತ್ತಮ ಸಾಹಿತಿ ಅಥವಾ ಬ್ರಾಹ್ಮಣ ಪರಿಪೂರ್ಣ ಅಂತ ಕಂಡು ಹಿಡಿಯಲು ಆತನ ಆರ್ಥಿಕ ಪರಿಸ್ಥಿತಿ ನೋಡಿದರೆ ಸಾಕು. ಉತ್ತಮ ಆರ್ಥಿಕ ಪರಿಸ್ಥಿತಿ ಇದ್ದೂ ಒಳ್ಳೆಯ ಸಾಹಿತ್ಯ ಸೃಷ್ಟಿಕರ್ತ ನೆಂದರೆ ಆತನಿಗೆ ಶ್ರೀಮಂತಿಕೆ ವಂಶಪಾರಂಪರ್ಯ ಆಗಿರುತ್ತದೆ. ಅವನ ಅಂತ್ಯಕಾಲದಲ್ಲಿ ಆತ ದಿವಾಳಿಯಂಚಿಗೆ ಬಂದರೂ ಆಶ್ಚರ್ಯವಿಲ್ಲ.
ಆದ್ದರಿಂದ ಬಡ ಬ್ರಾಹ್ಮ್ಣಣ ಬಡ ಸಾಹಿತಿ ಎಂದು ಆರಂಭದಲ್ಲಿ ಶುರುವಾಗಿದ್ದು.
ಇವೆಲ್ಲಾ ತುಂಬಾ ರಗಳೆ ಅಂತ ಅನಿಸಿತಾ ಸಾರಿ ನೀವು ಶೂದ್ರ ಮನಸ್ಥಿತಿಯವರು ಎಂದರ್ಥ. ನೀವು ನಿಮ್ಮಷ್ಟಕ್ಕೆ ಸುಖಿಗಳು .ಎಂಜಾಯ್ ಯುವರ್ ಲೈಫ್.

No comments: