Saturday, January 22, 2011

ಸಾತ್ವಿಕರು ಸಿಡಿದೆದ್ದರೆ?

ಹಾಗೆಲ್ಲಾ ಆಗುತ್ತಾ ಅನ್ನೋದು ಬೇರೆ ಮಾತು. ಆದರೂ ಅಪರೂಪಕ್ಕೆ ಒಮ್ಮೆ ಆಗಿಬಿಡುತ್ತೆ. ವಿ ಭಟ್ರು ಮತ್ತು ತಂಡ ವಿಕ ದಿಂದ ರಾಜೀನಾಮೆ ಕೊಟ್ಟು ಹೊರಬಿದ್ದಾಗ ಏನಬರೆದದು ಹಾಯ್ ಪತ್ರಿಕೆ. ಒಂದು ಸತ್ಯ ಸಂಗತಿ ಎಂದರೆ ಹಾಯ್ ಎನೇ ಬರೆದರೂ ಹೇಗೇ ಬರೆದರೂ ಅವೆಲ್ಲಾ ಅಪ್ಪಟ ಸುಳ್ಳು ಅಂತ ಜನರಿಗೆ ತಿಳಿದಿದೆ. ಅದನ್ನು ಮಜಕ್ಕೆ ಓದುತ್ತಾರೆ ಅಷ್ಟೆ. ಮಜಕ್ಕಾದರೂ ಓದಲಿ ಸೀರಿಯಸ್ಸಾಗಿಯಾದರೂ ಓದಲಿ ಪತ್ರಿಕೆ ನಡೆಸುವವರಿಗೆ ರೊಕ್ಕ ಗ್ಯಾರಂಟಿ. ಅವರ ಪ್ರಯತ್ನ ಸಫಲವಾದಂತೆ. ಆದರೆ ಸುಕಾಸುಮ್ಮನೆ ಬರೆಯಿಸಿಕೊಂಡವರು ಇರುತ್ತಾರಲ್ಲ ಅವರು ಬೆಂದುಹೋಗುತ್ತಾರೆ. ಕಿಂಚಿತ್ ಸತ್ಯಾಂಶವಿದ್ದರಾದರೂ ಸರಿ ಆದರೆ ಹಾಗಾಗದೇ ಹೋದಾಗ ಬಹಳ ಕಷ್ಟ. ನನಗೆ ವಿಭಟ್ರ ಟೀಂ ನ ತ್ಯಾಗರಾಜ್ , ಪ್ರತಾಪ್ ಮುಂತಾದವರು ಹತ್ತಿರದ ಪರಿಚಯ ಇಲ್ಲ. ಆದರೆ ಭಡ್ತಿಯವರನ್ನು ತೀರಾ ಹತ್ತಿರದಿಂದ ಬಲ್ಲೆ. ಸರಳ ಸಜ್ಜನ ಹಾಗೂ ಹಾರ್ಡ್ ವರ್ಕರ್ ಅಂತಾರಲ್ಲ ಅಂತಹವರು. ಅದೆಷ್ಟು ಜನರನ್ನು ತಿದ್ದಿ ತೀಡಿ ಬೆಳೆಸಿದರೋ ಲೆಕ್ಕವಿಲ್ಲ ಬಿಡಿ. ಹಾಯ್ ನಲ್ಲಿ ಅವರ ಬಗ್ಗೆ ಬಂದಾಗ ನನಗೆ ತುಂಬಾ ನೋವಾಯಿತು. ಪಾಪ ಅವರು ಎಷ್ಟು ಅನುಭವಿಸಿದರೋ ಗೊತ್ತಿಲ್ಲ. ಇಷ್ಟಾದರೂ ನನಗೆ ಒಂದು ಭಾವನೆ ಇತ್ತು "ಅವರೇನೋ ಹಾಗೆಯೇ ಆದರೆ ಕೊಚ್ಚೆಗೆ ಇವರು ಕಲ್ಲು ಎಸೆದರೆ.....? ಎಂಬ ಮಾಮೂಲಿ ಗಾದೆ. ಆದರೆ ಇವತ್ತಿನ ಭಡ್ತಿಯವರ ಬ್ಲಾಗ್ (http://gindimaani.blogspot.com/)ನಲ್ಲಿನ "ಆದರೆ ‘ನೀಲಿ ಪತ್ರಿಕೆ’ ಗಳಲ್ಲಿ ಒಮ್ಮೆ ಬರೆಸಿಕೊಂಡಾಗ, ಅದೂ ವಿನಾ ಕಾರಣ...ಆಗ ಹತ್ತುವ ಉರಿಯಿದೆಯಲ್ಲಾ ಅದನ್ನು ಅನುಭವಿಸಿದವರೇ ಹೇಳಬೇಕು" ಎಂಬ ಸಾಲುಗಳನ್ನು ಓದುತ್ತಾ ಹೋದಾಗ ನಿಜ ನಿಜ ಅನ್ನಿಸತೊಡಗಿತು. ಎಲ್ಲರೂ ಸಾಯಲಿ ಬಿಡು ನಮ್ಮ ತಂಟೆಗೆ ಬಂದಿಲ್ಲವಲ್ಲ, ಹೀಗೆ ಉಪೇಕ್ಷೆಯ ಮಾತನಾಡಿದ್ದರಿಂದ ಹೀಗೆಲ್ಲಾ ಆಗುತ್ತಿರುವುದು ತಾನೆ?. ನಾವೇನು ಬದಲಾವಣೆಯ ಹರಿಕಾರರಲ್ಲ ನಿಜ, ಹಾರುತ್ತಿರುವ ಹದ್ದಿಗೆ ಪ್ರಪಂಚ ಕಾಣುತ್ತಿರುವುದು ನಿಜ, ಅದರ ಹಾರಾಟ ತನ್ನ ಆಹಾರಕ್ಕಾಗಿ ಎಂಬುದೂ ಸತ್ಯ, ನಮಗೆ ಅದನ್ನು ಮುಟ್ಟಲಾಗುವುದಿಲ್ಲ ಎನ್ನುವುದೂ ನಿಜ ಇರಬಹುದು ಆದರೆ ಕಂಡ ಆಹಾರಕ್ಕೆ ಅದು ಭೂಮಿಗೆ ಇಳಿಯಲೇ ಬೇಕು. ಕೊಳೆತದ್ದು ಹಳಸಿದ್ದು ಸತ್ತದ್ದು ತಿಂದು ಬದುಕುವ ರಣ ಹದ್ದು ಅದನ್ನೇ ತಿನ್ನಲು ಹೊರಟಾಗ ಅದಕ್ಕೆ ಅಡ್ಡಗಾಲಾಗುವುದು ಬೇಡ. ಆದರೆ ತನ್ನ ಸ್ವಾರ್ಥಕ್ಕಾಗಿ ಸಾತ್ವಿಕ ಪ್ರಾಣಿಗಳನ್ನು ಬದುಕಿರುವಾಗಲೇ ಕೊಂದು ಆಹಾರವನ್ನಾಗಿಸಿಕೊಳ್ಳಲು ಬಿಡಬಾರದು. ಹಾಗೆ ತೀರ್ಮಾನಿಸಿಕೊಂಡು ಇಳಿದಾಗ ಮತ್ತೆ ಅದು ಮೇಲೇರದಂತೆ ಮಾಡಬೇಕು. ಹಾಗೆ ಆಗುತ್ತದೆ ಬಿಡಿ ಖಂಡಿತ.
ಬೇರೆಯವರ ಜೀವನದ ಭಾವನೆಗಳಿಗೆ ಸುಳ್ಳಿನ ಕತೆ ಪೋಣಿಸಿ ಅನ್ಯತಾ ಹಿಂಸೆ ನೀಡುವವರನ್ನು ಖಂಡಿಸಲೇ ಬೇಕು. ಆಗ ಸಾತ್ವಿಕ ಶಕ್ತಿಗೆ ಜಯ ಖಂಡಿತ. ನಿಧಾನದ ಸಮಯ ಹಿಡಿಯಬಹುದು ಅಲ್ಲಿಯವರೆಗೆ ತಾಳ್ಮೆ ಅವಶ್ಯಕ. ಅದುವೇ ಮಾನವೀಯತೆ.

2 comments:

Muthu said...

Yes..Mullanna Mullinindale Tegeyabeku.

Anonymous said...

ವಿ-ಭಟ್ಟನ ಕಾರುಬಾರು ಇಲ್ಲಿದೆ ನೋಡಿ:
http://www.deccanherald.com/content/184820/mining-kickbacks-some-names-ring.html
ಇದರಲ್ಲಿರೋ ಆರ್.ಬಿ, ವಿ ಭಟ್ ಯಾರು ಅಂತ ತಿಳ್ಕೊಳ್ಳಕ್ಕೆ ಐಏಎಸ್ ಪಾಸ್ ಮಾಡೋ ಅವಶ್ಯಕತೆ ಇಲ್ಲ.

ಈ ಕಾರಣಕ್ಕೇ ವಿಕದಿಂದ ಈತನ್ನ ಓಡ್ಸಿಬಿಟ್ರು.. ಈ ವಿಯದಲ್ಲೇ ಆರ್ಬಿಗೂ ವಿಭಟ್ಟನಿಗೂ ಕೋಳಿ ಜಗಳ ಆಗಿದ್ದು.. ಥೂ ಹೊಲಸು ಜನಗಳು..