Thursday, June 24, 2010

ಗಿರಿಯಪ್ಪಾ ಗಿರಿಯಪ್ಪಾ................

ಶ್ರೀಮತಿ ಪ್ರಕಾಶ "ಗಿರಿಯಪ್ಪಾ ಗಿರಿಯಪ್ಪಾ" ಅಂತ ಕೂಗಿದ ತಕ್ಷಣ ದೂರದಿಂದ ಟ್ರೊಂಯ್ ಎನ್ನುತ್ತಾ ಹಾರಿ ಬಂದು ಮನೆಸೇರುತ್ತಿತ್ತು ಈ ನಮ್ಮ ರಾಷ್ತ್ರಪಕ್ಷಿ ಗಿರಿಯಪ್ಪನೆಂಬ ನವಿಲು. ಇದು ತಾಳಗುಪ್ಪದ ಸಮೀಪ ಬೂರ್ಲುಕೆರೆ ಪ್ರಕಾಶ್ ಎಂಬುವವರು ಅಕ್ಕರೆಯಿಂದ ಸಾಕಿದ ನವಿಲು. ಸಾಕಿದ್ದರು ಎನ್ನುವುದಕ್ಕಿಂತ ಅದು ಅವರ ಮನೆಯಲ್ಲಿ ಹಾಯಾಗಿ ಇತ್ತು. ಹಗಲು ಮೇಯಲು ಕಾಡಿಗೆ ಹೋಗುತ್ತಿತ್ತು. ರಾತ್ರಿ ಮನೆಗೆ ಬಂದು ಗೊಡೌನ್ ನಲ್ಲಿ ಪವಡಿಸುತ್ತಿತ್ತು. ಸಂಜೆ ಭತ್ತ ಮುಂತಾದ ಆಹಾರ ಹಾಕುತ್ತಿದ್ದರು. ಸಾಕಿದ ನವಿಲೆಂದು ತಿಳಿಯಲು ಕಾಲಿಗೊಂದು ಗಜ್ಜೆ ಕಟ್ಟಿದ್ದರು. ಅಕ್ಕರೆಯಿಂದ ಸಾಕಿದ ನವಿಲು ಒಂದು ದಿನ ಬೇಟೆಗಾರರ ಗುಂಡಿಗೆ ಆಹುತಿಯಾಗಿಯೇ ಬಿಟ್ಟಿತು. ಗುಂಡು ತಗಲಿಸಿಕೊಂಡು ಕಾಡಿನಿಂದ ಕೂಗುತ್ತಾ ಓಡಿಬಂದು ಪ್ರಕಾಶರವರ ಕೈಯಲ್ಲೇ ಪ್ರಾಣಬಿಟ್ಟಿತಂತೆ. ಪ್ರಕಾಶ ದಂಪತಿಗಳು ಮನೆಮಗನನ್ನು ಕಳೆದುಕೊಂಡ ದು:ಖ ಅನುಭವಿಸಿದ್ದರು.
ಇವೆಲ್ಲಾ ಘಟನೆ ನಡೆದು ನಾಲ್ಕು ವರ್ಷಗಳೇ ಕಳೆದುಹೋದವು. ಆದರೆ ನನ್ನ ಕಂಪ್ಯೂಟರ್ ನಲ್ಲಿ ಘನಗಂಭೀರದ ಗತ್ತಿನಲ್ಲಿ ಗಿರಿಯಪ್ಪ ಉಳಿದಿದ್ದಾನೆ. ಚೂರಿಕಟ್ಟೆಯ ಬಳಿ ಹಾದುಹೋಗುವಾಗೆಲ್ಲ ನೆನಪಾಗುತ್ತಾನೆ.
ಗುಂಡು ಹಾಕಿ ಕೊಂದ ಮನುಷ್ಯರು ಇನ್ನೂ ಈ ಜನ್ಮದ ಪಾಪ ಕಳೆಯಲು ಬದುಕಿದ್ದಾರೇನೋ. ಆದರೆ ಗಿರಿಯಪ್ಪನಿಗೆ ಖಂಡಿತಾ ಒಳ್ಳೆಯ ಜನ್ಮ ಸಿಕ್ಕಿರುತ್ತದೆ. ಅಥವಾ ಹಾಗೆ ನಂಬಿಕೆ.

2 comments:

ಮನದಾಳದಿಂದ............ said...

very bad.....
ಇಷ್ಟೊಂದು ಮುದ್ದಾದ ನವಿಲನ್ನು ಹೊಡೆಯಲು ಅವರಿಗೆ ಮನಸ್ಸಾದರೂ ಹೇಗೆ ಬಂತು?
ಛೆ!

ಸೀತಾರಾಮ. ಕೆ. / SITARAM.K said...

ಮುದ್ದಾದ ನವಿಲು. ಅದಕ್ಕೆ ಹೊಡೆದಿದ್ದು! ಪಾಪಿ ದುರುಳರು!