Saturday, January 17, 2009

ಪ್ರೇಮ ಕುರುಡಾದದ್ದು ಏಕೆ !!

(ಪಿ.ಭಾರತಿಶ ಎಲ್ಲಿಂದಲೋ ನೋಡಿ ಕಳುಹಿಸಿದ್ದು)
ಹಿಂದೆ, ಈ ಭೂಮಿ ಮನುಷ್ಯ,, ಸೃಷ್ಟಿಯಾಗುವ ಮುಂಚೆ ನಡೆದ ಘಟನೆ ಇದು. ಮಾನವನನ್ನು ಸೃಷ್ಟಿ
ಮಾಡುವ ಮುಂಚೆ ದೇವರು ಅವನಲ್ಲಿ ಸೇರಿಸಬೇಕಾದ ಗುಣಗಳನ್ನು- ಅಸೂಯೆ, ಆಲಸ್ಯ, ಕೋಪ, ಸುಳ್ಳು , ಫ್ರೀತಿ,
ಚಾಡಿ,ಹುಚ್ಚು... ಮುಂತಾದ ಎಲ್ಲಾ ಗುಣಗಳನ್ನು ಬೇರೆ, ಬೇರೆ ಇರಿಸಿದ್ದ. ಒಮ್ಮೆ ಅವನು ತನ್ನ ಯಾವುದೋ ಕೆಲಸದಲ್ಲಿ
ಮುಳುಗಿದ್ದಾಗ , ತಮ್ಮಷ್ಟಕ್ಕೆ ಕುಳಿತು ಬೇಸರಗೊಂಡಿದ್ದ ಆ ಗುಣಗಳೆಲ್ಲಾ ಒಟ್ಟಾಗಿ ಸೇರಿ ಆಟ ಆಡಿ ಬೇಸರ ಕಳೆಯೋಣವೆಂದು
ನಿರ್ಧರಿಸಿದವು. ಎಲ್ಲ ಗುಣಗಳೂ ಒಟ್ಟಾಗಿ ಸೇರಿ " ಕಣ್ಣಾಮುಚ್ಚಾಲೆ " ಆಡೋಣವೆಂದು ನಿರ್ಧರಿಸಿದವು.ಕೂಡಲೇ "
ಹುಚ್ಚು " ಉನ್ಮಾದದಿಂದ " ಹುಡುಕುವ ಕೆಲಸ ನನಗೇ ಮೊದಲು" ಎಂದಿತು. ಅದರ ಅಬ್ಬರ, ಆರ್ಭಟ,
ಮಿತಿಮೀರಿದ ಉತ್ಸಾಹ ನೋಡಿ ಇತರ ಗುಣಗಳೆಲ್ಲಾ ವಾದ ಮಾಡದೆ ಅದಕ್ಕೆ ಒಪ್ಪಿದವು.
ಪ್ರಾರಂಭವಾಯಿತು.ಅಲ್ಲೇ ಇದ್ದ ಒಂದು ದೊಡ್ಡ ಮರದ ಬಳಿ ನಿಂತು ಕಣ್ಣುಮುಚ್ಚಿಕೊಂಡು " ಹುಚ್ಚು " ಒಂದು,
ಎರಡು, ಮೂರು ...." ಎಂದು ಎಣಿಕೆ ಪ್ರಾರಂಭಿಸಿತು. ಎಲ್ಲಾ ಗುಣಗಳೂ ಅವಿತುಕೊಳ್ಳಲು
ತೊಡಗಿದವು. ' ವಂಚನೆ ' ಅಲ್ಲೇ ಬಿದ್ದಿದ್ದ ತಿಪ್ಪೆಯ ರಾಶಿಯ ಮಧ್ಯೆ ಬಚ್ಚಿಟ್ಟುಕೊಂಡಿತು. ' ಸುಳ್ಳು ' ತಾನು ಒಂದು
ಕಲ್ಲಿನ ಹಿಂದೆ ಬಚ್ಚಿಟ್ಟುಕೊಳ್ಳುವುದಾಗಿ ಹೇಳಿ ಕೊಳದ ತಳದಲ್ಲಿ ಮುಚ್ಚಿಟ್ಟುಕೊಂಡಿತು. ...೭೬, ೭೭ ೭೮
ಇಷ್ಟರಲ್ಲಾಗಲೇ ಬಹುಮಟ್ಟಿಗೆ ಎಲ್ಲಾ ಗುಣಗಳೂ ಅಡಗಿಕೊಂಡಿದ್ದವು. ಆದರೆ ಪ್ರೀತಿ ಮಾತ್ರ ಇನ್ನೂ ಅವಿತುಕೊಂಡಿರಲಿಲ್ಲ. ಪ್ರೀತಿಗೆ ಎಲ್ಲಿ ಮರೆಯಾಗಬೇಕೆಂದು ನಿರ್ಧರಿಸಲಾಗಲಿಲ್ಲ.ಇದರಲ್ಲಿ ಅಚ್ಚರಿಯೇನಿಲ್ಲ. ಪ್ರೀತಿ, ಪ್ರೇಮವನ್ನು
ಯಾರಾದರೂ ಮುಚ್ಚಿಡಲು ಸಾಧ್ಯವೇ ? ...೯೫,೯೬,೯೭. ಅಷ್ಟರಲ್ಲಿ ಪ್ರೀತಿಗೆ ಒಂದು ಸುಂದರವಾದ ಗುಲಾಬಿ ಪೊದೆ ಕಾಣಿಸಿತು. ಕೋಡಲೇ ಆ ಪೊದೆಯ ಹಿಂದೆ ಪ್ರೀತಿ ಮರೆಯಾಯಿತು.
ಎಣಿಕೆ ಮುಗಿಸಿ ಕಣ್ಣು ಬಿಟ್ಟಾಗ ಹುಚ್ಚಿನ ಕಣ್ಣಿಗೆ ಮೊದಲು ಬಿದ್ದಿದ್ದೇ' ಆಲಸ್ಯ'. ಎದ್ದು ಬಚ್ಚಿಟ್ಟುಕೊಳ್ಳಲು ಅದರ
ಅಡ್ಡವಾಗಿ ಅದು ಅಲ್ಲಿಯೇ ಬಿದ್ದುಕೊಂಡಿತ್ತು. ಅದನ್ನು ಹಿಡಿದ ಉತ್ಸಾಹದಿಂದ ಹುಚ್ಚು ನೇರವಾಗಿ ಕೊಳದ
ಬಳಿ ಹೋಗಿ 'ಸುಳ್ಳನ್ನು' ಎಳೆ ತಂದಿತು. ಅದಕ್ಕೆ ಸುಳ್ಳಿನ ಸ್ವಭಾವ ಚೆನ್ನಾಗಿಯೇ . ಕೊಂಚ ಸಮಯದಲ್ಲಿಯೇ
'ಹುಚ್ಚು' ಎಲ್ಲಾ ಗುಣಗಳನ್ನೂ ಹುಡುಕಿತು, 'ಪ್ರೀತಿ'ಯೊಂದನ್ನು ಹೊರತು ಪಡಿಸಿ.ಪ್ರೀತಿ ಸಿಕ್ಕದ್ದಕ್ಕಾಗಿ ಹುಚ್ಚಿಗೆ
ವಿಪರೀತ ಕೋಪ ಬಂದಿತು.ಅಷ್ಟರಲ್ಲಿ ಪ್ರೀತಿಯ ಬಗೆಗಿನ ಹೊಟ್ಟೆಕಿಚ್ಚಿನಿಂದ 'ಅಸೂಯೆ' 'ಚಾಡಿ'ಯ ನೋಡಿ
ಅರ್ಥಪೂರ್ಣವಾಗಿ ನಕ್ಕಿತು. ಕೂಡಲೇ 'ಚಾಡಿ"ಯು ಪಿಸುಮಾತಿನಲ್ಲಿ ಹುಚ್ಚಿಗೆ " ನೀನು
ಹುಡುಕುತ್ತಿರುವ "ಪ್ರೀತಿ"
ಗುಲಾಬಿ ಪೊದೆಯ ಬಳಿ ಇದೆ' ಎಂದು ತಿಳಿಸಿತು. ಕೂಡಲೇ' ಹುಚ್ಚು' ಅಬ್ಬರ ಆರ್ಭಟದಿಂದ ಕೂಗುತ್ತಾ
ರಭಸದಿಂದ
ಗುಲಾಬಿಯ ಮೇಲೆ ಬಿದ್ದಿತು. ಮರುಕ್ಷಣವೇ ಕಿಠಾರನೆ ಯಾರೋ ನೋವಿನಿಂದ ಕಿರುಚಿದ ಧ್ವನಿ
ಕೇಳಿಸಿತು. ನೋಡಿದರೆ ಗುಲಾಬಿಯ
ಮುಳ್ಳುಗಳು ಪ್ರೀತಿಯ ಕಣ್ಣುಗಳನ್ನು ಚುಚ್ಚಿ ಕುರುಡು ಮಾಡಿತ್ತು.
ಎಲ್ಲಾ' ಗುಣಗಳ' ಗಲಾಟೆಯ ಧ್ವನಿ ಕೇಳಿ ದೇವರು ಅಲ್ಲಿಗೆ ಬಂದು , ಕಣ್ಣು ಕುರುಡಾಗಿ
ಗೋಳಾಡುತ್ತಿದ್ದ 'ಪ್ರೀತಿ'ಯನ್ನು ಕಂಡು ಕುಪಿತನಾಗಿ ಅದಕ್ಕೆ ಕಾರಣ ಯಾರೆಂದು ಪತ್ತೆ ಹಚ್ಚಿದನು.ನಂತರ '
ಹುಚ್ಚ'ನ್ನು ಕರೆದು " ಪ್ರೀತಿ ಕುರುಡಾದದ್ದು ನಿನ್ನಿಂದಲೇ . ಆದ್ದರಿಂದ ಇನ್ನು ಮುಂದೆ ಅದರೊಡನೆ ನೀನು ಇರಲೇ ಬೇಕು
" ಎಂದು ಶಾಪಕೊಟ್ಟನು.
ಆಂದಿನಿಂದ ಪ್ರೀತಿ ಕುರುಡಾಯಿತು.. ಮತ್ತು ಪ್ರೇಮಿಗಳೆಲ್ಲಾ ಹುಚ್ಚರಾದರು.....ಇಷ್ಟಲ್ಲದೆ .." ಪ್ರೇಮಿ ಮತ್ತು
ಹುಚ್ಚ ಒಂದೇ ದೋಣಿಯ ಪಯಣಿಗರು "ಎಂದು ಶೇಕ್ ಸ್ಪಿಯರ್ ಸುಮ್ಮನೆ ಹೇಳಿದ್ದಾನೆಯೇ ?

3 comments:

ಮೂರ್ತಿ ಹೊಸಬಾಳೆ. said...

ರಾಘು ಮಾವ,
ಮನುಷ್ಯನ ಎಲ್ಲ ಗುಣಗಳನ್ನ,ಅವುಗಳ ಗುಣಧರ್ಮ ಗಳನ್ನ ತುಂಬ ಉತ್ತಮ ವಾಗಿ ವಿವರಿಸಿದ್ದೀರ ಧನ್ಯವಾದಗಳು.

Ittigecement said...

ಬಹಳ ಚಂದವಾಗಿದೆ...

ಬರವಣಿಗೆ ಕೂಡ...

ಅಭಿನಂದನೆಗಳು...!!

Unknown said...

ರಾಗ್ಸ್,ನನ್ನ ಪ್ರಕಾರ ಪ್ರೀತಿ ಕುರುಡಲ್ಲ,,ಪ್ರೀತಿಗೆ ಕಣ್ಣು,ಮನಸ್ಸು,ಬುದ್ಧಿ ಎಲ್ಲಾ ಇದೆ ಅನಿಸುತ್ತದೆ,,,