Monday, February 21, 2011

ಹೋಗಲಿ ಬಿಡಿ ಮತ್ತೆ ಸಿಗೋಣ .

ಹಣ ಮನುಷ್ಯನನ್ನು ಆಳಿದಷ್ಟು ಮತ್ಯಾವುದೂ ಇಲ್ಲ ಎನ್ನಬಹುದು. ಹಣವಿಲ್ಲದ ನಮ್ಮನಿಮ್ಮಂತಹ ಜನ ಅಲ್ಲಿ ಸುಖವಿಲ್ಲ ಎಂಬ ಒಳ ಹಪಹಪಿಕೆಯಿಂದ ಹಣದತ್ತ ಓರೆಗಣ್ಣಿನ ನೋಟ ಹರಿಸಿ ಕೊರಗುತ್ತೇವೆಯೇ ವಿನಹ ಹಣವಿದ್ದವರು ಎಲ್ಲ ಅದರ ಹಿಂದೆ ಓಡುತ್ತಲಿರುತ್ತಾರೆ.
ರವಿಬೆಳೆಗೆರೆಯ ಹಾಯ್ ಬೆಂಗಳೂರನ್ನು ಇತ್ತೀಚಿನ ವರ್ಷಗಳಲ್ಲಿ ಓದಿರಲೇ ಇಲ್ಲ. ಭಟ್ರ ಸುದ್ದಿ ಬಂದ ಒಂದೆರಡು ವಾರ ಓದಿದೆ. ರವಿಬೆಳೆಗೆರೆಯಂತಹ ರವಿಬೆಳೆಗೆರೆ ಅಕ್ಷರದ ಮೂಲಕ ಸೂಪರ್ ಪ್ರಪಂಚ ಕಟ್ಟುವ ತಾಕತ್ತು ಇದ್ದ ಜನ ಹೇಗೆ ಹಣದ ಹಿಂದೆ ಬಿದ್ದಿದ್ದಾರೆಂದರೆ ಆಶ್ಚರ್ಯವಾಗುವಷ್ಟು. ಯಾವ ಬರಹವೂ ಹಣದ ತನ್ನ ಸ್ವಂತ ಆಸ್ತಿಯ ವಿವರಗಳಿಲ್ಲದೆ, ಎಸ್ ಬಿ ಅಕೌಂಟ್ ನಲ್ಲಿ ನಾಲ್ಕು ಕೋಟಿಯ ಸುದ್ದಿ ಇಲ್ಲದೆ ಮುಕ್ತಾಯವಾಗದು ಎನ್ನುವಷ್ಟು . ನನ್ನ ಪುಸ್ತಕ ಅಷ್ಟು ಸೇಲ್ ಆಯಿತು, ನನ್ನ ಪುಸ್ತಕಕ್ಕೆ ಆ ಹುಡುಗ ಅಷ್ಟು ಪ್ರಿಂಟ್ ಮಾಡಿ ಅಂದ, ನಾನು ಅಷ್ಟು ಗುಡ್ಡೆ ಹಾಕಿದೆ ಅಬ್ಬಬ್ಬಾ ಅದರ ಪರಿ ತನ್ನ ಬಳಿ ಹೇರಳ ಸಂಪತ್ತು ಇದೆ ಎನ್ನುವ ಮನುಷ್ಯನ ಸಹಜ ಸ್ವಭಾವ ತೋರ್ಪಡಿಸುವ ವಿಧಾನ ರವಿಯಂತಹ ಬೆಳೆಗೆರೆಗೆ ಬಿಟ್ಟಿಲ್ಲ ಎಂದಮೇಲೆ ಹುಲುಮಾನವರ ಗತಿಯೇನು?.
ನನ್ನ ಹತ್ತಿರದ ನೆಂಟರೊಬ್ಬರು ತಮ್ಮ ಸಂಪತ್ತನ್ನು ಹೀಗೆ ವಿವರಿಸುತ್ತಾರೆ . "ಅಯ್ಯೋ ಬೆಳಿಗ್ಗೆ ಏಳುವಾಗ ಕರಿಮಿಣಿಸರ ರಗ್ಗಿಗೆ ಹಿಡಿದುಕೊಂಡು ಬಿಟ್ಟಿತ್ತು, ಆ ಶಾಲು ದುಬೈನಿಂದ ಹತ್ತು ಸಾವಿರ ಕೊಟ್ಟು ತರಿಸಿದ್ದು ಮಾರಾಯ್ತಿ, ಅದರ ಚುಂಗು ಸರಕ್ಕೆ ಹಿಡಿದುಕೊಂಡು ರಾಮಾಯಣ ಬ್ಯಾಡ, ಇವರು " ಅಯ್ಯಾ ಸರ ಹೊದರೆ ಹೋಗಲಿ ಎಳೆದು ತೆಗಿ ಅದನ್ನ, ಅದೇನು ದೊಡ್ಡದಾ ಎರಡು ಲಕ್ಷದ್ದು ಸೈಯಲ, ಸಂಜೆನೇ ಬೇರೇದು ತಂದ್ರೆ ಸೈ" ಅಂತ ಹೇಳಿದ್ರು ಆದ್ರೆ ಹಂಗೆಲ್ಲ ೨ ಲಕ್ಷದ ಸರ ಹರಿದು ಬಿಡಲೆ ಮನಸ್ಸಾದ್ರೂ ನಮಗೆ ಬರುತ್ತಾ?, " ಹೀಗೆ ಅವಳ ಮಾತು ತನ್ನಲ್ಲಿರುವ ಶ್ರೀಮಂತಿಕೆಯ ಎಲ್ಲಾ ವಸ್ತುಗಳ ದರಪಟ್ಟಿ ಹೇಳುತ್ತಾ ಮುಂದುವರೆಯುತ್ತದೆ.
ಇಷ್ಟಕ್ಕೆಲ್ಲಾ ಕಾರಣ ಹಣವೆಂಬ ಹಣ ರವಿಬೆಳೆಗೆರೆಯಿಂದ ಹಿಡಿದು ಆ ಅವಳ ತನಕ ಅವರ ಅರ್ದ ಆಯುಷ್ಯದ ನಂತರ ಸಿಕ್ಕಿರುತ್ತದೆ. ಅಲ್ಲಿಯವರೆಗೆ ಅವರಿಗೆ ಆಯ್ದುಕೊಂಡು ತಿನ್ನುವಂತಹಾ ಬದುಕು. ಅಂತಹ ಜನರಿಗೆ ಹೀಗೆ ತಮಗೆ ಕಂಡ ಶ್ರೀಮಂತಿಕೆಯನ್ನು ಹೇಳುತ್ತಾ ಸಾಗುವುದೇ ದೊಡ್ಡ ಕೆಲಸ ಕಸುಬು.
ಹುಟ್ಟಾ ಶ್ರೀಮಂತರೂ ಹಾಗೂ ನಮ್ಮ ನಿಮ್ಮಂಥಹ ಜನ ಎಂದೂ ಆ ತಂಟೆಗೆ ಹೋಗುವುದಿಲ್ಲ. ತಂಟೆಗೆ ಹೋಗುವುದಿಲ್ಲ ಎಂದರೆ ಆ ಮಾತು ಏಕೆ ಎಂದಿರಾ?, ಹೋಗಲಿ ಬಿಡಿ ಮತ್ತೆ ಸಿಗೋಣ .

4 comments:

Muthu said...

ರಾಗಣ್ಣಾ....ದುಡ್ಡು ಎಂದರೆ ಶುದ್ಧ ಉಪ್ಪು.
ತುಸುವೇ ನಾಲಿಗೆ ಮೇಲಿಟ್ಟು ಕೊಂಡರೆ
ರುಚಿ. ಹೆಚ್ಚಾಗಿ ತಿಂದರೆ ದಾಹ.ಇದು
ಕಾರಂತಜ್ಜನ ಮಾತೋ.

Mruthyunjaya.H said...

ತಮ್ಮಲ್ಲಿ ಜ್ಞಾನವಿಲ್ಲ ಎಂದು ಕೊರಗುವವರು ಕಡಿಮೆ.ತಮ್ಮಲ್ಲಿ ಹೃದಯವಂತಿಕೆಯಿಲ್ಲ ಎಂದು ಕೊರಗುವವರು ಇನ್ನೂ ಕಡಿಮೆ.ಹಣವಿಲ್ಲ ಎಂದು ಕೊರಗುತ್ತಿರುವವರಿಗೆ ಹಣ ಸಿಕ್ಕ ಕೂಡಲೇ ಅದನ್ನು ಜಗಜ್ಜಾಹೀರು ಮಾಡಿಕೊಳ್ಳುವ ತವಕ. ಯಾಕೆಂದರೆ ಅವರ ಬಳಿ ಈಗಲೂ ಈಗಲೂ ಏನೂ ಇಲ್ಲ ಹಣದ ಹೊರತಾಗಿ!
ಮತ್ತೆ ನಾನು ರವಿಬೆಳೆಗೆರೆಯವರನ್ನು ಎಂದೂ ಓದಿಲ್ಲ!

Ramya said...

Hey Raghu mava, good story I had to open my Fully loaded Laptop and connect to home interenet to read ur article, by that time my Microwave oven had cooke food it was beeping, since it was very hot I had to switch on AC still I dint give up I was reading ur article and my Hubs came by then tired by traffice bcoz of his Big CAR :) Henge!!!!

ಸೀತಾರಾಮ. ಕೆ. / SITARAM.K said...

nice one