Monday, June 27, 2011

ಆ ಭಗವಂತನದೇ ರಿಸ್ಕ್.




ಸುದ್ದಿ ಕೇಳಿ ಒಮ್ಮೆ ಕಂಪಿಸಿದೆ ನಾನು. ಆ ಕಂಪನ ತನ್ನಷ್ಟಕ್ಕೆ ಒಳಗಿನಿಂದ ಬಂದದ್ದು. ಅದು ತಣಿದು ವಾಸ್ತವಕ್ಕೆ ಬಂದಮೇಲೆ ವಿಚಾರಕ್ಕಿಳಿದೆ. ಈತನ ಹೆಸರು ಸತ್ಯನಾರಾಯಣ ಕರಾರುವಕ್ಕಾಗಿ ನನ್ನದೇ ವಾರಿಗೆ. ಊರು ತಲವಾಟ. ವೃತ್ತಿ ಕೃಷಿ. ಸಿಕ್ಕಾಪಟ್ಟೆ ಶ್ರಮಜೀವಿ. ಮಿಕ್ಕ ವಿಚಾರವೆಂದರೆ ದಿನನಿತ್ಯ ಪತ್ರಿಕೆಯಲ್ಲಿ ಬರುವಂತೆ "ಈತ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾನೆ". ಯಾರದೋ ಸುದ್ದಿಯಾಗಿದ್ದರೆ ಮುಂದಿನ ವಿಷಯದತ್ತ ಗಮನಹರಿಸಬಹುದಿತ್ತು. ಆದರೆ ನನಗೆ ಈತ ವಾರಿಗೆಯವನು ಹಾಗೂ ನಿತ್ಯ ಕಣ್ಣಿಗೆ ಕಾಣಿಸುವವನು. ಗಟ್ಟಿಮುಟ್ಟಾದ ಈ ದೇಹದಿಂದ ಜೀವ ಹೊರಡಲು ಕಾರಣವಾದದ್ದು ವಿದ್ಯುತ್. ಮನೆಯ ಪಕ್ಕದಲ್ಲಿ ಅರ್ಥಿಂಗ್ ವೈರ್ ಜೋತಾಡುತ್ತಿತ್ತು. ಮನೆಯ ಮೀಟರ್ ಸುಟ್ಟು ಆ ವೈರ್ ನಲ್ಲಿ ಕರೆಂಟ್ ಹರಿಯುತಿತ್ತು. ಜೋರು ಮಳೆಯಿಂದ ನಿಂತ ನೀರನ್ನು ಸಾರಾಗವಾಗಿ ಹರಿಯಕೊಡಲು ಹೋದವನು ತಂತಿ ಮುಟ್ಟಿದ. ಕೆಲಕ್ಷಣಗಳಲ್ಲಿ ಜೀವ ಹರಿದುಹೋಯಿತು. ಸರಿ ಸಾವು ನಮ್ಮ ಕೈಯಲ್ಲಿ ಇಲ್ಲ ಹುಟ್ಟೂ ನಮ್ಮದಲ್ಲ ಅಂತ ವೇದಾಂತ ಹೇಳಬಹುದು ಆದರೆ ಬದುಕಿರುವ ಆ ಮೂವರಿಗೆ ಸ್ವಲ್ಪ ಕಷ್ಟ. ಅದನ್ನು ಸಹಿಸುವ ಶಕ್ತಿ ಒನ್ಸ್ ಅಗೈನ್ ಆ ಭಗವಂತನದೇ ರಿಸ್ಕ್.

2 comments:

Gowtham said...

ಇದು ಒಂದು ದುರಂತವೇ ಸೈ. ನನಗಂತೂ ನಾನೇನು ಕೇಳಿದೆ ಎಂದು ನಂಬಲಿಕ್ಕಾಗಲಿಲ್ಲ. ಆಮೇಲೆ ಅಯ್ಯೋ ಅನಿಸಿತು.

ಸೀತಾರಾಮ. ಕೆ. / SITARAM.K said...

mrutara aatmakke shaanti koruttaa avara kutumbada vargakke nashta tadedukolluva dhairya bhagawanta tumbali.