Tuesday, January 27, 2009

ಎರಡು ಬ್ಲಾಗ್ ಗಳು

ಶನಿವಾರ ಬರೆದು ಮುಗಿಸಬೇಕಿದ್ದ ಈ ಬ್ಲಾಗ್ ಬರಹ ಈ ವಾರ ಮಂಗಳವಾರಕ್ಕೆ ಬಂದಿದೆ. ಅದಕ್ಕೆ ಮುಖ್ಯ ಕಾರಣ ಬಿ.ಎಸ್.ಎನ್.ಎಲ್ ನೆಟ್ ಶುಕ್ರವಾರ ರಾತ್ರಿಯಿಂದ ಮಲಗಿದ್ದು. ನಂತರ ರಜದ ಸಾಲುಗಳ ಹೊಡೆತದಲ್ಲಿ ಅದು ಎಚ್ಚರಗೊಂಡಿದ್ದು ಮಂಗಳವಾರ ಹಾಗಾಗಿ ಮೂರು ದಿನ ನೆಟ್ ಇಲ್ಲದೆ ಮಳ್ಳು ಹಿಡಿದಂತಾಗಿತ್ತು. ಇರಲಿ ಅವೆಲ್ಲಾ ಮಾಮೂಲಿ ಅಂದು ಬರಬೇಕಾಗಿದ್ದು ಇಂದು ಬಂದರೆ ಪ್ರಪಂಚ ಮುಳುಗಿ ಹೋಗುವುದಿಲ್ಲ.

ತಟ್ಟನೆ ಗಡಿಬಿಡಿಯಲ್ಲಿ ಓದಿದರೆ ಮೀರ್ ಸಾಧಕ್ ಅಂತ ಅನ್ನಿಸುವ ನೀರ್ ಸಾಧಕ್ (http://neersaadhak.blogspot.com/) ಹೆಸರೇ ಸೂಚಿಸುವಂತೆ ನಮ್ಮ ನಿತ್ಯ ಉಪಯೋಗಿ ಜೀವಜಲ ಕುರಿತು ಹೇಳುವ ಲೇಖನಗಳ ಸರದಾರ ರಾಧಾಕೃಷ್ಣ ಭಡ್ತಿಯವರದ್ದು. ಪ್ರಿಂಟ್ ಮೀಡಿಯಾದಲ್ಲಿ ಉದ್ಯೋಗಿಯಾಗಿರುವ ಭಡ್ತಿ ವಿಕ ದಲ್ಲಿ ನೀರುನೆರಳು ಅಂಕಣ ಬರಹಗಾರರು. ಅವುಗಳನ್ನು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸುತ್ತಾರೆ. ನೀರಿನ ಸಮಸ್ಯೆ ಎಂದರೆ ಏನೆಂದು ತಿಳಿಯದ ನಮ್ಮಂತಹ ಮಲೆನಾಡಿಗರೂ ಓದುವಂತೆ ಇರುವ ಅವರ ಬರಹಗಳು ಓದಲಷ್ಟೇ ಅಲ್ಲ ಮಾಹಿತಿಯ ವಿಷಯದಲ್ಲಿಯೂ ಬರಪ್ಪೂರ್. ನೀರ್ ಸಾಧಕ್ ಬ್ಲಾಗ್ ಓಪನ್ ಆಗುತ್ತಿರುವಂತಯೇ ನಿಮಗೊಂದು ಅದ್ಭುತ ಫೋಟೋ ಕಾಣಸಿಗುತ್ತದೆ ಅದೊಂದೆ ಸಾಕು ಅಷ್ಟು ಚೆನ್ನಾಗಿದೆ. ಅವರ ಲಾಸ್ಟ್ ಡ್ರಾಪ್ ಮತ್ತಷ್ಟು ಖುಷಿ ಕೊಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ನೀರೆನ್ನುವುದು ವಾಸ್ತವ. ಆದರೆ, ಅದರ ಸನ್ನಿಯಲ್ಲಿ ಹೋಗಿ ಕುಳಿತರೆ ಎಂಥ ಸುಂದರ ಕಲ್ಪನೆಗಳಿಗೆ ಬೇಕಾದರೂ ಅದು ವಸ್ತುವಾಗಬಹುದು. ಎನ್ನುತ್ತಾ ನೀರಿನ ಲೋಕದಲ್ಲಿ ನಮ್ಮನ್ನು ಮುಳುಗೇಳಿಸುತ್ತಾರೆ.

ಹೀಗೆಯೇ ಪ್ರಿಂಟ್ ಮೀಡಿಯಾದಲ್ಲಿ ಕೆಲಸ ಮಾಡುತ್ತಾ ನಮಗೆ ಬ್ಲಾಗ್ ಬರಹ ಉಣಿಸುತ್ತಿರುವ ಬರಹಗಾರ ವಿನಾಯಕ ಕೋಡ್ಸರ(http://aksharavihaara.wordpress.com/) ಬ್ಲಾಗ್ ನ ಅಗ್ರ್ರೆಸ್ಸಿವ್ ಬರಹಗಾರರ ಪಟ್ಟಿಯಲ್ಲಿ ವಿನಾಯಕರನ್ನು ಸೇರಿಸಬಹುದು. ಬರೆಯುತ್ತಾ ಬರೆಯುತ್ತಾ ನಮ್ಮನ್ನು ಒಂದಿಷ್ಟು ಪ್ರಶ್ನೆ ಅವರೇ ಕೇಳುತ್ತಾರೆ. ಬುದ್ದಿಜೀವಿಗಳು ಹಾಗೂ ಕೋಮುವಾದಿಗಳು ಮುಂತಾದ ವಿಷಯಗಳನ್ನು ಬದಿಗಿರಿಸಿ ಒಂದು ಘಟನೆಯನ್ನು ಮೂರನೇ ಘಟ್ಟದಲ್ಲಿ ನಿಂತು ನೋಡಿ ತಮ್ಮ ಬರಹಗಳನ್ನು ನಿರ್ಭೀಡೆಯಿಂದ ದಾಖಲಿಸುತ್ತಾ ಹೋಗುತ್ತಾರೆ ಕೋಡ್ಸರ. ಇದ್ದದ್ದು ಇದ್ದಹಾಗೆ ಹೇಳುವ ಕೋಡ್ಸರ ಬಹಳಷ್ಟು ಬಾರಿ ನಿಷ್ಟುರವಾದಿ. ಇಲ್ಲ, ದಾಳಿ ವಿರೋಧಿಸುವವರಿಗೆ ಇವೆಲ್ಲಾ ಅರ್ಥವಾಗುದಿಲ್ಲ. ಅವರ ಮನೆ ಹೆಣ್ಣು ಮಕ್ಕಳು ಮುಂದೊಂದು ದಿನ ಪಬ್‌ನಲ್ಲಿ ಸಿಕ್ಕಿಬಿದ್ದಾಗಲೇ ರಾಮಸೇನೆಯ ದಾಳಿ ಹಿಂದಿನ ಅನಿವಾರ್ಯತೆ ಅವರಿಗೆ ಅರ್ಥವಾಗುವುದು! ನಮ್ಮ ಸಮಾಜ ಇವತ್ತು ಯಾವ ಸ್ಥಿತಿಯಲ್ಲಿದೆ ಎಂಬುದರ ಅರಿವಾಗುವುದು. ಎಂದು ತಮ್ಮ ಬರಹದಲ್ಲಿ ವೃಥಾ ನೆಲೆಯಿಲ್ಲದೆ ವಿರೋಧಿಸುವವರನ್ನು ತಾಕುತ್ತಾರೆ. ಮತ್ತು ಹಾಗೆಯೇ ನಮ್ಮನ್ನು ತಲುಪುತ್ತಾರೆ.

ಇದು ಈ ವಾರದ ತಡವಾದ ಬರಹ. ಮುಂದಿನವಾರ ಬಿ.ಎಸ್.ಎನ್.ಎಲ್ ನವರು ಸರಿ ಇದ್ದರೆ ಶನಿವಾರ ಸಿಗೋಣ. ಅಲ್ಲಿಯವರೆಗೆ ಶುಭವಾಗಲಿ.

2 comments:

Anonymous said...

ಶರ್ಮರೇ,
ಗುರು-ಶಿಷ್ಯರಿಬ್ಬರ ಬ್ಲಾಗನ್ನು ಒಟ್ಟಿಗೆ ಪರಿಚಯಿಸಿದ್ದೀರಾ?! ನಿಮ್ಮ ಪ್ರೋತ್ಸಾಹಕ್ಕೆ, ಬೆಂಬಲಕ್ಕೆ ಧನ್ಯವಾದಗಳು.
kodsara

ಮನಸ್ವಿ said...

ಹಹ್ಹಹ್ಹ.. ಬಿಎಸ್ಎನ್ಎಲ್ ನ ಅನ್ ಲಿಮಿಟೆಡ್ ಪ್ಲಾನ್ ಫಾಸ್ಟ್ ಇಂಟರ್ನೆಟ್ಗೆ( ಸ್ಫೀಡ್ ಒಂದನ್ನು ಬಿಟ್ಟು ಬೇರೆಲ್ಲಾ ಇರುವ ನೆಟ್ಟಿಗೆ) ಮಾತ್ರ ಆಗಾಗ ರೋಗ ಹಿಡುಯುತ್ತಿರುತ್ತದೆ, ಮಳ್ಳು ಹಿಡಿದಂತಾಗುತ್ತದೆ ಎಂದರೆ ನೀವು ಹೆಚ್ಚಿಗೆ ಖರ್ಚಾದರೂ ಇಂಟರ್ನೆಟ್ ಸಂಪರ್ಕ ಬೇಕೆಂದಾದರೆ ನೆಟ್ ಒನ್ ಬಳಸಬಹುದು... ಬಳಸುವುವ ವಿಧಾನ ಯೂಸರ್ ನೇಮ್ ಪಾಸ್ವರ್ಡ್ ಡಯಲಪ್ ನಂಬರ್ ಬೇಕಿತ್ತು ಎಂದೆಯಾ...ಗೊತ್ತಿದೆ ಬಳಸುತ್ತೇನೆ ಎಂದೆಯಾ? ಖಂಡಿತ ಕೊಡುವುದಿಲ್ಲ/Not recommended! ಕಾರಣವೇನೆಂದರೆ.. ನಿಮಿಷಕ್ಕೆ ೧೦ಪೈಸೆ ಹಾಗೂ ಏಳು ನಿಮಿಷಕ್ಕೆ ಒಂದು ಕಾಲ್ ಚಾರ್ಜ್ ಬರುತ್ತದೆ, ಅದಕ್ಕಿಂತ ಮಳ್ಳು ಹಿಡಿಯುವಂತಾದರೂ.. ಬಿ ಎಸ್ ಎನ್ ಎಲ್ ನವರಿಗೆ ಕರೆಮಾಡಿ ಇಂಟರ್ನೆಟ್ ಸರಿ ಇಲ್ಲಾ ಎಂದು ಅವರನ್ನು ಗೋಳುಹೊಯ್ಕೋಳೋದು ಒಳ್ಳೇದು, ಇದು ನನ್ನ ಅತ್ಯುತ್ತಮ ಸಲಹೆ...ನಿನಗಾಗಿ ರಾಘಣ್ಣ.